ಹಲಸಂದೆಕಾಳು ಉಸಲಿ:
ಸಾಮಗ್ರಿಗಳು:
ಹಲಸಂದೆಕಾಳು ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ
ಕರಿಬೇವು
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ
ನೀರು ಬೇಯಿಸಲು ಬೇಕಾಗುವಷ್ಟು
ವಿಧಾನ:
ಹಲಸಂದೆಕಾಳುಗಳನ್ನು ಚೆನ್ನಾಗಿ ತೊಳೆದು ಕುಕ್ಕರ್ ಗೆ ಹಾಕಿ ಅರ್ಧ ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ. ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ, ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ, ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ , ಬೇಯಿಸಿರುವ ಕಾಳನ್ನು ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇಳಿಸಿ,ಇದನ್ನು ಊಟಕ್ಕೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.
*ಕ್ಯಾನ್ ಬೀನ್ಸ್ ಉಪಯೋಗಿಸುವುದಾದರೆ ಬೇಯಿಸದೆ, ಕಾಳುಗಳಿಗೆ ನೇರವಾಗಿ ಒಗ್ಗರಣೆಯನ್ನು ಬೆರೆಸಿ, ಕೆಲವು ನಿಮಿಷ ಅದರಲ್ಲೆ ಹುರಿದು ಚೆನ್ನಾಗಿ ಬೆರೆಸಿ.
*ಹಲ್ಸಂದೆ ಕಾಳುಗಳು ಎರಡು ಬಣ್ಣಗಳಲ್ಲಿ ಸಿಗುತ್ತದೆ, ಕೆಂಪು ಮತ್ತು ಬಿಳಿ ಬಣ್ಣಗಳಿಂದ ಕೂಡಿರುತ್ತದೆ. ಹೈಬ್ರೀಡ್ ಕಾಳುಗಳು ಅಷ್ಟು ರುಚಿ ಇರುವುದಿಲ್ಲ. ಇಂಗ್ಲೀಷ್ ನಲ್ಲಿ ಬ್ಲಾಕ್ ಐ ಬೀನ್ ಎಂದು ಕರೆಯುತ್ತಾರೆ. ಈ ಕಾಳುಗಳು ಆರೋಗ್ಯಕ್ಕೂ ಉತ್ತಮ. ಇದನ್ನು ಮೊಳಕೆ ತೆಗೆದು ಸಾರಿಗೆ ಬಳಸಬಹುದು, ಇಲ್ಲವೆಂದರೆ ಹಾಗೆ ನೇರವಾಗಿಯೇ ಕಾಳುಗಳನ್ನು ಬೇಯಿಸಿಕೊಂಡು ಸಾರನ್ನು ತಯಾರಿಸಬಹುದು. ಅನ್ನ, ಮುದ್ದೆ, ಚಪಾತಿ,ರೊಟ್ಟಿಗಳಿಗೆ ಚೆನ್ನಾಗಿರುತ್ತದೆ.
Showing posts with label Usali - ಉಸಲಿ. Show all posts
Showing posts with label Usali - ಉಸಲಿ. Show all posts
Thursday, August 28, 2014
Monday, January 18, 2010
Bhel Puri - ಬೇಲ್ ಪುರಿ:
ಬೇಲ್ ಪುರಿ:
ಬೇಕಾಗುವ ಸಾಮಗ್ರಿಗಳು:
ಪುರಿ/ ಕಡ್ಲೆಪುರಿ /ಮುರಿ
ಹೆಚ್ಚಿದ ಈರುಳ್ಳಿ
ಟಮೋಟ ಸಣ್ಣಗೆ ಹೆಚ್ಚಿದ್ದು
ಸೌತೆಕಾಯಿ ಸಣ್ಣಗೆ ಹೆಚ್ಚಿದ್ದು / ತುರಿ
ಹಸಿಮೆಣಸಿನಕಾಯಿ ಪೇಸ್ಟ್/ಸಣ್ಣಗೆ ಹೆಚ್ಚಿದ್ದು
ಉಪ್ಪು
ಕಾರದಪುಡಿ
ಎಣ್ಣೆ ಒಂದು ಚಮಚ
ಚಾಟ್ ಮಸಾಲಾ
ಪುದೀನಚಟ್ನಿ
ನಿಂಬೆರಸ
ಕೊತ್ತುಂಬರಿಸೊಪ್ಪು
ಕಾಯಿತುರಿ
ಕ್ಯಾರೆಟ್ ತುರಿ
ಹುಣಸೇರಸ
ಬೆಲ್ಲ
ತಯಾರಿಸುವ ರೀತಿ:
ಹುಣಸೇರಸಕ್ಕೆ ಸ್ವಲ್ಪ ಬೆಲ್ಲದ ಪುಡಿ ಬೆರೆಸಿಡಿ,ಚೆನ್ನಾಗಿ ಪೇಸ್ಟ್ ತರಹ ಮಾಡಿಕೊಳ್ಳಿ.
ಪುದೀನ ಚಟ್ನಿಗೆ - ಪುದೀನ,ಕೊತ್ತುಂಬರಿಸೊಪ್ಪು,ಹಸಿಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಹಾಗು ಸ್ವಲ್ಪ ಉಪ್ಪು ಬೆರೆಸಿ, ಪೇಸ್ಟ್ ಮಾಡಿಕೊಳ್ಳಿ.
ಮೊದಲು ಒಂದು ಅಗಲವಾದ ಪಾತ್ರೆಗೆ ಹುಣಸೇರಸ-ಬೆಲ್ಲದ ಪೇಸ್ಟ್, ಪುದೀನ ಚಟ್ನಿ,ಕಾರದಪುಡಿ,ಉಪ್ಪು,ಚಾಟ್ ಮಸಾಲಾ,ಎಣ್ಣೆ ಟಮೋಟ,ಸೌತೆಕಾಯಿ ಮತ್ತು ಈರುಳ್ಳಿ ಹಾಕಿ,ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಬೆರೆಸಿ. ಅದಕ್ಕೆ ಪುರಿಯನ್ನು ಸೇರಿಸಿ, ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ಕ್ಯಾರೆಟ್ ತುರಿಯನ್ನು ಹಾಕಿ, ಕಲೆಸಿ.
ಉಪ್ಪು ಮತ್ತು ಕಾರ ನಿಮಗೆ ಅವಶ್ಯಕತೆಗೆ ತಕ್ಕಂತೆ ಸೇರಿಸಿ. ಕೊನೆಯಲ್ಲಿ ಕಾರಬೂಂದಿ/ ಚೌಚೌ ಬೆರೆಸಿ ಕೊಡಿ.
* ನಿಂಬೆರಸ ಇದಕ್ಕೆ ಬೇಕಾದರೆ ಬೆರೆಸಿ. ( ಅವಶ್ಯಕತೆ ಇದ್ದರೆ)
* ಎಲ್ಲಾ ಸಾಮಗ್ರಿಗಳನ್ನು ನಿಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಅವಶ್ಯಕತೆಗೆ ತಕ್ಕಂತೆ ಹಾಕಿಕೊಳ್ಳಿ, ಇಷ್ಟೇ ಪ್ರಮಾಣದಲ್ಲಿ ಹಾಕಬೇಕು ಅಂತ ಅಳತೆ ಮಾಡಿ ಹಾಕುವ ಅಗತ್ಯವಿಲ್ಲ.
* ಪುರಿ ಗರಿಗರಿಯಾಗಿದ್ದರೆ ಒಳ್ಳೆಯದು, ಸ್ವಲ್ಪ ಮೆತ್ತಗೆ ಇದ್ದರೆ ಮೈಕ್ರೋವೆವ್ ನಲ್ಲಿ ಸ್ವಲ್ಪ ಬಿಸಿ ಮಾಡಿಕೊಳ್ಳಿ.
ಬೇಕಾಗುವ ಸಾಮಗ್ರಿಗಳು:
ಪುರಿ/ ಕಡ್ಲೆಪುರಿ /ಮುರಿ
ಹೆಚ್ಚಿದ ಈರುಳ್ಳಿ
ಟಮೋಟ ಸಣ್ಣಗೆ ಹೆಚ್ಚಿದ್ದು
ಸೌತೆಕಾಯಿ ಸಣ್ಣಗೆ ಹೆಚ್ಚಿದ್ದು / ತುರಿ
ಹಸಿಮೆಣಸಿನಕಾಯಿ ಪೇಸ್ಟ್/ಸಣ್ಣಗೆ ಹೆಚ್ಚಿದ್ದು
ಉಪ್ಪು
ಕಾರದಪುಡಿ
ಎಣ್ಣೆ ಒಂದು ಚಮಚ
ಚಾಟ್ ಮಸಾಲಾ
ಪುದೀನಚಟ್ನಿ
ನಿಂಬೆರಸ
ಕೊತ್ತುಂಬರಿಸೊಪ್ಪು
ಕಾಯಿತುರಿ
ಕ್ಯಾರೆಟ್ ತುರಿ
ಹುಣಸೇರಸ
ಬೆಲ್ಲ
ತಯಾರಿಸುವ ರೀತಿ:
ಹುಣಸೇರಸಕ್ಕೆ ಸ್ವಲ್ಪ ಬೆಲ್ಲದ ಪುಡಿ ಬೆರೆಸಿಡಿ,ಚೆನ್ನಾಗಿ ಪೇಸ್ಟ್ ತರಹ ಮಾಡಿಕೊಳ್ಳಿ.
ಪುದೀನ ಚಟ್ನಿಗೆ - ಪುದೀನ,ಕೊತ್ತುಂಬರಿಸೊಪ್ಪು,ಹಸಿಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಹಾಗು ಸ್ವಲ್ಪ ಉಪ್ಪು ಬೆರೆಸಿ, ಪೇಸ್ಟ್ ಮಾಡಿಕೊಳ್ಳಿ.
ಮೊದಲು ಒಂದು ಅಗಲವಾದ ಪಾತ್ರೆಗೆ ಹುಣಸೇರಸ-ಬೆಲ್ಲದ ಪೇಸ್ಟ್, ಪುದೀನ ಚಟ್ನಿ,ಕಾರದಪುಡಿ,ಉಪ್ಪು,ಚಾಟ್ ಮಸಾಲಾ,ಎಣ್ಣೆ ಟಮೋಟ,ಸೌತೆಕಾಯಿ ಮತ್ತು ಈರುಳ್ಳಿ ಹಾಕಿ,ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಬೆರೆಸಿ. ಅದಕ್ಕೆ ಪುರಿಯನ್ನು ಸೇರಿಸಿ, ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ಕ್ಯಾರೆಟ್ ತುರಿಯನ್ನು ಹಾಕಿ, ಕಲೆಸಿ.
ಉಪ್ಪು ಮತ್ತು ಕಾರ ನಿಮಗೆ ಅವಶ್ಯಕತೆಗೆ ತಕ್ಕಂತೆ ಸೇರಿಸಿ. ಕೊನೆಯಲ್ಲಿ ಕಾರಬೂಂದಿ/ ಚೌಚೌ ಬೆರೆಸಿ ಕೊಡಿ.
* ನಿಂಬೆರಸ ಇದಕ್ಕೆ ಬೇಕಾದರೆ ಬೆರೆಸಿ. ( ಅವಶ್ಯಕತೆ ಇದ್ದರೆ)
* ಎಲ್ಲಾ ಸಾಮಗ್ರಿಗಳನ್ನು ನಿಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಅವಶ್ಯಕತೆಗೆ ತಕ್ಕಂತೆ ಹಾಕಿಕೊಳ್ಳಿ, ಇಷ್ಟೇ ಪ್ರಮಾಣದಲ್ಲಿ ಹಾಕಬೇಕು ಅಂತ ಅಳತೆ ಮಾಡಿ ಹಾಕುವ ಅಗತ್ಯವಿಲ್ಲ.
* ಪುರಿ ಗರಿಗರಿಯಾಗಿದ್ದರೆ ಒಳ್ಳೆಯದು, ಸ್ವಲ್ಪ ಮೆತ್ತಗೆ ಇದ್ದರೆ ಮೈಕ್ರೋವೆವ್ ನಲ್ಲಿ ಸ್ವಲ್ಪ ಬಿಸಿ ಮಾಡಿಕೊಳ್ಳಿ.
Saturday, January 2, 2010
Bhel Puri / ಧೀಡೀರ್ ಬೇಲ್ ಪುರಿ:
ಧೀಡೀರ್ ಬೇಲ್ ಪುರಿ:
ಬೇಕಾಗುವ ಸಾಮಗ್ರಿಗಳು:
ಪುರಿ/ ಕಡ್ಲೆಪುರಿ /ಮುರಿ
ಹೆಚ್ಚಿದ ಈರುಳ್ಳಿ
ಹಸಿಮೆಣಸಿನಕಾಯಿ ಪೇಸ್ಟ್/ಸಣ್ಣಗೆ ಹೆಚ್ಚಿದ್ದು
ಉಪ್ಪು
ಕಾರದಪುಡಿ
ಎಣ್ಣೆ ಒಂದು ಚಮಚ
ನಿಂಬೆರಸ
ಕೊತ್ತುಂಬರಿಸೊಪ್ಪು
ಕಾಯಿತುರಿ
ಟಮೋಟ ಸಣ್ಣಗೆ ಹೆಚ್ಚಿದ್ದು
ರೀತಿ:
ಮೇಲೆ ತಿಳಿಸಿರುವ ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಬೆರೆಸಿ.
ಉಪ್ಪು ಮತ್ತು ಕಾರ ನಿಮ್ಮ ಅವಶ್ಯಕತೆಗೆ ತಕ್ಕಂತೆ ಸೇರಿಸಿ. ಕೊನೆಯಲ್ಲಿ ಕಾರಬೂಂದಿ /ಚೌಚೌ ಬೆರೆಸಿ ಕೊಡಿ.
*ಇದು ದೀಡೀರ್ ಎಂದು ತಯಾರಿಸುವ ವಿಧಾನ.
* ಪುರಿ ಗರಿಗರಿಯಾಗಿದ್ದರೆ ಒಳ್ಳೆಯದು, ಸ್ವಲ್ಪ ಮೆತ್ತಗೆ ಇದ್ದರೆ ಮೈಕ್ರೋವೆವ್ ನಲ್ಲಿ ಸ್ವಲ್ಪ ಬಿಸಿ ಮಾಡಿಕೊಳ್ಳಿ.
* ಎಲ್ಲಾ ಸಾಮಗ್ರಿಗಳನ್ನು ನಿಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಅವಶ್ಯಕತೆಗೆ ತಕ್ಕಂತೆ ಹಾಕಿಕೊಳ್ಳಿ, ಇಷ್ಟೇ ಪ್ರಮಾಣದಲ್ಲಿ ಹಾಕಬೇಕು ಅಂತ ಅಳತೆ ಮಾಡಿ ಹಾಕುವ ಅಗತ್ಯವಿಲ್ಲ.
ಬೇಕಾಗುವ ಸಾಮಗ್ರಿಗಳು:
ಪುರಿ/ ಕಡ್ಲೆಪುರಿ /ಮುರಿ
ಹೆಚ್ಚಿದ ಈರುಳ್ಳಿ
ಹಸಿಮೆಣಸಿನಕಾಯಿ ಪೇಸ್ಟ್/ಸಣ್ಣಗೆ ಹೆಚ್ಚಿದ್ದು
ಉಪ್ಪು
ಕಾರದಪುಡಿ
ಎಣ್ಣೆ ಒಂದು ಚಮಚ
ನಿಂಬೆರಸ
ಕೊತ್ತುಂಬರಿಸೊಪ್ಪು
ಕಾಯಿತುರಿ
ಟಮೋಟ ಸಣ್ಣಗೆ ಹೆಚ್ಚಿದ್ದು
ರೀತಿ:
ಮೇಲೆ ತಿಳಿಸಿರುವ ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಬೆರೆಸಿ.
ಉಪ್ಪು ಮತ್ತು ಕಾರ ನಿಮ್ಮ ಅವಶ್ಯಕತೆಗೆ ತಕ್ಕಂತೆ ಸೇರಿಸಿ. ಕೊನೆಯಲ್ಲಿ ಕಾರಬೂಂದಿ /ಚೌಚೌ ಬೆರೆಸಿ ಕೊಡಿ.
*ಇದು ದೀಡೀರ್ ಎಂದು ತಯಾರಿಸುವ ವಿಧಾನ.
* ಪುರಿ ಗರಿಗರಿಯಾಗಿದ್ದರೆ ಒಳ್ಳೆಯದು, ಸ್ವಲ್ಪ ಮೆತ್ತಗೆ ಇದ್ದರೆ ಮೈಕ್ರೋವೆವ್ ನಲ್ಲಿ ಸ್ವಲ್ಪ ಬಿಸಿ ಮಾಡಿಕೊಳ್ಳಿ.
* ಎಲ್ಲಾ ಸಾಮಗ್ರಿಗಳನ್ನು ನಿಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಅವಶ್ಯಕತೆಗೆ ತಕ್ಕಂತೆ ಹಾಕಿಕೊಳ್ಳಿ, ಇಷ್ಟೇ ಪ್ರಮಾಣದಲ್ಲಿ ಹಾಕಬೇಕು ಅಂತ ಅಳತೆ ಮಾಡಿ ಹಾಕುವ ಅಗತ್ಯವಿಲ್ಲ.
Monday, November 2, 2009
Kidney Beans Sabji - ಹುರುಳೀಕಾಯಿಕಾಳು ಉಸಲಿ:
ಹುರುಳೀಕಾಯಿಕಾಳು ಉಸಲಿ:
ನಮ್ಮ ದೇಶದಲ್ಲಿ ಹುರುಳೀಕಾಯಿಕಾಳು ಸುಮಾರು ಬಣ್ಣಗಳಲ್ಲಿ ಬರುತ್ತದೆ. ಇದು ಹುರುಳಿಕಾಯಿಯಲ್ಲಿ ಸಿಗುತ್ತದೆ, ಇದು ಸಿಪ್ಪೆ ಸಮೇತ ಸಿಗುತ್ತದೆ. ಅಲ್ಲದೇ ಒಣಗಿದ ಕಾಳುಗಳು ಸಿಗುತ್ತವೆ ಮತ್ತು ಈಗ ಕ್ಯಾನ್ ನಲ್ಲಿ ಸಹ ಸಿಗುತ್ತದೆ.ಎಲ್ಲಕ್ಕಿಂತ ಹಸಿಕಾಳಿನಕಾಯಿ ತಂದು ಕಾಳು ಬಿಡಿಸಿ ಮಾಡುವುದು ಹೆಚ್ಚು ರುಚಿಯಾಗಿರುತ್ತದೆ ಮತ್ತು ಬೇಗ ಬೇಯುತ್ತದೆ. ಕ್ಯಾನ್ ನಲ್ಲಿ ಕೂಡ ಬಿಳಿ ಕಿಡ್ನಿ ಬೀನ್ಸ್ ಮತ್ತು ಕೆಂಪು ಕಿಡ್ನಿ ಬೀನ್ಸ್ ಗಳು ಸಿಗುತ್ತವೆ.
ಸಾಮಗ್ರಿಗಳು:
ಹುರುಳೀಕಾಯಿಕಾಳು ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ
ಕರಿಬೇವು
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ
ವಿಧಾನ:
ಹುರುಳೀಕಾಳನ್ನು ಬಿಡಿಸಿಕೊಂಡು ಕುಕ್ಕರ್ ಗೆ ಕಾಳುಗಳನ್ನು ಹಾಕಿ ಒಂದು ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ.ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ,ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ ,ಬೇಯಿಸಿರುವ ಕಾಳನ್ನು ಹಾಕಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇಳಿಸಿ,ಇದನ್ನು ಊಟಕ್ಕೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.
*ಕ್ಯಾನ್ ಬೀನ್ಸ್ ಉಪಯೋಗಿಸುವುದಾದರೆ ಬೇಯಿಸದೆ,ಕಾಳುಗಳಿಗೆ ನೇರವಾಗಿ ಒಗ್ಗರಣೆಯನ್ನು ಬೆರೆಸಿ,ಕೆಲವು ನಿಮಿಷ ಅದರಲ್ಲೆ ಹುರಿದು ಚೆನ್ನಾಗಿ ಬೆರೆಸಿ.
ನಮ್ಮ ದೇಶದಲ್ಲಿ ಹುರುಳೀಕಾಯಿಕಾಳು ಸುಮಾರು ಬಣ್ಣಗಳಲ್ಲಿ ಬರುತ್ತದೆ. ಇದು ಹುರುಳಿಕಾಯಿಯಲ್ಲಿ ಸಿಗುತ್ತದೆ, ಇದು ಸಿಪ್ಪೆ ಸಮೇತ ಸಿಗುತ್ತದೆ. ಅಲ್ಲದೇ ಒಣಗಿದ ಕಾಳುಗಳು ಸಿಗುತ್ತವೆ ಮತ್ತು ಈಗ ಕ್ಯಾನ್ ನಲ್ಲಿ ಸಹ ಸಿಗುತ್ತದೆ.ಎಲ್ಲಕ್ಕಿಂತ ಹಸಿಕಾಳಿನಕಾಯಿ ತಂದು ಕಾಳು ಬಿಡಿಸಿ ಮಾಡುವುದು ಹೆಚ್ಚು ರುಚಿಯಾಗಿರುತ್ತದೆ ಮತ್ತು ಬೇಗ ಬೇಯುತ್ತದೆ. ಕ್ಯಾನ್ ನಲ್ಲಿ ಕೂಡ ಬಿಳಿ ಕಿಡ್ನಿ ಬೀನ್ಸ್ ಮತ್ತು ಕೆಂಪು ಕಿಡ್ನಿ ಬೀನ್ಸ್ ಗಳು ಸಿಗುತ್ತವೆ.
ಸಾಮಗ್ರಿಗಳು:
ಹುರುಳೀಕಾಯಿಕಾಳು ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ
ಕರಿಬೇವು
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ
ವಿಧಾನ:
ಹುರುಳೀಕಾಳನ್ನು ಬಿಡಿಸಿಕೊಂಡು ಕುಕ್ಕರ್ ಗೆ ಕಾಳುಗಳನ್ನು ಹಾಕಿ ಒಂದು ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ.ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ,ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ ,ಬೇಯಿಸಿರುವ ಕಾಳನ್ನು ಹಾಕಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇಳಿಸಿ,ಇದನ್ನು ಊಟಕ್ಕೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.
*ಕ್ಯಾನ್ ಬೀನ್ಸ್ ಉಪಯೋಗಿಸುವುದಾದರೆ ಬೇಯಿಸದೆ,ಕಾಳುಗಳಿಗೆ ನೇರವಾಗಿ ಒಗ್ಗರಣೆಯನ್ನು ಬೆರೆಸಿ,ಕೆಲವು ನಿಮಿಷ ಅದರಲ್ಲೆ ಹುರಿದು ಚೆನ್ನಾಗಿ ಬೆರೆಸಿ.
Friday, January 9, 2009
Moong gram Sabji - ಹೆಸರುಕಾಳು ಉಸಲಿ:
ಹೆಸರುಕಾಳು ಉಸಲಿ:
ಸಾಮಗ್ರಿಗಳು:
ಹೆಸರುಕಾಳು ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ
ಕರಿಬೇವು
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ
ವಿಧಾನ:
ಹೆಸರುಕಾಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಕುಕ್ಕರ್ ಗೆ ಕಾಳುಗಳನ್ನು ಹಾಕಿ ಒಂದು ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ. ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ,ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ,ಬೇಯಿಸಿರುವ ಹೆಸರುಕಾಳನ್ನು ಹಾಕಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇದನ್ನು ಊಟಕ್ಕೆ ನೆಂಚಿಕೊಳ್ಳಬಹುದು.ಚಪಾತಿಯೊಂದಿಗೆ ತಿನ್ನಬಹುದು.
ಸಾಮಗ್ರಿಗಳು:
ಹೆಸರುಕಾಳು ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ
ಕರಿಬೇವು
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ
ವಿಧಾನ:
ಹೆಸರುಕಾಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಕುಕ್ಕರ್ ಗೆ ಕಾಳುಗಳನ್ನು ಹಾಕಿ ಒಂದು ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ. ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ,ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ,ಬೇಯಿಸಿರುವ ಹೆಸರುಕಾಳನ್ನು ಹಾಕಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇದನ್ನು ಊಟಕ್ಕೆ ನೆಂಚಿಕೊಳ್ಳಬಹುದು.ಚಪಾತಿಯೊಂದಿಗೆ ತಿನ್ನಬಹುದು.
Monday, October 20, 2008
Sprouts Sabzi /ಮೊಳಕೆಹೆಸರುಕಾಳಿನ ಉಸಲಿ:
ಮೊಳಕೆಹೆಸರುಕಾಳಿನ ಉಸಲಿ
ಸಾಮಗ್ರಿಗಳು:
ಮೊಳಕೆ ಹೆಸರುಕಾಳು
ಹಸಿಮೆಣಸಿನಕಾಯಿ
ಬೆಲ್ಲ
ಎಣ್ಣೆ
ಜೀರಿಗೆ
ಉಪ್ಪು
ತೆಂಗಿನತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:
ಹೆಸರುಕಾಳನ್ನು ಸ್ವಲ್ಪ ಅಂದರೆ ಅರ್ಧ ಮಾತ್ರ ಬೇಯಿಸಿ.
ಎಣ್ಣೆ ಕಾಯಿಸಿ ಜೀರಿಗೆ ಹಾಕಿ,ಒಂದು ನಿಮಿಷ ಹುರಿದು,ಮೊಳಕೆ ಕಾಳುಗಳನ್ನು ಹಾಕಿ,ಹಸಿಮೆಣಸಿನಕಾಯಿ ಹಾಕಿ ಬೆರೆಸಿ,ಒಂದೆರಡು ನಿಮಿಷ ತಿರುಗಿಸಿ,ಬೆಲ್ಲ ಮತ್ತು ಉಪ್ಪು ಹಾಕಿ.ಕಾಯಿತುರಿ,ಕೊತ್ತುಂಬರಿಸೊಪ್ಪು,ನಿಂಬೆರಸ ಹಾಕಿ ಬೆರೆಸಿ. ಕೊತ್ತುಂಬರಿಸೊಪ್ಪಿನಿಂದ ಅಲಂಕರಿಸಿ.
ಸಾಮಗ್ರಿಗಳು:
ಮೊಳಕೆ ಹೆಸರುಕಾಳು
ಹಸಿಮೆಣಸಿನಕಾಯಿ
ಬೆಲ್ಲ
ಎಣ್ಣೆ
ಜೀರಿಗೆ
ಉಪ್ಪು
ತೆಂಗಿನತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:
ಹೆಸರುಕಾಳನ್ನು ಸ್ವಲ್ಪ ಅಂದರೆ ಅರ್ಧ ಮಾತ್ರ ಬೇಯಿಸಿ.
ಎಣ್ಣೆ ಕಾಯಿಸಿ ಜೀರಿಗೆ ಹಾಕಿ,ಒಂದು ನಿಮಿಷ ಹುರಿದು,ಮೊಳಕೆ ಕಾಳುಗಳನ್ನು ಹಾಕಿ,ಹಸಿಮೆಣಸಿನಕಾಯಿ ಹಾಕಿ ಬೆರೆಸಿ,ಒಂದೆರಡು ನಿಮಿಷ ತಿರುಗಿಸಿ,ಬೆಲ್ಲ ಮತ್ತು ಉಪ್ಪು ಹಾಕಿ.ಕಾಯಿತುರಿ,ಕೊತ್ತುಂಬರಿಸೊಪ್ಪು,ನಿಂಬೆರಸ ಹಾಕಿ ಬೆರೆಸಿ. ಕೊತ್ತುಂಬರಿಸೊಪ್ಪಿನಿಂದ ಅಲಂಕರಿಸಿ.
Tuesday, August 12, 2008
Black Eye Beans - ಹಲಸಂದೆಕಾಳು ಉಸಲಿ:
ಹಲಸಂದೆಕಾಳು ಉಸಲಿ:
ಸಾಮಗ್ರಿಗಳು:
ಹಲಸಂದೆಕಾಳು ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ
ಕರಿಬೇವು
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ
ನಿಂಬೆರಸ ಸ್ವಲ್ಪ
ವಿಧಾನ:
ಹಲಸಂದೆಕಾಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಕುಕ್ಕರ್ ಗೆ ಕಾಳುಗಳನ್ನು ಹಾಕಿ ಒಂದು ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ. ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ,ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ,ಬೇಯಿಸಿರುವ ಕಾಳನ್ನು ಹಾಕಿ,ಎಲ್ಲವನ್ನು ಚೆನ್ನಾಗಿ ಬೆರೆಸಿ.ನಿಂಬೆರಸ,ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇದನ್ನು ಊಟಕ್ಕೆ ನೆಂಚಿಕೊಳ್ಳಬಹುದು.ಚಪಾತಿಯೊಂದಿಗೆ ತಿನ್ನಬಹುದು.ಸಂಜೆ ಕಾಫಿಯೊಂದಿಗೆ ಸ್ನಾಕ್ ತರಹ ಸರ್ವ್ ಮಾಡಿ.
ಸಾಮಗ್ರಿಗಳು:
ಹಲಸಂದೆಕಾಳು ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ
ಕರಿಬೇವು
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ
ನಿಂಬೆರಸ ಸ್ವಲ್ಪ
ವಿಧಾನ:
ಹಲಸಂದೆಕಾಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಕುಕ್ಕರ್ ಗೆ ಕಾಳುಗಳನ್ನು ಹಾಕಿ ಒಂದು ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ. ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ,ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ,ಬೇಯಿಸಿರುವ ಕಾಳನ್ನು ಹಾಕಿ,ಎಲ್ಲವನ್ನು ಚೆನ್ನಾಗಿ ಬೆರೆಸಿ.ನಿಂಬೆರಸ,ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇದನ್ನು ಊಟಕ್ಕೆ ನೆಂಚಿಕೊಳ್ಳಬಹುದು.ಚಪಾತಿಯೊಂದಿಗೆ ತಿನ್ನಬಹುದು.ಸಂಜೆ ಕಾಫಿಯೊಂದಿಗೆ ಸ್ನಾಕ್ ತರಹ ಸರ್ವ್ ಮಾಡಿ.
Sunday, July 20, 2008
Upma / Uppittu- ಉಪ್ಪಿಟ್ಟು:

ಉಪ್ಪಿಟ್ಟು:
ಸಾಮಗ್ರಿಗಳು:
ರವೆ
ಎಣ್ಣೆ
ಸಾಸಿವೆ
ಹಸಿಮೆಣಸಿನಕಾಯಿ
ಈರುಳ್ಳಿ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:
ರವೆಗೆ ಒಂದೆರಡು ಚಮಚ ಎಣ್ಣೆ ಹಾಕಿ ಹುರಿದುಕೊಳ್ಳಿ,ರವೆಯನ್ನು ಸೀದೀಸದೆ,ಘಂ ಎನ್ನುವ ವಾಸನೆ ಬರುವವರೆಗೂ ಹುರಿದು ತೆಗೆದಿಡಿ.
ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ,ಕಾದ ಬಳಿಕ ಸಾಸಿವೆ,ಕರಿಬೇವು,ಕಡ್ಲೆಬೇಳೆ ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ,ಹಾಕಿ,ಬೆರೆಸಿ. ಈರುಳ್ಳಿ ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ,ಅಗತ್ಯವಿದ್ದಷ್ಟು ನೀರು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಕುದಿಯಲು ಬಿಡಿ. ನೀರು ಒಂದು ಕುದಿ ಬಂದ ತಕ್ಷಣ ರವೆಯನ್ನು ಕುದಿಯುತ್ತಿರುವ ನೀರಿಗೆ ನಿಧಾನವಾಗಿ ಹಾಕುತ್ತಾ,ಆಗೆ ಗಂಟು ಬರದಂತೆ ತಿರುವುತ್ತಿರಿ. ಪೂರ್ತಿ ರವೆ ಹಾಕಿದ ನಂತರ ಅದಕ್ಕೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಬಿಸಿ ಬಿಸಿಯಾಗಿರುವಾಗಲೇ ಉಪ್ಪಿಟ್ಟನ್ನು ತಿನ್ನಬೇಕು ಇಲ್ಲವೆಂದರೆ ಹೆಸರಿಗೆ ತಕ್ಕಂತೆ ಕಾಂಕ್ರೀಟ್ ತರ ಗಟ್ಟಿಯಾಗುತ್ತದೆ.
Friday, December 21, 2007
Chick Peas Sabji - ಕಡ್ಲೆಕಾಳು ಉಸಲಿ:
ಕಡ್ಲೆಕಾಳು ಉಸಲಿ:
ಸಾಮಗ್ರಿಗಳು:
ಕಡ್ಲೆಕಾಳು - ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಒಂದು ಟೀ ಬ್ಯಾಗ್
ಎಣ್ಣೆ, ಸಾಸಿವೆ
ಕರಿಬೇವು
ಚಿಟಿಕೆ ಇಂಗು
ಹುಣಸೇಹುಳಿ ರಸ/ನಿಂಬೆರಸ-ಕಾಲು ಚಮಚ
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ
ವಿಧಾನ:
ಹಿಂದಿನ ದಿನ ರಾತ್ರಿ ಕಡ್ಲೆಕಾಳನ್ನು ಚೆನ್ನಾಗಿ ತೊಳೆದು,ನೀರು ಹಾಕಿ ನೆನೆಸಿಡಿ. ಬೆಳಗ್ಗೆ ಮತ್ತೆ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಕುಕ್ಕರ್ ಗೆ ಕಾಳುಗಳನ್ನು ಹಾಕಿ ಒಂದು ಲೋಟ ನೀರು ಹಾಕಿ,ಒಂದು ಟೀ ಬ್ಯಾಗ್,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ. ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ,ಕರಿಬೇವು,ಚಿಟಿಕೆ ಇಂಗು,ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ ,ಬೇಯಿಸಿರುವ ಕಡ್ಲೆಕಾಳನ್ನು ಹಾಕಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ. ಇದನ್ನು ಊಟಕ್ಕೆ ನೆಂಚಿಕೊಳ್ಳಬಹುದು.ಇದನ್ನು ಸಂಜೆ ಕಾಫಿಯೊಂದಿಗೆ ಸ್ನಾಕ್ ತರಹ ಸರ್ವ್ ಮಾಡಿ. ಈ ಕಡ್ಲೆಕಾಳು ಉಸಲಿಯನ್ನು ಸರ್ವ್ ಮಾಡುವಾಗ ಸ್ವಲ್ಪ ಕತ್ತರಿಸಿದ ಹಸಿ ಈರುಳ್ಳಿಯನ್ನು ಮೇಲೆ ಹಾಕಿ ಕೊಡಿ.
*ನಿಂಬೆರಸ ಹಾಕುವುದಾದರೆ ಕೊನೆಯಲ್ಲಿ ಬೆರೆಸಿ / ಹುಣಸೇರಸ ಹಾಕುವುದಾದರೆ ಒಗ್ಗರಣೆಯಲ್ಲಿ ಹಾಕಿ.
ಸಾಮಗ್ರಿಗಳು:
ಕಡ್ಲೆಕಾಳು - ಒಂದು ಬಟ್ಟಲು
ಹೆಚ್ಚಿದ ಈರುಳ್ಳಿ ಸ್ವಲ್ಪ
ಹೆಚ್ಚಿದ ಹಸಿಮೆಣಸಿನಕಾಯಿ
ಒಂದು ಟೀ ಬ್ಯಾಗ್
ಎಣ್ಣೆ, ಸಾಸಿವೆ
ಕರಿಬೇವು
ಚಿಟಿಕೆ ಇಂಗು
ಹುಣಸೇಹುಳಿ ರಸ/ನಿಂಬೆರಸ-ಕಾಲು ಚಮಚ
ಉಪ್ಪು ರುಚಿಗೆ
ಕೊತ್ತುಂಬರಿಸೊಪ್ಪು
ಕಾಯಿತುರಿ
ವಿಧಾನ:
ಹಿಂದಿನ ದಿನ ರಾತ್ರಿ ಕಡ್ಲೆಕಾಳನ್ನು ಚೆನ್ನಾಗಿ ತೊಳೆದು,ನೀರು ಹಾಕಿ ನೆನೆಸಿಡಿ. ಬೆಳಗ್ಗೆ ಮತ್ತೆ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಕುಕ್ಕರ್ ಗೆ ಕಾಳುಗಳನ್ನು ಹಾಕಿ ಒಂದು ಲೋಟ ನೀರು ಹಾಕಿ,ಒಂದು ಟೀ ಬ್ಯಾಗ್,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ. ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ.
ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ,ಸಾಸಿವೆ,ಕರಿಬೇವು,ಚಿಟಿಕೆ ಇಂಗು,ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ ,ಬೇಯಿಸಿರುವ ಕಡ್ಲೆಕಾಳನ್ನು ಹಾಕಿ,ಎಲ್ಲವನ್ನು ಚೆನ್ನಾಗಿ ಬೆರೆಸಿ. ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ. ಇದನ್ನು ಊಟಕ್ಕೆ ನೆಂಚಿಕೊಳ್ಳಬಹುದು.ಇದನ್ನು ಸಂಜೆ ಕಾಫಿಯೊಂದಿಗೆ ಸ್ನಾಕ್ ತರಹ ಸರ್ವ್ ಮಾಡಿ. ಈ ಕಡ್ಲೆಕಾಳು ಉಸಲಿಯನ್ನು ಸರ್ವ್ ಮಾಡುವಾಗ ಸ್ವಲ್ಪ ಕತ್ತರಿಸಿದ ಹಸಿ ಈರುಳ್ಳಿಯನ್ನು ಮೇಲೆ ಹಾಕಿ ಕೊಡಿ.
*ನಿಂಬೆರಸ ಹಾಕುವುದಾದರೆ ಕೊನೆಯಲ್ಲಿ ಬೆರೆಸಿ / ಹುಣಸೇರಸ ಹಾಕುವುದಾದರೆ ಒಗ್ಗರಣೆಯಲ್ಲಿ ಹಾಕಿ.
Tuesday, June 12, 2007
Green Beans usali-ಹುರುಳಿಕಾಯಿ ಪಲ್ಯ/ಉಸಲಿ:
ಹುರುಳಿಕಾಯಿ ಪಲ್ಯ/ಉಸಲಿ:
ಬೇಕಾಗುವ ಪದಾರ್ಥಗಳು;
ಹುರುಳಿಕಾಯಿ (ಬೀನ್ಸ್)
ಈರುಳ್ಳಿ - ಒಂದು
ಹಸಿಮೆಣಸಿನಕಾಯಿ ರುಚಿಗೆ
ಕಾಯಿತುರಿ,ಕೊತ್ತುಂಬರಿಸೊಪ್ಪು
ನಿಂಬೆರಸ
ಎಣ್ಣೆ,ಸಾಸಿವೆ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಅರಿಶಿನ
ಉಪ್ಪು ರುಚಿಗೆ
ವಿಧಾನ:ಮೊದಲು ಹುರುಳಿಕಾಯಿಯನ್ನು ಸಣ್ಣಗೆ ಕತ್ತರಿಸಿ.
ಬಾಣಲೆಗೆ ಎಣ್ಣೆ ಹಾಕಿ,ಕಾದ ಬಳಿಕ,ಸಾಸಿವೆ,ಕಡ್ಲೆಬೇಳೆ,ಉದ್ದಿನಬೇಳೆ,ಈರುಳ್ಳಿ,ಹಸಿಮೆಣಸಿನಕಾಯಿ ಹಾಕಿ,ಬಾಡಿಸಿ,ಕರಿಬೇವು,ಅರಿಶಿನ ಮತ್ತು ಉಪ್ಪು ಹಾಕಿ ಒಂದೆರಡು ನಿಮಿಷ ಹುರಿದು,ಈರುಳ್ಳಿ ಬೆಂದಿದೆ ಎನಿಸಿದ ಬಳಿಕ ಹುರುಳಿಕಾಯಿಯನ್ನು ಸೇರಿಸಿ,ಸ್ವಲ್ಪ ಹೊತ್ತು ಅದರಲ್ಲಿಯೇ ಹುರಿದು ಬೇಯಿಸಿ. ಮಧ್ಯೆ ಮಧ್ಯೆ ತಿರುವುತ್ತಿರಿ. ನೀರು ಸ್ವಲ್ಪ ಹಾಕಿ ಹುರುಳಿಕಾಯಿ ಬೇಯುವವರೆಗು ಬೇಯಿಸಿ. ನಂತರ ಅದಕ್ಕೆ ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪು ಹಾಗು ನಿಂಬೆರಸ ಎಲ್ಲವನ್ನು ಹಾಕಿ ಚೆನ್ನಾಗಿ ಬೆರೆಸಿ. ಇಳಿಸಿ. ಇದನ್ನು ಊಟಕ್ಕೆ ನೆಂಚಿಕೊಳ್ಳಲು ಸೈಡ್ ಡಿಶ್ ಆಗಿ / ಚಪಾತಿಗೆ ಕೊಡಬಹುದು. ಬ್ರೆಡ್ ಮಧ್ಯೆ ಸ್ಯಾಂಡ್ ವಿಚ್ ತರಹ ತುಂಬಿ ತಿನ್ನಲು ಕೂಡ ಚೆನ್ನಾಗಿರುತ್ತದೆ.
ಬೇಕಾಗುವ ಪದಾರ್ಥಗಳು;
ಹುರುಳಿಕಾಯಿ (ಬೀನ್ಸ್)
ಈರುಳ್ಳಿ - ಒಂದು
ಹಸಿಮೆಣಸಿನಕಾಯಿ ರುಚಿಗೆ
ಕಾಯಿತುರಿ,ಕೊತ್ತುಂಬರಿಸೊಪ್ಪು
ನಿಂಬೆರಸ
ಎಣ್ಣೆ,ಸಾಸಿವೆ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಅರಿಶಿನ
ಉಪ್ಪು ರುಚಿಗೆ
ವಿಧಾನ:ಮೊದಲು ಹುರುಳಿಕಾಯಿಯನ್ನು ಸಣ್ಣಗೆ ಕತ್ತರಿಸಿ.
ಬಾಣಲೆಗೆ ಎಣ್ಣೆ ಹಾಕಿ,ಕಾದ ಬಳಿಕ,ಸಾಸಿವೆ,ಕಡ್ಲೆಬೇಳೆ,ಉದ್ದಿನಬೇಳೆ,ಈರುಳ್ಳಿ,ಹಸಿಮೆಣಸಿನಕಾಯಿ ಹಾಕಿ,ಬಾಡಿಸಿ,ಕರಿಬೇವು,ಅರಿಶಿನ ಮತ್ತು ಉಪ್ಪು ಹಾಕಿ ಒಂದೆರಡು ನಿಮಿಷ ಹುರಿದು,ಈರುಳ್ಳಿ ಬೆಂದಿದೆ ಎನಿಸಿದ ಬಳಿಕ ಹುರುಳಿಕಾಯಿಯನ್ನು ಸೇರಿಸಿ,ಸ್ವಲ್ಪ ಹೊತ್ತು ಅದರಲ್ಲಿಯೇ ಹುರಿದು ಬೇಯಿಸಿ. ಮಧ್ಯೆ ಮಧ್ಯೆ ತಿರುವುತ್ತಿರಿ. ನೀರು ಸ್ವಲ್ಪ ಹಾಕಿ ಹುರುಳಿಕಾಯಿ ಬೇಯುವವರೆಗು ಬೇಯಿಸಿ. ನಂತರ ಅದಕ್ಕೆ ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪು ಹಾಗು ನಿಂಬೆರಸ ಎಲ್ಲವನ್ನು ಹಾಕಿ ಚೆನ್ನಾಗಿ ಬೆರೆಸಿ. ಇಳಿಸಿ. ಇದನ್ನು ಊಟಕ್ಕೆ ನೆಂಚಿಕೊಳ್ಳಲು ಸೈಡ್ ಡಿಶ್ ಆಗಿ / ಚಪಾತಿಗೆ ಕೊಡಬಹುದು. ಬ್ರೆಡ್ ಮಧ್ಯೆ ಸ್ಯಾಂಡ್ ವಿಚ್ ತರಹ ತುಂಬಿ ತಿನ್ನಲು ಕೂಡ ಚೆನ್ನಾಗಿರುತ್ತದೆ.
Monday, April 30, 2007
Chow Chow Bhath - ಚೌಚೌ ಭಾತ್
ಖಾರಾಭಾತ್ ಮತ್ತು ಕೇಸರಿಭಾತ್ ಎರಡನ್ನು ಜೊತೆಯಲ್ಲಿ ಕೊಟ್ಟರೆ ಅದನ್ನು "ಚೌಚೌ ಭಾತ್" ಎನ್ನುತ್ತಾರೆ. ಈಗ ಅವೆರಡನ್ನು ತಯಾರಿಸುವ ರೀತಿ ತಿಳಿಯೋಣ.

ಖಾರಾ ಭಾತ್:
ಬೇಕಾಗುವ ಸಾಮಗ್ರಿಗಳು:
ರವೆ
ಎಣ್ಣೆ
ಸಾಸಿವೆ
ಹೆಚ್ಚಿದ ಹಸಿಮೆಣಸಿನಕಾಯಿ
ಹೆಚ್ಚಿದ ಈರುಳ್ಳಿ
ಕರಿಬೇವು ಸ್ವಲ್ಪ
ಕಡ್ಲೆಬೇಳೆ
ಉದ್ದಿನಬೇಳೆ
ಶುಂಠಿ ತುರಿ - ಒಂದು ಚಮಚ
ತರಕಾರಿಗಳು- ಒಂದು ಬಟ್ಟಲು
ಕ್ಯಾರೆಟ್,ಬೀನ್ಸ್,
ಆಲೂ,ಬಟಾಣಿ
ಉಪ್ಪು
ಕಾಯಿತುರಿ ಸ್ವಲ್ಪ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:
ರವೆಗೆ ಒಂದೆರಡು ಚಮಚ ಎಣ್ಣೆ ಹಾಕಿ ಹುರಿದುಕೊಳ್ಳಿ,ರವೆಯನ್ನು ಸೀದೀಸದೆ,ಘಂ ಎನ್ನುವ ವಾಸನೆ ಬರುವವರೆಗೂ ಹುರಿದು ತೆಗೆದಿಡಿ.
ಬಾಣಲೆಯಲ್ಲಿ ನಾಲ್ಕು/ಆರು ಚಮಚ ಎಣ್ಣೆ ಹಾಕಿ,ಕಾದ ಬಳಿಕ ಸಾಸಿವೆ,ಕರಿಬೇವು,ಕಡ್ಲೆಬೇಳೆ ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ,ಹಾಕಿ,ಬೆರೆಸಿ.ಶುಂಠಿ ತುರಿ ಮತ್ತು ಈರುಳ್ಳಿಯನ್ನು ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ನಂತರ ತರಕಾರಿಗಳನ್ನು ಹಾಕಿ,ಹುರಿದು. ಕೆಲವು ನಿಮಿಷ ಬೇಯಿಸಿದ ನಂತರ ಉಪ್ಪು ಹಾಕಿ,ಅಗತ್ಯವಿದ್ದಷ್ಟು ನೀರು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಕುದಿಯಲು ಬಿಡಿ. ನೀರು ಒಂದು ಕುದಿ ಬಂದ ತಕ್ಷಣ ರವೆಯನ್ನು ಕುದಿಯುತ್ತಿರುವ ನೀರಿಗೆ ನಿಧಾನವಾಗಿ ಹಾಕುತ್ತಾ,ಆಗೆ ಗಂಟು ಬರದಂತೆ ತಿರುವುತ್ತಿರಿ. ಪೂರ್ತಿ ರವೆ ಹಾಕಿದ ನಂತರ ಅದಕ್ಕೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಬಿಸಿ ಬಿಸಿಯಾಗಿರುವಾಗಲೆ ಈ ತರಕಾರಿ ಉಪ್ಪಿಟ್ಟನ್ನು ತಿನ್ನಿ.
* ಫ್ರೊಜ಼ನ್ ತರಕಾರಿಗಳನ್ನು ಉಪಯೋಗಿಸಬಹುದು. ಮಿಕ಼್ಸೆಡ್ ವೆಜೆಟಬಲ್ಸ್ ತಗೊಂಡರೆ ಅನುಕೂಲ.ಇದು ಬೇಗ ಮತ್ತು ಸುಲಭವಾಗುತ್ತದೆ.
* ತರಕಾರಿ ಹೆಚ್ಚಿಕೊಳ್ಳುವ ಸಮಯ ಉಳಿಯುತ್ತದೆ ಹಾಗೂ ತರಕಾರಿ ಸಹ ಫ಼್ರೆಶ್ ಇರುತ್ತದೆ.
*******************************
ಕೇಸರಿ ಭಾತ್:
ಬೇಕಾಗುವ ಸಾಮಗ್ರಿಗಳು:
ರವೆ (ಸಣ್ಣ ರವೆ/ಚಿರೋಟಿ ರವೆ)-ಒಂದು ಕಪ್
ಸಕ್ಕರೆ ರುಚಿಗೆ
ತುಪ್ಪ -ಎರಡು ಚಮಚ
ರಿಫೈಂಡ್ ಆಯಿಲ್ -ಎರಡು ಚಮಚ
ಹಾಲು - ಅರ್ಧ ಕಪ್
ಕೇಸರಿ ದಳಗಳು ಸ್ವಲ್ಪ
ಏಲಕ್ಕಿ ಪುಡಿ
ದ್ರಾಕ್ಷಿ ಮತ್ತು ಗೋಡಂಬಿ
ತಯಾರಿಸುವ ರೀತಿ:
ಒಂದೆರಡು ಚಮಚ ಹಾಲಿನಲ್ಲಿ ಕೇಸರಿ ದಳಗಳನ್ನು ನೆನೆಸಿಡಿ.
ಮೊದಲು ರವೆಯನ್ನು ತುಪ್ಪ ಹಾಕಿ ಹುರಿದುಕೊಳ್ಳಿ, ಹಸಿವಾಸನೆ ಹೋಗಿ ಘಂ ಎನ್ನುವ ವಾಸನೆ ಬರುವವರೆಗೂ ರವೆಯನ್ನು ಸೀದಿಸದೆ ಹುರಿದುಕೊಳ್ಳಿ.
ಪಾತ್ರೆಗೆ ತುಪ್ಪ ಮತ್ತು ಎಣ್ಣೆಯನ್ನು ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿಯಿರಿ, ಅದಕ್ಕೆ ಹಾಲು ಮತ್ತು ಸ್ವಲ್ಪ ನೀರು ನಿಮಗೆ ಬೇಕಾದ ಅಳತೆ ಹಾಕಿಕೊಂಡು ಕುದಿಯಲು ಇಟ್ಟು, ಅದಕ್ಕೆ ಸಕ್ಕರೆ ಸೇರಿಸಿ, ಸಕ್ಕರೆ ಕರಗಿ ಕುದಿ ಬರುತ್ತಿರುವಾಗ ಏಲಕ್ಕಿ ಪುಡಿ ಮತ್ತು ಹಾಲಿನಲ್ಲಿ ನೆನೆಸಿದ ಕೇಸರಿದಳ ಹಾಕಿ, ಮತ್ತೆರಡು ಚಮಚ ತುಪ್ಪ ಹಾಕಿ, ಆಮೇಲೆ ಹುರಿದಿರುವ ರವೆಯನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಗಂಟು ಕಟ್ಟದಂತೆ ಎಲ್ಲ ಬೆರೆತುಕೊಳ್ಳುವಂತೆ ಚೆನ್ನಾಗಿ ತಿರುಗಿಸಿ. ಕೆಳಗಿಳಿಸಿ,ಮುಚ್ಚಿಡಿ. ಕೇಸರಿಭಾತ್ ತಯಾರಿಸುವಾಗ ಸ್ವಲ್ಪ ತೆಳುವಾಗಿ ತಯಾರಿಸಿ, ನಂತರ ತಣ್ಣಗಾದ ಮೇಲೆ ಅದು ತುಂಬಾ ಗಟ್ಟಿಯಾಗುತ್ತದೆ. ತುಪ್ಪ ಸ್ವಲ್ಪ ಜಾಸ್ತಿ ಹಾಕಿ. ಬಿಸಿಬಿಸಿಯಾದ ಕೇಸರಿಭಾತ್ ತಿನ್ನಲು ತಯಾರಾಗಿದೆ. ಬಿಸಿಯಾದ ಕೇಸರಿಭಾತ್ ಬಹಳ ಚೆನ್ನಾಗಿರುತ್ತದೆ.
* ರವೆಯನ್ನು ಹುರಿಯುವಾಗ ತುಂಬಾ ಹುಷಾರಾಗಿ ಹುರಿಯಬೇಕು.
* ಕೇಸರಿಭಾತ್ ಗೆ ಬರೀ ನೀರನ್ನು ಹಾಕದೆ ಹಾಲನ್ನು ಸೇರಿಸಿದರೆ ರುಚಿ ಹೆಚ್ಚು.
* ತುಪ್ಪದ ಜೊತೆ ಎಣ್ಣೆಯನ್ನು ಹಾಕುವುದರಿಂದ ಬೇಗ ಗಟ್ಟಿಯಾಗುವುದಿಲ್ಲ.
* ಕೆಲವರು ಕೇಸರಿಬಣ್ಣ ಹಾಕುತ್ತಾರೆ, ಇದರಿಂದ ಕೇಸರಿಭಾತ್ ಬಣ್ಣ ಚೆನ್ನಾಗಿ ಆಕರ್ಷಕವಾಗಿ ಬರುತ್ತದೆ. ಆದರೆ ಕೇಸರಿ ದಳಗಳು ಆರೋಗ್ಯಕ್ಕೆ ಒಳ್ಳೆಯದು, ಆಗಾಗಿ ಅದನ್ನು ಉಪಯೋಗಿಸಿ. ಬಣ್ಣ ಹಾಕಲೇ ಬೇಕೆನಿಸಿದವರು ಒಳ್ಳೆಯ ಪ್ರಾಡಕ್ಟ್ ಬಣ್ಣವನ್ನು ತನ್ನಿ.ಅದು ಚಿಟಿಕೆ ಹಾಕಿದರೆ ಸಾಕು.
* ಇದು ಬೇಗನೇ ತಯಾರಿಸಬಹುದಾದಂತಹ ಸಿಹಿ. ಕೆಲವರು ಈ ಸಿಹಿತಿಂಡಿಗೆ "ಶಿರಾ"ಎಂದು ಕೂಡ ಕರೆಯುತ್ತಾರೆ.

ಖಾರಾ ಭಾತ್:
ಬೇಕಾಗುವ ಸಾಮಗ್ರಿಗಳು:
ರವೆ
ಎಣ್ಣೆ
ಸಾಸಿವೆ
ಹೆಚ್ಚಿದ ಹಸಿಮೆಣಸಿನಕಾಯಿ
ಹೆಚ್ಚಿದ ಈರುಳ್ಳಿ
ಕರಿಬೇವು ಸ್ವಲ್ಪ
ಕಡ್ಲೆಬೇಳೆ
ಉದ್ದಿನಬೇಳೆ
ಶುಂಠಿ ತುರಿ - ಒಂದು ಚಮಚ
ತರಕಾರಿಗಳು- ಒಂದು ಬಟ್ಟಲು
ಕ್ಯಾರೆಟ್,ಬೀನ್ಸ್,
ಆಲೂ,ಬಟಾಣಿ
ಉಪ್ಪು
ಕಾಯಿತುರಿ ಸ್ವಲ್ಪ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:
ರವೆಗೆ ಒಂದೆರಡು ಚಮಚ ಎಣ್ಣೆ ಹಾಕಿ ಹುರಿದುಕೊಳ್ಳಿ,ರವೆಯನ್ನು ಸೀದೀಸದೆ,ಘಂ ಎನ್ನುವ ವಾಸನೆ ಬರುವವರೆಗೂ ಹುರಿದು ತೆಗೆದಿಡಿ.
ಬಾಣಲೆಯಲ್ಲಿ ನಾಲ್ಕು/ಆರು ಚಮಚ ಎಣ್ಣೆ ಹಾಕಿ,ಕಾದ ಬಳಿಕ ಸಾಸಿವೆ,ಕರಿಬೇವು,ಕಡ್ಲೆಬೇಳೆ ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ,ಹಾಕಿ,ಬೆರೆಸಿ.ಶುಂಠಿ ತುರಿ ಮತ್ತು ಈರುಳ್ಳಿಯನ್ನು ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ನಂತರ ತರಕಾರಿಗಳನ್ನು ಹಾಕಿ,ಹುರಿದು. ಕೆಲವು ನಿಮಿಷ ಬೇಯಿಸಿದ ನಂತರ ಉಪ್ಪು ಹಾಕಿ,ಅಗತ್ಯವಿದ್ದಷ್ಟು ನೀರು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಕುದಿಯಲು ಬಿಡಿ. ನೀರು ಒಂದು ಕುದಿ ಬಂದ ತಕ್ಷಣ ರವೆಯನ್ನು ಕುದಿಯುತ್ತಿರುವ ನೀರಿಗೆ ನಿಧಾನವಾಗಿ ಹಾಕುತ್ತಾ,ಆಗೆ ಗಂಟು ಬರದಂತೆ ತಿರುವುತ್ತಿರಿ. ಪೂರ್ತಿ ರವೆ ಹಾಕಿದ ನಂತರ ಅದಕ್ಕೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಬಿಸಿ ಬಿಸಿಯಾಗಿರುವಾಗಲೆ ಈ ತರಕಾರಿ ಉಪ್ಪಿಟ್ಟನ್ನು ತಿನ್ನಿ.
* ಫ್ರೊಜ಼ನ್ ತರಕಾರಿಗಳನ್ನು ಉಪಯೋಗಿಸಬಹುದು. ಮಿಕ಼್ಸೆಡ್ ವೆಜೆಟಬಲ್ಸ್ ತಗೊಂಡರೆ ಅನುಕೂಲ.ಇದು ಬೇಗ ಮತ್ತು ಸುಲಭವಾಗುತ್ತದೆ.
* ತರಕಾರಿ ಹೆಚ್ಚಿಕೊಳ್ಳುವ ಸಮಯ ಉಳಿಯುತ್ತದೆ ಹಾಗೂ ತರಕಾರಿ ಸಹ ಫ಼್ರೆಶ್ ಇರುತ್ತದೆ.
*******************************
ಕೇಸರಿ ಭಾತ್:
ಬೇಕಾಗುವ ಸಾಮಗ್ರಿಗಳು:
ರವೆ (ಸಣ್ಣ ರವೆ/ಚಿರೋಟಿ ರವೆ)-ಒಂದು ಕಪ್
ಸಕ್ಕರೆ ರುಚಿಗೆ
ತುಪ್ಪ -ಎರಡು ಚಮಚ
ರಿಫೈಂಡ್ ಆಯಿಲ್ -ಎರಡು ಚಮಚ
ಹಾಲು - ಅರ್ಧ ಕಪ್
ಕೇಸರಿ ದಳಗಳು ಸ್ವಲ್ಪ
ಏಲಕ್ಕಿ ಪುಡಿ
ದ್ರಾಕ್ಷಿ ಮತ್ತು ಗೋಡಂಬಿ
ತಯಾರಿಸುವ ರೀತಿ:
ಒಂದೆರಡು ಚಮಚ ಹಾಲಿನಲ್ಲಿ ಕೇಸರಿ ದಳಗಳನ್ನು ನೆನೆಸಿಡಿ.
ಮೊದಲು ರವೆಯನ್ನು ತುಪ್ಪ ಹಾಕಿ ಹುರಿದುಕೊಳ್ಳಿ, ಹಸಿವಾಸನೆ ಹೋಗಿ ಘಂ ಎನ್ನುವ ವಾಸನೆ ಬರುವವರೆಗೂ ರವೆಯನ್ನು ಸೀದಿಸದೆ ಹುರಿದುಕೊಳ್ಳಿ.
ಪಾತ್ರೆಗೆ ತುಪ್ಪ ಮತ್ತು ಎಣ್ಣೆಯನ್ನು ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿಯಿರಿ, ಅದಕ್ಕೆ ಹಾಲು ಮತ್ತು ಸ್ವಲ್ಪ ನೀರು ನಿಮಗೆ ಬೇಕಾದ ಅಳತೆ ಹಾಕಿಕೊಂಡು ಕುದಿಯಲು ಇಟ್ಟು, ಅದಕ್ಕೆ ಸಕ್ಕರೆ ಸೇರಿಸಿ, ಸಕ್ಕರೆ ಕರಗಿ ಕುದಿ ಬರುತ್ತಿರುವಾಗ ಏಲಕ್ಕಿ ಪುಡಿ ಮತ್ತು ಹಾಲಿನಲ್ಲಿ ನೆನೆಸಿದ ಕೇಸರಿದಳ ಹಾಕಿ, ಮತ್ತೆರಡು ಚಮಚ ತುಪ್ಪ ಹಾಕಿ, ಆಮೇಲೆ ಹುರಿದಿರುವ ರವೆಯನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಗಂಟು ಕಟ್ಟದಂತೆ ಎಲ್ಲ ಬೆರೆತುಕೊಳ್ಳುವಂತೆ ಚೆನ್ನಾಗಿ ತಿರುಗಿಸಿ. ಕೆಳಗಿಳಿಸಿ,ಮುಚ್ಚಿಡಿ. ಕೇಸರಿಭಾತ್ ತಯಾರಿಸುವಾಗ ಸ್ವಲ್ಪ ತೆಳುವಾಗಿ ತಯಾರಿಸಿ, ನಂತರ ತಣ್ಣಗಾದ ಮೇಲೆ ಅದು ತುಂಬಾ ಗಟ್ಟಿಯಾಗುತ್ತದೆ. ತುಪ್ಪ ಸ್ವಲ್ಪ ಜಾಸ್ತಿ ಹಾಕಿ. ಬಿಸಿಬಿಸಿಯಾದ ಕೇಸರಿಭಾತ್ ತಿನ್ನಲು ತಯಾರಾಗಿದೆ. ಬಿಸಿಯಾದ ಕೇಸರಿಭಾತ್ ಬಹಳ ಚೆನ್ನಾಗಿರುತ್ತದೆ.
* ರವೆಯನ್ನು ಹುರಿಯುವಾಗ ತುಂಬಾ ಹುಷಾರಾಗಿ ಹುರಿಯಬೇಕು.
* ಕೇಸರಿಭಾತ್ ಗೆ ಬರೀ ನೀರನ್ನು ಹಾಕದೆ ಹಾಲನ್ನು ಸೇರಿಸಿದರೆ ರುಚಿ ಹೆಚ್ಚು.
* ತುಪ್ಪದ ಜೊತೆ ಎಣ್ಣೆಯನ್ನು ಹಾಕುವುದರಿಂದ ಬೇಗ ಗಟ್ಟಿಯಾಗುವುದಿಲ್ಲ.
* ಕೆಲವರು ಕೇಸರಿಬಣ್ಣ ಹಾಕುತ್ತಾರೆ, ಇದರಿಂದ ಕೇಸರಿಭಾತ್ ಬಣ್ಣ ಚೆನ್ನಾಗಿ ಆಕರ್ಷಕವಾಗಿ ಬರುತ್ತದೆ. ಆದರೆ ಕೇಸರಿ ದಳಗಳು ಆರೋಗ್ಯಕ್ಕೆ ಒಳ್ಳೆಯದು, ಆಗಾಗಿ ಅದನ್ನು ಉಪಯೋಗಿಸಿ. ಬಣ್ಣ ಹಾಕಲೇ ಬೇಕೆನಿಸಿದವರು ಒಳ್ಳೆಯ ಪ್ರಾಡಕ್ಟ್ ಬಣ್ಣವನ್ನು ತನ್ನಿ.ಅದು ಚಿಟಿಕೆ ಹಾಕಿದರೆ ಸಾಕು.
* ಇದು ಬೇಗನೇ ತಯಾರಿಸಬಹುದಾದಂತಹ ಸಿಹಿ. ಕೆಲವರು ಈ ಸಿಹಿತಿಂಡಿಗೆ "ಶಿರಾ"ಎಂದು ಕೂಡ ಕರೆಯುತ್ತಾರೆ.
Monday, April 16, 2007
Roasted Vermicilli Upma / ಶ್ಯಾವಿಗೆ ಉಪ್ಪಿಟ್ಟು

ಶ್ಯಾವಿಗೆ ಉಪ್ಪಿಟ್ಟು:
ಸಾಮಗ್ರಿಗಳು:
ಶ್ಯಾವಿಗೆ - ಒಂದು ಬಟ್ಟಲು
ನೀರು - ಎರಡು ಬಟ್ಟಲು
ಹೆಚ್ಚಿದ ಈರುಳ್ಳಿ
ಹಸಿಮೆಣಸಿನಕಾಯಿ
ಟಮೋಟ ಹೆಚ್ಚಿದ್ದು ಸ್ವಲ್ಪ
ಎಣ್ಣೆ, ಸಾಸಿವೆ, ಕರಿಬೇವು
ಕಡ್ಲೆಬೇಳೆ, ಉದ್ದಿನಬೇಳೆ
ಅರಿಶಿನ,ಉಪ್ಪು
ನಿಂಬೆರಸ
ಕಾಯಿತುರಿ ಮತ್ತು
ಕೊತ್ತುಂಬರಿ ಸೊಪ್ಪು
ವಿಧಾನ:
ಶ್ಯಾವಿಗೆಯನ್ನು ಮೊದಲೆ ಬೇರೆ ಬೇಯಿಸಿಟ್ಟುಕೊಳ್ಳಿ.
ಮೊದಲು ಪಾತ್ರೆ ಅಥವ ಬಾಣಲೆಗೆ ಅವಶ್ಯಕತೆ ಇದ್ದಷ್ಟು ಎಣ್ಣೆ ಹಾಕಿ,ಸಾಸಿವೆ ಹಾಕಿ,ಕಡ್ಲೆಬೇಳೆ,ಉದ್ದಿನಬೇಳೆಯನ್ನು ಹಾಕಿ ಹುರಿದ ನಂತರ ಕರಿಬೇವು, ಹಸಿಮೆಣಸಿನಕಾಯಿ,ಈರುಳ್ಳಿಯನ್ನು ಹಾಕಿ,ಒಂದೆರಡು ನಿಮಿಷ ಬಾಡಿಸಿ,ಟಮೋಟ ಹಾಕಿ ನಾಲ್ಕೈದು ನಿಮಿಷ ಹುರಿದು ಅದಕ್ಕೆ ಚಿಟಿಕೆ ಅರಿಶಿನ ಮತ್ತು ಉಪ್ಪು ಹಾಕಿ,ಟಮೋಟ ಬೆಂದಿದೆ ಎನಿಸಿದಾಗ ಬೇಯಿಸಿದ ಶ್ಯಾವಿಗೆಯನ್ನು ಹಾಕಿ,ಚೆನ್ನಾಗಿ ತಿರುಗಿಸಿ.ಒಗ್ಗರಣೆಯೊಂದಿಗೆ ಶ್ಯಾವಿಗೆಯನ್ನು ಸರಿಯಾಗಿ ಬೆರೆಸಿದ ಮೇಲೆ ಅದಕ್ಕೆ ನಿಂಬೆರಸ,ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ತಿರುಗಿಸಿ,ಇಳಿಸಿ.
* ಮೈಕ್ರೋವೇವ್ ನಲ್ಲಿಟ್ಟು ಬೇಯಿಸಿಕೊಳ್ಳಬಹುದು.ಇದು ತುಂಬಾ ಸುಲಭ ಮತ್ತು ಶ್ಯಾವಿಗೆ ಕೂಡ ಬಿಡಿ ಬಿಡಿಯಾಗಿ ಬರುತ್ತದೆ.
* ನೇರವಾಗಿ ಬೇಯುಸುವುದಾದರೆ ಒಗ್ಗರಣೆಗೆ ನೀರು ಹಾಕಿ ಅದು ಕುದಿ ಬಂದ ಮೇಲೆ ಶ್ಯಾವಿಗೆಯನ್ನು ಹಾಕಿ,ಅದು ಬೇಯುವ ತನಕ ಬೇಯಿಸಿ,ಕೊನೆಗೆ ಮಿಕ್ಕಿದ್ದು ಬೆರೆಸಿ,ಶ್ಯಾವಿಗೆ ಉಪ್ಪಿಟ್ಟು ರೆಡಿ. ಶ್ಯಾವಿಗೆ ಉಪ್ಪಿಟ್ಟು ತಯಾರಾಗುತ್ತದೆ.
* ಇದನ್ನು ಬೆಳಗ್ಗೆ ಅಥವಾ ಸಂಜೆಯ ತಿಂಡಿಗಾಗಿ ತಯಾರಿಸಬಹುದು.
Subscribe to:
Posts (Atom)
Popular Posts
-
ತರಕಾರಿ ಸಾಗು ಅಥವ ಕೂಟು ಎಲ್ಲವುದಕ್ಕು ಹೊಂದಿಕೊಳ್ಳುವಂತಹದ್ದು. ಅಂದರೆ ಇದನ್ನು ದೋಸೆ, ಚಪಾತಿ,ಪರೋಟ,ರೊಟ್ಟಿ,ಪೂರಿ ಮತ್ತು ಅನ್ನದ ಜೊತೆಯಲ್ಲಿ ತಿನ್ನಬಹುದು. ಜೊತೆಯಲ್ಲ...
-
ಆಲೂ ಪರೋಟ: ಹೂರಣಕ್ಕೆ ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಆಲೂಗೆಡ್ಡೆ-ಒಂದು ಬಟ್ಟಲು ಅಚ್ಚ ಖಾರದ ಪುಡಿ-ಕಾಲು ಚಮಚ ಉಪ್ಪು ರುಚಿಗೆ ತಕ್ಕಷ್ಟು ಚಾಟ್ ಮಸಾಲಾ-ಕಾಲು ಚಮಚ ...
-
ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾ...
-
ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾ...
-
ಟಮೋಟ ಚಟ್ನಿ: ಬೇಕಾಗುವ ಸಾಮಗ್ರಿಗಳು: ಟಮೋಟ - ಅರ್ಧ ಕೆ.ಜಿ ಈರುಳ್ಳಿ - ಎರಡು ಬೆಳ್ಳುಳ್ಳಿ - ಹತ್ತು ಎಸಳು ಒಣಮೆಣಸಿನಕಾಯಿ - ರುಚಿಗೆ ತಕ್ಕಷ್ಟು ಹುಣಸೆಹಣ್ಣು -...
-
ಬಿಸಿಬೇಳೆ ಭಾತ್ ಪುಡಿ: ತಯಾರಿಸಲು ಬೇಕಾಗುವ ಸಾಮಗ್ರಿಗಳು: ಒಣಮೆಣಸಿನಕಾಯಿ -ಹತ್ತು / ಖಾರಕ್ಕೆ ತಕ್ಕಷ್ಟು ಧನಿಯ- ಎರಡು ಚಮಚ ಮೆಂತ್ಯ -ಅರ್ಧ ಚಮಚ ಜೀರಿಗೆ-ಒಂದು ಚ...
-
ಗೋಳಿಬಜೆಯಲ್ಲಿ ಅನೇಕ ವಿಧಗಳಿವೆ,ಇದು ಅವುಗಳಲ್ಲಿ ಒಂದು ಬಗೆ,ತುಂಬಾ ಸುಲಭವಾದ ಮತ್ತು ಕಮ್ಮಿ ಸಾಮಗ್ರಿಗಳು ಬೇಕಾಗುವಂತಹ ರೆಸಿಪಿ. ತಕ್ಷಣವೇ ತಯಾರಿಸಬಹುದಾದ ಬೋಂಡಾ. ಗೋಳ...
-
ರಸಂ ಪುಡಿ / ರಸಂ ಪೌಡರ್ ಬೇಕಾಗುವ ಪದಾರ್ಥಗಳು: ಒಣ ಮೆಣಸಿನ ಕಾಯಿ - ಒಂದು ಬಟ್ಟಲು ಧನಿಯಾ ಬೀಜ - ಅರ್ಧ ಬಟ್ಟಲು ಜೀರಿಗೆ - ಒಂದು ದೊಡ್ಡ ಚಮಚ ಮೆಣಸು - ಒಂದು ದೊಡ...
-
ಈರುಳ್ಳಿ ಟಮೋಟ ಚಟ್ನಿ: ಬೇಕಾಗುವ ಸಾಮಗ್ರಿಗಳು: 1. ಈರುಳ್ಳಿ- 2 2. ಟೊಮೆಟೊ- 4-5 3. ಹಸಿಮೆಣಸಿನ ಕಾಯಿ- 2 4. ಉಪ್ಪು- ರುಚಿಗೆ ತಕ್ಕಷ್ಟು 5. ಅಚ್ಚ ಖಾರದ ಪ...