ಶ್ರೀ ರಾಮನವಮಿಯಲ್ಲಿ ತಯಾರಿಸುವ ಪಾನಕ:
ಶ್ರೀ ರಾಮನವಮಿ ಹಬ್ಬದಲ್ಲಿ ಬೇರೆ ತಿನಿಸುಗಳಿಗಿಂತ ಪಾನಕ ಮತ್ತು ಕೋಸುಂಬರಿ ತುಂಬಾ ಪ್ರಸಿದ್ಧವಾಗಿವೆ.
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪಾನಕವನ್ನು ತಯಾರಿಸುತ್ತಾರೆ. ಕೆಲವರು ಇದಕ್ಕೆ ಕರಬೂಜ ಹಣ್ಣನ್ನು ಸೇರಿಸುತ್ತಾರೆ. ಇದನ್ನು ಸೇರಿಸಿದಾಗ ಇನ್ನೂ ಹೆಚ್ಚಿನ ರುಚಿಯನ್ನು ಕೊಡುತ್ತದೆ.
ಬೇಕಾಗುವ ಸಾಮಗ್ರಿಗಳು:
ಬೆಲ್ಲದ ಪುಡಿ ರುಚಿಗೆ ತಕ್ಕಷ್ಟು
ಕರಬೂಜ ಹಣ್ಣು ಸ್ವಲ್ಪ
ಒಣಶುಂಠಿ ಸ್ವಲ್ಪ
ಮೆಣಸಿನಕಾಳು ಸ್ವಲ್ಪ
ಸೋಂಪುಕಾಳು ಸ್ವಲ್ಪ
ನೀರು
ಚಿಟಿಕೆ ಉಪ್ಪು
ತಯಾರಿಸುವ ವಿಧಾನ:
ಒಣಶುಂಠಿ,ಸೋಂಪು ಮತ್ತು ಮೆಣಸಿನ ಕಾಳುಗಳನ್ನು ಸ್ವಲ್ಪ ಜಜ್ಜಿಕೊಳ್ಳಿ. ಬೆಲ್ಲ ಮತ್ತು ನೀರನ್ನು ಚೆನ್ನಾಗಿ ಬೆರೆಸಿ, ಬೆಲ್ಲ ಕರಗುವಂತೆ. ಇದರ ಜೊತೆಯಲ್ಲಿಯೇ ಕರಬೂಜ ಹಣ್ಣಿನ ಚೂರುಗಳನ್ನು ಸೇರಿಸಿ, ಕೈನಿಂದ ಹಣ್ಣನ್ನು ಚೆನ್ನಾಗಿ ಅದುಮಿ, ಹಣ್ಣು ಸ್ವಲ್ಪ ಸ್ವಲ್ಪ ಚೂರು ಇರುವಂತೆ ಬಿಡಿ.
*ಕರಬೂಜ ಹಣ್ಣನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ ಸೇರಿಸಬೇಡಿ. ಹಣ್ಣನ್ನು ಕೈನಲ್ಲಿಯೇ ಹಿಸುಕಿದರೆ, ಆ ಬೆಲ್ಲದ ನೀರಿನಲ್ಲಿ ಅದರ ಸುವಾಸನೆಯು ಸೇರುವುದರಿಂದ ರುಚಿಯೊಂದಿಗೆ ಅದರದ್ದೆ ಆದ ಘಮ ಘಮ ಪಾನಕಕ್ಕೆ ಬರುತ್ತದೆ. ಪಾನಕ ಕುಡಿಯುವಾಗ ಹಣ್ಣಿನ ಸಣ್ಣ ಸಣ್ಣ ಚೂರುಗಳು ಬಾಯಿಗೆ ಸಿಕ್ಕಿದರೆ ಚೆನ್ನ. ನಂತರ ಅದಕ್ಕೆ ಕುಟ್ಟಿದ ಪುಡಿ ಮತ್ತು ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಇದೆಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈನಿಂದ ಹಿಸುಕಿ ಬೆರೆಸಿ. ಈಗ ಪಾನಕ ತಯಾರಾಯಿತು.
ಇದು ಸಾಮಾನ್ಯವಾಗಿ ಶ್ರೀ ರಾಮನವಮಿ ಹಬ್ಬದ ದಿನ ತಯಾರಿಸುತ್ತಾರೆ. ಈ ತರಹ ಭಾಕಿ ದಿನಗಳಲ್ಲಿ ಮಾಡಿಕೊಂಡು ಕುಡಿದರೂ ಅದೇನೋ ಹಬ್ಬದ ದಿನ ಅದೊಂದು ತರಹ ಹೊಸ ರುಚಿಯೇನೋ ಎನಿಸುತ್ತೆ.
Showing posts with label Juice/Sharabat-ಪಾನೀಯ/ಪಾನಕ. Show all posts
Showing posts with label Juice/Sharabat-ಪಾನೀಯ/ಪಾನಕ. Show all posts
Friday, March 26, 2010
Tuesday, March 23, 2010
Paanaka / ಪಾನಕ:
ಶ್ರೀ ರಾಮನವಮಿಯಲ್ಲಿ ತಯಾರಿಸುವ ಪಾನಕ:
ಬೇಕಾಗುವ ಸಾಮಗ್ರಿಗಳು:
ಬೆಲ್ಲದ ಪುಡಿ ರುಚಿಗೆ ತಕ್ಕಷ್ಟು
ಒಣಶುಂಠಿ ಸ್ವಲ್ಪ
ಸೋಂಪುಕಾಳು ಸ್ವಲ್ಪ
ನೀರು
ಚಿಟಿಕೆ ಉಪ್ಪು
ಮೆಣಸಿನಕಾಳು ಸ್ವಲ್ಪ
ತಯಾರಿಸುವ ವಿಧಾನ:
ಒಣಶುಂಠಿ,ಸೋಂಪು ಮತ್ತು ಮೆಣಸಿನ ಕಾಳುಗಳನ್ನು ಸ್ವಲ್ಪ ಜಜ್ಜಿಕೊಳ್ಳಿ. ಬೆಲ್ಲ ಮತ್ತು ನೀರನ್ನು ಚೆನ್ನಾಗಿ ಬೆರೆಸಿ, ಬೆಲ್ಲ ಕರಗುವಂತೆ. ನಂತರ ಅದಕ್ಕೆ ಒಣಶುಂಠಿ,ಸೋಂಪು ಮತ್ತು ಮೆಣಸಿನ ಕಾಳುಗಳ ಕುಟ್ಟಿದ ಪುಡಿ ಮತ್ತು ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಕೈನಲ್ಲಿಯೇ ಹಿಸುಕಿದರೆ,ಆ ಬೆಲ್ಲದ ನೀರಿನಲ್ಲಿ ಅದರ ಸುವಾಸನೆಯು ಸೇರುವುದರಿಂದ ರುಚಿಯೊಂದಿಗೆ ಅದರದ್ದೆ ಆದ ಘಮ ಘಮ ಪಾನಕಕ್ಕೆ ಬರುತ್ತದೆ.ನಂತರ ಪಾನಕ ತಯಾರಾಗುತ್ತದೆ. ಇದು ಸಾಮಾನ್ಯವಾಗಿ ಶ್ರೀ ರಾಮನವಮಿ ಹಬ್ಬದ ದಿನ ದೇವಸ್ಥಾನಗಳಲ್ಲೂ ತಯಾರಿಸುತ್ತಾರೆ.
ಬೇಕಾಗುವ ಸಾಮಗ್ರಿಗಳು:
ಬೆಲ್ಲದ ಪುಡಿ ರುಚಿಗೆ ತಕ್ಕಷ್ಟು
ಒಣಶುಂಠಿ ಸ್ವಲ್ಪ
ಸೋಂಪುಕಾಳು ಸ್ವಲ್ಪ
ನೀರು
ಚಿಟಿಕೆ ಉಪ್ಪು
ಮೆಣಸಿನಕಾಳು ಸ್ವಲ್ಪ
ತಯಾರಿಸುವ ವಿಧಾನ:
ಒಣಶುಂಠಿ,ಸೋಂಪು ಮತ್ತು ಮೆಣಸಿನ ಕಾಳುಗಳನ್ನು ಸ್ವಲ್ಪ ಜಜ್ಜಿಕೊಳ್ಳಿ. ಬೆಲ್ಲ ಮತ್ತು ನೀರನ್ನು ಚೆನ್ನಾಗಿ ಬೆರೆಸಿ, ಬೆಲ್ಲ ಕರಗುವಂತೆ. ನಂತರ ಅದಕ್ಕೆ ಒಣಶುಂಠಿ,ಸೋಂಪು ಮತ್ತು ಮೆಣಸಿನ ಕಾಳುಗಳ ಕುಟ್ಟಿದ ಪುಡಿ ಮತ್ತು ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಕೈನಲ್ಲಿಯೇ ಹಿಸುಕಿದರೆ,ಆ ಬೆಲ್ಲದ ನೀರಿನಲ್ಲಿ ಅದರ ಸುವಾಸನೆಯು ಸೇರುವುದರಿಂದ ರುಚಿಯೊಂದಿಗೆ ಅದರದ್ದೆ ಆದ ಘಮ ಘಮ ಪಾನಕಕ್ಕೆ ಬರುತ್ತದೆ.ನಂತರ ಪಾನಕ ತಯಾರಾಗುತ್ತದೆ. ಇದು ಸಾಮಾನ್ಯವಾಗಿ ಶ್ರೀ ರಾಮನವಮಿ ಹಬ್ಬದ ದಿನ ದೇವಸ್ಥಾನಗಳಲ್ಲೂ ತಯಾರಿಸುತ್ತಾರೆ.
Sunday, December 27, 2009
Carrot Payasa - ಕ್ಯಾರೆಟ್ ಪಾಯಸ/ಖೀರು:
ಕ್ಯಾರೆಟ್ ಪಾಯಸ/ಖೀರು:
ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್ - ಒಂದು ಬಟ್ಟಲು ಹೆಚ್ಚಿದ್ದು
ಸಕ್ಕರೆ ರುಚಿಗೆ
ಹಾಲು - ಅಗತ್ಯವಿದ್ದಷ್ಟು
ದ್ರಾಕ್ಷಿ ಮತ್ತು ಗೋಡಂಬಿ
ಕೇಸರಿ ದಳಗಳು
ಗುಲಾಬಿ ನೀರು (ರೋಸ್ ವಾಟರ್)
ತುಪ್ಪ
ವಿಧಾನ:
ಮೊದಲು ಕ್ಯಾರೆಟ್ ಅನ್ನು ಬೇಯಿಸಿಕೊಂಡು, ಸ್ವಲ್ಪ ನೀರು ಅಥವ ಹಾಲು ಹಾಕಿಕೊಂಡು ಅದನ್ನು ರುಬ್ಬಿಕೊಳ್ಳಿ. ಕೇಸರಿಯನ್ನು ಸ್ವಲ್ಪ ಹಾಲಿನಲ್ಲಿ ನೆನೆಹಾಕಿ.
ಒಂದು ಪಾತ್ರೆಗೆ ತುಪ್ಪ ಹಾಕಿ , ಕರಗಿದ ತುಪ್ಪದಲ್ಲಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದು, ಅದಕ್ಕೆ ಹಾಲನ್ನು ಹಾಕಿ, ರುಬ್ಬಿದ ಕ್ಯಾರೆಟ್ ಮಿಶ್ರಣವನ್ನು ಹಾಕಿ, ಚೆನ್ನಾಗಿ ಕುದಿಸಿ, ತಿರುಗಿಸುತ್ತಿರಿ. ಕುದಿ ಬರುವಾಗ ಸಕ್ಕರೆ ಮತ್ತು ಕೇಸರಿಹಾಲನ್ನು ಸೇರಿಸಿ. ಸಕ್ಕರೆ ಕರಗುವಂತೆ ಕ್ಯಾರೆಟ್ ಮಿಶ್ರಣವನ್ನು ಚೆನ್ನಾಗಿ ಕುದಿಸಿ.ಇಳಿಸಿ. ಇದಕ್ಕೆ ಒಂದು ಚಮಚ ಗುಲಾಬಿ ನೀರು ಹಾಕಿ. ಇದೀಗ ಪೌಷ್ಠಿಕರವಾದ, ನೋಡಲು ಸುಂದರವಾದ, ಕುಡಿಯಲು ರುಚಿಯಾದ ಆರೋಗ್ಯಕ್ಕೆ ಹಿತಕರವಾದ ಕ್ಯಾರೆಟ್ ಪಾಯಸ/ಖೀರು ತಯಾರಾಗಿದೆ.
ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್ - ಒಂದು ಬಟ್ಟಲು ಹೆಚ್ಚಿದ್ದು
ಸಕ್ಕರೆ ರುಚಿಗೆ
ಹಾಲು - ಅಗತ್ಯವಿದ್ದಷ್ಟು
ದ್ರಾಕ್ಷಿ ಮತ್ತು ಗೋಡಂಬಿ
ಕೇಸರಿ ದಳಗಳು
ಗುಲಾಬಿ ನೀರು (ರೋಸ್ ವಾಟರ್)
ತುಪ್ಪ
ವಿಧಾನ:
ಮೊದಲು ಕ್ಯಾರೆಟ್ ಅನ್ನು ಬೇಯಿಸಿಕೊಂಡು, ಸ್ವಲ್ಪ ನೀರು ಅಥವ ಹಾಲು ಹಾಕಿಕೊಂಡು ಅದನ್ನು ರುಬ್ಬಿಕೊಳ್ಳಿ. ಕೇಸರಿಯನ್ನು ಸ್ವಲ್ಪ ಹಾಲಿನಲ್ಲಿ ನೆನೆಹಾಕಿ.
ಒಂದು ಪಾತ್ರೆಗೆ ತುಪ್ಪ ಹಾಕಿ , ಕರಗಿದ ತುಪ್ಪದಲ್ಲಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದು, ಅದಕ್ಕೆ ಹಾಲನ್ನು ಹಾಕಿ, ರುಬ್ಬಿದ ಕ್ಯಾರೆಟ್ ಮಿಶ್ರಣವನ್ನು ಹಾಕಿ, ಚೆನ್ನಾಗಿ ಕುದಿಸಿ, ತಿರುಗಿಸುತ್ತಿರಿ. ಕುದಿ ಬರುವಾಗ ಸಕ್ಕರೆ ಮತ್ತು ಕೇಸರಿಹಾಲನ್ನು ಸೇರಿಸಿ. ಸಕ್ಕರೆ ಕರಗುವಂತೆ ಕ್ಯಾರೆಟ್ ಮಿಶ್ರಣವನ್ನು ಚೆನ್ನಾಗಿ ಕುದಿಸಿ.ಇಳಿಸಿ. ಇದಕ್ಕೆ ಒಂದು ಚಮಚ ಗುಲಾಬಿ ನೀರು ಹಾಕಿ. ಇದೀಗ ಪೌಷ್ಠಿಕರವಾದ, ನೋಡಲು ಸುಂದರವಾದ, ಕುಡಿಯಲು ರುಚಿಯಾದ ಆರೋಗ್ಯಕ್ಕೆ ಹಿತಕರವಾದ ಕ್ಯಾರೆಟ್ ಪಾಯಸ/ಖೀರು ತಯಾರಾಗಿದೆ.
Monday, December 14, 2009
ಜೀರಿಗೆ ಮತ್ತು ಶುಂಠಿ ಪಾನೀಯ/ CuminGinger juice
ಜೀರಿಗೆ ಮತ್ತು ಶುಂಠಿ ಎರಡು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿವೆ. ಅದರ ಪಾನೀಯವನ್ನು ಆಗಾಗ್ಗೆ ಸೇವಿಸುವುದರಿಂದ ಅನೇಕ ತೊಂದರೆಗಳಿಗೆ ಅನುಕೂಲವಾಗುತ್ತದೆ.
ಜೀರಿಗೆ ಮತ್ತು ಶುಂಠಿ ಪಾನೀಯ /ಪಾನಕ;
ಸಾಮಾನುಗಳು:
ಕುಟ್ಟಿದ ಜೀರಿಗೆ ಸ್ವಲ್ಪ
ಜಜ್ಜಿದ ಶುಂಠಿ ಸ್ವಲ್ಪ
ನಿಂಬೆರಸ ಒಂದು ಚಮಚ
ಜೇನುತುಪ್ಪ
ವಿಧಾನ:
ಒಂದು ಲೋಟ ನೀರಿಗೆ ಜಜ್ಜಿದ ಶುಂಠಿ ಮತ್ತು ಕುಟ್ಟಿದ ಜೀರಿಗೆ ಹಾಕಿ ಕುದಿಸಿ, ಸೋಸಿ, ನಿಂಬೆರಸ ಮತ್ತು ಜೇನುತುಪ್ಪವನ್ನು ಬೆರೆಸಿ. ಸೇವಿಸಿ.
*ಕಾಳು ಮೆಣಸಿನ ಪುಡಿ ಬೇಕಾದವರು ಸೇರಿಸಿಕೊಳ್ಳಬಹುದು.
ಜೀರಿಗೆ ಮತ್ತು ಶುಂಠಿ ಪಾನೀಯ /ಪಾನಕ;
ಸಾಮಾನುಗಳು:
ಕುಟ್ಟಿದ ಜೀರಿಗೆ ಸ್ವಲ್ಪ
ಜಜ್ಜಿದ ಶುಂಠಿ ಸ್ವಲ್ಪ
ನಿಂಬೆರಸ ಒಂದು ಚಮಚ
ಜೇನುತುಪ್ಪ
ವಿಧಾನ:
ಒಂದು ಲೋಟ ನೀರಿಗೆ ಜಜ್ಜಿದ ಶುಂಠಿ ಮತ್ತು ಕುಟ್ಟಿದ ಜೀರಿಗೆ ಹಾಕಿ ಕುದಿಸಿ, ಸೋಸಿ, ನಿಂಬೆರಸ ಮತ್ತು ಜೇನುತುಪ್ಪವನ್ನು ಬೆರೆಸಿ. ಸೇವಿಸಿ.
*ಕಾಳು ಮೆಣಸಿನ ಪುಡಿ ಬೇಕಾದವರು ಸೇರಿಸಿಕೊಳ್ಳಬಹುದು.
Friday, April 17, 2009
Water Melon Juice/ಕಲ್ಲಂಗಡಿ ಹಣ್ಣಿನ ಪಾನೀಯ:
ಕಲ್ಲಂಗಡಿ ಹಣ್ಣಿನ ಪಾನೀಯ:
ಕಲ್ಲಂಗಡಿ ಹಣ್ಣು
ಉಪ್ಪು
ಮೆಣಸಿನಪುಡಿ
ಜೇನುತುಪ್ಪ
ನಿಂಬೆರಸ
ವಿಧಾನ:
ಕಲ್ಲಂಗಡಿ ಹಣ್ಣಿನ ಹೋಳುಗಳನ್ನು ಮಿಕ್ಸಿಗೆ ಹಾಕಿ, ಸ್ವಲ್ಪ ನೀರು ಮತ್ತು ಜೇನುತುಪ್ಪ ಹಾಕಿ ಬ್ಲೆಂಡ್ ಮಾಡಿಕೊಳ್ಳಿ. ಅದನ್ನು ಲೋಟಕ್ಕೆ ಹಾಕಿ ಚಿಟಿಕೆ ಉಪ್ಪು ಮತ್ತು ಕಾಳುಮೆಣಸಿನಪುಡಿ ಹಾಕಿ.ನಿಂಬೆರಸ ಸೇರಿಸಿ ಕಲಕಿ.ಸರ್ವ್ ಮಾಡಿ.ತಣ್ಣಗೆ ಬೇಕಾದವರು ಐಸ್ ಕ್ಯೂಬ್ಸ್ ಹಾಕಿಕೊಳ್ಳಬಹುದು.
ಕಲ್ಲಂಗಡಿ ಹಣ್ಣು
ಉಪ್ಪು
ಮೆಣಸಿನಪುಡಿ
ಜೇನುತುಪ್ಪ
ನಿಂಬೆರಸ
ವಿಧಾನ:
ಕಲ್ಲಂಗಡಿ ಹಣ್ಣಿನ ಹೋಳುಗಳನ್ನು ಮಿಕ್ಸಿಗೆ ಹಾಕಿ, ಸ್ವಲ್ಪ ನೀರು ಮತ್ತು ಜೇನುತುಪ್ಪ ಹಾಕಿ ಬ್ಲೆಂಡ್ ಮಾಡಿಕೊಳ್ಳಿ. ಅದನ್ನು ಲೋಟಕ್ಕೆ ಹಾಕಿ ಚಿಟಿಕೆ ಉಪ್ಪು ಮತ್ತು ಕಾಳುಮೆಣಸಿನಪುಡಿ ಹಾಕಿ.ನಿಂಬೆರಸ ಸೇರಿಸಿ ಕಲಕಿ.ಸರ್ವ್ ಮಾಡಿ.ತಣ್ಣಗೆ ಬೇಕಾದವರು ಐಸ್ ಕ್ಯೂಬ್ಸ್ ಹಾಕಿಕೊಳ್ಳಬಹುದು.
Monday, February 16, 2009
Tomato Juice/Sharabat-ಟಮೋಟ ಶರಬತ್ತು:
ಟಮೋಟ ಶರಬತ್ತು:
ಸಾಮಾನುಗಳು:
ಚೆನ್ನಾಗಿ ಹಣ್ಣಾಗಿರುವ ಟಮೋಟ
ಸಕ್ಕರೆ
ಏಲಕ್ಕಿ ಪುಡಿ
ವಿಧಾನ:
ಟಮೋಟವನ್ನು ಚೆನ್ನಾಗಿ ತೊಳೆದು,ಮಿಕ್ಸಿಗೆ ಹಾಕಿ,ಅದರೊಂದಿಗೆ ಸಕ್ಕರೆ,ಏಲಕ್ಕಿಪುಡಿ ಮತ್ತು ನೀರನ್ನು ಹಾಕಿ ,ರುಬ್ಬಿಕೊಳ್ಳಿ(ಬ್ಲೆಂಡ್ ಮಾಡಿಕೊಳ್ಳಿ). ಇದನ್ನು ಸೋಸಿದರೆ ಟಮೋಟ ಶರಬತ್ತು ತಯಾರಾಗುತ್ತದೆ.ಟಮೋಟೋ ಹಣ್ಣಿನ ನೈಜ ಬಣ್ಣದ ಈ ಶರಬತ್ತು ನೋಡಲು ಕೂಡ ಚೆನ್ನಾಗಿರುತ್ತದೆ. ತಣ್ಣಗೆ ಬೇಕಾದವರು ತಣ್ಣನೆ ನೀರನ್ನು ಹಾಕಿಕೊಳ್ಳಿ ರುಬ್ಬಿಕೊಳ್ಳುವಾಗ. ಈ ಶರಬತ್ತನ್ನು ತಯಾರಿಸಿದ ತಕ್ಷಣ ಕುಡಿದರೆ ಒಳ್ಳೆಯದು,ರುಚಿಯಾಗಿರುತ್ತದೆ. ಸ್ವಲ್ಪ ಹೊತ್ತಿನ ನಂತರ ಅದರ ರುಚಿ ಬದಲಾದಂತೆ ಎನಿಸುತ್ತದೆ.
* ಚಿಟಿಕೆ ಉಪ್ಪು ಮತ್ತು ಕಾಳು ಮೆಣಸಿನ ಪುಡಿಯನ್ನು ಬೇಕಾದರೆ ಸೇರಿಸಿ ಕುಡಿಯಬಹುದು. ಈ ಶರಬತ್ತು ದಣಿವನ್ನು ನಿವಾರಿಸುತ್ತದೆ. ಆಯಾಸಕ್ಕೆ ಒಳ್ಳೆಯ ಮದ್ದು.
ಸಾಮಾನುಗಳು:
ಚೆನ್ನಾಗಿ ಹಣ್ಣಾಗಿರುವ ಟಮೋಟ
ಸಕ್ಕರೆ
ಏಲಕ್ಕಿ ಪುಡಿ
ವಿಧಾನ:
ಟಮೋಟವನ್ನು ಚೆನ್ನಾಗಿ ತೊಳೆದು,ಮಿಕ್ಸಿಗೆ ಹಾಕಿ,ಅದರೊಂದಿಗೆ ಸಕ್ಕರೆ,ಏಲಕ್ಕಿಪುಡಿ ಮತ್ತು ನೀರನ್ನು ಹಾಕಿ ,ರುಬ್ಬಿಕೊಳ್ಳಿ(ಬ್ಲೆಂಡ್ ಮಾಡಿಕೊಳ್ಳಿ). ಇದನ್ನು ಸೋಸಿದರೆ ಟಮೋಟ ಶರಬತ್ತು ತಯಾರಾಗುತ್ತದೆ.ಟಮೋಟೋ ಹಣ್ಣಿನ ನೈಜ ಬಣ್ಣದ ಈ ಶರಬತ್ತು ನೋಡಲು ಕೂಡ ಚೆನ್ನಾಗಿರುತ್ತದೆ. ತಣ್ಣಗೆ ಬೇಕಾದವರು ತಣ್ಣನೆ ನೀರನ್ನು ಹಾಕಿಕೊಳ್ಳಿ ರುಬ್ಬಿಕೊಳ್ಳುವಾಗ. ಈ ಶರಬತ್ತನ್ನು ತಯಾರಿಸಿದ ತಕ್ಷಣ ಕುಡಿದರೆ ಒಳ್ಳೆಯದು,ರುಚಿಯಾಗಿರುತ್ತದೆ. ಸ್ವಲ್ಪ ಹೊತ್ತಿನ ನಂತರ ಅದರ ರುಚಿ ಬದಲಾದಂತೆ ಎನಿಸುತ್ತದೆ.
* ಚಿಟಿಕೆ ಉಪ್ಪು ಮತ್ತು ಕಾಳು ಮೆಣಸಿನ ಪುಡಿಯನ್ನು ಬೇಕಾದರೆ ಸೇರಿಸಿ ಕುಡಿಯಬಹುದು. ಈ ಶರಬತ್ತು ದಣಿವನ್ನು ನಿವಾರಿಸುತ್ತದೆ. ಆಯಾಸಕ್ಕೆ ಒಳ್ಳೆಯ ಮದ್ದು.
Wednesday, November 7, 2007
Cucumber Lassi-ಸೌತೆಕಾಯಿ ಲಸ್ಸಿ:
ಸೌತೆಕಾಯಿ ಲಸ್ಸಿ:
ಸಾಮಗ್ರಿಗಳು;
ಸೌತೆಕಾಯಿ
ಕಾಳುಮೆಣಸಿನಪುಡಿ
ಉಪ್ಪು
ಕೊತ್ತುಂಬರಿಸೊಪ್ಪು
ನಿಂಬೆರಸ
ಮೊಸರು
ವಿಧಾನ:
ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ರುಬ್ಬಿದರೆ ಸೌತೆಕಾಯಿ ಲಸ್ಸಿ ರೆಡಿಯಾಗುತ್ತದೆ.
*ಬ್ಲೆಂಡರ್ ನಲ್ಲಿ ಬ್ಲೆಂಡ್ ಮಾಡಿದರೂ ಸಾಕು.
ಸಾಮಗ್ರಿಗಳು;
ಸೌತೆಕಾಯಿ
ಕಾಳುಮೆಣಸಿನಪುಡಿ
ಉಪ್ಪು
ಕೊತ್ತುಂಬರಿಸೊಪ್ಪು
ನಿಂಬೆರಸ
ಮೊಸರು
ವಿಧಾನ:
ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ರುಬ್ಬಿದರೆ ಸೌತೆಕಾಯಿ ಲಸ್ಸಿ ರೆಡಿಯಾಗುತ್ತದೆ.
*ಬ್ಲೆಂಡರ್ ನಲ್ಲಿ ಬ್ಲೆಂಡ್ ಮಾಡಿದರೂ ಸಾಕು.
Tuesday, October 23, 2007
Tomato Juice - ಟಮೋಟೋಹಣ್ಣಿನ ಶರಬತ್ತು:
ಟಮೋಟೋಹಣ್ಣಿನ ಶರಬತ್ತು:
ಸಾಮಗ್ರಿಗಳು:
ಟಮೋಟ ಹಣ್ಣುಗಳು
ನೀರು
ಚಿಟಿಕೆ ಉಪ್ಪು
ಸಕ್ಕರೆ ರುಚಿಗೆ
ಏಲಕ್ಕಿ ಪುಡಿ ಸ್ವಲ್ಪ
ಜೇನುತುಪ್ಪ- ಅರ್ಧ ಚಮಚ
ವಿಧಾನ:
ನೀರಿಗೆ ಟಮೋಟೋ ಹಣ್ಣು,ಸಕ್ಕರೆ,ಉಪ್ಪು,ಜೇನುತುಪ್ಪ ಮತು ಏಲಕ್ಕಿ ಪುಡಿಯನ್ನು ಸೇರಿಸಿ,ಚೆನ್ನಾಗಿ ರುಬ್ಬಿಕೊಂಡು ಅದನ್ನು ಸೋಸಿದರೆ,ಟಮೋಟ ಶರಬತ್ತು/ಪಾನೀಯ ತಯಾರಾಗುತ್ತದೆ.
*ತಣ್ಣಗೆ ಇಷ್ಟಪಡುವವರು ತಣ್ಣನೆಯ ನೀರು ಬಳಸಿ ಅಥವಾ ಐಸ್ ಕ್ಯುಬ್ಸ್ ಹಾಕಿ. ಇದು ಆರೋಗ್ಯಕ್ಕೆ ಹಿತಕರ ಮತ್ತು ತಂಪು ಹಾಗೂ ಬಾಯಾರಿಕೆಗಳನ್ನು ನಿವಾರಿಸುತ್ತದೆ. ದಣಿವು ಆರಿಸುತ್ತದೆ. ತಯಾರಿಸಲು ಸಹ ಸುಲಭ. ಅಲ್ಲದೇ ಎಲ್ಲಾ ಸಾಮಗ್ರಿಗಳು ಮನೆಯಲ್ಲಿ ಇದ್ದೇ ಇರುತ್ತವೆ. ನಮ್ಮಲ್ಲಿ ಮೊದಲಿಂದಲೂ ಯಾರ ಮನೆಗಾದರೂ ಬಿಸಿಲಿನಲ್ಲಿ ಹೋದ ತಕ್ಷಣ ಪಾನಕ, ಶರಬತ್ತು ಅಥವಾ ಮಜ್ಜಿಗೆ ಕೊಡುವ ವಾಡಿಕೆ ಇದೆ ಅಲ್ಲವೇ!ಅದೊಂದು ತರಹ ಸಂಪ್ರದಾಯವೇ ಆಗಿತ್ತು ಆಗ. ಆಯಾಸಕ್ಕೆ ಪರಿಹಾರ ನೀಡುವ ಅಂಶ ಅದರಲ್ಲಿದೆ.
*ಇದಕ್ಕೆ ಸ್ವಲ್ಪ ಕಾಳುಮೆಣಸಿನಪುಡಿ ಬೆರೆಸಿ ಕುಡಿದರೆ ಇನ್ನೂ ರುಚಿಯಾಗಿರುತ್ತದೆ.ಟಮೋಟದಲ್ಲಿ ಶಕ್ತಿವರ್ಧಕ ಅಂಶ ಹೆಚ್ಚಾಗಿರುವುದರಿಂದ ಇದು ಆರೋಗ್ಯಕ್ಕೆ ಮತ್ತು ದೇಹಕ್ಕೂ ಒಳ್ಳೆಯದು.
ಸಾಮಗ್ರಿಗಳು:
ಟಮೋಟ ಹಣ್ಣುಗಳು
ನೀರು
ಚಿಟಿಕೆ ಉಪ್ಪು
ಸಕ್ಕರೆ ರುಚಿಗೆ
ಏಲಕ್ಕಿ ಪುಡಿ ಸ್ವಲ್ಪ
ಜೇನುತುಪ್ಪ- ಅರ್ಧ ಚಮಚ
ವಿಧಾನ:
ನೀರಿಗೆ ಟಮೋಟೋ ಹಣ್ಣು,ಸಕ್ಕರೆ,ಉಪ್ಪು,ಜೇನುತುಪ್ಪ ಮತು ಏಲಕ್ಕಿ ಪುಡಿಯನ್ನು ಸೇರಿಸಿ,ಚೆನ್ನಾಗಿ ರುಬ್ಬಿಕೊಂಡು ಅದನ್ನು ಸೋಸಿದರೆ,ಟಮೋಟ ಶರಬತ್ತು/ಪಾನೀಯ ತಯಾರಾಗುತ್ತದೆ.
*ತಣ್ಣಗೆ ಇಷ್ಟಪಡುವವರು ತಣ್ಣನೆಯ ನೀರು ಬಳಸಿ ಅಥವಾ ಐಸ್ ಕ್ಯುಬ್ಸ್ ಹಾಕಿ. ಇದು ಆರೋಗ್ಯಕ್ಕೆ ಹಿತಕರ ಮತ್ತು ತಂಪು ಹಾಗೂ ಬಾಯಾರಿಕೆಗಳನ್ನು ನಿವಾರಿಸುತ್ತದೆ. ದಣಿವು ಆರಿಸುತ್ತದೆ. ತಯಾರಿಸಲು ಸಹ ಸುಲಭ. ಅಲ್ಲದೇ ಎಲ್ಲಾ ಸಾಮಗ್ರಿಗಳು ಮನೆಯಲ್ಲಿ ಇದ್ದೇ ಇರುತ್ತವೆ. ನಮ್ಮಲ್ಲಿ ಮೊದಲಿಂದಲೂ ಯಾರ ಮನೆಗಾದರೂ ಬಿಸಿಲಿನಲ್ಲಿ ಹೋದ ತಕ್ಷಣ ಪಾನಕ, ಶರಬತ್ತು ಅಥವಾ ಮಜ್ಜಿಗೆ ಕೊಡುವ ವಾಡಿಕೆ ಇದೆ ಅಲ್ಲವೇ!ಅದೊಂದು ತರಹ ಸಂಪ್ರದಾಯವೇ ಆಗಿತ್ತು ಆಗ. ಆಯಾಸಕ್ಕೆ ಪರಿಹಾರ ನೀಡುವ ಅಂಶ ಅದರಲ್ಲಿದೆ.
*ಇದಕ್ಕೆ ಸ್ವಲ್ಪ ಕಾಳುಮೆಣಸಿನಪುಡಿ ಬೆರೆಸಿ ಕುಡಿದರೆ ಇನ್ನೂ ರುಚಿಯಾಗಿರುತ್ತದೆ.ಟಮೋಟದಲ್ಲಿ ಶಕ್ತಿವರ್ಧಕ ಅಂಶ ಹೆಚ್ಚಾಗಿರುವುದರಿಂದ ಇದು ಆರೋಗ್ಯಕ್ಕೆ ಮತ್ತು ದೇಹಕ್ಕೂ ಒಳ್ಳೆಯದು.
Subscribe to:
Posts (Atom)
Popular Posts
-
ತರಕಾರಿ ಸಾಗು ಅಥವ ಕೂಟು ಎಲ್ಲವುದಕ್ಕು ಹೊಂದಿಕೊಳ್ಳುವಂತಹದ್ದು. ಅಂದರೆ ಇದನ್ನು ದೋಸೆ, ಚಪಾತಿ,ಪರೋಟ,ರೊಟ್ಟಿ,ಪೂರಿ ಮತ್ತು ಅನ್ನದ ಜೊತೆಯಲ್ಲಿ ತಿನ್ನಬಹುದು. ಜೊತೆಯಲ್ಲ...
-
ಆಲೂ ಪರೋಟ: ಹೂರಣಕ್ಕೆ ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಆಲೂಗೆಡ್ಡೆ-ಒಂದು ಬಟ್ಟಲು ಅಚ್ಚ ಖಾರದ ಪುಡಿ-ಕಾಲು ಚಮಚ ಉಪ್ಪು ರುಚಿಗೆ ತಕ್ಕಷ್ಟು ಚಾಟ್ ಮಸಾಲಾ-ಕಾಲು ಚಮಚ ...
-
ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾ...
-
ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾ...
-
ಟಮೋಟ ಚಟ್ನಿ: ಬೇಕಾಗುವ ಸಾಮಗ್ರಿಗಳು: ಟಮೋಟ - ಅರ್ಧ ಕೆ.ಜಿ ಈರುಳ್ಳಿ - ಎರಡು ಬೆಳ್ಳುಳ್ಳಿ - ಹತ್ತು ಎಸಳು ಒಣಮೆಣಸಿನಕಾಯಿ - ರುಚಿಗೆ ತಕ್ಕಷ್ಟು ಹುಣಸೆಹಣ್ಣು -...
-
ಬಿಸಿಬೇಳೆ ಭಾತ್ ಪುಡಿ: ತಯಾರಿಸಲು ಬೇಕಾಗುವ ಸಾಮಗ್ರಿಗಳು: ಒಣಮೆಣಸಿನಕಾಯಿ -ಹತ್ತು / ಖಾರಕ್ಕೆ ತಕ್ಕಷ್ಟು ಧನಿಯ- ಎರಡು ಚಮಚ ಮೆಂತ್ಯ -ಅರ್ಧ ಚಮಚ ಜೀರಿಗೆ-ಒಂದು ಚ...
-
ಗೋಳಿಬಜೆಯಲ್ಲಿ ಅನೇಕ ವಿಧಗಳಿವೆ,ಇದು ಅವುಗಳಲ್ಲಿ ಒಂದು ಬಗೆ,ತುಂಬಾ ಸುಲಭವಾದ ಮತ್ತು ಕಮ್ಮಿ ಸಾಮಗ್ರಿಗಳು ಬೇಕಾಗುವಂತಹ ರೆಸಿಪಿ. ತಕ್ಷಣವೇ ತಯಾರಿಸಬಹುದಾದ ಬೋಂಡಾ. ಗೋಳ...
-
ರಸಂ ಪುಡಿ / ರಸಂ ಪೌಡರ್ ಬೇಕಾಗುವ ಪದಾರ್ಥಗಳು: ಒಣ ಮೆಣಸಿನ ಕಾಯಿ - ಒಂದು ಬಟ್ಟಲು ಧನಿಯಾ ಬೀಜ - ಅರ್ಧ ಬಟ್ಟಲು ಜೀರಿಗೆ - ಒಂದು ದೊಡ್ಡ ಚಮಚ ಮೆಣಸು - ಒಂದು ದೊಡ...
-
ಈರುಳ್ಳಿ ಟಮೋಟ ಚಟ್ನಿ: ಬೇಕಾಗುವ ಸಾಮಗ್ರಿಗಳು: 1. ಈರುಳ್ಳಿ- 2 2. ಟೊಮೆಟೊ- 4-5 3. ಹಸಿಮೆಣಸಿನ ಕಾಯಿ- 2 4. ಉಪ್ಪು- ರುಚಿಗೆ ತಕ್ಕಷ್ಟು 5. ಅಚ್ಚ ಖಾರದ ಪ...