ಬಿಸಿಬೇಳೆ ಭಾತ್ ಪುಡಿ:
ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಒಣಮೆಣಸಿನಕಾಯಿ -ಹತ್ತು / ಖಾರಕ್ಕೆ ತಕ್ಕಷ್ಟು
ಧನಿಯ- ಎರಡು ಚಮಚ
ಮೆಂತ್ಯ -ಅರ್ಧ ಚಮಚ
ಜೀರಿಗೆ-ಒಂದು ಚಮಚ
ಗಸಗಸೆ-ಅರ್ಧ ಚಮಚ
ಏಲಕ್ಕಿ-೨
ಲವಂಗ-೪
ಚೆಕ್ಕೆ-ಒಂದಿಂಚಿನ ಚೂರು
ಮೆಣಸು - ಅರ್ಧ ಚಮಚ ಮತ್ತು
ಒಣಕೊಬ್ಬರಿ ಸ್ವಲ್ಪ
ಕಡ್ಲೆಬೇಳೆ ಮತ್ತು ಉದ್ದಿನಬೇಳೆ- ಕ್ರಮವಾಗಿ ಒಂದೊಂದು ಚಮಚ
ಪುಡಿ ತಯಾರಿಸುವ ಮುಂಚೆ ಗಮನಿಸಬೇಕಾದ ಅಂಶಗಳು:
ಕಡ್ಲೆಬೇಳೆ,ಉದ್ದಿನಬೇಳೆಯನ್ನು ಬೇಕೆನಿಸಿದರೆ ಹಾಕಿಕೊಳ್ಳಬಹುದು. ಇದನ್ನು ಹಾಕಿದರೆ ಅದರ ಪರಿಮಳ ಮತ್ತು ರುಚಿ ಎರಡು ಚೆನ್ನಾಗಿರುತ್ತದೆ. ಬೇಡವೆಂದರೆ ಬೇಳೆಗಳನ್ನು ಹಾಕದೇ ಸಹ ಪುಡಿ ತಯಾರಿಸಬಹುದು. ಬೇಳೆಗಳನ್ನು ಹಾಕುವುದರಿಂದ ಭಾತ್ ನೀರು ಹೊಡೆದಂತೆ ಇರುವುದಿಲ್ಲ, ಬೇಳೆಗಳನ್ನು ಹಾಕುವುದರಿಂದ ಬೇಗ ಗಟ್ಟಿಯಾಗುವ ಸಾಧ್ಯತೆ ಇರುತ್ತದೆ. ನಿಮಗೆ ಹೇಗೆ ಬೇಕೋ ಹಾಗೆ ತಯಾರಿಸಿಕೊಳ್ಳಿ.
ಒಣಮೆಣಸಿನ ಕಾಯಿಗಳನ್ನು ಖಾರಕ್ಕೆ ಮತ್ತು ಬಣ್ಣಕ್ಕೆ ಸರಿಹೊಂದುವಂತಹ ಕಾಯಿಗಳನ್ನು ಬಳಸಿ, ಪುಡಿಯ ಬಣ್ಣ ಮತ್ತು ಖಾರ ಎರಡು ಸಹ ನೀವು ಬಳಸುವ ಮೆಣಸಿನಕಾಯಿಗಳನ್ನು ಅವಲಂಬಿಸಿರುತ್ತದೆ.
ಈ ಪ್ರಮಾಣವೂ ಒಂದು ಬಾರಿ ಬಿಸಿಬೇಳೆಭಾತ್ ತಯಾರಿಸುವುದಕ್ಕೆ ಮಾತ್ರ ಕೊಟ್ಟಿರುವುದು. ನಿಮಗೆ ಹೆಚ್ಚಿನ ಪ್ರಮಾಣದಲ್ಲಿ ಪುಡಿ ಬೇಕೆನಿಸಿದರೆ ಅದಕ್ಕೆ ತಕ್ಕಂತೆ ಸಾಮಗ್ರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ.
ತಯಾರಿಸುವ ವಿಧಾನ:
* ಪುಡಿ ಮಾಡಿಕೊಳ್ಳಲು ತಿಳಿಸಿರುವ ಸಾಮಗ್ರಿಗಳನ್ನು ಒಂದು ಚಮಚ ಎಣ್ಣೆ ಹಾಕಿ,ಒಂದೊಂದಾಗಿ ಹುರಿದುಕೊಂಡು,ಎಲ್ಲವನ್ನು ಒಟ್ಟಿಗೆ ಸೇರಿಸಿ ಪುಡಿ ಮಾಡಿಟ್ಟು ಕೊಳ್ಳಿ. ಬಿಸಿಬೇಳೆಭಾತ್ ಪುಡಿ ರೆಡಿಯಾಗುತ್ತದೆ.
* ಕೊಬ್ಬರಿಯನ್ನು ಸ್ವಲ್ಪ ಹುರಿದುಕೊಳ್ಳಿ, ಯಾವ ಸಾಮಗ್ರಿಗಳನ್ನು ಸೀದಿಸಬಾರದು.
* ಒಂದೊಂದಾಗಿ ಬೇಕಾದರೂ ಹುರಿದುಕೊಳ್ಳಬಹುದು ಅಥವಾ ಗೊತ್ತಿರುವವರೂ ಹದಕ್ಕೆ ಸರಿಯಾಗಿ ಎಲ್ಲವನ್ನು ಒಂದೊಂದಾಗಿ ಸೇರಿಸುತ್ತಾ ಹುರಿದುಕೊಳ್ಳಬಹುದು.
* ಬಿಸಿಬೇಳೆಭಾತಿನ ಪುಡಿಯನ್ನು ಮೊದಲೇ ಹೆಚ್ಚಾಗಿ ತಯಾರಿಸಿ,ಗಾಳಿಯಾಡದ ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಂಡಿದ್ದರೆ, ಯಾವಾಗ ಬೇಕೋ ಆಗ ಭಾತ್ ತಯಾರಿಸುವುದು ತುಂಬಾ ಸುಲಭ. ಆದರೂ ಪುಡಿಯನ್ನು ಬೇಕಾದಾಗ ತಕ್ಷಣವೇ ತಯಾರಿಸಿ, ಹಾಕಿದರೆ ಹೆಚ್ಚು ರುಚಿ ಮತ್ತು ಪರಿಮಳವೂ ಆಗಿರುತ್ತದೆ.
* ಒಣ ಮೆಣಸಿನಕಾಯಿಗಳನ್ನು ಖಾರಕ್ಕೆ ತಕ್ಕಂತೆ ಹಾಕಿ. ಇಲ್ಲವೆಂದರೆ ಕೆಂಪುಕಾರದ ಪುಡಿಯನ್ನಾದರೂ ಮೆಣಸಿನಕಾಯಿ ಬದಲಿಗೆ ಹಾಕಬಹುದು.
* ಧನಿಯಾ/ಕೊತ್ತುಂಬರಿ ಬೀಜಗಳನ್ನು ಹಾಕಿ ಪ್ರೆಶ್ ಆಗಿ ಹುರಿದು ಪುಡಿ ಮಾಡಿದರೆ ಅದರ ಸುವಾಸನೆಯು ಪುಡಿಯಲ್ಲಿ ಸೇರಿಕೊಳ್ಳುತ್ತದೆ. ಇದೆಲ್ಲಾ ಹುರಿದು ರಂಪ ಮಾಡುವವರಾರು ಎಂದು ಧನಿಯ ಪುಡಿಯನ್ನು ಬಳಸಬಹುದು. ಆದರೆ ಪುಡಿ ಘಮ ಘಮ ಎನ್ನುವುದಿಲ್ಲ, ಅದರ ಪರಿಮಳವೂ ಅಷ್ಟಾಗಿ ಇರುವುದಿಲ್ಲ. ಯಾವಾಗಲಾದರೊಮ್ಮೆ ತುಂಬಾ ಅರ್ಜೆಂಟ್ ಇದ್ದಾಗ ರೆಡಿಮೆಡ್ ಪುಡಿಗಳನ್ನು (ಮೆಣಸಿನಕಾಯಿ ಮತ್ತು ಕೊತ್ತುಂಬರಿಯ ಪುಡಿ) ಬಳಸಿಕೊಳ್ಳಿ.
* ಪುಡಿಯನ್ನು ಸ್ಟೋರ್ ಮಾಡಿರುವ ಡಬ್ಬಿಗೆ ಒದ್ದೆಯ ಚಮಚವನ್ನು ಹಾಕಬೇಡಿ. ಪ್ರಿಡ್ಜ್ ನಲ್ಲಿ ಇಟ್ಟರೆ ಇನ್ನೂ ಹೆಚ್ಚು ಫ್ರೆಶ್ ಆಗಿರುತ್ತದೆ.
* ಬಿಡುವಿದ್ದಾಗ ಪುಡಿ ತಯಾರಿಸಿಟ್ಟುಕೊಂಡರೆ, ಅಕ್ಕಿ ಮತ್ತು ಬೇಳೆಯನ್ನು ಒಟ್ಟಿಗೆ ನೀರು ಹೆಚ್ಚಾಗಿ ಹಾಕಿ ಬೇಯಿಸಿ,ಪುಡಿ ಹಾಕಿ, ಉಪ್ಪು,ಹುಳಿ ಮತ್ತು ಸ್ವಲ್ಪ ಬೆಲ್ಲ ಹಾಗೂ ಒಗ್ಗರಣೆ ಹಾಕಿ,ಬೇಗ ಬಿಸಿಬೇಳೆಭಾತ್ ತಯಾರಿಸಬಹುದು.
Showing posts with label Breakfast- ಉಪಹಾರ / ತಿಂಡಿ. Show all posts
Showing posts with label Breakfast- ಉಪಹಾರ / ತಿಂಡಿ. Show all posts
Tuesday, July 19, 2011
Friday, March 11, 2011
Tomato Chitranna Gojju:ಟೊಮೋಟೊ ಚಿತ್ರಾನ್ನ ಗೊಜ್ಜು:
ಟೊಮೋಟೊ ಚಿತ್ರಾನ್ನ ಗೊಜ್ಜು:
ಬೇಕಾಗುವ ಸಾಮಗ್ರಿಗಳು:
ಟೊಮೋಟೊ- ನಾಲ್ಕು ಮಧ್ಯಮ ಗಾತ್ರದ್ದು
ಈರುಳ್ಳಿ - ಒಂದೆರಡು
ಹಸಿಮೆಣಸಿನಕಾಯಿ - ಎರಡು
ಎಣ್ಣೆ - ಒಗ್ಗರಣೆಗೆ
ಕಡ್ಲೆಬೇಳೆ - ಒಂದು ಚಮಚ
ಉದ್ದಿನ ಬೇಳೆ - ಒಂದು ಚಮಚ
ಸಾಸಿವೆ - ಕಾಲು ಚಮಚ
ಜೀರಿಗೆ - ಕಾಲು ಚಮಚ
ಅರಿಶಿಣ - ಚಿಟಿಕೆ
ಕರಿಬೇವು ಸ್ವಲ್ಪ
ಕೊತ್ತುಂಬರಿ ಸೊಪ್ಪು
ಅಚ್ಚ ಕಾರದ ಪುಡಿ ಮತ್ತು ಉಪ್ಪು - ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
ಟೊಮೋಟೊ ಮತ್ತು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಹಸಿಮೆಣಸಿನಕಾಯಿ ಉದ್ದಕ್ಕೆ ಸೀಳಿಕೊಳ್ಳಿ. ಕೊತ್ತುಂಬರಿ ಸೊಪ್ಪು ಸಣ್ಣಗೆ ಹೆಚ್ಚಿಕೊಳ್ಳಿ.
ಒಗ್ಗರಣೆಗೆ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ, ಅದು ಕಾದ ಬಳಿಕ, ಸಾಸಿವೆ,ಜೀರಿಗೆ,ಕಡ್ಲೆಬೇಳೆ ಮತ್ತು ಉದ್ದಿನಬೇಳೆಯನ್ನು ಕ್ರಮವಾಗಿ ಹಾಕಿ. ನಂತರ ಈರುಳ್ಳಿ,ಕರಿಬೇವು ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ, ಈರುಳ್ಳಿ ಬೇಯುವವರೆಗೂ ತಿರುಗಿಸಿ.ಹೆಚ್ಚಿದ ಟೊಮೆಟೊ ಅನ್ನು ಹಾಕಿ,ಬೆರೆಸಿ. ನಾಲ್ಕರಿಂದ ಐದು ನಿಮಿಷ ಬೇಯಿಸಿ. ನಂತರ ಅದಕ್ಕೆ ಅರಿಶಿಣ, ಕಾರದಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಿ, ಒಂದೆರಡು ನಿಮಿಷದ ನಂತರ ಒಲೆಯಿಂದ ಇಳಿಸಿ. ಹೆಚ್ಚಿದ ಕೊತ್ತುಂಬರಿ ಸೊಪ್ಪನ್ನು ಹಾಕಿ ಬೆರೆಸಿ.
ಈ ಒಗ್ಗರಣೆ ಗೊಜ್ಜನ್ನು ಅನ್ನಕ್ಕೆ ಕಲಸಿ, ಚೆನ್ನಾಗಿ ಬೆರೆಸಿ, ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಸಹ ಬೆರೆಸಿದರೆ. ಟೊಮೋಟೊ ಚಿತ್ರಾನ್ನ ತಯಾರಾಗುತ್ತದೆ.
Saturday, February 13, 2010
Wheat Pongal - ಗೋಧಿನುಚ್ಚಿನ ಸಿಹಿ ಪೊಂಗಲ್
ಗೋಧಿನುಚ್ಚಿನ ಸಿಹಿ ಪೊಂಗಲ್:
ಸಾಮಗ್ರಿಗಳು:
ಗೋಧಿ ನುಚ್ಚು - ಒಂದು ಕಪ್
ಹೆಸರುಬೇಳೆ - ಒಂದು ಕಪ್
ತುಪ್ಪ - ಎರಡು ದೊಡ್ಡ ಚಮಚ
ಹಾಲು - ಒಂದು ಕಪ್
ಸಕ್ಕರೆ - ರುಚಿಗೆ ತಕ್ಕಂತೆ
ಏಲಕ್ಕಿ ಪುಡಿ ಸ್ವಲ್ಪ
ದ್ರಾಕ್ಷಿ ಮತ್ತು ಗೋಡಂಬಿ
ಕೇಸರಿ ದಳಗಳು
ತಯಾರಿಸುವ ವಿಧಾನ:
ಮೊದಲು ಹೆಸರುಬೇಳೆಯನ್ನು ಸ್ವಲ್ಪ ಹಾಕಿ ಘಂ ಎನ್ನುವಂತೆ ಹುರಿದುಕೊಳ್ಳಿ. ಹದವಾಗಿ ಹುರಿದಿಡಿ.
ಕೇಸರಿದಳಗಳನ್ನು ಒಂದೆರಡು ಚಮಚ ಹಾಲಿನೊಂದಿಗೆ ನೆನೆಸಿಡಿ.
ಗೋಧಿನುಚ್ಚು ಮತ್ತು ಹೆಸರುಬೇಳೆಯನ್ನು ಕುಕ್ಕರ್ ಅಥವಾ ರೈಸ್ ಕುಕ್ಕರ್ ಗೆ ಹಾಕಿ, ಚಿಟಿಕೆ ಉಪ್ಪು ಮತ್ತು ಅಳತೆಗೆ ತಕ್ಕಂತೆ ನೀರು ಹಾಕಿ, ಬೇಯಿಸಿಕೊಳ್ಳಿ.
ಬೇರೆ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದುಕೊಂಡು , ಅದಕ್ಕೆ ಹಾಲು ಹಾಕಿ ಸಕ್ಕರೆ ಬೆರೆಸಿ ಕುದಿಯಲು ಬಿಡಿ. ನಂತರ ಬೆಂದ ನುಚ್ಚು ಮತ್ತು ಹೆಸರುಬೇಳೆ ಮಿಶ್ರಣವನ್ನು ಹಾಕಿ, ಚೆನ್ನಾಗಿ ಬೆರೆಸಿ. ನೆನೆಸಿದ ಕೇಸರಿ, ಏಲಕ್ಕಿ ಪುಡಿ ಮತ್ತು ಸ್ವಲ್ಪ ತುಪ್ಪ ಹಾಕಿ ಬೆರೆಸಿ. ಕೊಬ್ಬರಿ ತುರಿಯನ್ನು ಸಹ ಹಾಕಿ ಚೆನ್ನಾಗಿ ಬೆರೆಸಿ. ಇಳಿಸಿ. ಗೋಧಿನುಚ್ಚಿನ ಪೊಂಗಲ್ ತಿನ್ನಲು ತಯಾರಾಗುತ್ತದೆ.
* ಹೆಸರುಬೇಳೆಯನ್ನು ಸೀದಿಸಬೇಡಿ, ಹಸಿವಾಸನೆ ಹೋಗುವವರೆಗೂ/ ಸ್ವಲ್ಪ ಬಣ್ಣ ಬದಲಾಗುವವರೆಗೂ ಮಾತ್ರ ಹುರಿದುಕೊಳ್ಳಿ.
* ಗೋಧಿನುಚ್ಚಿನಿಂದ ತಯಾರಿಸಿದ ಇದು ಮಧುಮೇಹ ಇರುವವರಿಗೆ ಒಳ್ಳೆಯದು. ಅಕ್ಕಿ ಬದಲಿಗೆ ಅವರು ಗೋಧಿ ನುಚ್ಚು ಬಳಸಬಹುದು.
* ಇದು ಸಹ ತುಂಬಾ ರುಚಿಯಾಗಿರುತ್ತದೆ. ಗೋಧಿಯಿಂದ ಅನೇಕ ಸಿಹಿ ತಯಾರಿಸುತ್ತೇವೆ.
ಸಾಮಗ್ರಿಗಳು:
ಗೋಧಿ ನುಚ್ಚು - ಒಂದು ಕಪ್
ಹೆಸರುಬೇಳೆ - ಒಂದು ಕಪ್
ತುಪ್ಪ - ಎರಡು ದೊಡ್ಡ ಚಮಚ
ಹಾಲು - ಒಂದು ಕಪ್
ಸಕ್ಕರೆ - ರುಚಿಗೆ ತಕ್ಕಂತೆ
ಏಲಕ್ಕಿ ಪುಡಿ ಸ್ವಲ್ಪ
ದ್ರಾಕ್ಷಿ ಮತ್ತು ಗೋಡಂಬಿ
ಕೇಸರಿ ದಳಗಳು
ತಯಾರಿಸುವ ವಿಧಾನ:
ಮೊದಲು ಹೆಸರುಬೇಳೆಯನ್ನು ಸ್ವಲ್ಪ ಹಾಕಿ ಘಂ ಎನ್ನುವಂತೆ ಹುರಿದುಕೊಳ್ಳಿ. ಹದವಾಗಿ ಹುರಿದಿಡಿ.
ಕೇಸರಿದಳಗಳನ್ನು ಒಂದೆರಡು ಚಮಚ ಹಾಲಿನೊಂದಿಗೆ ನೆನೆಸಿಡಿ.
ಗೋಧಿನುಚ್ಚು ಮತ್ತು ಹೆಸರುಬೇಳೆಯನ್ನು ಕುಕ್ಕರ್ ಅಥವಾ ರೈಸ್ ಕುಕ್ಕರ್ ಗೆ ಹಾಕಿ, ಚಿಟಿಕೆ ಉಪ್ಪು ಮತ್ತು ಅಳತೆಗೆ ತಕ್ಕಂತೆ ನೀರು ಹಾಕಿ, ಬೇಯಿಸಿಕೊಳ್ಳಿ.
ಬೇರೆ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದುಕೊಂಡು , ಅದಕ್ಕೆ ಹಾಲು ಹಾಕಿ ಸಕ್ಕರೆ ಬೆರೆಸಿ ಕುದಿಯಲು ಬಿಡಿ. ನಂತರ ಬೆಂದ ನುಚ್ಚು ಮತ್ತು ಹೆಸರುಬೇಳೆ ಮಿಶ್ರಣವನ್ನು ಹಾಕಿ, ಚೆನ್ನಾಗಿ ಬೆರೆಸಿ. ನೆನೆಸಿದ ಕೇಸರಿ, ಏಲಕ್ಕಿ ಪುಡಿ ಮತ್ತು ಸ್ವಲ್ಪ ತುಪ್ಪ ಹಾಕಿ ಬೆರೆಸಿ. ಕೊಬ್ಬರಿ ತುರಿಯನ್ನು ಸಹ ಹಾಕಿ ಚೆನ್ನಾಗಿ ಬೆರೆಸಿ. ಇಳಿಸಿ. ಗೋಧಿನುಚ್ಚಿನ ಪೊಂಗಲ್ ತಿನ್ನಲು ತಯಾರಾಗುತ್ತದೆ.
* ಹೆಸರುಬೇಳೆಯನ್ನು ಸೀದಿಸಬೇಡಿ, ಹಸಿವಾಸನೆ ಹೋಗುವವರೆಗೂ/ ಸ್ವಲ್ಪ ಬಣ್ಣ ಬದಲಾಗುವವರೆಗೂ ಮಾತ್ರ ಹುರಿದುಕೊಳ್ಳಿ.
* ಗೋಧಿನುಚ್ಚಿನಿಂದ ತಯಾರಿಸಿದ ಇದು ಮಧುಮೇಹ ಇರುವವರಿಗೆ ಒಳ್ಳೆಯದು. ಅಕ್ಕಿ ಬದಲಿಗೆ ಅವರು ಗೋಧಿ ನುಚ್ಚು ಬಳಸಬಹುದು.
* ಇದು ಸಹ ತುಂಬಾ ರುಚಿಯಾಗಿರುತ್ತದೆ. ಗೋಧಿಯಿಂದ ಅನೇಕ ಸಿಹಿ ತಯಾರಿಸುತ್ತೇವೆ.
Thursday, January 7, 2010
Idli - Sambar- Chutney
ಇಡ್ಲಿ ಮತ್ತು ವಡೆ ಸಾಂಬಾರ್ ಸಾಮಾನ್ಯವಾಗಿ ನಮ್ಮ ದಕ್ಷಿಣ ಭಾರತದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಇಡ್ಲಿ ಯಾವ ಕಾಲದಲ್ಲಿಯಾಗಲಿ,ಯಾರೇ ಆಗಲಿ ತಿನ್ನಬಹುದಾದಂತ,ಆರೋಗ್ಯಕರವಾದಂತ ಉತ್ತಮ ತಿಂಡಿಯಾಗಿದೆ.
ನಮ್ಮ ಅಜ್ಜಿ ಮಿಕ್ಸಿ ಇದ್ದರೂ ಸಹ ಒರಳು ಕಲ್ಲಿನಲ್ಲಿ ಹಿಟ್ಟನ್ನು ರುಬ್ಬುತ್ತಿದ್ದರು,ಅವರು ತಯಾರಿಸುತ್ತಿದ್ದ ಇಡ್ಲಿ ಅಥವಾ ದೋಸೆಗಳ ರುಚಿಯಂತೂ ಈಗಲೂ ಮರೆಯಲು ಸಾಧ್ಯವಿಲ್ಲ. ಅದೆಷ್ಟು ಚೆನ್ನಾಗಿ ಹದವಾಗಿ,ರುಬ್ಬಿ ತಯಾರಿಸುತ್ತಿದ್ದರು. ಈಗ ನಾವುಗಳು ಸೋಮಾರಿಗಳಂತೆ ಅದೇನೋ ಗ್ರೈಂಡರ್ ಮತ್ತು ಮಿಕ್ಸಿ ಅಂತ ಉಪಯೋಗಿಸುತ್ತ ಇರುತ್ತೇವೆ. ಇದು ಸಾಲದೆಂದು ರೆಡಿಮೇಡ್ ರವೆ ಅಂತ ಬೇರೆ ತಂದು ಉಪಯೋಗಿಸುತ್ತೇವೆ. ಅದಂತೂ ಇದ್ದಿದ್ದು ಕೆಲಸ ಕಮ್ಮಿ. ಇಡ್ಲಿಯಲ್ಲಿ ಈಗಂತೂ ಬಹಳ ತರವಾಗಿ,ವಿವಿಧವಾಗಿ ತಯಾರಿಸುತ್ತೇವೆ. ಕೆಲವು ಸಾರಿ ಇಡ್ಲಿ -ಸಾಂಬಾರ್ ಜೊತೆ ರುಚಿ ಎನಿಸಿದರೆ,ಕೆಲವೊಮ್ಮೆ ಕಾಯಿಚಟ್ನಿ ಮತ್ತು ಸಿಹಿ ಚಟ್ನಿಯೊಂದಿಗೂ ಹಾಗು ಕೆಂಪು ಚಟ್ನಿಯೊಂದಿಗೂ ತುಂಬಾ ರುಚಿಯಾಗಿರುತ್ತದೆ.ಎಲ್ಲಕ್ಕಿಂತ ಹೆಚ್ಚಿನ ರುಚಿ ಸಾಂಬಾರ್ ಜೊತೆ ಮಾತ್ರ. ಆಗ ಕೈನಲ್ಲಿ ರುಬ್ಬುತ್ತಿದ್ದು ಮಾಡುತ್ತಿದ್ದ ಅಡುಗೆಗಳ ರುಚಿನೇ ರುಚಿ.ಇಲ್ಲಿ ಈಗ ಮಾಮುಲಿ ಇಡ್ಲಿ ಮತ್ತು ಸಾಂಬಾರ್ ತಯಾರಿಸುವ ವಿಧಾನವನ್ನು ತಿಳಿಯೋಣ.
ಇಡ್ಲಿ:
ಬೇಕಾಗುವ ಸಾಮಗ್ರಿಗಳು:
ಅಕ್ಕಿ - ಮೂರು ಕಪ್
ಕುಸುಬಲಕ್ಕಿ (ಬಾಯಲ್ಡ್ ರೈಸ್)- ಒಂದು ಕಪ್
ಉದ್ದಿನಬೇಳೆ - ಒಂದು ಕಪ್
ಅವಲಕ್ಕಿ, ಸಬ್ಬಕ್ಕಿ - ಒಂದೊಂದು ಚಮಚ
ಮೆಂತ್ಯಕಾಳು - ಒಂದು ದೊಡ್ಡ ಚಮಚ
ಉಪ್ಪು
ತಯಾರಿಸುವ ರೀತಿ:
ಅಕ್ಕಿ + ಮೆಂತ್ಯ ಮತ್ತು ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು,ಬೇರೆ ಬೇರೆಯಾಗಿ ಐದರಿಂದ ಆರು ಗಂಟೆಗಳವರೆಗೂ ನೆನೆಸಿಡಿ. ನಂತರ ಉದ್ದಿನಬೇಳೆಯನ್ನು ಚೆನ್ನಾಗಿ ಹುದುಗು ಬರುವಂತೆ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ. ಅದರ ಜೊತೆಗೆ ಅಕ್ಕಿಯನ್ನು ಬೆರೆಸಿ ಅಗತ್ಯವಿದ್ದಷ್ಟು ನೀರು ಹಾಕಿ ರುಬ್ಬಿಕೊಳ್ಳಿ.ಅವಲಕ್ಕಿ ಮತ್ತು ಸಬ್ಬಕ್ಕಿಯನ್ನು ಹಾಕುವುದಾದರೆ, ಅವಲಕ್ಕಿಯನ್ನು ಮತ್ತು ಸಬ್ಬಕ್ಕಿಯನ್ನು ನೆನೆಸಿಟ್ಟು( ಅರ್ಧ ಗಂಟೆ),ಅಕ್ಕಿಯೊಂದಿಗೆ ರುಬ್ಬುವಾಗ ಹಾಕಿ, ರುಬ್ಬಿಕೊಳ್ಳಿ. ಅಕ್ಕಿಯೂ ಸ್ವಲ್ಪ ಕೈಗೆ ತರಿತರಿಯಾಗಿ ಸಿಗುವಂತೆ ರುಬ್ಬಿ. ಮುಚ್ಚಿಡಿ.ರಾತ್ರಿಯೆಲ್ಲಾ ಅದೇರೀತಿ ಇದ್ದಾಗ,ಅದು ಹಿಟ್ಟು ಬೆಳಗ್ಗೆ ಹುದುಗು/ಹುಳಿ/ಉಬ್ಬಿ ಬಂದಿರುತ್ತದೆ. ಮಾರನೇದಿನ ಹುದುಗು ಬಂದ ಹಿಟ್ಟಿಗೆ ರುಚಿಗೆ ಸ್ವಲ್ಪ ಉಪ್ಪು ಬೆರೆಸಿ,ತುಂಬಾ ಜೋರಾಗಿ ತಿರುಗಿಸದೇ ಮೆಲ್ಲಗೆ ತಿರುಗಿಸಿ. ಈ ಹಿಟ್ಟನ್ನು ಇಡ್ಲಿಯ ತಟ್ಟೆ/ಪಾತ್ರೆ/ ಮೋಲ್ಡ್ ಗಳಿಗೆ ಹಾಕಿ ಹಬೆಯಲ್ಲಿ ಏಳೆಂಟು ನಿಮಿಷಗಳವರೆಗೆ ಬೇಯಿಸಿ. ತೆಗೆಯಿರಿ. ಇಡ್ಲಿಯನ್ನು ಸಾಂಬಾರ್ ಮತ್ತು ಚಟ್ನಿಯೊಂದಿಗೆ ಸವಿಯಲು ನೀಡಿ.
ಚಟ್ನಿ / ಕಾಯಿಚಟ್ನಿ:
ಹಸಿಮೆಣಸಿನಕಾಯಿ ರುಚಿಗೆ
ಉಪ್ಪು ರುಚಿಗೆ
ಶುಂಠಿ ತುಂಡು ಒಂದು ಚೂರು
ಬೆಳ್ಳುಳ್ಳಿ ೪-೫
ಜೀರಿಗೆ - ಅರ್ಧ ಚಮಚ
ಕೊತ್ತುಂಬರಿಸೊಪ್ಪು ಸ್ವಲ್ಪ
ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ಸೇರಿಸಿ, ಅಗತ್ಯವಿದ್ದಷ್ಟು ನೀರು ಹಾಕಿ, ರುಬ್ಬಿ. ಕಾಯಿ ಚಟ್ನಿ ತಯಾರಾಗುತ್ತದೆ. ಒಗ್ಗರಣೆ ಇಷ್ಟಪಡುವವರು ಅದನ್ನು ಸೇರಿಸಬಹುದು್.
* ಒಗ್ಗರಣೆಗೆ - ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವು ಹಾಕಿ, ಚಟಪಟಾಯಿಸಿ, ತಣ್ಣಗಾದ ಮೇಲೆ ಚಟ್ನಿಗೆ ಬೆರೆಸಿ. ಈ ಚಟ್ನಿಯೂ ಇಡ್ಲಿ,ದೋಸೆ,ಚಪಾತಿ,ರೊಟ್ಟಿಗಳು,ಬಜ್ಜಿ ಮತ್ತು ಪೂರಿ ಹಾಗು ಕೆಲವೊಮ್ಮೆ ಅನ್ನಕ್ಕೂ ರುಚಿಯಾಗಿರುತ್ತದೆ. ಇಡ್ಲಿಗಾದರೆ ಚಟ್ನಿಯನ್ನು ಸ್ವಲ್ಪ ತೆಳ್ಳಗೆ ಮಾಡಿಕೊಳ್ಳಿ.
ಸಾಂಬಾರ್: (ಇಡ್ಲಿ ಸಾಂಬಾರ್)
ಬೇಕಾಗುವ ಸಾಮಗ್ರಿಗಳು:
ಇದೆಲ್ಲವೂ ಸಾಂಬಾರ್ ಗಾಗಿ ಮಸಾಲೆಪುಡಿ ಮಾಡಿಕೊಳ್ಳಲು:-
ಒಣಮೆಣಸಿನಕಾಯಿ ರುಚಿಗೆ
ಮೆಣಸು - ಒಂದು ಚಮಚ
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದುವರೆ ಚಮಚ
ಮೆಂತ್ಯ- ಕಾಲು ಚಮಚ
ಜೀರಿಗೆ - ಎರಡು ಚಮಚ
ಧನಿಯ - ನಾಲ್ಕು ಚಮಚ
ಚೆಕ್ಕೆ- ಒಂದು ಸಣ್ಣ ಚೂರು
ಲವಂಗ - ಎರಡು
ಮೊಗ್ಗು - ಒಂದು ಚಿಕ್ಕದು
ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಹುರಿದುಕೊಂಡು,ಪುಡಿ ಮಾಡಿಕೊಳ್ಳಿ,ಆ ಪುಡಿಗೆ ಸ್ವಲ್ಪ ಕೊಬ್ಬರಿ ತುರಿಯನ್ನು ಸೇರಿಸಿ ಮತ್ತೆ ನುಣ್ಣಗೆ ಪುಡಿ ಮಾಡಿಕೊಳ್ಳಿ.
ಬೇಯಿಸಲು ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ- ಒಂದು ಬಟ್ಟಲು / ನಿಮಗೆ ಬೇಕಾಗುವಷ್ಟು
ತರಕಾರಿ - ಇಷ್ಟವೆನಿಸಿದರೆ ಹಾಕಬಹುದು, ಹಾಕುವುದಾದರೆ-
ಆಲೂಗೆಡ್ಡೆ, ಕ್ಯಾರೆಟ್ ,ಬೀನ್ಸ್ ಮತ್ತು ಬದನೆಕಾಯಿ - ಇದು ಹೆಚ್ಚಿದ್ದು ಎಲ್ಲಾ ಸೇರಿ ಒಂದು ಬಟ್ಟಲು
ಟಮೋಟ ಹಣ್ಣು - ಹೆಚ್ಚಿದ್ದು ಸ್ವಲ್ಪ
ಸಾಂಬಾರ್ ಈರುಳ್ಳಿ - ಹತ್ತು - ಹನ್ನರೆಡು ಇದ್ದರೆ,(ಹಾಕಲೇಬೇಕು ಅಂತ ಕಡ್ಡಾಯವಿಲ್ಲ)
-ಮಾಮುಲಿ ಈರುಳ್ಳಿಯನ್ನು ದಪ್ಪವಾಗಿ ಕತ್ತರಿಸಿ ಹಾಕಬಹುದು
ಪಾಲಕ್ ಸೊಪ್ಪಿನ ಎಲೆಗಳು - ಹತ್ತು ( ಬೇಕಾದರೆ)- ಇದನ್ನು ಹಾಕಿದರೆ ರುಚಿ ಇನ್ನು ಹೆಚ್ಚುತ್ತದೆ.
ಅರಿಸಿನ - ಒಂದು ಚಮಚ
ಎಣ್ಣೆ - ಎರಡು ಚಮಚ
ಬೆಲ್ಲ - ಒಂದು ದಪ್ಪ ಗೋಲಿ ಗಾತ್ರದ್ದು
ಹುಣಸೇಹಣ್ಣಿನ ರಸ/ಪೇಸ್ಟ್ - ಒಂದು ದೊಡ್ಡ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ತಯಾರಿಸುವ ರೀತಿ:
ತೊಗರಿಬೇಳೆಯನ್ನು ಅರಿಸಿನ ಮತ್ತು ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು,ಅದಕ್ಕೆ ಹೆಚ್ಚಿದ ಎಲ್ಲಾ ತರಕಾರಿಗಳನ್ನು,ಟಮೋಟ,ಹೆಚ್ಚಿದ ಪಾಲಕ್ ಎಲೆಗಳು ಮತ್ತು ಈರುಳ್ಳಿ ಎಲ್ಲವನ್ನು ಹಾಕಿ ಮತ್ತೆ ಸ್ವಲ್ಪ ಬೇಯಿಸಿ. ತರಕಾರಿಗಳು ಬೆಂದಿದೆ ಎನಿಸಿದ ತಕ್ಷಣ ಮಸಾಲೆ ಪುಡಿಯನ್ನು ಹಾಕಿ,ಪುಡಿ ಮಾಡಿದ್ದೆಲ್ಲಾ ಪೂರ್ತಿ ಹಾಕದೇ ರುಚಿಗೆ ನೋಡಿಕೊಂಡು ಹಾಕಿ,ಕುದಿಯುವಾಗ ಹುಣಸೇಹಣ್ಣಿನ ರಸ,ಬೆಲ್ಲ ಮತ್ತು ಉಪ್ಪು ಹಾಕಿ,ಎಲ್ಲ ಚೆನ್ನಾಗಿ ಕುದಿಸಿ,ತಿರುಗಿಸುತ್ತಿರಿ. ಇದಕ್ಕೆ ಒಗ್ಗರಣೆ ಬೆರೆಸಿ,ಇಳಿಸಿ.
ರುಚಿ-ರುಚಿಯಾದ ಸಾಂಬಾರ್ ತಯಾರಾಗುತ್ತದೆ.
ಒಗ್ಗರಣೆಗೆ -
ಎಣ್ಣೆ - ನಾಲ್ಕು ಚಮಚ
ತುಪ್ಪ - ಒಂದು/ಎರಡು ಚಮಚ
ಸಾಸಿವೆ
ಜೀರಿಗೆ
ಇಂಗು
ಕರಿಬೇವು
ಗೋಡಂಬಿ (ಬೇಕಾದರೆ)
ಎಣ್ಣೆ ಮತ್ತು ತುಪ್ಪವನ್ನು ಕಾಯಿಸಿ, ಸಾಸಿವೆ,ಜೀರಿಗೆ,ಇಂಗು,ಕರಿಬೇವು ಮತ್ತು ಗೋಡಂಬಿಯನ್ನು ಹಾಕಿ ಇಳಿಸಿ. ಈ ಒಗ್ಗರಣೆಯನ್ನು ಮೇಲೆ ತಿಳಿಸಿರುವ ಸಾಂಬಾರ್ ನಲ್ಲಿ ಹಾಕಿ ಬೆರೆಸಿ.
ನಂತರ ಬಿಸಿ-ಬಿಸಿಯಾಗಿ ತಯಾರಿಸಿದ ಇಡ್ಲಿಯೊಂದಿಗೆ ಈ ಸಾಂಬಾರ್ ಅನ್ನು ತಿನ್ನಲು ನೀಡಿ.
ಆರೋಗ್ಯಕ್ಕೆ ಉತ್ತಮವಾಗಿರುವ ಇಡ್ಲಿ ಮತ್ತು ಸಾಂಬಾರ್ ರೆಡಿ.
-------
* ಸಾಂಬಾರ್ ತಯಾರಿಸುವಾಗ ಹುರಿದುಕೊಳ್ಳುವ ಸಾಮಗ್ರಿಗಳನ್ನು ಹುರಿಯುವಾಗ ಸೀದಿಸಬೇಡಿ, ಹದವಾಗಿ ಹುರಿಯಿರಿ.
* ಇಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಯ ಅಗತ್ಯವಿಲ್ಲ
* ಈ ಸಾಂಬಾರ್ ಇಡ್ಲಿಗೆ ಹೆಚ್ಚು ರುಚಿಕೊಡುತ್ತದೆ.
* ಸಾಂಬಾರ್ ತಯಾರಿಸಲು, ನಿಮಗೆ ಬೇಕಾದ ತರಕಾರಿಗಳನ್ನು ಮಾತ್ರ ಹಾಕಿಕೊಳ್ಳಬಹುದು, ಎಲ್ಲವನ್ನು ಹಾಕಲೇಬೇಕು ಅಂತ ಕಡ್ಡಾಯವಿಲ್ಲ. ಏನೇ ಹಾಕಲಿ,ಹೇಗೆ ಹಾಕಲಿ,ರುಚಿಯಾಗಿ ಸಾಂಬಾರ್ ತಯಾರಿಸುವ ರೀತಿ ನಿಮ್ಮ ಕೈನಲ್ಲಿದೆ.
* ಮಕ್ಕಳಿಗಂತೂ ಚಟ್ನಿಗಿಂತ ಸಾಂಬಾರ್ ಜೊತೆ ಇಡ್ಲಿ ತಿನ್ನುವುದೇ ಬಹಳ ಖುಷಿ. ಚಟ್ನಿ ಕೆಲವು ಮಕ್ಕಳಿಗೆ ಮಾತ್ರ ಇಷ್ಟವಾಗುತ್ತದೆ. ನನ್ನ ಅಮ್ಮ ಕೂಡ ತುಂಬಾ ಚೆನ್ನಾಗಿ ಸಾಂಬಾರ್ ತಯಾರಿಸುತ್ತಿದ್ದರು. ಅದನ್ನು ನೋಡಿಯೇ ನಾನು ಸಹ ತಯಾರಿಸುವುದು. ಅವರ ಕೈ ರುಚಿಯೇ ಒಂದು ರೀತಿ ಚೆಂದ.
* ಇಡ್ಲಿಯ ಹಿಟ್ಟು ದೋಸೆ ಹಿಟ್ಟಿಗಿಂತ ಗಟ್ಟಿಯಿರಲಿ. ಹಿಟ್ಟು ರುಬ್ಬಿಟ್ಟು ಮಾರನೇದಿನ ಅಥವಾ ಏಳೆಂಟು ಗಂಟೆಗಳ ನಂತರ ಇಡ್ಲಿಯನ್ನು ತಯಾರಿಸಿ. ಹಿಟ್ಟು ಹುದುಗು ಬಂದಿದ್ದರೆ ಮಾತ್ರ ಇಡ್ಲಿಗಳು ಚೆನ್ನಾಗಿ ಬರುತ್ತವೆ.
ನಮ್ಮ ಅಜ್ಜಿ ಮಿಕ್ಸಿ ಇದ್ದರೂ ಸಹ ಒರಳು ಕಲ್ಲಿನಲ್ಲಿ ಹಿಟ್ಟನ್ನು ರುಬ್ಬುತ್ತಿದ್ದರು,ಅವರು ತಯಾರಿಸುತ್ತಿದ್ದ ಇಡ್ಲಿ ಅಥವಾ ದೋಸೆಗಳ ರುಚಿಯಂತೂ ಈಗಲೂ ಮರೆಯಲು ಸಾಧ್ಯವಿಲ್ಲ. ಅದೆಷ್ಟು ಚೆನ್ನಾಗಿ ಹದವಾಗಿ,ರುಬ್ಬಿ ತಯಾರಿಸುತ್ತಿದ್ದರು. ಈಗ ನಾವುಗಳು ಸೋಮಾರಿಗಳಂತೆ ಅದೇನೋ ಗ್ರೈಂಡರ್ ಮತ್ತು ಮಿಕ್ಸಿ ಅಂತ ಉಪಯೋಗಿಸುತ್ತ ಇರುತ್ತೇವೆ. ಇದು ಸಾಲದೆಂದು ರೆಡಿಮೇಡ್ ರವೆ ಅಂತ ಬೇರೆ ತಂದು ಉಪಯೋಗಿಸುತ್ತೇವೆ. ಅದಂತೂ ಇದ್ದಿದ್ದು ಕೆಲಸ ಕಮ್ಮಿ. ಇಡ್ಲಿಯಲ್ಲಿ ಈಗಂತೂ ಬಹಳ ತರವಾಗಿ,ವಿವಿಧವಾಗಿ ತಯಾರಿಸುತ್ತೇವೆ. ಕೆಲವು ಸಾರಿ ಇಡ್ಲಿ -ಸಾಂಬಾರ್ ಜೊತೆ ರುಚಿ ಎನಿಸಿದರೆ,ಕೆಲವೊಮ್ಮೆ ಕಾಯಿಚಟ್ನಿ ಮತ್ತು ಸಿಹಿ ಚಟ್ನಿಯೊಂದಿಗೂ ಹಾಗು ಕೆಂಪು ಚಟ್ನಿಯೊಂದಿಗೂ ತುಂಬಾ ರುಚಿಯಾಗಿರುತ್ತದೆ.ಎಲ್ಲಕ್ಕಿಂತ ಹೆಚ್ಚಿನ ರುಚಿ ಸಾಂಬಾರ್ ಜೊತೆ ಮಾತ್ರ. ಆಗ ಕೈನಲ್ಲಿ ರುಬ್ಬುತ್ತಿದ್ದು ಮಾಡುತ್ತಿದ್ದ ಅಡುಗೆಗಳ ರುಚಿನೇ ರುಚಿ.ಇಲ್ಲಿ ಈಗ ಮಾಮುಲಿ ಇಡ್ಲಿ ಮತ್ತು ಸಾಂಬಾರ್ ತಯಾರಿಸುವ ವಿಧಾನವನ್ನು ತಿಳಿಯೋಣ.
ಇಡ್ಲಿ:
ಬೇಕಾಗುವ ಸಾಮಗ್ರಿಗಳು:
ಅಕ್ಕಿ - ಮೂರು ಕಪ್
ಕುಸುಬಲಕ್ಕಿ (ಬಾಯಲ್ಡ್ ರೈಸ್)- ಒಂದು ಕಪ್
ಉದ್ದಿನಬೇಳೆ - ಒಂದು ಕಪ್
ಅವಲಕ್ಕಿ, ಸಬ್ಬಕ್ಕಿ - ಒಂದೊಂದು ಚಮಚ
ಮೆಂತ್ಯಕಾಳು - ಒಂದು ದೊಡ್ಡ ಚಮಚ
ಉಪ್ಪು
ತಯಾರಿಸುವ ರೀತಿ:
ಅಕ್ಕಿ + ಮೆಂತ್ಯ ಮತ್ತು ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು,ಬೇರೆ ಬೇರೆಯಾಗಿ ಐದರಿಂದ ಆರು ಗಂಟೆಗಳವರೆಗೂ ನೆನೆಸಿಡಿ. ನಂತರ ಉದ್ದಿನಬೇಳೆಯನ್ನು ಚೆನ್ನಾಗಿ ಹುದುಗು ಬರುವಂತೆ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ. ಅದರ ಜೊತೆಗೆ ಅಕ್ಕಿಯನ್ನು ಬೆರೆಸಿ ಅಗತ್ಯವಿದ್ದಷ್ಟು ನೀರು ಹಾಕಿ ರುಬ್ಬಿಕೊಳ್ಳಿ.ಅವಲಕ್ಕಿ ಮತ್ತು ಸಬ್ಬಕ್ಕಿಯನ್ನು ಹಾಕುವುದಾದರೆ, ಅವಲಕ್ಕಿಯನ್ನು ಮತ್ತು ಸಬ್ಬಕ್ಕಿಯನ್ನು ನೆನೆಸಿಟ್ಟು( ಅರ್ಧ ಗಂಟೆ),ಅಕ್ಕಿಯೊಂದಿಗೆ ರುಬ್ಬುವಾಗ ಹಾಕಿ, ರುಬ್ಬಿಕೊಳ್ಳಿ. ಅಕ್ಕಿಯೂ ಸ್ವಲ್ಪ ಕೈಗೆ ತರಿತರಿಯಾಗಿ ಸಿಗುವಂತೆ ರುಬ್ಬಿ. ಮುಚ್ಚಿಡಿ.ರಾತ್ರಿಯೆಲ್ಲಾ ಅದೇರೀತಿ ಇದ್ದಾಗ,ಅದು ಹಿಟ್ಟು ಬೆಳಗ್ಗೆ ಹುದುಗು/ಹುಳಿ/ಉಬ್ಬಿ ಬಂದಿರುತ್ತದೆ. ಮಾರನೇದಿನ ಹುದುಗು ಬಂದ ಹಿಟ್ಟಿಗೆ ರುಚಿಗೆ ಸ್ವಲ್ಪ ಉಪ್ಪು ಬೆರೆಸಿ,ತುಂಬಾ ಜೋರಾಗಿ ತಿರುಗಿಸದೇ ಮೆಲ್ಲಗೆ ತಿರುಗಿಸಿ. ಈ ಹಿಟ್ಟನ್ನು ಇಡ್ಲಿಯ ತಟ್ಟೆ/ಪಾತ್ರೆ/ ಮೋಲ್ಡ್ ಗಳಿಗೆ ಹಾಕಿ ಹಬೆಯಲ್ಲಿ ಏಳೆಂಟು ನಿಮಿಷಗಳವರೆಗೆ ಬೇಯಿಸಿ. ತೆಗೆಯಿರಿ. ಇಡ್ಲಿಯನ್ನು ಸಾಂಬಾರ್ ಮತ್ತು ಚಟ್ನಿಯೊಂದಿಗೆ ಸವಿಯಲು ನೀಡಿ.
ಚಟ್ನಿ / ಕಾಯಿಚಟ್ನಿ:
ತೆಂಗಿನಕಾಯಿ ತುರಿ -ಒಂದು ಬಟ್ಟಲು
ಕಡ್ಲೆ - ಸ್ವಲ್ಪ
ಹುಣಸೇಹಣ್ಣು ಚೂರುಹಸಿಮೆಣಸಿನಕಾಯಿ ರುಚಿಗೆ
ಉಪ್ಪು ರುಚಿಗೆ
ಶುಂಠಿ ತುಂಡು ಒಂದು ಚೂರು
ಬೆಳ್ಳುಳ್ಳಿ ೪-೫
ಜೀರಿಗೆ - ಅರ್ಧ ಚಮಚ
ಕೊತ್ತುಂಬರಿಸೊಪ್ಪು ಸ್ವಲ್ಪ
ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ಸೇರಿಸಿ, ಅಗತ್ಯವಿದ್ದಷ್ಟು ನೀರು ಹಾಕಿ, ರುಬ್ಬಿ. ಕಾಯಿ ಚಟ್ನಿ ತಯಾರಾಗುತ್ತದೆ. ಒಗ್ಗರಣೆ ಇಷ್ಟಪಡುವವರು ಅದನ್ನು ಸೇರಿಸಬಹುದು್.
* ಒಗ್ಗರಣೆಗೆ - ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವು ಹಾಕಿ, ಚಟಪಟಾಯಿಸಿ, ತಣ್ಣಗಾದ ಮೇಲೆ ಚಟ್ನಿಗೆ ಬೆರೆಸಿ. ಈ ಚಟ್ನಿಯೂ ಇಡ್ಲಿ,ದೋಸೆ,ಚಪಾತಿ,ರೊಟ್ಟಿಗಳು,ಬಜ್ಜಿ ಮತ್ತು ಪೂರಿ ಹಾಗು ಕೆಲವೊಮ್ಮೆ ಅನ್ನಕ್ಕೂ ರುಚಿಯಾಗಿರುತ್ತದೆ. ಇಡ್ಲಿಗಾದರೆ ಚಟ್ನಿಯನ್ನು ಸ್ವಲ್ಪ ತೆಳ್ಳಗೆ ಮಾಡಿಕೊಳ್ಳಿ.
ಸಾಂಬಾರ್: (ಇಡ್ಲಿ ಸಾಂಬಾರ್)
ಸಾಂಬಾರ್ ಎಂದರೆ ವಿವಿಧ ಬಗೆಗಳಿವೆ,ಇದು ಇಲ್ಲಿ ತಯಾರಿಸುತ್ತಿರುವುದು. ಇಡ್ಲಿಗೆ ಮಾತ್ರವೇ ಚೆನ್ನಾಗಿರುತ್ತದೆ. ಅನ್ನಕ್ಕೆ ಅಷ್ಟು ರುಚಿಯಿರುವುದಿಲ್ಲ,ಆಗಾಗಿ ಇದನ್ನು ಸಾಮಾನ್ಯವಾಗಿ ಇಡ್ಲಿಗೆ ಮಾತ್ರ ತಯಾರಿಸಲಾಗುತ್ತದೆ.
ಇದೆಲ್ಲವೂ ಸಾಂಬಾರ್ ಗಾಗಿ ಮಸಾಲೆಪುಡಿ ಮಾಡಿಕೊಳ್ಳಲು:-
ಒಣಮೆಣಸಿನಕಾಯಿ ರುಚಿಗೆ
ಮೆಣಸು - ಒಂದು ಚಮಚ
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದುವರೆ ಚಮಚ
ಮೆಂತ್ಯ- ಕಾಲು ಚಮಚ
ಜೀರಿಗೆ - ಎರಡು ಚಮಚ
ಧನಿಯ - ನಾಲ್ಕು ಚಮಚ
ಚೆಕ್ಕೆ- ಒಂದು ಸಣ್ಣ ಚೂರು
ಲವಂಗ - ಎರಡು
ಮೊಗ್ಗು - ಒಂದು ಚಿಕ್ಕದು
ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಹುರಿದುಕೊಂಡು,ಪುಡಿ ಮಾಡಿಕೊಳ್ಳಿ,ಆ ಪುಡಿಗೆ ಸ್ವಲ್ಪ ಕೊಬ್ಬರಿ ತುರಿಯನ್ನು ಸೇರಿಸಿ ಮತ್ತೆ ನುಣ್ಣಗೆ ಪುಡಿ ಮಾಡಿಕೊಳ್ಳಿ.
ಬೇಯಿಸಲು ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ- ಒಂದು ಬಟ್ಟಲು / ನಿಮಗೆ ಬೇಕಾಗುವಷ್ಟು
ತರಕಾರಿ - ಇಷ್ಟವೆನಿಸಿದರೆ ಹಾಕಬಹುದು, ಹಾಕುವುದಾದರೆ-
ಆಲೂಗೆಡ್ಡೆ, ಕ್ಯಾರೆಟ್ ,ಬೀನ್ಸ್ ಮತ್ತು ಬದನೆಕಾಯಿ - ಇದು ಹೆಚ್ಚಿದ್ದು ಎಲ್ಲಾ ಸೇರಿ ಒಂದು ಬಟ್ಟಲು
ಟಮೋಟ ಹಣ್ಣು - ಹೆಚ್ಚಿದ್ದು ಸ್ವಲ್ಪ
ಸಾಂಬಾರ್ ಈರುಳ್ಳಿ - ಹತ್ತು - ಹನ್ನರೆಡು ಇದ್ದರೆ,(ಹಾಕಲೇಬೇಕು ಅಂತ ಕಡ್ಡಾಯವಿಲ್ಲ)
-ಮಾಮುಲಿ ಈರುಳ್ಳಿಯನ್ನು ದಪ್ಪವಾಗಿ ಕತ್ತರಿಸಿ ಹಾಕಬಹುದು
ಪಾಲಕ್ ಸೊಪ್ಪಿನ ಎಲೆಗಳು - ಹತ್ತು ( ಬೇಕಾದರೆ)- ಇದನ್ನು ಹಾಕಿದರೆ ರುಚಿ ಇನ್ನು ಹೆಚ್ಚುತ್ತದೆ.
ಅರಿಸಿನ - ಒಂದು ಚಮಚ
ಎಣ್ಣೆ - ಎರಡು ಚಮಚ
ಬೆಲ್ಲ - ಒಂದು ದಪ್ಪ ಗೋಲಿ ಗಾತ್ರದ್ದು
ಹುಣಸೇಹಣ್ಣಿನ ರಸ/ಪೇಸ್ಟ್ - ಒಂದು ದೊಡ್ಡ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ತಯಾರಿಸುವ ರೀತಿ:
ತೊಗರಿಬೇಳೆಯನ್ನು ಅರಿಸಿನ ಮತ್ತು ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು,ಅದಕ್ಕೆ ಹೆಚ್ಚಿದ ಎಲ್ಲಾ ತರಕಾರಿಗಳನ್ನು,ಟಮೋಟ,ಹೆಚ್ಚಿದ ಪಾಲಕ್ ಎಲೆಗಳು ಮತ್ತು ಈರುಳ್ಳಿ ಎಲ್ಲವನ್ನು ಹಾಕಿ ಮತ್ತೆ ಸ್ವಲ್ಪ ಬೇಯಿಸಿ. ತರಕಾರಿಗಳು ಬೆಂದಿದೆ ಎನಿಸಿದ ತಕ್ಷಣ ಮಸಾಲೆ ಪುಡಿಯನ್ನು ಹಾಕಿ,ಪುಡಿ ಮಾಡಿದ್ದೆಲ್ಲಾ ಪೂರ್ತಿ ಹಾಕದೇ ರುಚಿಗೆ ನೋಡಿಕೊಂಡು ಹಾಕಿ,ಕುದಿಯುವಾಗ ಹುಣಸೇಹಣ್ಣಿನ ರಸ,ಬೆಲ್ಲ ಮತ್ತು ಉಪ್ಪು ಹಾಕಿ,ಎಲ್ಲ ಚೆನ್ನಾಗಿ ಕುದಿಸಿ,ತಿರುಗಿಸುತ್ತಿರಿ. ಇದಕ್ಕೆ ಒಗ್ಗರಣೆ ಬೆರೆಸಿ,ಇಳಿಸಿ.
ರುಚಿ-ರುಚಿಯಾದ ಸಾಂಬಾರ್ ತಯಾರಾಗುತ್ತದೆ.
ಒಗ್ಗರಣೆಗೆ -
ಎಣ್ಣೆ - ನಾಲ್ಕು ಚಮಚ
ತುಪ್ಪ - ಒಂದು/ಎರಡು ಚಮಚ
ಸಾಸಿವೆ
ಜೀರಿಗೆ
ಇಂಗು
ಕರಿಬೇವು
ಗೋಡಂಬಿ (ಬೇಕಾದರೆ)
ಎಣ್ಣೆ ಮತ್ತು ತುಪ್ಪವನ್ನು ಕಾಯಿಸಿ, ಸಾಸಿವೆ,ಜೀರಿಗೆ,ಇಂಗು,ಕರಿಬೇವು ಮತ್ತು ಗೋಡಂಬಿಯನ್ನು ಹಾಕಿ ಇಳಿಸಿ. ಈ ಒಗ್ಗರಣೆಯನ್ನು ಮೇಲೆ ತಿಳಿಸಿರುವ ಸಾಂಬಾರ್ ನಲ್ಲಿ ಹಾಕಿ ಬೆರೆಸಿ.
ನಂತರ ಬಿಸಿ-ಬಿಸಿಯಾಗಿ ತಯಾರಿಸಿದ ಇಡ್ಲಿಯೊಂದಿಗೆ ಈ ಸಾಂಬಾರ್ ಅನ್ನು ತಿನ್ನಲು ನೀಡಿ.
ಆರೋಗ್ಯಕ್ಕೆ ಉತ್ತಮವಾಗಿರುವ ಇಡ್ಲಿ ಮತ್ತು ಸಾಂಬಾರ್ ರೆಡಿ.
-------
* ಸಾಂಬಾರ್ ತಯಾರಿಸುವಾಗ ಹುರಿದುಕೊಳ್ಳುವ ಸಾಮಗ್ರಿಗಳನ್ನು ಹುರಿಯುವಾಗ ಸೀದಿಸಬೇಡಿ, ಹದವಾಗಿ ಹುರಿಯಿರಿ.
* ಇಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಯ ಅಗತ್ಯವಿಲ್ಲ
* ಈ ಸಾಂಬಾರ್ ಇಡ್ಲಿಗೆ ಹೆಚ್ಚು ರುಚಿಕೊಡುತ್ತದೆ.
* ಸಾಂಬಾರ್ ತಯಾರಿಸಲು, ನಿಮಗೆ ಬೇಕಾದ ತರಕಾರಿಗಳನ್ನು ಮಾತ್ರ ಹಾಕಿಕೊಳ್ಳಬಹುದು, ಎಲ್ಲವನ್ನು ಹಾಕಲೇಬೇಕು ಅಂತ ಕಡ್ಡಾಯವಿಲ್ಲ. ಏನೇ ಹಾಕಲಿ,ಹೇಗೆ ಹಾಕಲಿ,ರುಚಿಯಾಗಿ ಸಾಂಬಾರ್ ತಯಾರಿಸುವ ರೀತಿ ನಿಮ್ಮ ಕೈನಲ್ಲಿದೆ.
* ಮಕ್ಕಳಿಗಂತೂ ಚಟ್ನಿಗಿಂತ ಸಾಂಬಾರ್ ಜೊತೆ ಇಡ್ಲಿ ತಿನ್ನುವುದೇ ಬಹಳ ಖುಷಿ. ಚಟ್ನಿ ಕೆಲವು ಮಕ್ಕಳಿಗೆ ಮಾತ್ರ ಇಷ್ಟವಾಗುತ್ತದೆ. ನನ್ನ ಅಮ್ಮ ಕೂಡ ತುಂಬಾ ಚೆನ್ನಾಗಿ ಸಾಂಬಾರ್ ತಯಾರಿಸುತ್ತಿದ್ದರು. ಅದನ್ನು ನೋಡಿಯೇ ನಾನು ಸಹ ತಯಾರಿಸುವುದು. ಅವರ ಕೈ ರುಚಿಯೇ ಒಂದು ರೀತಿ ಚೆಂದ.
* ಇಡ್ಲಿಯ ಹಿಟ್ಟು ದೋಸೆ ಹಿಟ್ಟಿಗಿಂತ ಗಟ್ಟಿಯಿರಲಿ. ಹಿಟ್ಟು ರುಬ್ಬಿಟ್ಟು ಮಾರನೇದಿನ ಅಥವಾ ಏಳೆಂಟು ಗಂಟೆಗಳ ನಂತರ ಇಡ್ಲಿಯನ್ನು ತಯಾರಿಸಿ. ಹಿಟ್ಟು ಹುದುಗು ಬಂದಿದ್ದರೆ ಮಾತ್ರ ಇಡ್ಲಿಗಳು ಚೆನ್ನಾಗಿ ಬರುತ್ತವೆ.
Saturday, December 19, 2009
Dose/Dosa Saagu- ದೋಸೆ ಸಾಗು:
ದೋಸೆ ಸಾಗು:
ಸಾಮಗ್ರಿಗಳು:
ಅಕ್ಕಿ - ನಾಲ್ಕು ಕಪ್
ಕುಸುಬಲಕ್ಕಿ- ಅರ್ಧಕಪ್
ಉದ್ದಿನಬೇಳೆ -ಒಂದು ಕಪ್
ಮೆಂತ್ಯದ ಕಾಳು - ಒಂದು ದೊಡ್ಡ ಚಮಚ
ತೊಗರಿಬೇಳೆ - ಎರಡು ಚಮಚ
ಕಡ್ಲೆಬೇಳೆ -ಎರಡು ಚಮಚ
ವಿಧಾನ:
ಅಕ್ಕಿಯನ್ನು ನಾಲ್ಕು ಅಥವ ಐದು ಗಂಟೆಗಳ ಕಾಲ ನೆನೆಸಿ,ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಏಳೆಂಟು ಗಂಟೆ ಅಥವಾ ರಾತ್ರಿ ಆಗೇಯೇ ಬಿಡಿ. ಅದು ಮಾರನೆದಿನ ಬೆಳಗ್ಗೆ ಹೊತ್ತಿಗೆ ಹುಳಿ/ಹುಬ್ಬಿ ಬಂದಿರುತ್ತದೆ. ಹೀಗೆ ಹುಳಿ/ಹುದುಗು ಬಂದರೆ ದೋಸೆ ಚೆನ್ನಾಗಿರುತ್ತದೆ. ಬೆಳಗ್ಗೆ ಉಪ್ಪು ಮತ್ತು ಸೋಡ ಸೇರಿಸಿ,ಚೆನ್ನಾಗಿ ಬೆರೆಸಿ ಅರ್ಧ ಗಂಟೆ ಬಿಟ್ಟು ತವಾ ಒಲೆಯ ಮೇಲಿಟ್ಟು,ಕಾಯಿಸಿ,ತುಪ್ಪ /ಎಣ್ಣೆ ಹಾಕಿ ಸವರಿ,ಅದರ ಮೇಲೆ ಒಂದು ಸೌಟು ರುಬ್ಬಿದ ಮಿಶ್ರಣವನ್ನು ಹಾಕಿ ದೋಸೆಯಂತೆ ಮಾಡಿ,ಬೇಯಿಸಿ ತೆಗೆಯಿರಿ. ಇದೇ ರೀತಿ ಎಷ್ಟು ಬೇಕೋ ತಯಾರಿಸಿಕೊಳ್ಳಿ. ದೋಸೆಯೊಂದಿಗೆ ಸಾಗು ತುಂಬಾ ಚೆನ್ನಾಗಿರುತ್ತದೆ.
***********************************
ಸಾಗು ತಯಾರಿಸುವ ಬಗೆ;
ತರಕಾರಿ ಸಾಗು:
ಸಾಮಗ್ರಿಗಳು:
ತರಕಾರಿಗಳು ನಿಮ್ಮ ಇಷ್ಟ--
ಕ್ಯಾರೆಟ್,ಹುರುಳಿಕಾಯಿ,ಬಟಾಣಿ
ಹೂಕೋಸು, ಎಲೆಕೋಸು,ಹೀರೆಕಾಯಿ
ಬದನೆಕಾಯಿ,ಆಲೂಗೆಡ್ಡೆ,ಟಮೋಟ
ಕಾರ್ನ್ ( ಮೆಕ್ಕೆಜೋಳದ ಕಾಳುಗಳು)-ಕ್ಯಾನ್ ಅಥವ ಫ್ರೆಶ್
ಅಚ್ಚ ಖಾರದ ಪುಡಿ
ಧನಿಯ ಪುಡಿ
ಸಾರಿನಪುಡಿ
ಗರಂಮಸಾಲಾ
ಈರುಳ್ಳಿ
ಎಣ್ಣೆ,ಸಾಸಿವೆ,ಜೀರಿಗೆ
ಕರಿಬೇವು, ಅರಿಸಿನ
ಉಪ್ಪು,
ಕಾಯಿತುರಿ / ಕೊಬ್ರಿತುರಿ
ಕೊತ್ತುಂಬರಿಸೊಪ್ಪು
ವಿಧಾನ:
ಬಟಾಣಿಯನ್ನು ಬಿಟ್ಟು ಮಿಕ್ಕ ಎಲ್ಲಾ ತರಕಾರಿಗಳನ್ನು ಹೆಚ್ಚಿಕೊಳ್ಳಿ.
ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ,ಕಾದ ಬಳಿಕ ಸಾಸಿವೆ,ಜೀರಿಗೆ ,ಈರುಳ್ಳಿ ಹಾಕಿ ಒಂದೆರಡು ನಿಮಿಷ ಹುರಿದು, ಹೆಚ್ಚಿದ ತರಕಾರಿಗಳನ್ನು ಹಾಕಿ, ಚೆನ್ನಾಗಿ ಬೆರೆಸಿ,ಕೆಲವು ನಿಮಿಷ ತಿರುಗಿಸಿ ಬಟಾಣಿಕಾಳುಗಳನ್ನು ಹಾಕಿ ಅದನ್ನು ಬೆರೆಸಿ, ಒಂದೆರಡು ನಿಮಿಷದ ನಂತರ ಅರಿಸಿನ,ಕರಿಬೇವು,ಕಾರದಪುಡಿ,ಧನಿಯಾಪುಡಿ,ಸ್ವಲ್ಪ ಸಾರಿನಪುಡಿ ಮತ್ತು ಉಪ್ಪು ಹಾಕಿ, ಚೆನ್ನಾಗಿ ತಿರುಗಿಸಿ, ಅಗತ್ಯವಿರುವಷ್ಟು ನೀರು ಹಾಕಿ ಉಪ್ಪು,ಕಾಯಿತುರಿ/ಕೊಬ್ರಿತುರಿ ಮತ್ತು ಸ್ವಲ್ಪ ಕೊತ್ತುಂಬರಿಸೊಪ್ಪನ್ನು ಹಾಕಿ ಎಲ್ಲವನ್ನು ಸರಿಯಾಗಿ ಬೆರೆಸಿ, ಗರಂಮಸಾಲ ಸಹ ಹಾಕಿ ತಿರುಗಿಸಿ. ಮುಚ್ಚಳ ಹಾಕಿ. ಬೇಯಿಸಿ. ತರಕಾರಿಗಳನ್ನು ತುಂಬಾ ಬೇಯಿಸಬಾರದು. ನೋಡಿಕೊಂಡು ಒಲೆಯಿಂದ ಇಳಿಸಿ.
ಮತ್ತೆ ಕೊತ್ತುಂಬರಿಸೊಪ್ಪನ್ನು ಹಾಕಿ ತಿರುಗಿಸಿ. ತರಕಾರಿ ಸಾಗು ತಯಾರಾಗುತ್ತದೆ.
ಈ ದೋಸೆಗಳ ಜೊತೆ ಆಲೂಗೆಡ್ಡೆ ಪಲ್ಯ ಮತ್ತು ಚಟ್ನಿಯನ್ನು ಕೊಡಿ.
Monday, November 23, 2009
Puris / ಪೂರಿ

ಪೂರಿ:
ಬೇಕಾಗುವ ಸಾಮಗ್ರಿಗಳು:
ಮೈದಾ ಹಿಟ್ಟು - ಒಂದು ಬಟ್ಟಲು
ಗೋಧಿಹಿಟ್ಟು - ಒಂದು ಬಟ್ಟಲುಸ್ವಲ್ಪ ಉಪ್ಪು
ಡಾಲ್ಡ ಅಥವ ವೆಜಿಟಬಲ್ ತುಪ್ಪ- ಒಂದು ದೊಡ್ಡ ಚಮಚ
ತಯಾರಿಸುವ ರೀತಿ:
ಮೈದಾಹಿಟ್ಟು,ಗೋಧಿಹಿಟ್ಟು,ಉಪ್ಪು ಮತ್ತು ಡಾಲ್ಡ ಹಾಕಿ, ಎಲ್ಲವನ್ನೂ ಚೆನ್ನಾಗಿ ಬೆರೆಸಿ,ಅವಶ್ಯಕತೆ ಇರುವಷ್ಟು ನೀರು ಹಾಕಿ, ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿ,ಚೆನ್ನಾಗಿ ನಾದಿ,ಹದಿನೈದು ನಿಮಿಷ ಬಿಡಿ. ನಂತರ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಪುಟ್ಟ ಪುಟ್ಟ ಚಪಾತಿಯಂತೆ ಲಟ್ಟಿಸಿ, ಅದನ್ನು ಮಧ್ಯಮ ಉರಿಯಲ್ಲಿ ಕಾಯಿಸಿರುವ ಎಣ್ಣೆಯಲ್ಲಿ ಬೇಯಿಸಿ.ಹೊಂಬಣ್ಣ ಬರುವವರೆಗೂ ಕರಿಯಿರಿ ಅಥವಾ ಬೆಂದಿದೆ ಎನಿಸಿದ ತಕ್ಷಣ ಎಣ್ಣೆಯಿಂದ ತೆಗೆದು ಅಗಲವಾದ ತಟ್ಟೆಗೆ ಹಾಕಿ. ಪೂರಿಯನ್ನು ಯಾವುದಾದರು ಗೊಜ್ಜು / ಚಟ್ನಿ / ಪಲ್ಯ ಜೊತೆ ತಿನ್ನಲು ನೀಡಿ. ಮಕ್ಕಳಿಗೆ ಪ್ರಿಯವಾದ ಪೂರಿ ತಯಾರ್.
Sunday, October 11, 2009
Hesarukaalina chapati / Greengram paratha
ಹೆಸರುಕಾಳಿನ ಚಪಾತಿ:
ಹೆಸರುಕಾಳು - 1 ಕಪ್
ಗೋಧಿಹಿಟ್ಟು - 2 ಕಪ್
ಎಣ್ಣೆ ಬೇಕಾಗುವಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಜೀರಿಗೆ ಪುಡಿ - ಅರ್ಧ ಚಮಚ
ತಯಾರಿಸುವ ವಿಧಾನ:
ಮೊದಲು ಹೆಸರುಕಾಳನ್ನು 24 ಗಂಟೆ ನೆನೆಸಿಡಿ. ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಗೋಧಿಹಿಟ್ಟು,ಉಪ್ಪು ಮತ್ತು ಜೀರಿಗೆಪುಡಿಯೊಂದಿಗೆ ಚಪಾತಿ ಹಿಟ್ಟಿನಂತೆ ಕಲಸಿ, ಚಪಾತಿ ಮಾಡಿ ಬೇಯಿಸಿ.
ಚಟ್ನಿ ಅಥವಾ ಮಸ್ಸೊಪ್ಪು ಸಾರಿನೊಂದಿಗೆ ತಿನ್ನಲು ನೀಡಿ. ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರ.
ಹೆಸರುಕಾಳು - 1 ಕಪ್
ಗೋಧಿಹಿಟ್ಟು - 2 ಕಪ್
ಎಣ್ಣೆ ಬೇಕಾಗುವಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಜೀರಿಗೆ ಪುಡಿ - ಅರ್ಧ ಚಮಚ
ತಯಾರಿಸುವ ವಿಧಾನ:
ಮೊದಲು ಹೆಸರುಕಾಳನ್ನು 24 ಗಂಟೆ ನೆನೆಸಿಡಿ. ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಗೋಧಿಹಿಟ್ಟು,ಉಪ್ಪು ಮತ್ತು ಜೀರಿಗೆಪುಡಿಯೊಂದಿಗೆ ಚಪಾತಿ ಹಿಟ್ಟಿನಂತೆ ಕಲಸಿ, ಚಪಾತಿ ಮಾಡಿ ಬೇಯಿಸಿ.
ಚಟ್ನಿ ಅಥವಾ ಮಸ್ಸೊಪ್ಪು ಸಾರಿನೊಂದಿಗೆ ತಿನ್ನಲು ನೀಡಿ. ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರ.
Wednesday, August 19, 2009
Peas Pulao/Palav - ಬಟಾಣಿ ಪಲಾವ್

ಬಟಾಣಿ ಪಲಾವ್
ಸಾಮಗ್ರಿಗಳು:
ಬಟಾಣಿ
ಈರುಳ್ಳಿ ಹೆಚ್ಚಿದ್ದು
ಹಸಿಮೆಣಸಿನಕಾಯಿ -ರುಚಿಗೆ
ಜೀರಿಗೆ
ಚೆಕ್ಕೆ, ಲವಂಗ,ಏಲಕ್ಕಿ ಮತ್ತು ಪತ್ರೆ
ಕಾಯಿತುರಿ
ಅಕ್ಕಿ - ನೆನೆಸಿದ್ದು
ಕೊತ್ತುಂಬರಿ ಸೊಪ್ಪು
ನಿಂಬೆರಸ
ಉಪ್ಪು
ಎಣ್ಣೆ
ಗೋಡಂಬಿ ಅಲಂಕರಿಸಲು
ತಯಾರಿಸುವ ವಿಧಾನ:
ಕುಕ್ಕರ್ ಗೆ ಎಣ್ಣೆಯನ್ನು ಹಾಕಿ ಕಾದ ಮೇಲೆ ಜೀರಿಗೆ, ಚೆಕ್ಕೆ,ಲವಂಗ,ಪತ್ರೆ ಮತ್ತು ಏಲಕ್ಕಿ ಹಾಕಿ, ಕೆದಕಿ,ಈರುಳ್ಳಿಯನ್ನು ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ,ಈರುಳ್ಳಿ ಸ್ವಲ್ಪ ಕೆಂಪಾಗುವವರೆಗೂ ಬಾಡಿಸಿ, ಬಟಾಣಿ ಕಾಳುಗಳನ್ನು ಹಾಕಿ ಅದನ್ನು ಒಂದೆರಡು ನಿಮಿಷ ಹುರಿದು, ಅದಕ್ಕೆ ಉಪ್ಪು, ಕಾಯಿತುರಿ ಮತ್ತು ಅಳತೆ ನೀರನ್ನು ಹಾಕಿ, ನೆನೆಸಿದ ಅಕ್ಕಿಯನ್ನು ಹಾಕಿ, ನಿಂಬೆರಸ ಮತ್ತು ಕೊತ್ತುಂಬರಿ ಸೊಪ್ಪು ಹಾಕಿ, ಚೆನ್ನಾಗಿ ಬೆರೆಸಿ, ಮುಚ್ಚಿಟ್ಟು ಒಂದು ವಿಷ್ಹಲ್ ಕೂಗಿಸಿ ಒಲೆಯಿಂದ ಇಳಿಸಿ. ಮತ್ತೆ ಸ್ವಲ್ಪ ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ. ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಹಾಕಿ.ಅಲಂಕರಿಸಿ. ಮೊಸರಿನ ರಾಯತದೊಂದಿಗೆ ಬಡಿಸಿ.
Sunday, July 12, 2009
Ragi Roti / Rotti - ರಾಗಿರೊಟ್ಟಿ:
ರಾಗಿರೊಟ್ಟಿ:
ಸಾಮಗ್ರಿಗಳು:
ರಾಗಿಹಿಟ್ಟು - ಎರಡು ಬಟ್ಟಲು
ಗೋಧಿಹಿಟ್ಟು - ನಾಲ್ಕು ಚಮಚ
ಉಪ್ಪು ಸ್ವಲ್ಪ
ಬಿಸಿನೀರು
ವಿಧಾನ:
ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ, ಬಿಸಿನೀರು ಹಾಕಿ ರೊಟ್ಟಿಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ.
ಕಿತ್ತಳೆ ಗಾತ್ರದಲ್ಲಿ ಉಂಡೆಗಳನ್ನು ತೆಗೆದುಕೊಂಡು, ರೊಟ್ಟಿ ತಟ್ಟಿ ತವಾ ಮೇಲೆ ಹಾಕಿ ಬೇಯಿಸಿ. ಎರಡು ಬದಿ ಸರಿಯಾಗಿ ಬೇಯಿಸಿ, ರಾಗಿರೊಟ್ಟಿ ತಯಾರಾಗುತ್ತದೆ. ಇದನ್ನು ಚಟ್ನಿಯೊಂದಿಗೆ ಸರ್ವ್ ಮಾಡಿ. ಬೆಣ್ಣೆ ಮತ್ತು ಖಾರಚಟ್ನಿ ಜೊತೆ ಸಹ ಕೊಡಬಹುದು.ಕೊತ್ತುಂಬರಿಸೊಪ್ಪಿನ ಚಟ್ನಿಯೂ ಹೊಂದುತ್ತದೆ. ಈ ಚಟ್ನಿಗೆ ಕೆಲವರು ಗೊಡ್ಡುಖಾರ ಅಂತ ಕರೆಯುತ್ತಾರೆ. ಈ ರಾಗಿರೊಟ್ಟಿ ಮತ್ತು ಗೊಡ್ಡುಖಾರ ಜೊತೆ ತಿಂದರೆ ಗಂಟಲು ನೋವಿಗೆ ಸ್ವಲ್ಪ ಉಪಶಮನ ಸಿಗುತ್ತದೆ.
* ರೊಟ್ಟಿ ತಟ್ಟುವಾಗ ಮತ್ತು ಬೇಯಿಸುವಾಗ ಎಣ್ಣೆ ಹಾಕಿಕೊಳ್ಳಬಹುದು.
* ಕಲೆಸಿಕೊಳ್ಳುವಾಗ ಅನ್ನವನ್ನು ಸಹ ಚೆನ್ನಾಗಿ ಮಿದ್ದು (ಪೇಸ್ಟ್) ಸೇರಿಸಬಹುದು.
ಸಾಮಗ್ರಿಗಳು:
ರಾಗಿಹಿಟ್ಟು - ಎರಡು ಬಟ್ಟಲು
ಗೋಧಿಹಿಟ್ಟು - ನಾಲ್ಕು ಚಮಚ
ಉಪ್ಪು ಸ್ವಲ್ಪ
ಬಿಸಿನೀರು
ವಿಧಾನ:
ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಬೆರೆಸಿ, ಬಿಸಿನೀರು ಹಾಕಿ ರೊಟ್ಟಿಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ.
ಕಿತ್ತಳೆ ಗಾತ್ರದಲ್ಲಿ ಉಂಡೆಗಳನ್ನು ತೆಗೆದುಕೊಂಡು, ರೊಟ್ಟಿ ತಟ್ಟಿ ತವಾ ಮೇಲೆ ಹಾಕಿ ಬೇಯಿಸಿ. ಎರಡು ಬದಿ ಸರಿಯಾಗಿ ಬೇಯಿಸಿ, ರಾಗಿರೊಟ್ಟಿ ತಯಾರಾಗುತ್ತದೆ. ಇದನ್ನು ಚಟ್ನಿಯೊಂದಿಗೆ ಸರ್ವ್ ಮಾಡಿ. ಬೆಣ್ಣೆ ಮತ್ತು ಖಾರಚಟ್ನಿ ಜೊತೆ ಸಹ ಕೊಡಬಹುದು.ಕೊತ್ತುಂಬರಿಸೊಪ್ಪಿನ ಚಟ್ನಿಯೂ ಹೊಂದುತ್ತದೆ. ಈ ಚಟ್ನಿಗೆ ಕೆಲವರು ಗೊಡ್ಡುಖಾರ ಅಂತ ಕರೆಯುತ್ತಾರೆ. ಈ ರಾಗಿರೊಟ್ಟಿ ಮತ್ತು ಗೊಡ್ಡುಖಾರ ಜೊತೆ ತಿಂದರೆ ಗಂಟಲು ನೋವಿಗೆ ಸ್ವಲ್ಪ ಉಪಶಮನ ಸಿಗುತ್ತದೆ.
* ರೊಟ್ಟಿ ತಟ್ಟುವಾಗ ಮತ್ತು ಬೇಯಿಸುವಾಗ ಎಣ್ಣೆ ಹಾಕಿಕೊಳ್ಳಬಹುದು.
* ಕಲೆಸಿಕೊಳ್ಳುವಾಗ ಅನ್ನವನ್ನು ಸಹ ಚೆನ್ನಾಗಿ ಮಿದ್ದು (ಪೇಸ್ಟ್) ಸೇರಿಸಬಹುದು.
Thursday, June 18, 2009
Masala Dose - ಮಸಾಲೆದೋಸೆ;
ಮಸಾಲೆದೋಸೆ:
ಸಾಮಗ್ರಿಗಳು:
ಅಕ್ಕಿ - ಮೂರು ಕಪ್
ಕುಸುಬಲಕ್ಕಿ - ಒಂದು ಕಪ್
ಉದ್ದಿನಬೇಳೆ -ಒಂದು ಕಪ್
ಮೆಂತ್ಯದ ಕಾಳು - ಒಂದು ದೊಡ್ಡ ಚಮಚ
ತೊಗರಿಬೇಳೆ - ಎರಡು ಚಮಚ
ಕಡ್ಲೆಬೇಳೆ -ಎರಡು ಚಮಚ
ವಿಧಾನ;
ದೋಸೆಗೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ನಾಲ್ಕು ಅಥವ ಐದು ಗಂಟೆಗಳ ಕಾಲ ನೆನೆಸಿ,ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಏಳೆಂಟು ಗಂಟೆ ಅಥವಾ ರಾತ್ರಿ ಆಗೇಯೇ ಬಿಡಿ. ಅದು ಮಾರನೆದಿನ ಬೆಳಗ್ಗೆ ಹೊತ್ತಿಗೆ ಹುಳಿ/ಹುಬ್ಬಿ ಬಂದಿರುತ್ತದೆ. ಹೀಗೆ ಹುಳಿ/ಹುದುಗು ಬಂದರೆ ದೋಸೆ ಚೆನ್ನಾಗಿರುತ್ತದೆ. ಬೆಳಗ್ಗೆ ಉಪ್ಪು ಮತ್ತು ಸೋಡ ಸೇರಿಸಿ, ಚೆನ್ನಾಗಿ ಬೆರೆಸಿ ಅರ್ಧ ಗಂಟೆ ಬಿಟ್ಟು ತವಾ ಒಲೆಯ ಮೇಲಿಟ್ಟು,ಕಾಯಿಸಿ,ತುಪ್ಪ / ಎಣ್ಣೆ ಹಾಕಿ ಸವರಿ, ಅದರ ಮೇಲೆ ಒಂದು ಸೌಟು ರುಬ್ಬಿದ ಮಿಶ್ರಣವನ್ನು ಹಾಕಿ ದೋಸೆಯಂತೆ ಮಾಡಿ, ಬೇಯಿಸಿ ತೆಗೆಯಿರಿ.
ತವಾ ಮೇಲೆ ದೋಸೆಯನ್ನು ಮಾಡಿ,ಸ್ವಲ್ಪ ತುಪ್ಪ ಹಾಕಿ ಬೇಯಿಸಿ.ಅದರ ಮಧ್ಯ ಭಾಗದಲ್ಲಿ ಆಲೂಗೆಡ್ಡೆ ಪಲ್ಯವನ್ನು ತುಂಬಿ,ಬೇಕಾದ ಆಕಾರಕ್ಕೆ ಮಡಿಸಿ, ಮೇಲೆ ಬೆಣ್ಣೆಯನ್ನು ಹಾಕಿ ಕೊಡಿ. ಜೊತೆಯಲ್ಲಿ ಸಾಗು ಅಥವಾ ಚಟ್ನಿ ಮತ್ತು ಪಲ್ಯವನ್ನು ನೀಡಿ.
* ದೋಸೆಗೆ ಮೊದಲು ಚಟ್ನಿಯನ್ನು ಸವರಿ ನಂತರ ಪಲ್ಯವನ್ನು ತುಂಬಬಹುದು.
*ಖಾರಚಟ್ನಿ ತಯಾರಿಸಿ ಕೂಡ ಮೊದಲು ಅದನ್ನು ಹಚ್ಚಿ, ಪಲ್ಯವನ್ನು ತುಂಬಿ ಮಸಾಲೆ ದೋಸೆ ತಯಾರಿಸಿ.
ಸಾಮಗ್ರಿಗಳು:
ಅಕ್ಕಿ - ಮೂರು ಕಪ್
ಕುಸುಬಲಕ್ಕಿ - ಒಂದು ಕಪ್
ಉದ್ದಿನಬೇಳೆ -ಒಂದು ಕಪ್
ಮೆಂತ್ಯದ ಕಾಳು - ಒಂದು ದೊಡ್ಡ ಚಮಚ
ತೊಗರಿಬೇಳೆ - ಎರಡು ಚಮಚ
ಕಡ್ಲೆಬೇಳೆ -ಎರಡು ಚಮಚ
ವಿಧಾನ;
ದೋಸೆಗೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ನಾಲ್ಕು ಅಥವ ಐದು ಗಂಟೆಗಳ ಕಾಲ ನೆನೆಸಿ,ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಏಳೆಂಟು ಗಂಟೆ ಅಥವಾ ರಾತ್ರಿ ಆಗೇಯೇ ಬಿಡಿ. ಅದು ಮಾರನೆದಿನ ಬೆಳಗ್ಗೆ ಹೊತ್ತಿಗೆ ಹುಳಿ/ಹುಬ್ಬಿ ಬಂದಿರುತ್ತದೆ. ಹೀಗೆ ಹುಳಿ/ಹುದುಗು ಬಂದರೆ ದೋಸೆ ಚೆನ್ನಾಗಿರುತ್ತದೆ. ಬೆಳಗ್ಗೆ ಉಪ್ಪು ಮತ್ತು ಸೋಡ ಸೇರಿಸಿ, ಚೆನ್ನಾಗಿ ಬೆರೆಸಿ ಅರ್ಧ ಗಂಟೆ ಬಿಟ್ಟು ತವಾ ಒಲೆಯ ಮೇಲಿಟ್ಟು,ಕಾಯಿಸಿ,ತುಪ್ಪ / ಎಣ್ಣೆ ಹಾಕಿ ಸವರಿ, ಅದರ ಮೇಲೆ ಒಂದು ಸೌಟು ರುಬ್ಬಿದ ಮಿಶ್ರಣವನ್ನು ಹಾಕಿ ದೋಸೆಯಂತೆ ಮಾಡಿ, ಬೇಯಿಸಿ ತೆಗೆಯಿರಿ.
ತವಾ ಮೇಲೆ ದೋಸೆಯನ್ನು ಮಾಡಿ,ಸ್ವಲ್ಪ ತುಪ್ಪ ಹಾಕಿ ಬೇಯಿಸಿ.ಅದರ ಮಧ್ಯ ಭಾಗದಲ್ಲಿ ಆಲೂಗೆಡ್ಡೆ ಪಲ್ಯವನ್ನು ತುಂಬಿ,ಬೇಕಾದ ಆಕಾರಕ್ಕೆ ಮಡಿಸಿ, ಮೇಲೆ ಬೆಣ್ಣೆಯನ್ನು ಹಾಕಿ ಕೊಡಿ. ಜೊತೆಯಲ್ಲಿ ಸಾಗು ಅಥವಾ ಚಟ್ನಿ ಮತ್ತು ಪಲ್ಯವನ್ನು ನೀಡಿ.
* ದೋಸೆಗೆ ಮೊದಲು ಚಟ್ನಿಯನ್ನು ಸವರಿ ನಂತರ ಪಲ್ಯವನ್ನು ತುಂಬಬಹುದು.
*ಖಾರಚಟ್ನಿ ತಯಾರಿಸಿ ಕೂಡ ಮೊದಲು ಅದನ್ನು ಹಚ್ಚಿ, ಪಲ್ಯವನ್ನು ತುಂಬಿ ಮಸಾಲೆ ದೋಸೆ ತಯಾರಿಸಿ.
Thursday, June 11, 2009
Coriander leaves Chutney- ಕೊತ್ತುಂಬರಿಸೊಪ್ಪಿನ ಚಟ್ನಿ
ಕೊತ್ತುಂಬರಿಸೊಪ್ಪಿನ ಚಟ್ನಿ:
ಸಾಮಗ್ರಿಗಳು:ಕೊತ್ತುಂಬರಿಸೊಪ್ಪು
ಹಸಿಮೆಣಸಿನಕಾಯಿ
ಹುಣಸೇಹಣ್ಣು ಚೂರು
ಬೆಳ್ಳುಳ್ಳಿ - ನಾಲ್ಕು ಎಸಳು
ಉಪ್ಪು ರುಚಿಗೆ
ವಿಧಾನ:
ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು,ಬೆಳ್ಳುಳ್ಳಿ,ಹುಣಸೇಹಣ್ಣು ಮತ್ತು ಉಪ್ಪು ಸೇರಿಸಿ,ರುಬ್ಬಿಕೊಳ್ಳಿ.
ಇದನ್ನು ಸಹ ಸಲಾಡ್ ಗಳಿಗೆ, ಸೌತೆಕಾಯಿ,ರಾಯತ,ಪಚ್ಚಡಿ ಮುಂತಾದವುಗಳಿಗೆ ಬೇಕಾದಾಗ ಉಪಯೋಗಿಸಬಹುದು.
ಇದು ರಾಗಿರೊಟ್ಟಿಗೆ ತುಂಬಾ ಚೆನ್ನಾಗಿರುತ್ತದೆ.
ಸಾಮಗ್ರಿಗಳು:ಕೊತ್ತುಂಬರಿಸೊಪ್ಪು
ಹಸಿಮೆಣಸಿನಕಾಯಿ
ಹುಣಸೇಹಣ್ಣು ಚೂರು
ಬೆಳ್ಳುಳ್ಳಿ - ನಾಲ್ಕು ಎಸಳು
ಉಪ್ಪು ರುಚಿಗೆ
ವಿಧಾನ:
ಹಸಿಮೆಣಸಿನಕಾಯಿ,ಕೊತ್ತುಂಬರಿಸೊಪ್ಪು,ಬೆಳ್ಳುಳ್ಳಿ,ಹುಣಸೇಹಣ್ಣು ಮತ್ತು ಉಪ್ಪು ಸೇರಿಸಿ,ರುಬ್ಬಿಕೊಳ್ಳಿ.
ಇದನ್ನು ಸಹ ಸಲಾಡ್ ಗಳಿಗೆ, ಸೌತೆಕಾಯಿ,ರಾಯತ,ಪಚ್ಚಡಿ ಮುಂತಾದವುಗಳಿಗೆ ಬೇಕಾದಾಗ ಉಪಯೋಗಿಸಬಹುದು.
ಇದು ರಾಗಿರೊಟ್ಟಿಗೆ ತುಂಬಾ ಚೆನ್ನಾಗಿರುತ್ತದೆ.
Monday, June 1, 2009
Thursday, March 5, 2009
Vangibath - ವಾಂಗೀಭಾತ್:
ವಾಂಗೀಭಾತ್:
ಸಾಮಗ್ರಿಗಳು:
ಬದನೆಕಾಯಿ
ಅನ್ನ- ಎರಡು ಬಟ್ಟಲು
ಉದ್ದಕ್ಕೆ ಹೆಚ್ಚಿದ ಈರುಳ್ಳಿ
ಒಣಮೆಣಸಿನಕಾಯಿ-ರುಚಿಗೆ
ಧನಿಯ-ಎರಡು ಚಮಚ
ಮೆಣಸು-ಸ್ವಲ್ಪ
ಕಡ್ಲೆಬೇಳೆ-ಒಂದು ಚಮಚ
ಉದ್ದಿನಬೇಳೆ-ಅರ್ಧ ಚಮಚ
ಇಂಗು ಸ್ವಲ್ಪ,ಅರಿಶಿನ
ತುಪ್ಪ ಮತ್ತು ಎಣ್ಣೆ, ಸಾಸಿವೆ
ಕರಿಬೇವು,ಇಂಗು ಚಿಟಿಕೆ
ಚೆಕ್ಕೆ,ಲವಂಗ,ಪತ್ರೆ,ಏಲಕ್ಕಿ
ಉಪ್ಪು ರುಚಿಗೆ
ಹುಣಸೇರಸ -ಅರ್ಧಚಮಚ
ಕಾಯಿತುರಿ ಮತ್ತು ಕೊಬ್ಬರಿ ಸ್ವಲ್ಪ
ಕೊತ್ತುಂಬರಿ ಸೊಪ್ಪು
ತಯಾರಿಸುವ ವಿಧಾನ:
ಮೊದಲು ಉದುರುಉದುರಾಗಿ ಅನ್ನ ಮಾಡಿಟ್ಟಿರುವುದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬೆರೆಸಿ,ತಣ್ಣಗಾಗಲು ಬಿಡಿ.
ವಾಂಗೀಭಾತ್ ಮಸಾಲ ಪುಡಿ:
ಒಣಮೆಣಸಿನಕಾಯಿ,ಧನಿಯ,ಮೆಣಸು,ಕಡ್ಲೆಬೇಳೆ,ಉದ್ದಿನಬೇಳೆ ಎಲ್ಲವನ್ನು ಹುರಿದುಕೊಂಡು ಇಂಗು ಮತ್ತು ಕೊಬ್ಬರಿ ತುರಿಯೊಂದಿಗೆ ಸೇರಿಸಿ ಪುಡಿ ಮಾಡಿಟ್ಟುಕೊಳ್ಳಿ.
ಬದನೆಕಾಯಿ ಹೆಚ್ಚಿಕೊಂಡು ಉಪ್ಪು ನೀರಿಗೆ ಹಾಕಿಡಿ.
ಒಂದು ಪಾತ್ರೆಗೆ ಸಾಕಾಷ್ಟು ಎಣ್ಣೆ ಹಾಕಿ,ಅದಕ್ಕೆ ಚೆಕ್ಕೆ,ಲವಂಗ,ಪತ್ರೆ,ಏಲಕ್ಕಿ,ಕರಿಬೇವು,ಇಂಗು ಎಲ್ಲವನ್ನು ಹಾಕಿ ಒಂದು ನಿಮಿಷ ಹುರಿಯಿರಿ.ಈರುಳ್ಳಿಯನ್ನು ಹಾಕಿ,ಒಂದೆರಡು ನಿಮಿಷ ಹುರಿದು,ನಂತರ ಅದಕ್ಕೆ ಬದನೆಕಾಯಿ ಹಾಕಿ,ಅದರಲ್ಲಿಯೇ ಹುರಿಯಿರಿ,ಎಲ್ಲಾ ಬದನೆಕಾಯಿ ಹೋಳುಗಳು ಚೆನ್ನಾಗಿ ಫ್ರೈ ಮಾಡಿಕೊಂಡು,ಅದು ಬೆಂದಿದೆ ಎನಿಸಿದ ಮೇಲೆ,ಅದಕ್ಕೆ ಅರಿಶಿನ,ಹುರಿದು ಪುಡಿ ಮಾಡಿದ ಮಸಾಲೆಯನ್ನು ಮತ್ತು ಹುಣಸೇರಸ ಹಾಕಿ,ಬಾಡಿಸಿ.ಉಪ್ಪು ಹಾಕಿ. ನೀರು ಹಾಕಬಾರದು. ಎಲ್ಲ ಮಸಾಲೆ ಚೆನ್ನಾಗಿ ಬೆರೆಯುವಂತೆ ಕೆದಕುತ್ತಿರಿ. ನಂತರ ಅದನ್ನು ಇಳಿಸಿ. ಎಷ್ಟು ಬೇಕೋ ಅಷ್ಟು ಮಾತ್ರ ಮಸಾಲೆ ತೆಗೆದುಕೊಂಡು ಅನ್ನಕ್ಕೆ ಹಾಕಿ,ಚೆನ್ನಾಗಿ ಕಲೆಸಿ,ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಎಲ್ಲವೂ ಸರಿಯಾಗಿ ಬೆರೆಯುವಂತೆ ಕಲೆಸಿ. ವಾಂಗೀಭಾತ್ ತಯಾರಾಗುತ್ತದೆ. ಇದನ್ನು ರಾಯಿತ/ಚಟ್ನಿ ಜೊತೆ ಸರ್ವ್ ಮಾಡಿ.
* ಬದನೆಕಾಯಿ ಬೇಯಲು ನೀರು ಹಾಕಬಾರದು.
* ಒಗ್ಗರಣೆಗೆ ಎಣ್ಣೆ ಜಾಸ್ತಿ ಹಾಕಿ, ಅದರಲ್ಲಿಯೇ ಬದನೆ ಬೇಯುತ್ತದೆ.
* ಕಲೆಸುವಾಗ ಉಪ್ಪು-ಕಾರ ನೋಡಿಕೊಳ್ಳಿ.
* ತಕ್ಷಣ ತಿನ್ನುವುದಕ್ಕಿಂತ ಸ್ವಲ್ಪ ಹೊತ್ತಿನ ಬಳಿಕ ತಿಂದರೆ ಹೆಚ್ಚು ರುಚಿಯಾಗಿರುತ್ತದೆ. ಇದನ್ನು ತಿಂಡಿ/ಊಟ ಯಾವುದಕ್ಕಾದರೂ ಬಳಸಬಹುದು.
* ವಾಂಗೀಭಾತ್ ಮಸಾಲೆ ಎಷ್ಟು ಬೇಕೋ ಅಷ್ಟು ಮಾತ್ರ ಕಲೆಸಿ, ಮಿಕ್ಕಿದ್ದು ಎತ್ತಿಡಬಹುದು. ಯಾವಾಗ ಬೇಕಾದರೂ ಉಪಯೋಗಿಸಬಹುದು.
ಸಾಮಗ್ರಿಗಳು:
ಬದನೆಕಾಯಿ
ಅನ್ನ- ಎರಡು ಬಟ್ಟಲು
ಉದ್ದಕ್ಕೆ ಹೆಚ್ಚಿದ ಈರುಳ್ಳಿ
ಒಣಮೆಣಸಿನಕಾಯಿ-ರುಚಿಗೆ
ಧನಿಯ-ಎರಡು ಚಮಚ
ಮೆಣಸು-ಸ್ವಲ್ಪ
ಕಡ್ಲೆಬೇಳೆ-ಒಂದು ಚಮಚ
ಉದ್ದಿನಬೇಳೆ-ಅರ್ಧ ಚಮಚ
ಇಂಗು ಸ್ವಲ್ಪ,ಅರಿಶಿನ
ತುಪ್ಪ ಮತ್ತು ಎಣ್ಣೆ, ಸಾಸಿವೆ
ಕರಿಬೇವು,ಇಂಗು ಚಿಟಿಕೆ
ಚೆಕ್ಕೆ,ಲವಂಗ,ಪತ್ರೆ,ಏಲಕ್ಕಿ
ಉಪ್ಪು ರುಚಿಗೆ
ಹುಣಸೇರಸ -ಅರ್ಧಚಮಚ
ಕಾಯಿತುರಿ ಮತ್ತು ಕೊಬ್ಬರಿ ಸ್ವಲ್ಪ
ಕೊತ್ತುಂಬರಿ ಸೊಪ್ಪು
ತಯಾರಿಸುವ ವಿಧಾನ:
ಮೊದಲು ಉದುರುಉದುರಾಗಿ ಅನ್ನ ಮಾಡಿಟ್ಟಿರುವುದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬೆರೆಸಿ,ತಣ್ಣಗಾಗಲು ಬಿಡಿ.
ವಾಂಗೀಭಾತ್ ಮಸಾಲ ಪುಡಿ:
ಒಣಮೆಣಸಿನಕಾಯಿ,ಧನಿಯ,ಮೆಣಸು,ಕಡ್ಲೆಬೇಳೆ,ಉದ್ದಿನಬೇಳೆ ಎಲ್ಲವನ್ನು ಹುರಿದುಕೊಂಡು ಇಂಗು ಮತ್ತು ಕೊಬ್ಬರಿ ತುರಿಯೊಂದಿಗೆ ಸೇರಿಸಿ ಪುಡಿ ಮಾಡಿಟ್ಟುಕೊಳ್ಳಿ.
ಬದನೆಕಾಯಿ ಹೆಚ್ಚಿಕೊಂಡು ಉಪ್ಪು ನೀರಿಗೆ ಹಾಕಿಡಿ.
ಒಂದು ಪಾತ್ರೆಗೆ ಸಾಕಾಷ್ಟು ಎಣ್ಣೆ ಹಾಕಿ,ಅದಕ್ಕೆ ಚೆಕ್ಕೆ,ಲವಂಗ,ಪತ್ರೆ,ಏಲಕ್ಕಿ,ಕರಿಬೇವು,ಇಂಗು ಎಲ್ಲವನ್ನು ಹಾಕಿ ಒಂದು ನಿಮಿಷ ಹುರಿಯಿರಿ.ಈರುಳ್ಳಿಯನ್ನು ಹಾಕಿ,ಒಂದೆರಡು ನಿಮಿಷ ಹುರಿದು,ನಂತರ ಅದಕ್ಕೆ ಬದನೆಕಾಯಿ ಹಾಕಿ,ಅದರಲ್ಲಿಯೇ ಹುರಿಯಿರಿ,ಎಲ್ಲಾ ಬದನೆಕಾಯಿ ಹೋಳುಗಳು ಚೆನ್ನಾಗಿ ಫ್ರೈ ಮಾಡಿಕೊಂಡು,ಅದು ಬೆಂದಿದೆ ಎನಿಸಿದ ಮೇಲೆ,ಅದಕ್ಕೆ ಅರಿಶಿನ,ಹುರಿದು ಪುಡಿ ಮಾಡಿದ ಮಸಾಲೆಯನ್ನು ಮತ್ತು ಹುಣಸೇರಸ ಹಾಕಿ,ಬಾಡಿಸಿ.ಉಪ್ಪು ಹಾಕಿ. ನೀರು ಹಾಕಬಾರದು. ಎಲ್ಲ ಮಸಾಲೆ ಚೆನ್ನಾಗಿ ಬೆರೆಯುವಂತೆ ಕೆದಕುತ್ತಿರಿ. ನಂತರ ಅದನ್ನು ಇಳಿಸಿ. ಎಷ್ಟು ಬೇಕೋ ಅಷ್ಟು ಮಾತ್ರ ಮಸಾಲೆ ತೆಗೆದುಕೊಂಡು ಅನ್ನಕ್ಕೆ ಹಾಕಿ,ಚೆನ್ನಾಗಿ ಕಲೆಸಿ,ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಎಲ್ಲವೂ ಸರಿಯಾಗಿ ಬೆರೆಯುವಂತೆ ಕಲೆಸಿ. ವಾಂಗೀಭಾತ್ ತಯಾರಾಗುತ್ತದೆ. ಇದನ್ನು ರಾಯಿತ/ಚಟ್ನಿ ಜೊತೆ ಸರ್ವ್ ಮಾಡಿ.
* ಬದನೆಕಾಯಿ ಬೇಯಲು ನೀರು ಹಾಕಬಾರದು.
* ಒಗ್ಗರಣೆಗೆ ಎಣ್ಣೆ ಜಾಸ್ತಿ ಹಾಕಿ, ಅದರಲ್ಲಿಯೇ ಬದನೆ ಬೇಯುತ್ತದೆ.
* ಕಲೆಸುವಾಗ ಉಪ್ಪು-ಕಾರ ನೋಡಿಕೊಳ್ಳಿ.
* ತಕ್ಷಣ ತಿನ್ನುವುದಕ್ಕಿಂತ ಸ್ವಲ್ಪ ಹೊತ್ತಿನ ಬಳಿಕ ತಿಂದರೆ ಹೆಚ್ಚು ರುಚಿಯಾಗಿರುತ್ತದೆ. ಇದನ್ನು ತಿಂಡಿ/ಊಟ ಯಾವುದಕ್ಕಾದರೂ ಬಳಸಬಹುದು.
* ವಾಂಗೀಭಾತ್ ಮಸಾಲೆ ಎಷ್ಟು ಬೇಕೋ ಅಷ್ಟು ಮಾತ್ರ ಕಲೆಸಿ, ಮಿಕ್ಕಿದ್ದು ಎತ್ತಿಡಬಹುದು. ಯಾವಾಗ ಬೇಕಾದರೂ ಉಪಯೋಗಿಸಬಹುದು.
Tuesday, February 10, 2009
Bread Uppittu-ಬ್ರೆಡ್ ಉಪ್ಪಿಟ್ಟು:
ಬ್ರೆಡ್ ಉಪ್ಪಿಟ್ಟು:
ಸಾಮಗ್ರಿಗಳು:
ಬ್ರೆಡ್
ಈರುಳ್ಳಿ
ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು
ಉದ್ದಿನಬೇಳೆ, ಕಡ್ಲೆಬೇಳೆ
ಟಮೋಟ ಹಣ್ಣು
ಉಪ್ಪು ರುಚಿಗೆ
ನಿಂಬೆರಸ
ಕೊತ್ತುಂಬರಿಸೊಪ್ಪು
ಕಾಯಿತುರಿ
ವಿಧಾನ:
ಬ್ರೆಡ್ ಅನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿಕೊಳ್ಳಿ.
ಪಾತ್ರೆಗೆ ಎಣ್ಣೆ ಹಾಕಿ,ಕಾದ ಬಳಿಕ ಸಾಸಿವೆ,ಜೀರಿಗೆ,ಕಡ್ಲೆಬೇಳೆ,ಉದ್ದಿನಬೇಳೆ,ಕರಿಬೇವು ಹಾಕಿ,ನಂತರ ಹೆಚ್ಚಿದ ಈರುಳ್ಳಿ,ಹಸಿಮೆಣಸಿನಕಾಯಿ ಹಾಕಿ, ಮೂರ್ನಾಲ್ಕು ನಿಮಿಷ ಬಾಡಿಸಿ. ಈರುಳ್ಳಿಯ ಬಣ್ಣ ಸ್ವಲ್ಪ ಬದಲಾದ ನಂತರ ಹೆಚ್ಚಿದ ಟಮೋಟ ಹಾಕಿ, ಒಂದೆರಡು ನಿಮಿಷ ಹುರಿದು,ಉಪ್ಪು,ನಿಂಬೆರಸ, ಸ್ವಲ್ಪ ಕೊತ್ತುಂಬರಿಸೊಪ್ಪು ಹಾಕಿ,ಜೊತೆಯಲ್ಲಿಯೇ ಬ್ರೆಡ್ ಚೂರುಗಳನ್ನು ಹಾಕಿ,ಎಲ್ಲಾ ಒಗ್ಗರಣೆ ಬೆರೆಯುವಂತೆ ಸರಿಯಾಗಿ ಬೆರೆಸಿ. ಕಾಯಿತುರಿ ಸಹ ಬೆರೆಸಿ. ಇಳಿಸಿ.ಇದು ಬ್ರೆಡ್ ಇದ್ದ ತಕ್ಷಣ ತಯಾರಿಸಬಹುದು. ಬೇಗ ಆಗುತ್ತದೆ ಮತ್ತು ಸರಳವಾಗಿಯೂ ಇದೆ. ಬ್ರೆಡ್ ಉಪ್ಪಿಟ್ಟು ತಯಾರಿಸದ ತಕ್ಷಣ ತಿನ್ನಬೇಕು. ಇಲ್ಲ ಅಂದರೆ ಒಂಥರ ಮೆತ್ತಗೆ ಆಗುತ್ತದೆ ಬೇಗ. ಆಗ ತಿನ್ನಲು ರುಚಿ ಅಷ್ಟಾಗಿ ಚೆನ್ನಾಗಿರುವುದಿಲ್ಲ.
ಸಾಮಗ್ರಿಗಳು:
ಬ್ರೆಡ್
ಈರುಳ್ಳಿ
ಹಸಿಮೆಣಸಿನಕಾಯಿ
ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು
ಉದ್ದಿನಬೇಳೆ, ಕಡ್ಲೆಬೇಳೆ
ಟಮೋಟ ಹಣ್ಣು
ಉಪ್ಪು ರುಚಿಗೆ
ನಿಂಬೆರಸ
ಕೊತ್ತುಂಬರಿಸೊಪ್ಪು
ಕಾಯಿತುರಿ
ವಿಧಾನ:
ಬ್ರೆಡ್ ಅನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿಕೊಳ್ಳಿ.
ಪಾತ್ರೆಗೆ ಎಣ್ಣೆ ಹಾಕಿ,ಕಾದ ಬಳಿಕ ಸಾಸಿವೆ,ಜೀರಿಗೆ,ಕಡ್ಲೆಬೇಳೆ,ಉದ್ದಿನಬೇಳೆ,ಕರಿಬೇವು ಹಾಕಿ,ನಂತರ ಹೆಚ್ಚಿದ ಈರುಳ್ಳಿ,ಹಸಿಮೆಣಸಿನಕಾಯಿ ಹಾಕಿ, ಮೂರ್ನಾಲ್ಕು ನಿಮಿಷ ಬಾಡಿಸಿ. ಈರುಳ್ಳಿಯ ಬಣ್ಣ ಸ್ವಲ್ಪ ಬದಲಾದ ನಂತರ ಹೆಚ್ಚಿದ ಟಮೋಟ ಹಾಕಿ, ಒಂದೆರಡು ನಿಮಿಷ ಹುರಿದು,ಉಪ್ಪು,ನಿಂಬೆರಸ, ಸ್ವಲ್ಪ ಕೊತ್ತುಂಬರಿಸೊಪ್ಪು ಹಾಕಿ,ಜೊತೆಯಲ್ಲಿಯೇ ಬ್ರೆಡ್ ಚೂರುಗಳನ್ನು ಹಾಕಿ,ಎಲ್ಲಾ ಒಗ್ಗರಣೆ ಬೆರೆಯುವಂತೆ ಸರಿಯಾಗಿ ಬೆರೆಸಿ. ಕಾಯಿತುರಿ ಸಹ ಬೆರೆಸಿ. ಇಳಿಸಿ.ಇದು ಬ್ರೆಡ್ ಇದ್ದ ತಕ್ಷಣ ತಯಾರಿಸಬಹುದು. ಬೇಗ ಆಗುತ್ತದೆ ಮತ್ತು ಸರಳವಾಗಿಯೂ ಇದೆ. ಬ್ರೆಡ್ ಉಪ್ಪಿಟ್ಟು ತಯಾರಿಸದ ತಕ್ಷಣ ತಿನ್ನಬೇಕು. ಇಲ್ಲ ಅಂದರೆ ಒಂಥರ ಮೆತ್ತಗೆ ಆಗುತ್ತದೆ ಬೇಗ. ಆಗ ತಿನ್ನಲು ರುಚಿ ಅಷ್ಟಾಗಿ ಚೆನ್ನಾಗಿರುವುದಿಲ್ಲ.
Thursday, January 29, 2009
Idli- Samabar / ಇಡ್ಲಿ - ಸಾಂಬಾರ್
ಇಡ್ಲಿ ಮತ್ತು ವಡೆ ಸಾಂಬಾರ್ ಸಾಮಾನ್ಯವಾಗಿ ನಮ್ಮ ದಕ್ಷಿಣ ಭಾರತದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಇಡ್ಲಿ ಯಾವ ಕಾಲದಲ್ಲಿಯಾಗಲಿ,ಯಾರೇ ಆಗಲಿ ತಿನ್ನಬಹುದಾದಂತ,ಆರೋಗ್ಯಕರವಾದಂತ ಉತ್ತಮ ತಿಂಡಿಯಾಗಿದೆ.
ನಮ್ಮ ಅಜ್ಜಿ ಮಿಕ್ಸಿ ಇದ್ದರೂ ಸಹ ಒರಳು ಕಲ್ಲಿನಲ್ಲಿ ಹಿಟ್ಟನ್ನು ರುಬ್ಬುತ್ತಿದ್ದರು,ಅವರು ತಯಾರಿಸುತ್ತಿದ್ದ ಇಡ್ಲಿ ಅಥವಾ ದೋಸೆಗಳ ರುಚಿಯಂತೂ ಈಗಲೂ ಮರೆಯಲು ಸಾಧ್ಯವಿಲ್ಲ. ಅದೆಷ್ಟು ಚೆನ್ನಾಗಿ ಹದವಾಗಿ,ರುಬ್ಬಿ ತಯಾರಿಸುತ್ತಿದ್ದರು. ಈಗ ನಾವುಗಳು ಸೋಮಾರಿಗಳಂತೆ ಅದೇನೋ ಗ್ರೈಂಡರ್ ಮತ್ತು ಮಿಕ್ಸಿ ಅಂತ ಉಪಯೋಗಿಸುತ್ತ ಇರುತ್ತೇವೆ. ಇದು ಸಾಲದೆಂದು ರೆಡಿಮೇಡ್ ರವೆ ಅಂತ ಬೇರೆ ತಂದು ಉಪಯೋಗಿಸುತ್ತೇವೆ. ಅದಂತೂ ಇದ್ದಿದ್ದು ಕೆಲಸ ಕಮ್ಮಿ. ಇಡ್ಲಿಯಲ್ಲಿ ಈಗಂತೂ ಬಹಳ ತರವಾಗಿ,ವಿವಿಧವಾಗಿ ತಯಾರಿಸುತ್ತೇವೆ. ಕೆಲವು ಸಾರಿ ಇಡ್ಲಿ -ಸಾಂಬಾರ್ ಜೊತೆ ರುಚಿ ಎನಿಸಿದರೆ,ಕೆಲವೊಮ್ಮೆ ಕಾಯಿಚಟ್ನಿ ಮತ್ತು ಸಿಹಿ ಚಟ್ನಿಯೊಂದಿಗೂ ಹಾಗು ಕೆಂಪು ಚಟ್ನಿಯೊಂದಿಗೂ ತುಂಬಾ ರುಚಿಯಾಗಿರುತ್ತದೆ.ಎಲ್ಲಕ್ಕಿಂತ ಹೆಚ್ಚಿನ ರುಚಿ ಸಾಂಬಾರ್ ಜೊತೆ ಮಾತ್ರ. ಆಗ ಕೈನಲ್ಲಿ ರುಬ್ಬುತ್ತಿದ್ದು ಮಾಡುತ್ತಿದ್ದ ಅಡುಗೆಗಳ ರುಚಿನೇ ರುಚಿ.ಇಲ್ಲಿ ಈಗ ಮಾಮುಲಿ ಇಡ್ಲಿ ಮತ್ತು ಸಾಂಬಾರ್ ತಯಾರಿಸುವ ವಿಧಾನವನ್ನು ತಿಳಿಯೋಣ.
ಇಡ್ಲಿ:
ಬೇಕಾಗುವ ಸಾಮಗ್ರಿಗಳು:
ಅಕ್ಕಿ - ಮೂರು ಕಪ್
ಕುಸುಬಲಕ್ಕಿ (ಬಾಯಲ್ಡ್ ರೈಸ್)- ಒಂದು ಕಪ್
ಉದ್ದಿನಬೇಳೆ - ಒಂದು ಕಪ್
ಅವಲಕ್ಕಿ, ಸಬ್ಬಕ್ಕಿ - ಒಂದೊಂದು ಚಮಚ
ಮೆಂತ್ಯಕಾಳು - ಒಂದು ದೊಡ್ಡ ಚಮಚ
ಉಪ್ಪು
ತಯಾರಿಸುವ ರೀತಿ:
ಅಕ್ಕಿ + ಮೆಂತ್ಯ ಮತ್ತು ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು,ಬೇರೆ ಬೇರೆಯಾಗಿ ಐದರಿಂದ ಆರು ಗಂಟೆಗಳವರೆಗೂ ನೆನೆಸಿಡಿ. ನಂತರ ಉದ್ದಿನಬೇಳೆಯನ್ನು ಚೆನ್ನಾಗಿ ಹುದುಗು ಬರುವಂತೆ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ. ಅದರ ಜೊತೆಗೆ ಅಕ್ಕಿಯನ್ನು ಬೆರೆಸಿ ಅಗತ್ಯವಿದ್ದಷ್ಟು ನೀರು ಹಾಕಿ ರುಬ್ಬಿಕೊಳ್ಳಿ.ಅವಲಕ್ಕಿ ಮತ್ತು ಸಬ್ಬಕ್ಕಿಯನ್ನು ಹಾಕುವುದಾದರೆ, ಅವಲಕ್ಕಿಯನ್ನು ಮತ್ತು ಸಬ್ಬಕ್ಕಿಯನ್ನು ನೆನೆಸಿಟ್ಟು( ಅರ್ಧ ಗಂಟೆ),ಅಕ್ಕಿಯೊಂದಿಗೆ ರುಬ್ಬುವಾಗ ಹಾಕಿ, ರುಬ್ಬಿಕೊಳ್ಳಿ. ಅಕ್ಕಿಯೂ ಸ್ವಲ್ಪ ಕೈಗೆ ತರಿತರಿಯಾಗಿ ಸಿಗುವಂತೆ ರುಬ್ಬಿ. ಮುಚ್ಚಿಡಿ.ರಾತ್ರಿಯೆಲ್ಲಾ ಅದೇರೀತಿ ಇದ್ದಾಗ,ಅದು ಹಿಟ್ಟು ಬೆಳಗ್ಗೆ ಹುದುಗು/ಹುಳಿ/ಉಬ್ಬಿ ಬಂದಿರುತ್ತದೆ. ಮಾರನೇದಿನ ಹುದುಗು ಬಂದ ಹಿಟ್ಟಿಗೆ ರುಚಿಗೆ ಸ್ವಲ್ಪ ಉಪ್ಪು ಬೆರೆಸಿ,ತುಂಬಾ ಜೋರಾಗಿ
ತಿರುಗಿಸದೇ ಹಗುರವಾಗಿ ತಿರುಗಿಸಿ. ಈ ಹಿಟ್ಟನ್ನು ಇಡ್ಲಿಯ ತಟ್ಟೆ/ಪಾತ್ರೆ/ ಮೋಲ್ಡ್ ಗಳಿಗೆ ಹಾಕಿ ಹಬೆಯಲ್ಲಿ ಏಳೆಂಟು ನಿಮಿಷಗಳವರೆಗೆ ಬೇಯಿಸಿ. ತೆಗೆಯಿರಿ. ಇಡ್ಲಿಯನ್ನು ಸಾಂಬಾರ್ ಮತ್ತು ಚಟ್ನಿಯೊಂದಿಗೆ ಸವಿಯಲು ನೀಡಿ.
ಸಾಂಬಾರ್: (ಇಡ್ಲಿ ಸಾಂಬಾರ್)
ಬೇಕಾಗುವ ಸಾಮಗ್ರಿಗಳು:
ಇದೆಲ್ಲವೂ ಸಾಂಬಾರ್ ಗಾಗಿ ಮಸಾಲೆಪುಡಿ ಮಾಡಿಕೊಳ್ಳಲು:-
ಒಣಮೆಣಸಿನಕಾಯಿ ರುಚಿಗೆ
ಮೆಣಸು - ಒಂದು ಚಮಚ
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದುವರೆ ಚಮಚ
ಮೆಂತ್ಯ- ಕಾಲು ಚಮಚ
ಜೀರಿಗೆ - ಎರಡು ಚಮಚ
ಧನಿಯ - ನಾಲ್ಕು ಚಮಚ
ಚೆಕ್ಕೆ- ಒಂದು ಸಣ್ಣ ಚೂರು
ಲವಂಗ - ಎರಡು
ಮೊಗ್ಗು - ಒಂದು ಚಿಕ್ಕದು
ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಹುರಿದುಕೊಂಡು,ಪುಡಿ ಮಾಡಿಕೊಳ್ಳಿ,ಆ ಪುಡಿಗೆ ಸ್ವಲ್ಪ ಕೊಬ್ಬರಿ ತುರಿಯನ್ನು ಸೇರಿಸಿ ಮತ್ತೆ ನುಣ್ಣಗೆ ಪುಡಿ ಮಾಡಿಕೊಳ್ಳಿ.
ಬೇಯಿಸಲು ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ- ಒಂದು ಬಟ್ಟಲು / ನಿಮಗೆ ಬೇಕಾಗುವಷ್ಟು
ತರಕಾರಿ - ಇಷ್ಟವೆನಿಸಿದರೆ ಹಾಕಬಹುದು, ಹಾಕುವುದಾದರೆ-
ಆಲೂಗೆಡ್ಡೆ, ಕ್ಯಾರೆಟ್ ,ಬೀನ್ಸ್ ಮತ್ತು ಬದನೆಕಾಯಿ - ಇದು ಹೆಚ್ಚಿದ್ದು ಎಲ್ಲಾ ಸೇರಿ ಒಂದು ಬಟ್ಟಲು
ಟಮೋಟ ಹಣ್ಣು - ಹೆಚ್ಚಿದ್ದು ಸ್ವಲ್ಪ
ಸಾಂಬಾರ್ ಈರುಳ್ಳಿ - ಹತ್ತು - ಹನ್ನರೆಡು ಇದ್ದರೆ,(ಹಾಕಲೇಬೇಕು ಅಂತ ಕಡ್ಡಾಯವಿಲ್ಲ)
-ಮಾಮುಲಿ ಈರುಳ್ಳಿಯನ್ನು ದಪ್ಪವಾಗಿ ಕತ್ತರಿಸಿ ಹಾಕಬಹುದು
ಪಾಲಕ್ ಸೊಪ್ಪಿನ ಎಲೆಗಳು - ಹತ್ತು ( ಬೇಕಾದರೆ)- ಇದನ್ನು ಹಾಕಿದರೆ ರುಚಿ ಇನ್ನು ಹೆಚ್ಚುತ್ತದೆ.
ಅರಿಸಿನ - ಒಂದು ಚಮಚ
ಎಣ್ಣೆ - ಎರಡು ಚಮಚ
ಬೆಲ್ಲ - ಒಂದು ದಪ್ಪ ಗೋಲಿ ಗಾತ್ರದ್ದು
ಹುಣಸೇಹಣ್ಣಿನ ರಸ/ಪೇಸ್ಟ್ - ಒಂದು ದೊಡ್ಡ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ತಯಾರಿಸುವ ರೀತಿ:
ತೊಗರಿಬೇಳೆಯನ್ನು ಅರಿಸಿನ ಮತ್ತು ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು,ಅದಕ್ಕೆ ಹೆಚ್ಚಿದ ಎಲ್ಲಾ ತರಕಾರಿಗಳನ್ನು,ಟಮೋಟ,ಹೆಚ್ಚಿದ ಪಾಲಕ್ ಎಲೆಗಳು ಮತ್ತು ಈರುಳ್ಳಿ ಎಲ್ಲವನ್ನು ಹಾಕಿ ಮತ್ತೆ ಸ್ವಲ್ಪ ಬೇಯಿಸಿ. ತರಕಾರಿಗಳು ಬೆಂದಿದೆ ಎನಿಸಿದ ತಕ್ಷಣ ಮಸಾಲೆ ಪುಡಿಯನ್ನು ಹಾಕಿ,ಪುಡಿ ಮಾಡಿದ್ದೆಲ್ಲಾ ಪೂರ್ತಿ ಹಾಕದೇ ರುಚಿಗೆ ನೋಡಿಕೊಂಡು ಹಾಕಿ,ಕುದಿಯುವಾಗ ಹುಣಸೇಹಣ್ಣಿನ ರಸ,ಬೆಲ್ಲ ಮತ್ತು ಉಪ್ಪು ಹಾಕಿ,ಎಲ್ಲ ಚೆನ್ನಾಗಿ ಕುದಿಸಿ,ತಿರುಗಿಸುತ್ತಿರಿ. ಇದಕ್ಕೆ ಒಗ್ಗರಣೆ ಬೆರೆಸಿ,ಇಳಿಸಿ.
ರುಚಿ-ರುಚಿಯಾದ ಸಾಂಬಾರ್ ತಯಾರಾಗುತ್ತದೆ.
ಒಗ್ಗರಣೆಗೆ -
ಎಣ್ಣೆ - ನಾಲ್ಕು ಚಮಚ
ತುಪ್ಪ - ಒಂದು/ಎರಡು ಚಮಚ
ಸಾಸಿವೆ
ಜೀರಿಗೆ
ಇಂಗು
ಕರಿಬೇವು
ಗೋಡಂಬಿ (ಬೇಕಾದರೆ)
ಎಣ್ಣೆ ಮತ್ತು ತುಪ್ಪವನ್ನು ಕಾಯಿಸಿ, ಸಾಸಿವೆ,ಜೀರಿಗೆ,ಇಂಗು,ಕರಿಬೇವು ಮತ್ತು ಗೋಡಂಬಿಯನ್ನು ಹಾಕಿ ಇಳಿಸಿ. ಈ ಒಗ್ಗರಣೆಯನ್ನು ಮೇಲೆ ತಿಳಿಸಿರುವ ಸಾಂಬಾರ್ ನಲ್ಲಿ ಹಾಕಿ ಬೆರೆಸಿ.
ನಂತರ ಬಿಸಿ-ಬಿಸಿಯಾಗಿ ತಯಾರಿಸಿದ ಇಡ್ಲಿಯೊಂದಿಗೆ ಈ ಸಾಂಬಾರ್ ಅನ್ನು ತಿನ್ನಲು ನೀಡಿ.
ಆರೋಗ್ಯಕ್ಕೆ ಉತ್ತಮವಾಗಿರುವ ಇಡ್ಲಿ ಮತ್ತು ಸಾಂಬಾರ್ ರೆಡಿ.
-------
* ಸಾಂಬಾರ್ ತಯಾರಿಸುವಾಗ ಹುರಿದುಕೊಳ್ಳುವ ಸಾಮಗ್ರಿಗಳನ್ನು ಹುರಿಯುವಾಗ ಸೀದಿಸಬೇಡಿ, ಹದವಾಗಿ ಹುರಿಯಿರಿ.
* ಇಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಯ ಅಗತ್ಯವಿಲ್ಲ
* ಈ ಸಾಂಬಾರ್ ಇಡ್ಲಿಗೆ ಹೆಚ್ಚು ರುಚಿಕೊಡುತ್ತದೆ.
* ಸಾಂಬಾರ್ ತಯಾರಿಸಲು, ನಿಮಗೆ ಬೇಕಾದ ತರಕಾರಿಗಳನ್ನು ಮಾತ್ರ ಹಾಕಿಕೊಳ್ಳಬಹುದು, ಎಲ್ಲವನ್ನು ಹಾಕಲೇಬೇಕು ಅಂತ ಕಡ್ಡಾಯವಿಲ್ಲ. ಏನೇ ಹಾಕಲಿ,ಹೇಗೆ ಹಾಕಲಿ,ರುಚಿಯಾಗಿ ಸಾಂಬಾರ್ ತಯಾರಿಸುವ ರೀತಿ ನಿಮ್ಮ ಕೈನಲ್ಲಿದೆ.
* ಮಕ್ಕಳಿಗಂತೂ ಚಟ್ನಿಗಿಂತ ಸಾಂಬಾರ್ ಜೊತೆ ಇಡ್ಲಿ ತಿನ್ನುವುದೇ ಬಹಳ ಖುಷಿ. ಚಟ್ನಿ ಕೆಲವು ಮಕ್ಕಳಿಗೆ ಮಾತ್ರ ಇಷ್ಟವಾಗುತ್ತದೆ. ನನ್ನ ಅಮ್ಮ ಕೂಡ ತುಂಬಾ ಚೆನ್ನಾಗಿ ಸಾಂಬಾರ್ ತಯಾರಿಸುತ್ತಿದ್ದರು. ಅದನ್ನು ನೋಡಿಯೇ ನಾನು ಸಹ ತಯಾರಿಸುವುದು. ಅವರ ಕೈ ರುಚಿಯೇ ಒಂದು ರೀತಿ ಚೆಂದ.
* ಇಡ್ಲಿಯ ಹಿಟ್ಟು ದೋಸೆ ಹಿಟ್ಟಿಗಿಂತ ಗಟ್ಟಿಯಿರಲಿ. ಹಿಟ್ಟು ರುಬ್ಬಿಟ್ಟು ಮಾರನೇದಿನ ಅಥವಾ ಏಳೆಂಟು ಗಂಟೆಗಳ ನಂತರ ಇಡ್ಲಿಯನ್ನು ತಯಾರಿಸಿ. ಹಿಟ್ಟು ಹುದುಗು ಬಂದಿದ್ದರೆ ಮಾತ್ರ ಇಡ್ಲಿಗಳು ಚೆನ್ನಾಗಿ ಬರುತ್ತವೆ.
ನಮ್ಮ ಅಜ್ಜಿ ಮಿಕ್ಸಿ ಇದ್ದರೂ ಸಹ ಒರಳು ಕಲ್ಲಿನಲ್ಲಿ ಹಿಟ್ಟನ್ನು ರುಬ್ಬುತ್ತಿದ್ದರು,ಅವರು ತಯಾರಿಸುತ್ತಿದ್ದ ಇಡ್ಲಿ ಅಥವಾ ದೋಸೆಗಳ ರುಚಿಯಂತೂ ಈಗಲೂ ಮರೆಯಲು ಸಾಧ್ಯವಿಲ್ಲ. ಅದೆಷ್ಟು ಚೆನ್ನಾಗಿ ಹದವಾಗಿ,ರುಬ್ಬಿ ತಯಾರಿಸುತ್ತಿದ್ದರು. ಈಗ ನಾವುಗಳು ಸೋಮಾರಿಗಳಂತೆ ಅದೇನೋ ಗ್ರೈಂಡರ್ ಮತ್ತು ಮಿಕ್ಸಿ ಅಂತ ಉಪಯೋಗಿಸುತ್ತ ಇರುತ್ತೇವೆ. ಇದು ಸಾಲದೆಂದು ರೆಡಿಮೇಡ್ ರವೆ ಅಂತ ಬೇರೆ ತಂದು ಉಪಯೋಗಿಸುತ್ತೇವೆ. ಅದಂತೂ ಇದ್ದಿದ್ದು ಕೆಲಸ ಕಮ್ಮಿ. ಇಡ್ಲಿಯಲ್ಲಿ ಈಗಂತೂ ಬಹಳ ತರವಾಗಿ,ವಿವಿಧವಾಗಿ ತಯಾರಿಸುತ್ತೇವೆ. ಕೆಲವು ಸಾರಿ ಇಡ್ಲಿ -ಸಾಂಬಾರ್ ಜೊತೆ ರುಚಿ ಎನಿಸಿದರೆ,ಕೆಲವೊಮ್ಮೆ ಕಾಯಿಚಟ್ನಿ ಮತ್ತು ಸಿಹಿ ಚಟ್ನಿಯೊಂದಿಗೂ ಹಾಗು ಕೆಂಪು ಚಟ್ನಿಯೊಂದಿಗೂ ತುಂಬಾ ರುಚಿಯಾಗಿರುತ್ತದೆ.ಎಲ್ಲಕ್ಕಿಂತ ಹೆಚ್ಚಿನ ರುಚಿ ಸಾಂಬಾರ್ ಜೊತೆ ಮಾತ್ರ. ಆಗ ಕೈನಲ್ಲಿ ರುಬ್ಬುತ್ತಿದ್ದು ಮಾಡುತ್ತಿದ್ದ ಅಡುಗೆಗಳ ರುಚಿನೇ ರುಚಿ.ಇಲ್ಲಿ ಈಗ ಮಾಮುಲಿ ಇಡ್ಲಿ ಮತ್ತು ಸಾಂಬಾರ್ ತಯಾರಿಸುವ ವಿಧಾನವನ್ನು ತಿಳಿಯೋಣ.
ಇಡ್ಲಿ:
ಬೇಕಾಗುವ ಸಾಮಗ್ರಿಗಳು:
ಅಕ್ಕಿ - ಮೂರು ಕಪ್
ಕುಸುಬಲಕ್ಕಿ (ಬಾಯಲ್ಡ್ ರೈಸ್)- ಒಂದು ಕಪ್
ಉದ್ದಿನಬೇಳೆ - ಒಂದು ಕಪ್
ಅವಲಕ್ಕಿ, ಸಬ್ಬಕ್ಕಿ - ಒಂದೊಂದು ಚಮಚ
ಮೆಂತ್ಯಕಾಳು - ಒಂದು ದೊಡ್ಡ ಚಮಚ
ಉಪ್ಪು
ತಯಾರಿಸುವ ರೀತಿ:
ಅಕ್ಕಿ + ಮೆಂತ್ಯ ಮತ್ತು ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು,ಬೇರೆ ಬೇರೆಯಾಗಿ ಐದರಿಂದ ಆರು ಗಂಟೆಗಳವರೆಗೂ ನೆನೆಸಿಡಿ. ನಂತರ ಉದ್ದಿನಬೇಳೆಯನ್ನು ಚೆನ್ನಾಗಿ ಹುದುಗು ಬರುವಂತೆ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ. ಅದರ ಜೊತೆಗೆ ಅಕ್ಕಿಯನ್ನು ಬೆರೆಸಿ ಅಗತ್ಯವಿದ್ದಷ್ಟು ನೀರು ಹಾಕಿ ರುಬ್ಬಿಕೊಳ್ಳಿ.ಅವಲಕ್ಕಿ ಮತ್ತು ಸಬ್ಬಕ್ಕಿಯನ್ನು ಹಾಕುವುದಾದರೆ, ಅವಲಕ್ಕಿಯನ್ನು ಮತ್ತು ಸಬ್ಬಕ್ಕಿಯನ್ನು ನೆನೆಸಿಟ್ಟು( ಅರ್ಧ ಗಂಟೆ),ಅಕ್ಕಿಯೊಂದಿಗೆ ರುಬ್ಬುವಾಗ ಹಾಕಿ, ರುಬ್ಬಿಕೊಳ್ಳಿ. ಅಕ್ಕಿಯೂ ಸ್ವಲ್ಪ ಕೈಗೆ ತರಿತರಿಯಾಗಿ ಸಿಗುವಂತೆ ರುಬ್ಬಿ. ಮುಚ್ಚಿಡಿ.ರಾತ್ರಿಯೆಲ್ಲಾ ಅದೇರೀತಿ ಇದ್ದಾಗ,ಅದು ಹಿಟ್ಟು ಬೆಳಗ್ಗೆ ಹುದುಗು/ಹುಳಿ/ಉಬ್ಬಿ ಬಂದಿರುತ್ತದೆ. ಮಾರನೇದಿನ ಹುದುಗು ಬಂದ ಹಿಟ್ಟಿಗೆ ರುಚಿಗೆ ಸ್ವಲ್ಪ ಉಪ್ಪು ಬೆರೆಸಿ,ತುಂಬಾ ಜೋರಾಗಿ
ತಿರುಗಿಸದೇ ಹಗುರವಾಗಿ ತಿರುಗಿಸಿ. ಈ ಹಿಟ್ಟನ್ನು ಇಡ್ಲಿಯ ತಟ್ಟೆ/ಪಾತ್ರೆ/ ಮೋಲ್ಡ್ ಗಳಿಗೆ ಹಾಕಿ ಹಬೆಯಲ್ಲಿ ಏಳೆಂಟು ನಿಮಿಷಗಳವರೆಗೆ ಬೇಯಿಸಿ. ತೆಗೆಯಿರಿ. ಇಡ್ಲಿಯನ್ನು ಸಾಂಬಾರ್ ಮತ್ತು ಚಟ್ನಿಯೊಂದಿಗೆ ಸವಿಯಲು ನೀಡಿ.
ಸಾಂಬಾರ್ ಎಂದರೆ ವಿವಿಧ ಬಗೆಗಳಿವೆ,ಇದು ಇಲ್ಲಿ ತಯಾರಿಸುತ್ತಿರುವುದು. ಇಡ್ಲಿಗೆ ಮಾತ್ರವೇ ಚೆನ್ನಾಗಿರುತ್ತದೆ. ಅನ್ನಕ್ಕೆ ಅಷ್ಟು ರುಚಿಯಿರುವುದಿಲ್ಲ,ಆಗಾಗಿ ಇದನ್ನು ಸಾಮಾನ್ಯವಾಗಿ ಇಡ್ಲಿಗೆ ಮಾತ್ರ ತಯಾರಿಸಲಾಗುತ್ತದೆ.
ಇದೆಲ್ಲವೂ ಸಾಂಬಾರ್ ಗಾಗಿ ಮಸಾಲೆಪುಡಿ ಮಾಡಿಕೊಳ್ಳಲು:-
ಒಣಮೆಣಸಿನಕಾಯಿ ರುಚಿಗೆ
ಮೆಣಸು - ಒಂದು ಚಮಚ
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದುವರೆ ಚಮಚ
ಮೆಂತ್ಯ- ಕಾಲು ಚಮಚ
ಜೀರಿಗೆ - ಎರಡು ಚಮಚ
ಧನಿಯ - ನಾಲ್ಕು ಚಮಚ
ಚೆಕ್ಕೆ- ಒಂದು ಸಣ್ಣ ಚೂರು
ಲವಂಗ - ಎರಡು
ಮೊಗ್ಗು - ಒಂದು ಚಿಕ್ಕದು
ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಹುರಿದುಕೊಂಡು,ಪುಡಿ ಮಾಡಿಕೊಳ್ಳಿ,ಆ ಪುಡಿಗೆ ಸ್ವಲ್ಪ ಕೊಬ್ಬರಿ ತುರಿಯನ್ನು ಸೇರಿಸಿ ಮತ್ತೆ ನುಣ್ಣಗೆ ಪುಡಿ ಮಾಡಿಕೊಳ್ಳಿ.
ಬೇಯಿಸಲು ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ- ಒಂದು ಬಟ್ಟಲು / ನಿಮಗೆ ಬೇಕಾಗುವಷ್ಟು
ತರಕಾರಿ - ಇಷ್ಟವೆನಿಸಿದರೆ ಹಾಕಬಹುದು, ಹಾಕುವುದಾದರೆ-
ಆಲೂಗೆಡ್ಡೆ, ಕ್ಯಾರೆಟ್ ,ಬೀನ್ಸ್ ಮತ್ತು ಬದನೆಕಾಯಿ - ಇದು ಹೆಚ್ಚಿದ್ದು ಎಲ್ಲಾ ಸೇರಿ ಒಂದು ಬಟ್ಟಲು
ಟಮೋಟ ಹಣ್ಣು - ಹೆಚ್ಚಿದ್ದು ಸ್ವಲ್ಪ
ಸಾಂಬಾರ್ ಈರುಳ್ಳಿ - ಹತ್ತು - ಹನ್ನರೆಡು ಇದ್ದರೆ,(ಹಾಕಲೇಬೇಕು ಅಂತ ಕಡ್ಡಾಯವಿಲ್ಲ)
-ಮಾಮುಲಿ ಈರುಳ್ಳಿಯನ್ನು ದಪ್ಪವಾಗಿ ಕತ್ತರಿಸಿ ಹಾಕಬಹುದು
ಪಾಲಕ್ ಸೊಪ್ಪಿನ ಎಲೆಗಳು - ಹತ್ತು ( ಬೇಕಾದರೆ)- ಇದನ್ನು ಹಾಕಿದರೆ ರುಚಿ ಇನ್ನು ಹೆಚ್ಚುತ್ತದೆ.
ಅರಿಸಿನ - ಒಂದು ಚಮಚ
ಎಣ್ಣೆ - ಎರಡು ಚಮಚ
ಬೆಲ್ಲ - ಒಂದು ದಪ್ಪ ಗೋಲಿ ಗಾತ್ರದ್ದು
ಹುಣಸೇಹಣ್ಣಿನ ರಸ/ಪೇಸ್ಟ್ - ಒಂದು ದೊಡ್ಡ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ತಯಾರಿಸುವ ರೀತಿ:
ತೊಗರಿಬೇಳೆಯನ್ನು ಅರಿಸಿನ ಮತ್ತು ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು,ಅದಕ್ಕೆ ಹೆಚ್ಚಿದ ಎಲ್ಲಾ ತರಕಾರಿಗಳನ್ನು,ಟಮೋಟ,ಹೆಚ್ಚಿದ ಪಾಲಕ್ ಎಲೆಗಳು ಮತ್ತು ಈರುಳ್ಳಿ ಎಲ್ಲವನ್ನು ಹಾಕಿ ಮತ್ತೆ ಸ್ವಲ್ಪ ಬೇಯಿಸಿ. ತರಕಾರಿಗಳು ಬೆಂದಿದೆ ಎನಿಸಿದ ತಕ್ಷಣ ಮಸಾಲೆ ಪುಡಿಯನ್ನು ಹಾಕಿ,ಪುಡಿ ಮಾಡಿದ್ದೆಲ್ಲಾ ಪೂರ್ತಿ ಹಾಕದೇ ರುಚಿಗೆ ನೋಡಿಕೊಂಡು ಹಾಕಿ,ಕುದಿಯುವಾಗ ಹುಣಸೇಹಣ್ಣಿನ ರಸ,ಬೆಲ್ಲ ಮತ್ತು ಉಪ್ಪು ಹಾಕಿ,ಎಲ್ಲ ಚೆನ್ನಾಗಿ ಕುದಿಸಿ,ತಿರುಗಿಸುತ್ತಿರಿ. ಇದಕ್ಕೆ ಒಗ್ಗರಣೆ ಬೆರೆಸಿ,ಇಳಿಸಿ.
ರುಚಿ-ರುಚಿಯಾದ ಸಾಂಬಾರ್ ತಯಾರಾಗುತ್ತದೆ.
ಒಗ್ಗರಣೆಗೆ -
ಎಣ್ಣೆ - ನಾಲ್ಕು ಚಮಚ
ತುಪ್ಪ - ಒಂದು/ಎರಡು ಚಮಚ
ಸಾಸಿವೆ
ಜೀರಿಗೆ
ಇಂಗು
ಕರಿಬೇವು
ಗೋಡಂಬಿ (ಬೇಕಾದರೆ)
ಎಣ್ಣೆ ಮತ್ತು ತುಪ್ಪವನ್ನು ಕಾಯಿಸಿ, ಸಾಸಿವೆ,ಜೀರಿಗೆ,ಇಂಗು,ಕರಿಬೇವು ಮತ್ತು ಗೋಡಂಬಿಯನ್ನು ಹಾಕಿ ಇಳಿಸಿ. ಈ ಒಗ್ಗರಣೆಯನ್ನು ಮೇಲೆ ತಿಳಿಸಿರುವ ಸಾಂಬಾರ್ ನಲ್ಲಿ ಹಾಕಿ ಬೆರೆಸಿ.
ನಂತರ ಬಿಸಿ-ಬಿಸಿಯಾಗಿ ತಯಾರಿಸಿದ ಇಡ್ಲಿಯೊಂದಿಗೆ ಈ ಸಾಂಬಾರ್ ಅನ್ನು ತಿನ್ನಲು ನೀಡಿ.
ಆರೋಗ್ಯಕ್ಕೆ ಉತ್ತಮವಾಗಿರುವ ಇಡ್ಲಿ ಮತ್ತು ಸಾಂಬಾರ್ ರೆಡಿ.
-------
* ಸಾಂಬಾರ್ ತಯಾರಿಸುವಾಗ ಹುರಿದುಕೊಳ್ಳುವ ಸಾಮಗ್ರಿಗಳನ್ನು ಹುರಿಯುವಾಗ ಸೀದಿಸಬೇಡಿ, ಹದವಾಗಿ ಹುರಿಯಿರಿ.
* ಇಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಯ ಅಗತ್ಯವಿಲ್ಲ
* ಈ ಸಾಂಬಾರ್ ಇಡ್ಲಿಗೆ ಹೆಚ್ಚು ರುಚಿಕೊಡುತ್ತದೆ.
* ಸಾಂಬಾರ್ ತಯಾರಿಸಲು, ನಿಮಗೆ ಬೇಕಾದ ತರಕಾರಿಗಳನ್ನು ಮಾತ್ರ ಹಾಕಿಕೊಳ್ಳಬಹುದು, ಎಲ್ಲವನ್ನು ಹಾಕಲೇಬೇಕು ಅಂತ ಕಡ್ಡಾಯವಿಲ್ಲ. ಏನೇ ಹಾಕಲಿ,ಹೇಗೆ ಹಾಕಲಿ,ರುಚಿಯಾಗಿ ಸಾಂಬಾರ್ ತಯಾರಿಸುವ ರೀತಿ ನಿಮ್ಮ ಕೈನಲ್ಲಿದೆ.
* ಮಕ್ಕಳಿಗಂತೂ ಚಟ್ನಿಗಿಂತ ಸಾಂಬಾರ್ ಜೊತೆ ಇಡ್ಲಿ ತಿನ್ನುವುದೇ ಬಹಳ ಖುಷಿ. ಚಟ್ನಿ ಕೆಲವು ಮಕ್ಕಳಿಗೆ ಮಾತ್ರ ಇಷ್ಟವಾಗುತ್ತದೆ. ನನ್ನ ಅಮ್ಮ ಕೂಡ ತುಂಬಾ ಚೆನ್ನಾಗಿ ಸಾಂಬಾರ್ ತಯಾರಿಸುತ್ತಿದ್ದರು. ಅದನ್ನು ನೋಡಿಯೇ ನಾನು ಸಹ ತಯಾರಿಸುವುದು. ಅವರ ಕೈ ರುಚಿಯೇ ಒಂದು ರೀತಿ ಚೆಂದ.
* ಇಡ್ಲಿಯ ಹಿಟ್ಟು ದೋಸೆ ಹಿಟ್ಟಿಗಿಂತ ಗಟ್ಟಿಯಿರಲಿ. ಹಿಟ್ಟು ರುಬ್ಬಿಟ್ಟು ಮಾರನೇದಿನ ಅಥವಾ ಏಳೆಂಟು ಗಂಟೆಗಳ ನಂತರ ಇಡ್ಲಿಯನ್ನು ತಯಾರಿಸಿ. ಹಿಟ್ಟು ಹುದುಗು ಬಂದಿದ್ದರೆ ಮಾತ್ರ ಇಡ್ಲಿಗಳು ಚೆನ್ನಾಗಿ ಬರುತ್ತವೆ.
Vermicelli / Shyavige Upma - ಶ್ಯಾವಿಗೆ ಉಪ್ಪಿಟ್ಟು:
ಶ್ಯಾವಿಗೆ ಉಪ್ಪಿಟ್ಟು:
ಸಾಮಗ್ರಿಗಳು:
ಶ್ಯಾವಿಗೆ
ಎಣ್ಣೆ
ಸಾಸಿವೆ
ಹಸಿಮೆಣಸಿನಕಾಯಿ
ಈರುಳ್ಳಿ
ಟಮೋಟ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:
ಶ್ಯಾವಿಗೆಯನ್ನು ಒಂದೆರಡು ಚಮಚ ತುಪ್ಪ ಹಾಕಿ ಹುರಿದುಕೊಳ್ಳಿ, ಘಂ ಎನ್ನುವ ವಾಸನೆ ಬರುವವರೆಗೂ ಹುರಿದು ತೆಗೆದಿಡಿ. ಅಂದರೆ ಶ್ಯಾವಿಗೆಯ ಬಣ್ಣ ಸ್ವಲ್ಪ ಬದಲಾಗಿ ಹೊಂಬಣ್ಣ ಬಂದ ನಂತರ ಇಳಿಸಿ.ತೆಗೆದಿಡಿ.
ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ,ಕಾದ ಬಳಿಕ ಸಾಸಿವೆ,ಕರಿಬೇವು,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ ಬೆರೆಸಿ. ಈರುಳ್ಳಿ ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಟಮೋಟ ಹಾಕಿ ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ, ಅಗತ್ಯವಿದ್ದಷ್ಟು ನೀರು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಕುದಿಯಲು ಬಿಡಿ. ನೀರು ಒಂದು ಕುದಿ ಬಂದ ತಕ್ಷಣ ಶ್ಯಾವಿಗೆಯನ್ನು ಕುದಿಯುತ್ತಿರುವ ನೀರಿಗೆ ಹಾಕುತ್ತಾ,ಆಗೆ ಗಂಟು ಬರದಂತೆ ಎಲ್ಲವನ್ನು ಚೆನ್ನಾಗಿ ತಿರುಗಿಸುತ್ತಿರಿ,ಪೂರ್ತಿ ಶ್ಯಾವಿಗೆ ಹಾಕಿದ ನಂತರ ಅದಕ್ಕೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಬಿಸಿ ಬಿಸಿಯಾಗಿರುವಲೇ ಶ್ಯಾವಿಗೆ ಉಪ್ಪಿಟ್ಟನ್ನು ತಿನ್ನಬೇಕು. ಬೇಕಾದರೆ ಇದರ ಜೊತೆ ಕಾಯಿಚಟ್ನಿ ಕೊಡಿ ಇನ್ನೂ ಚೆನ್ನಾಗಿರುತ್ತದೆ.
*ಟಮೋಟವನ್ನು ಹೆಚ್ಚಿಗೆ ಹಾಕಬಹುದು, ಆಗ ಇನ್ನು ರುಚಿ ಹೆಚ್ಚುತ್ತದೆ.
ಸಾಮಗ್ರಿಗಳು:
ಶ್ಯಾವಿಗೆ
ಎಣ್ಣೆ
ಸಾಸಿವೆ
ಹಸಿಮೆಣಸಿನಕಾಯಿ
ಈರುಳ್ಳಿ
ಟಮೋಟ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:
ಶ್ಯಾವಿಗೆಯನ್ನು ಒಂದೆರಡು ಚಮಚ ತುಪ್ಪ ಹಾಕಿ ಹುರಿದುಕೊಳ್ಳಿ, ಘಂ ಎನ್ನುವ ವಾಸನೆ ಬರುವವರೆಗೂ ಹುರಿದು ತೆಗೆದಿಡಿ. ಅಂದರೆ ಶ್ಯಾವಿಗೆಯ ಬಣ್ಣ ಸ್ವಲ್ಪ ಬದಲಾಗಿ ಹೊಂಬಣ್ಣ ಬಂದ ನಂತರ ಇಳಿಸಿ.ತೆಗೆದಿಡಿ.
ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ,ಕಾದ ಬಳಿಕ ಸಾಸಿವೆ,ಕರಿಬೇವು,ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ ಬೆರೆಸಿ. ಈರುಳ್ಳಿ ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಟಮೋಟ ಹಾಕಿ ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ, ಅಗತ್ಯವಿದ್ದಷ್ಟು ನೀರು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಕುದಿಯಲು ಬಿಡಿ. ನೀರು ಒಂದು ಕುದಿ ಬಂದ ತಕ್ಷಣ ಶ್ಯಾವಿಗೆಯನ್ನು ಕುದಿಯುತ್ತಿರುವ ನೀರಿಗೆ ಹಾಕುತ್ತಾ,ಆಗೆ ಗಂಟು ಬರದಂತೆ ಎಲ್ಲವನ್ನು ಚೆನ್ನಾಗಿ ತಿರುಗಿಸುತ್ತಿರಿ,ಪೂರ್ತಿ ಶ್ಯಾವಿಗೆ ಹಾಕಿದ ನಂತರ ಅದಕ್ಕೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಬಿಸಿ ಬಿಸಿಯಾಗಿರುವಲೇ ಶ್ಯಾವಿಗೆ ಉಪ್ಪಿಟ್ಟನ್ನು ತಿನ್ನಬೇಕು. ಬೇಕಾದರೆ ಇದರ ಜೊತೆ ಕಾಯಿಚಟ್ನಿ ಕೊಡಿ ಇನ್ನೂ ಚೆನ್ನಾಗಿರುತ್ತದೆ.
*ಟಮೋಟವನ್ನು ಹೆಚ್ಚಿಗೆ ಹಾಕಬಹುದು, ಆಗ ಇನ್ನು ರುಚಿ ಹೆಚ್ಚುತ್ತದೆ.
Tuesday, December 2, 2008
Avalakki / Poha Uppittu -ಅವಲಕ್ಕಿ ಉಪ್ಪಿಟ್ಟು /ಅವಲಕ್ಕಿ:
ಅವಲಕ್ಕಿ ಉಪ್ಪಿಟ್ಟು /ಅವಲಕ್ಕಿ:
ಬೇಕಾಗುವ ಸಾಮಗ್ರಿಗಳು;
ಅವಲಕ್ಕಿ - ಅರ್ಧ ಕೆಜಿ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ ರುಚಿಗೆ
ಎಣ್ಣೆ
ಸಾಸಿವೆ,
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು,
ನಿಂಬೆರಸ
ಕೊತ್ತುಂಬರಿಸೊಪ್ಪು
ಕಾಯಿತುರಿ
ತಯಾರಿಸುವ ವಿಧಾನ:
ಅವಲಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು,ಒಳ್ಳೆಯ ನೀರಿನಲ್ಲಿ ಎರಡು ನಿಮಿಷ ನೆನೆಸಿ,ಚೆನ್ನಾಗಿ ಹಿಂಡಿ. ನೀರಿಲ್ಲದಂತೆ ಎಲ್ಲವನ್ನು ಹಿಂಡಿಕೊಂಡು ಇಟ್ಟುಕೊಳ್ಳಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ,ಕಡ್ಲೆಕಾಯಿಬೀಜಗಳನ್ನು ಹಾಕಿ,ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ,ಕರಿಬೇವು ,ಕಡ್ಲೆಬೇಳೆ, ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ,ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಚೆನ್ನಾಗಿ ಬೆರೆಸಿ. ಈ ಒಗ್ಗರಣೆಗೆ ನೆನೆಸಿ ಹಿಂಡಿದ ಅವಲಕ್ಕಿ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ, ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ. ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ನಿಂಬೆರಸ ಹಾಕಿ.ಇದೆಲ್ಲವನ್ನು ಮತ್ತೆ ಚೆನ್ನಾಗಿ ಎಲ್ಲ ಕಡೆಯೂ ಬೆರೆಯುವಂತೆ ಚೆನ್ನಾಗಿ ಕಲೆಸಿಡಿ. ಒಲೆಯಿಂದ ಇಳಿಸಿ. ಬಿಸಿಬಿಸಿ ಅವಲಕ್ಕಿ ಉಪ್ಪಿಟ್ಟು ತಯಾರಾಗುತ್ತದೆ.ಇದನ್ನು ತಯಾರಿಸದ ತಕ್ಷಣವೇ ತಿಂದರೆ ರುಚಿ ಹೆಚ್ಚು. ಈ ತಿಂಡಿಯನ್ನು ಬೆಳಗಿನ ಉಪಹಾರ/ಸಂಜೆಯ ತಿಂಡಿಗೆ ತಯಾರಿಸಬಹುದು. ಇದು ತುಂಬಾ ಹಗುರವಾದ ತಿಂಡಿ. ಬೇಸಿಗೆಯಲ್ಲಿ ಒಳ್ಳೆಯದು.
* ಅವಲಕ್ಕಿಯಲ್ಲಿ ವಿವಿಧ ಬಗೆ ಇದೆ. ತೆಳು ಅವಲಕ್ಕಿ,ಗಟ್ಟಿ ಅವಲಕ್ಕಿ,ದಪ್ಪ ಮತ್ತು ಮೀಡೀಯಂ ಅಂತ,ಈ ತಿಂಡಿಗೆ ಗಟ್ಟಿ ಅವಲಕ್ಕಿಯಾದರೆ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು;
ಅವಲಕ್ಕಿ - ಅರ್ಧ ಕೆಜಿ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ ರುಚಿಗೆ
ಎಣ್ಣೆ
ಸಾಸಿವೆ,
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು,
ನಿಂಬೆರಸ
ಕೊತ್ತುಂಬರಿಸೊಪ್ಪು
ಕಾಯಿತುರಿ
ತಯಾರಿಸುವ ವಿಧಾನ:
ಅವಲಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು,ಒಳ್ಳೆಯ ನೀರಿನಲ್ಲಿ ಎರಡು ನಿಮಿಷ ನೆನೆಸಿ,ಚೆನ್ನಾಗಿ ಹಿಂಡಿ. ನೀರಿಲ್ಲದಂತೆ ಎಲ್ಲವನ್ನು ಹಿಂಡಿಕೊಂಡು ಇಟ್ಟುಕೊಳ್ಳಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ,ಕಡ್ಲೆಕಾಯಿಬೀಜಗಳನ್ನು ಹಾಕಿ,ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ,ಕರಿಬೇವು ,ಕಡ್ಲೆಬೇಳೆ, ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ,ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಚೆನ್ನಾಗಿ ಬೆರೆಸಿ. ಈ ಒಗ್ಗರಣೆಗೆ ನೆನೆಸಿ ಹಿಂಡಿದ ಅವಲಕ್ಕಿ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ, ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ. ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ನಿಂಬೆರಸ ಹಾಕಿ.ಇದೆಲ್ಲವನ್ನು ಮತ್ತೆ ಚೆನ್ನಾಗಿ ಎಲ್ಲ ಕಡೆಯೂ ಬೆರೆಯುವಂತೆ ಚೆನ್ನಾಗಿ ಕಲೆಸಿಡಿ. ಒಲೆಯಿಂದ ಇಳಿಸಿ. ಬಿಸಿಬಿಸಿ ಅವಲಕ್ಕಿ ಉಪ್ಪಿಟ್ಟು ತಯಾರಾಗುತ್ತದೆ.ಇದನ್ನು ತಯಾರಿಸದ ತಕ್ಷಣವೇ ತಿಂದರೆ ರುಚಿ ಹೆಚ್ಚು. ಈ ತಿಂಡಿಯನ್ನು ಬೆಳಗಿನ ಉಪಹಾರ/ಸಂಜೆಯ ತಿಂಡಿಗೆ ತಯಾರಿಸಬಹುದು. ಇದು ತುಂಬಾ ಹಗುರವಾದ ತಿಂಡಿ. ಬೇಸಿಗೆಯಲ್ಲಿ ಒಳ್ಳೆಯದು.
* ಅವಲಕ್ಕಿಯಲ್ಲಿ ವಿವಿಧ ಬಗೆ ಇದೆ. ತೆಳು ಅವಲಕ್ಕಿ,ಗಟ್ಟಿ ಅವಲಕ್ಕಿ,ದಪ್ಪ ಮತ್ತು ಮೀಡೀಯಂ ಅಂತ,ಈ ತಿಂಡಿಗೆ ಗಟ್ಟಿ ಅವಲಕ್ಕಿಯಾದರೆ ಚೆನ್ನಾಗಿರುತ್ತದೆ.
Sunday, July 20, 2008
Upma / Uppittu- ಉಪ್ಪಿಟ್ಟು:

ಉಪ್ಪಿಟ್ಟು:
ಸಾಮಗ್ರಿಗಳು:
ರವೆ
ಎಣ್ಣೆ
ಸಾಸಿವೆ
ಹಸಿಮೆಣಸಿನಕಾಯಿ
ಈರುಳ್ಳಿ
ಕರಿಬೇವು
ಕಡ್ಲೆಬೇಳೆ
ಉದ್ದಿನಬೇಳೆ
ಉಪ್ಪು
ಕಾಯಿತುರಿ
ಕೊತ್ತುಂಬರಿಸೊಪ್ಪು
ನಿಂಬೆರಸ
ವಿಧಾನ:
ರವೆಗೆ ಒಂದೆರಡು ಚಮಚ ಎಣ್ಣೆ ಹಾಕಿ ಹುರಿದುಕೊಳ್ಳಿ,ರವೆಯನ್ನು ಸೀದೀಸದೆ,ಘಂ ಎನ್ನುವ ವಾಸನೆ ಬರುವವರೆಗೂ ಹುರಿದು ತೆಗೆದಿಡಿ.
ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ,ಕಾದ ಬಳಿಕ ಸಾಸಿವೆ,ಕರಿಬೇವು,ಕಡ್ಲೆಬೇಳೆ ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ,ಹಾಕಿ,ಬೆರೆಸಿ. ಈರುಳ್ಳಿ ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ಒಂದೆರಡು ನಿಮಿಷದ ನಂತರ ಉಪ್ಪು ಹಾಕಿ,ಅಗತ್ಯವಿದ್ದಷ್ಟು ನೀರು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಕುದಿಯಲು ಬಿಡಿ. ನೀರು ಒಂದು ಕುದಿ ಬಂದ ತಕ್ಷಣ ರವೆಯನ್ನು ಕುದಿಯುತ್ತಿರುವ ನೀರಿಗೆ ನಿಧಾನವಾಗಿ ಹಾಕುತ್ತಾ,ಆಗೆ ಗಂಟು ಬರದಂತೆ ತಿರುವುತ್ತಿರಿ. ಪೂರ್ತಿ ರವೆ ಹಾಕಿದ ನಂತರ ಅದಕ್ಕೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಬಿಸಿ ಬಿಸಿಯಾಗಿರುವಾಗಲೇ ಉಪ್ಪಿಟ್ಟನ್ನು ತಿನ್ನಬೇಕು ಇಲ್ಲವೆಂದರೆ ಹೆಸರಿಗೆ ತಕ್ಕಂತೆ ಕಾಂಕ್ರೀಟ್ ತರ ಗಟ್ಟಿಯಾಗುತ್ತದೆ.
Tuesday, May 27, 2008
Sambar - ಸಾಂಬಾರ್ / ಇಡ್ಲಿ ಸಾಂಬಾರ್-Idli Sambar
ಇಡ್ಲಿ ಮತ್ತು ವಡೆ ಸಾಂಬಾರ್ ಸಾಮಾನ್ಯವಾಗಿ ನಮ್ಮ ದಕ್ಷಿಣ ಭಾರತದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಇಡ್ಲಿ ಯಾವ ಕಾಲದಲ್ಲಿಯಾಗಲಿ,ಯಾರೇ ಆಗಲಿ ತಿನ್ನಬಹುದಾದಂತ,ಆರೋಗ್ಯಕರವಾದಂತ ಉತ್ತಮ ತಿಂಡಿಯಾಗಿದೆ. ಕೆಲವು ಸಾರಿ ಇಡ್ಲಿ - ಸಾಂಬಾರ್ ಜೊತೆ ರುಚಿ ಎನಿಸಿದರೆ, ಕೆಲವೊಮ್ಮೆ ಕಾಯಿಚಟ್ನಿ ಮತ್ತು ಸಿಹಿ ಚಟ್ನಿಯೊಂದಿಗೂ ಹಾಗು ಕೆಂಪು ಚಟ್ನಿಯೊಂದಿಗೂ ತುಂಬಾ ರುಚಿಯಾಗಿರುತ್ತದೆ.ಎಲ್ಲಕ್ಕಿಂತ ಹೆಚ್ಚಿನ ರುಚಿ ಸಾಂಬಾರ್ ಜೊತೆ ಮಾತ್ರ. ಇಲ್ಲಿ ಈಗ ಮಾಮುಲಿ ಇಡ್ಲಿ ಮತ್ತು ಸಾಂಬಾರ್ ತಯಾರಿಸುವ ವಿಧಾನವನ್ನು ತಿಳಿಯೋಣ.
ಸಾಂಬಾರ್: (ಇಡ್ಲಿ ಸಾಂಬಾರ್)
ಸಾಂಬಾರ್ ಎಂದರೆ ವಿವಿಧ ಬಗೆಗಳಿವೆ,ಇದು ಇಲ್ಲಿ ತಯಾರಿಸುತ್ತಿರುವುದು. ಇಡ್ಲಿಗೆ ಮಾತ್ರವೇ ಚೆನ್ನಾಗಿರುತ್ತದೆ. ಅನ್ನಕ್ಕೆ ಅಷ್ಟು ರುಚಿಯಿರುವುದಿಲ್ಲ, ಆಗಾಗಿ ಇದನ್ನು ಸಾಮಾನ್ಯವಾಗಿ ಇಡ್ಲಿಗೆ ಮಾತ್ರ ತಯಾರಿಸಲಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
ಇದೆಲ್ಲವೂ ಸಾಂಬಾರ್ ಗಾಗಿ ಮಸಾಲೆಪುಡಿ ಮಾಡಿಕೊಳ್ಳಲು:-
ಒಣಮೆಣಸಿನಕಾಯಿ ರುಚಿಗೆ
ಮೆಣಸು - ಒಂದು ಚಮಚ
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದುವರೆ ಚಮಚ
ಮೆಂತ್ಯ- ಕಾಲು ಚಮಚ
ಜೀರಿಗೆ - ಎರಡು ಚಮಚ
ಧನಿಯ - ನಾಲ್ಕು ಚಮಚ
ಚೆಕ್ಕೆ- ಒಂದು ಸಣ್ಣ ಚೂರು
ಲವಂಗ - ಎರಡು,
ಮೊಗ್ಗು - ಒಂದು ಚಿಕ್ಕದು
ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಹುರಿದುಕೊಂಡು, ಪುಡಿ ಮಾಡಿಕೊಳ್ಳಿ, ಆ ಪುಡಿಗೆ ಸ್ವಲ್ಪ ಕೊಬ್ಬರಿ ತುರಿಯನ್ನು ಸೇರಿಸಿ ಮತ್ತೆ ನುಣ್ಣಗೆ ಪುಡಿ ಮಾಡಿಕೊಳ್ಳಿ.
ಬೇಯಿಸಲು ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ- ಒಂದು ಬಟ್ಟಲು / ನಿಮಗೆ ಬೇಕಾಗುವಷ್ಟು
ತರಕಾರಿ - ಇಷ್ಟವೆನಿಸಿದರೆ ಹಾಕಬಹುದು, ಹಾಕುವುದಾದರೆ-
ಆಲೂಗೆಡ್ಡೆ, ಕ್ಯಾರೆಟ್ ,ಬೀನ್ಸ್ ಮತ್ತು ಬದನೆಕಾಯಿ - ಇದು ಹೆಚ್ಚಿದ್ದು ಎಲ್ಲಾ ಸೇರಿ ಒಂದು ಬಟ್ಟಲು
ಟಮೋಟ ಹಣ್ಣು - ಹೆಚ್ಚಿದ್ದು ಸ್ವಲ್ಪ
ಸಾಂಬಾರ್ ಈರುಳ್ಳಿ - ಹತ್ತು - ಹನ್ನರೆಡು ಇದ್ದರೆ, (ಹಾಕಲೇಬೇಕು ಅಂತ ಕಡ್ಡಾಯವಿಲ್ಲ)
-ಮಾಮುಲಿ ಈರುಳ್ಳಿಯನ್ನು ದಪ್ಪವಾಗಿ ಕತ್ತರಿಸಿ ಹಾಕಬಹುದು
ಪಾಲಕ್ ಸೊಪ್ಪಿನ ಎಲೆಗಳು - ಹತ್ತು ( ಬೇಕಾದರೆ)- ಇದನ್ನು ಹಾಕಿದರೆ ರುಚಿ ಇನ್ನು ಹೆಚ್ಚುತ್ತದೆ.
ಅರಿಸಿನ - ಒಂದು ಚಮಚ
ಎಣ್ಣೆ - ಎರಡು ಚಮಚ
ಬೆಲ್ಲ - ಒಂದು ದಪ್ಪ ಗೋಲಿ ಗಾತ್ರದ್ದು
ಹುಣಸೇಹಣ್ಣಿನ ರಸ/ಪೇಸ್ಟ್ - ಒಂದು ದೊಡ್ಡ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ತಯಾರಿಸುವ ರೀತಿ:
ತೊಗರಿಬೇಳೆಯನ್ನು ಅರಿಸಿನ ಮತ್ತು ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು, ಅದಕ್ಕೆ ಹೆಚ್ಚಿದ ಎಲ್ಲಾ ತರಕಾರಿಗಳನ್ನು,ಟಮೋಟ, ಹೆಚ್ಚಿದ ಪಾಲಕ್ ಎಲೆಗಳು, ಈರುಳ್ಳಿ ಎಲ್ಲವನ್ನು ಹಾಕಿ ಮತ್ತೆ ಸ್ವಲ್ಪ ಬೇಯಿಸಿ. ತರಕಾರಿಗಳು ಬೆಂದಿದೆ ಎನಿಸಿದ ತಕ್ಷಣ ಮಸಾಲೆ ಪುಡಿಯನ್ನು ಹಾಕಿ, ಪುಡಿ ಮಾಡಿದ್ದೆಲ್ಲಾ ಪೂರ್ತಿ ಹಾಕದೇ ರುಚಿಗೆ ನೋಡಿಕೊಂಡು ಹಾಕಿ, ಕುದಿಯುವಾಗ ಹುಣಸೇಹಣ್ಣಿನ ರಸ, ಬೆಲ್ಲ ಮತ್ತು ಉಪ್ಪು ಹಾಕಿ, ಎಲ್ಲ ಚೆನ್ನಾಗಿ ಕುದಿಸಿ, ತಿರುಗಿಸುತ್ತಿರಿ. ಇದಕ್ಕೆ ಒಗ್ಗರಣೆ ಬೆರೆಸಿ , ಇಳಿಸಿ. ರುಚಿ-ರುಚಿಯಾದ ಸಾಂಬಾರ್ ತಯಾರಾಗುತ್ತದೆ.
ಒಗ್ಗರಣೆಗೆ -
ಎಣ್ಣೆ - ನಾಲ್ಕು ಚಮಚ
ತುಪ್ಪ - ಒಂದು/ಎರಡು ಚಮಚ
ಸಾಸಿವೆ
ಜೀರಿಗೆ
ಇಂಗು
ಕರಿಬೇವು
ಗೋಡಂಬಿ (ಬೇಕಾದರೆ)
ಎಣ್ಣೆ ಮತ್ತು ತುಪ್ಪವನ್ನು ಕಾಯಿಸಿ, ಸಾಸಿವೆ, ಜೀರಿಗೆ,ಇಂಗು, ಕರಿಬೇವು ಮತ್ತು ಗೋಡಂಬಿಯನ್ನು ಹಾಕಿ ಇಳಿಸಿ. ಈ ಒಗ್ಗರಣೆಯನ್ನು ಮೇಲೆ ತಿಳಿಸಿರುವ ಸಾಂಬಾರ್ ನಲ್ಲಿ ಹಾಕಿ ಬೆರೆಸಿ.
ನಂತರ ಬಿಸಿ-ಬಿಸಿಯಾಗಿ ತಯಾರಿಸಿದ ಇಡ್ಲಿಯೊಂದಿಗೆ ಈ ಸಾಂಬಾರ್ ಅನ್ನು ತಿನ್ನಲು ನೀಡಿ.
ಆರೋಗ್ಯಕ್ಕೆ ಉತ್ತಮವಾಗಿರುವ ಇಡ್ಲಿ ಮತ್ತು ಸಾಂಬಾರ್ ರೆಡಿ.
-------
* ಸಾಂಬಾರ್ ತಯಾರಿಸುವಾಗ ಹುರಿದುಕೊಳ್ಳುವ ಸಾಮಗ್ರಿಗಳನ್ನು ಹುರಿಯುವಾಗ ಸೀದಿಸಬೇಡಿ, ಹದವಾಗಿ ಹುರಿಯಿರಿ.
* ಇಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಯ ಅಗತ್ಯವಿಲ್ಲ
* ಸಾಂಬಾರ್ ತಯಾರಿಸಲು, ನಿಮಗೆ ಬೇಕಾದ ತರಕಾರಿಗಳನ್ನು ಮಾತ್ರ ಹಾಕಿಕೊಳ್ಳಬಹುದು, ಎಲ್ಲವನ್ನು ಹಾಕಲೇಬೇಕು ಅಂತ ಕಡ್ಡಾಯವಿಲ್ಲ. ಏನೇ ಹಾಕಲಿ, ಹೇಗೆ ಹಾಕಲಿ, ರುಚಿಯಾಗಿ ಸಾಂಬಾರ್ ತಯಾರಿಸುವ ರೀತಿ ನಿಮ್ಮ ಕೈನಲ್ಲಿದೆ.
* ಮಕ್ಕಳಿಗಂತೂ ಚಟ್ನಿಗಿಂತ ಸಾಂಬಾರ್ ಜೊತೆ ಇಡ್ಲಿ ತಿನ್ನುವುದೇ ಬಹಳ ಖುಷಿ. ಚಟ್ನಿ ಕೆಲವು ಮಕ್ಕಳಿಗೆ ಮಾತ್ರ ಇಷ್ಟವಾಗುತ್ತದೆ. ನನ್ನ ಅಮ್ಮ ಕೂಡ ತುಂಬಾ ಚೆನ್ನಾಗಿ ಸಾಂಬಾರ್ ತಯಾರಿಸುತ್ತಿದ್ದರು. ಅದನ್ನು ನೋಡಿಯೇ ನಾನು ಸಹ ತಯಾರಿಸುವುದು. ಅವರ ಕೈ ರುಚಿಯೇ ಒಂದು ರೀತಿ ಚೆಂದ.
* ಈ ಸಾಂಬಾರ್ ಇಡ್ಲಿಗೆ ಹೆಚ್ಚು ರುಚಿಕೊಡುತ್ತದೆ.
ಸಾಂಬಾರ್: (ಇಡ್ಲಿ ಸಾಂಬಾರ್)
ಸಾಂಬಾರ್ ಎಂದರೆ ವಿವಿಧ ಬಗೆಗಳಿವೆ,ಇದು ಇಲ್ಲಿ ತಯಾರಿಸುತ್ತಿರುವುದು. ಇಡ್ಲಿಗೆ ಮಾತ್ರವೇ ಚೆನ್ನಾಗಿರುತ್ತದೆ. ಅನ್ನಕ್ಕೆ ಅಷ್ಟು ರುಚಿಯಿರುವುದಿಲ್ಲ, ಆಗಾಗಿ ಇದನ್ನು ಸಾಮಾನ್ಯವಾಗಿ ಇಡ್ಲಿಗೆ ಮಾತ್ರ ತಯಾರಿಸಲಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
ಇದೆಲ್ಲವೂ ಸಾಂಬಾರ್ ಗಾಗಿ ಮಸಾಲೆಪುಡಿ ಮಾಡಿಕೊಳ್ಳಲು:-
ಒಣಮೆಣಸಿನಕಾಯಿ ರುಚಿಗೆ
ಮೆಣಸು - ಒಂದು ಚಮಚ
ಕಡ್ಲೆಬೇಳೆ - ಒಂದು ಚಮಚ
ಉದ್ದಿನಬೇಳೆ - ಒಂದುವರೆ ಚಮಚ
ಮೆಂತ್ಯ- ಕಾಲು ಚಮಚ
ಜೀರಿಗೆ - ಎರಡು ಚಮಚ
ಧನಿಯ - ನಾಲ್ಕು ಚಮಚ
ಚೆಕ್ಕೆ- ಒಂದು ಸಣ್ಣ ಚೂರು
ಲವಂಗ - ಎರಡು,
ಮೊಗ್ಗು - ಒಂದು ಚಿಕ್ಕದು
ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಹುರಿದುಕೊಂಡು, ಪುಡಿ ಮಾಡಿಕೊಳ್ಳಿ, ಆ ಪುಡಿಗೆ ಸ್ವಲ್ಪ ಕೊಬ್ಬರಿ ತುರಿಯನ್ನು ಸೇರಿಸಿ ಮತ್ತೆ ನುಣ್ಣಗೆ ಪುಡಿ ಮಾಡಿಕೊಳ್ಳಿ.
ಬೇಯಿಸಲು ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ- ಒಂದು ಬಟ್ಟಲು / ನಿಮಗೆ ಬೇಕಾಗುವಷ್ಟು
ತರಕಾರಿ - ಇಷ್ಟವೆನಿಸಿದರೆ ಹಾಕಬಹುದು, ಹಾಕುವುದಾದರೆ-
ಆಲೂಗೆಡ್ಡೆ, ಕ್ಯಾರೆಟ್ ,ಬೀನ್ಸ್ ಮತ್ತು ಬದನೆಕಾಯಿ - ಇದು ಹೆಚ್ಚಿದ್ದು ಎಲ್ಲಾ ಸೇರಿ ಒಂದು ಬಟ್ಟಲು
ಟಮೋಟ ಹಣ್ಣು - ಹೆಚ್ಚಿದ್ದು ಸ್ವಲ್ಪ
ಸಾಂಬಾರ್ ಈರುಳ್ಳಿ - ಹತ್ತು - ಹನ್ನರೆಡು ಇದ್ದರೆ, (ಹಾಕಲೇಬೇಕು ಅಂತ ಕಡ್ಡಾಯವಿಲ್ಲ)
-ಮಾಮುಲಿ ಈರುಳ್ಳಿಯನ್ನು ದಪ್ಪವಾಗಿ ಕತ್ತರಿಸಿ ಹಾಕಬಹುದು
ಪಾಲಕ್ ಸೊಪ್ಪಿನ ಎಲೆಗಳು - ಹತ್ತು ( ಬೇಕಾದರೆ)- ಇದನ್ನು ಹಾಕಿದರೆ ರುಚಿ ಇನ್ನು ಹೆಚ್ಚುತ್ತದೆ.
ಅರಿಸಿನ - ಒಂದು ಚಮಚ
ಎಣ್ಣೆ - ಎರಡು ಚಮಚ
ಬೆಲ್ಲ - ಒಂದು ದಪ್ಪ ಗೋಲಿ ಗಾತ್ರದ್ದು
ಹುಣಸೇಹಣ್ಣಿನ ರಸ/ಪೇಸ್ಟ್ - ಒಂದು ದೊಡ್ಡ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ತಯಾರಿಸುವ ರೀತಿ:
ತೊಗರಿಬೇಳೆಯನ್ನು ಅರಿಸಿನ ಮತ್ತು ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು, ಅದಕ್ಕೆ ಹೆಚ್ಚಿದ ಎಲ್ಲಾ ತರಕಾರಿಗಳನ್ನು,ಟಮೋಟ, ಹೆಚ್ಚಿದ ಪಾಲಕ್ ಎಲೆಗಳು, ಈರುಳ್ಳಿ ಎಲ್ಲವನ್ನು ಹಾಕಿ ಮತ್ತೆ ಸ್ವಲ್ಪ ಬೇಯಿಸಿ. ತರಕಾರಿಗಳು ಬೆಂದಿದೆ ಎನಿಸಿದ ತಕ್ಷಣ ಮಸಾಲೆ ಪುಡಿಯನ್ನು ಹಾಕಿ, ಪುಡಿ ಮಾಡಿದ್ದೆಲ್ಲಾ ಪೂರ್ತಿ ಹಾಕದೇ ರುಚಿಗೆ ನೋಡಿಕೊಂಡು ಹಾಕಿ, ಕುದಿಯುವಾಗ ಹುಣಸೇಹಣ್ಣಿನ ರಸ, ಬೆಲ್ಲ ಮತ್ತು ಉಪ್ಪು ಹಾಕಿ, ಎಲ್ಲ ಚೆನ್ನಾಗಿ ಕುದಿಸಿ, ತಿರುಗಿಸುತ್ತಿರಿ. ಇದಕ್ಕೆ ಒಗ್ಗರಣೆ ಬೆರೆಸಿ , ಇಳಿಸಿ. ರುಚಿ-ರುಚಿಯಾದ ಸಾಂಬಾರ್ ತಯಾರಾಗುತ್ತದೆ.
ಒಗ್ಗರಣೆಗೆ -
ಎಣ್ಣೆ - ನಾಲ್ಕು ಚಮಚ
ತುಪ್ಪ - ಒಂದು/ಎರಡು ಚಮಚ
ಸಾಸಿವೆ
ಜೀರಿಗೆ
ಇಂಗು
ಕರಿಬೇವು
ಗೋಡಂಬಿ (ಬೇಕಾದರೆ)
ಎಣ್ಣೆ ಮತ್ತು ತುಪ್ಪವನ್ನು ಕಾಯಿಸಿ, ಸಾಸಿವೆ, ಜೀರಿಗೆ,ಇಂಗು, ಕರಿಬೇವು ಮತ್ತು ಗೋಡಂಬಿಯನ್ನು ಹಾಕಿ ಇಳಿಸಿ. ಈ ಒಗ್ಗರಣೆಯನ್ನು ಮೇಲೆ ತಿಳಿಸಿರುವ ಸಾಂಬಾರ್ ನಲ್ಲಿ ಹಾಕಿ ಬೆರೆಸಿ.
ನಂತರ ಬಿಸಿ-ಬಿಸಿಯಾಗಿ ತಯಾರಿಸಿದ ಇಡ್ಲಿಯೊಂದಿಗೆ ಈ ಸಾಂಬಾರ್ ಅನ್ನು ತಿನ್ನಲು ನೀಡಿ.
ಆರೋಗ್ಯಕ್ಕೆ ಉತ್ತಮವಾಗಿರುವ ಇಡ್ಲಿ ಮತ್ತು ಸಾಂಬಾರ್ ರೆಡಿ.
-------
* ಸಾಂಬಾರ್ ತಯಾರಿಸುವಾಗ ಹುರಿದುಕೊಳ್ಳುವ ಸಾಮಗ್ರಿಗಳನ್ನು ಹುರಿಯುವಾಗ ಸೀದಿಸಬೇಡಿ, ಹದವಾಗಿ ಹುರಿಯಿರಿ.
* ಇಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿಯ ಅಗತ್ಯವಿಲ್ಲ
* ಸಾಂಬಾರ್ ತಯಾರಿಸಲು, ನಿಮಗೆ ಬೇಕಾದ ತರಕಾರಿಗಳನ್ನು ಮಾತ್ರ ಹಾಕಿಕೊಳ್ಳಬಹುದು, ಎಲ್ಲವನ್ನು ಹಾಕಲೇಬೇಕು ಅಂತ ಕಡ್ಡಾಯವಿಲ್ಲ. ಏನೇ ಹಾಕಲಿ, ಹೇಗೆ ಹಾಕಲಿ, ರುಚಿಯಾಗಿ ಸಾಂಬಾರ್ ತಯಾರಿಸುವ ರೀತಿ ನಿಮ್ಮ ಕೈನಲ್ಲಿದೆ.
* ಮಕ್ಕಳಿಗಂತೂ ಚಟ್ನಿಗಿಂತ ಸಾಂಬಾರ್ ಜೊತೆ ಇಡ್ಲಿ ತಿನ್ನುವುದೇ ಬಹಳ ಖುಷಿ. ಚಟ್ನಿ ಕೆಲವು ಮಕ್ಕಳಿಗೆ ಮಾತ್ರ ಇಷ್ಟವಾಗುತ್ತದೆ. ನನ್ನ ಅಮ್ಮ ಕೂಡ ತುಂಬಾ ಚೆನ್ನಾಗಿ ಸಾಂಬಾರ್ ತಯಾರಿಸುತ್ತಿದ್ದರು. ಅದನ್ನು ನೋಡಿಯೇ ನಾನು ಸಹ ತಯಾರಿಸುವುದು. ಅವರ ಕೈ ರುಚಿಯೇ ಒಂದು ರೀತಿ ಚೆಂದ.
* ಈ ಸಾಂಬಾರ್ ಇಡ್ಲಿಗೆ ಹೆಚ್ಚು ರುಚಿಕೊಡುತ್ತದೆ.
Saturday, February 23, 2008
Puri Upma-ಪುರಿ ಉಪ್ಪಿಟ್ಟು/ಮಂಡಕ್ಕಿ ತಿಂಡಿ/ಮಂಡಕ್ಕಿಒಗ್ಗರಣೆ
ಕಡ್ಲೆಪುರಿಯನ್ನು ಒಂದೊಂದು ಕಡೆ ಬೇರೆ ಬೇರೆ ರೀತಿ ಕರೆಯುತ್ತಾರೆ. ಪುರಿ,ಮಂಡಕ್ಕಿ, ಮಂಡಾಳ, ಮುರಿ, ಕಡ್ಲೆಪುರಿ ಹೀಗೆ ಕರೆಯುವುದು ಹಲವು ಹೆಸರಲ್ಲೆ ಆದರೂ ಒಂದೇ. ಈ ತಿಂಡಿಯನ್ನು ಸಹ ಹಲವರು ಹಲವು ಬಗೆ ಕರೆಯುತ್ತಾರೆ.
ಪುರಿ ಉಪ್ಪಿಟ್ಟು/ಮಂಡಕ್ಕಿ ತಿಂಡಿ/ಮಂಡಕ್ಕಿಒಗ್ಗರಣೆ
ಬೇಕಾಗುವ ಸಾಮಗ್ರಿಗಳು;
ಕಡ್ಲೆಪುರಿ - ಒಂದು ಕೆಜಿ
ಹುಣಸೇಹಣ್ಣಿನ ರಸ (ಟ್ಯಾಮರಿಂಡ್ ಪಲ್ಪ್) - ಒಂದು ದೊಡ್ಡ ಚಮಚ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ-ಎರಡು
ಎಣ್ಣೆ
ಸಾಸಿವೆ,
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು,
ನಿಂಬೆರಸ(ಬೇಕಾದರೆ)
ಕೊತ್ತುಂಬರಿಸೊಪ್ಪು ,ಕಾಯಿತುರಿ
ಹುರಿಗಡಲೆ ಪುಡಿ - ಎರಡು ಚಮಚ
ತಯಾರಿಸುವ ವಿಧಾನ:
ಪುರಿ/ಮಂಡಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಒಳ್ಳೆಯ ನೀರಿನಲ್ಲಿ ಒಂದು ನಿಮಿಷ ಬಿಟ್ಟು,ನೀರಿನಿಂದ ತೆಗೆದು ಚೆನ್ನಾಗಿ ಹಿಂಡಿ. ನೀರಿಲ್ಲದಂತೆ ಎಲ್ಲವನ್ನು ಹಿಂಡಿಕೊಂಡು ಇಟ್ಟುಕೊಳ್ಳಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ, ಕಡ್ಲೆಕಾಯಿಬೀಜಗಳನ್ನು ಹಾಕಿ, ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ,ಕರಿಬೇವು , ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಮತ್ತು ಒಣಮೆಣಸಿನಕಾಯಿ ಹಾಕಿ,ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ,ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಹುಣಸೇರಸ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಚೆನ್ನಾಗಿ ಬೆರೆಸಿ. ಈ ಒಗ್ಗರಣೆಗೆ ನೆನೆಸಿ ಹಿಂಡಿದ ಮಂಡಕ್ಕಿ ಅಥವ ಪುರಿ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ,ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ. ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ಇದೆಲ್ಲವನ್ನು ಕಲೆಸಿದ ಮೇಲೆ ಪುಡಿ ಮಾಡಿಟ್ಟು ಕೊಂಡಿರುವಂತ ಕಡ್ಲೆಪುಡಿಯನ್ನು ಉದುರಿಸಿ, ಮತ್ತೆ ಚೆನ್ನಾಗಿ ಎಲ್ಲ ಕಡೆಯೂ ಬೆರೆಯುವಂತೆ ಕೈನಲ್ಲಿಯೇ ಚೆನ್ನಾಗಿ ಕಲೆಸಿಡಿ.ಒಲೆಯಿಂದ ಇಳಿಸಿ. ಬಿಸಿಬಿಸಿ ಮಂಡಕ್ಕಿ/ಪುರಿ ಉಪ್ಪಿಟ್ಟು ತಯಾರಾಗುತ್ತದೆ.ಇದನ್ನು ತಯಾರಿಸದ ತಕ್ಷಣವೇ ತಿಂದರೆ ರುಚಿ ಹೆಚ್ಚು. ಈ ತಿಂಡಿಯನ್ನು ಬೆಳಗಿನ ಉಪಹಾರ/ಸಂಜೆಯ ತಿಂಡಿಗೆ ತಯಾರಿಸಬಹುದು. ಈ ತಿಂಡಿಯ ಜೊತೆ ಒಂದು ಲೋಟ ಬಿಸಿಯಾದ ಕಾಫಿ ಇದ್ದರಂತೂ ಇನ್ನೂ ಚೆನ್ನ.
ಪುರಿ ಉಪ್ಪಿಟ್ಟು/ಮಂಡಕ್ಕಿ ತಿಂಡಿ/ಮಂಡಕ್ಕಿಒಗ್ಗರಣೆ
ಬೇಕಾಗುವ ಸಾಮಗ್ರಿಗಳು;
ಕಡ್ಲೆಪುರಿ - ಒಂದು ಕೆಜಿ
ಹುಣಸೇಹಣ್ಣಿನ ರಸ (ಟ್ಯಾಮರಿಂಡ್ ಪಲ್ಪ್) - ಒಂದು ದೊಡ್ಡ ಚಮಚ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ-ಎರಡು
ಎಣ್ಣೆ
ಸಾಸಿವೆ,
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು,
ನಿಂಬೆರಸ(ಬೇಕಾದರೆ)
ಕೊತ್ತುಂಬರಿಸೊಪ್ಪು ,ಕಾಯಿತುರಿ
ಹುರಿಗಡಲೆ ಪುಡಿ - ಎರಡು ಚಮಚ
ತಯಾರಿಸುವ ವಿಧಾನ:
ಪುರಿ/ಮಂಡಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಒಳ್ಳೆಯ ನೀರಿನಲ್ಲಿ ಒಂದು ನಿಮಿಷ ಬಿಟ್ಟು,ನೀರಿನಿಂದ ತೆಗೆದು ಚೆನ್ನಾಗಿ ಹಿಂಡಿ. ನೀರಿಲ್ಲದಂತೆ ಎಲ್ಲವನ್ನು ಹಿಂಡಿಕೊಂಡು ಇಟ್ಟುಕೊಳ್ಳಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ, ಕಡ್ಲೆಕಾಯಿಬೀಜಗಳನ್ನು ಹಾಕಿ, ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ,ಕರಿಬೇವು , ಕಡ್ಲೆಬೇಳೆ,ಉದ್ದಿನಬೇಳೆ,ಹಸಿಮೆಣಸಿನಕಾಯಿ ಮತ್ತು ಒಣಮೆಣಸಿನಕಾಯಿ ಹಾಕಿ,ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ,ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಹುಣಸೇರಸ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಚೆನ್ನಾಗಿ ಬೆರೆಸಿ. ಈ ಒಗ್ಗರಣೆಗೆ ನೆನೆಸಿ ಹಿಂಡಿದ ಮಂಡಕ್ಕಿ ಅಥವ ಪುರಿ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ,ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ. ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ಇದೆಲ್ಲವನ್ನು ಕಲೆಸಿದ ಮೇಲೆ ಪುಡಿ ಮಾಡಿಟ್ಟು ಕೊಂಡಿರುವಂತ ಕಡ್ಲೆಪುಡಿಯನ್ನು ಉದುರಿಸಿ, ಮತ್ತೆ ಚೆನ್ನಾಗಿ ಎಲ್ಲ ಕಡೆಯೂ ಬೆರೆಯುವಂತೆ ಕೈನಲ್ಲಿಯೇ ಚೆನ್ನಾಗಿ ಕಲೆಸಿಡಿ.ಒಲೆಯಿಂದ ಇಳಿಸಿ. ಬಿಸಿಬಿಸಿ ಮಂಡಕ್ಕಿ/ಪುರಿ ಉಪ್ಪಿಟ್ಟು ತಯಾರಾಗುತ್ತದೆ.ಇದನ್ನು ತಯಾರಿಸದ ತಕ್ಷಣವೇ ತಿಂದರೆ ರುಚಿ ಹೆಚ್ಚು. ಈ ತಿಂಡಿಯನ್ನು ಬೆಳಗಿನ ಉಪಹಾರ/ಸಂಜೆಯ ತಿಂಡಿಗೆ ತಯಾರಿಸಬಹುದು. ಈ ತಿಂಡಿಯ ಜೊತೆ ಒಂದು ಲೋಟ ಬಿಸಿಯಾದ ಕಾಫಿ ಇದ್ದರಂತೂ ಇನ್ನೂ ಚೆನ್ನ.
Subscribe to:
Posts (Atom)
Popular Posts
-
ತರಕಾರಿ ಸಾಗು ಅಥವ ಕೂಟು ಎಲ್ಲವುದಕ್ಕು ಹೊಂದಿಕೊಳ್ಳುವಂತಹದ್ದು. ಅಂದರೆ ಇದನ್ನು ದೋಸೆ, ಚಪಾತಿ,ಪರೋಟ,ರೊಟ್ಟಿ,ಪೂರಿ ಮತ್ತು ಅನ್ನದ ಜೊತೆಯಲ್ಲಿ ತಿನ್ನಬಹುದು. ಜೊತೆಯಲ್ಲ...
-
ಆಲೂ ಪರೋಟ: ಹೂರಣಕ್ಕೆ ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಆಲೂಗೆಡ್ಡೆ-ಒಂದು ಬಟ್ಟಲು ಅಚ್ಚ ಖಾರದ ಪುಡಿ-ಕಾಲು ಚಮಚ ಉಪ್ಪು ರುಚಿಗೆ ತಕ್ಕಷ್ಟು ಚಾಟ್ ಮಸಾಲಾ-ಕಾಲು ಚಮಚ ...
-
ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾ...
-
ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾ...
-
ಟಮೋಟ ಚಟ್ನಿ: ಬೇಕಾಗುವ ಸಾಮಗ್ರಿಗಳು: ಟಮೋಟ - ಅರ್ಧ ಕೆ.ಜಿ ಈರುಳ್ಳಿ - ಎರಡು ಬೆಳ್ಳುಳ್ಳಿ - ಹತ್ತು ಎಸಳು ಒಣಮೆಣಸಿನಕಾಯಿ - ರುಚಿಗೆ ತಕ್ಕಷ್ಟು ಹುಣಸೆಹಣ್ಣು -...
-
ಬಿಸಿಬೇಳೆ ಭಾತ್ ಪುಡಿ: ತಯಾರಿಸಲು ಬೇಕಾಗುವ ಸಾಮಗ್ರಿಗಳು: ಒಣಮೆಣಸಿನಕಾಯಿ -ಹತ್ತು / ಖಾರಕ್ಕೆ ತಕ್ಕಷ್ಟು ಧನಿಯ- ಎರಡು ಚಮಚ ಮೆಂತ್ಯ -ಅರ್ಧ ಚಮಚ ಜೀರಿಗೆ-ಒಂದು ಚ...
-
ಗೋಳಿಬಜೆಯಲ್ಲಿ ಅನೇಕ ವಿಧಗಳಿವೆ,ಇದು ಅವುಗಳಲ್ಲಿ ಒಂದು ಬಗೆ,ತುಂಬಾ ಸುಲಭವಾದ ಮತ್ತು ಕಮ್ಮಿ ಸಾಮಗ್ರಿಗಳು ಬೇಕಾಗುವಂತಹ ರೆಸಿಪಿ. ತಕ್ಷಣವೇ ತಯಾರಿಸಬಹುದಾದ ಬೋಂಡಾ. ಗೋಳ...
-
ರಸಂ ಪುಡಿ / ರಸಂ ಪೌಡರ್ ಬೇಕಾಗುವ ಪದಾರ್ಥಗಳು: ಒಣ ಮೆಣಸಿನ ಕಾಯಿ - ಒಂದು ಬಟ್ಟಲು ಧನಿಯಾ ಬೀಜ - ಅರ್ಧ ಬಟ್ಟಲು ಜೀರಿಗೆ - ಒಂದು ದೊಡ್ಡ ಚಮಚ ಮೆಣಸು - ಒಂದು ದೊಡ...
-
ಈರುಳ್ಳಿ ಟಮೋಟ ಚಟ್ನಿ: ಬೇಕಾಗುವ ಸಾಮಗ್ರಿಗಳು: 1. ಈರುಳ್ಳಿ- 2 2. ಟೊಮೆಟೊ- 4-5 3. ಹಸಿಮೆಣಸಿನ ಕಾಯಿ- 2 4. ಉಪ್ಪು- ರುಚಿಗೆ ತಕ್ಕಷ್ಟು 5. ಅಚ್ಚ ಖಾರದ ಪ...