Saturday, May 9, 2009

Khara Bhath - ಖಾರ ಭಾತ್:

ಖಾರ ಭಾತ್:

ಸಾಮಗ್ರಿಗಳು:
ರವೆ
ಎಣ್ಣೆ
ಸಾಸಿವೆ
ಹೆಚ್ಚಿದ ಹಸಿಮೆಣಸಿನಕಾಯಿ
ಹೆಚ್ಚಿದ ಈರುಳ್ಳಿ
ಕರಿಬೇವು ಸ್ವಲ್ಪ
ಕಡ್ಲೆಬೇಳೆ
ಉದ್ದಿನಬೇಳೆ
ಶುಂಠಿ ತುರಿ - ಒಂದು ಚಮಚ
ತರಕಾರಿಗಳು- ಒಂದು ಬಟ್ಟಲು
ಕ್ಯಾರೆಟ್,ಬೀನ್ಸ್,
ಆಲೂ,ಬಟಾಣಿ
ಉಪ್ಪು
ಕಾಯಿತುರಿ ಸ್ವಲ್ಪ
ಕೊತ್ತುಂಬರಿಸೊಪ್ಪು
ನಿಂಬೆರಸ

ವಿಧಾನ:

ರವೆಗೆ ಒಂದೆರಡು ಚಮಚ ಎಣ್ಣೆ ಹಾಕಿ ಹುರಿದುಕೊಳ್ಳಿ,ರವೆಯನ್ನು ಸೀದೀಸದೆ,ಘಂ ಎನ್ನುವ ವಾಸನೆ ಬರುವವರೆಗೂ ಹುರಿದು ತೆಗೆದಿಡಿ.
ಬಾಣಲೆಯಲ್ಲಿ ನಾಲ್ಕು/ಆರು ಚಮಚ ಎಣ್ಣೆ ಹಾಕಿ,ಕಾದ ಬಳಿಕ ಸಾಸಿವೆ,ಕರಿಬೇವು,ಕಡ್ಲೆಬೇಳೆ ಉದ್ದಿನಬೇಳೆ,ಹಸಿಮೆಣಸಿನಕಾಯಿ ಹಾಕಿ,ಹಾಕಿ,ಬೆರೆಸಿ.ಶುಂಠಿ ತುರಿ ಮತ್ತು ಈರುಳ್ಳಿಯನ್ನು ಹಾಕಿ ಹಾಗೆ ಸ್ವಲ್ಪ ಹೊತ್ತು ಹುರಿಯಿರಿ. ನಂತರ ತರಕಾರಿಗಳನ್ನು ಹಾಕಿ,ಹುರಿದು. ಕೆಲವು ನಿಮಿಷ ಬೇಯಿಸಿದ ನಂತರ ಉಪ್ಪು ಹಾಕಿ,ಅಗತ್ಯವಿದ್ದಷ್ಟು ನೀರು ಹಾಕಿ,ಎಲ್ಲಾ ಹೊಂದಿಕೊಳ್ಳುವಂತೆ ಸರಿಯಾಗಿ ಬೆರೆಸಿ. ಕುದಿಯಲು ಬಿಡಿ. ನೀರು ಒಂದು ಕುದಿ ಬಂದ ತಕ್ಷಣ ರವೆಯನ್ನು ಕುದಿಯುತ್ತಿರುವ ನೀರಿಗೆ ನಿಧಾನವಾಗಿ ಹಾಕುತ್ತಾ,ಆಗೆ ಗಂಟು ಬರದಂತೆ ತಿರುವುತ್ತಿರಿ. ಪೂರ್ತಿ ರವೆ ಹಾಕಿದ ನಂತರ ಅದಕ್ಕೆ ಕಾಯಿತುರಿ,ಕೊತ್ತುಂಬರಿಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ. ಬಿಸಿ ಬಿಸಿಯಾಗಿರುವಾಗಲೆ ಈ ತರಕಾರಿ ಉಪ್ಪಿಟ್ಟನ್ನು ತಿನ್ನಿ.
* ಫ್ರೊಜ಼ನ್ ತರಕಾರಿಗಳನ್ನು ಉಪಯೋಗಿಸಬಹುದು. ಮಿಕ಼್ಸೆಡ್ ವೆಜೆಟಬಲ್ಸ್ ತಗೊಂಡರೆ ಅನುಕೂಲ.ಇದು ಬೇಗ ಮತ್ತು ಸುಲಭವಾಗುತ್ತದೆ.
* ತರಕಾರಿ ಹೆಚ್ಚಿಕೊಳ್ಳುವ ಸಮಯ ಉಳಿಯುತ್ತದೆ ಹಾಗೂ ತರಕಾರಿ ಸಹ ಫ಼್ರೆಶ್ ಇರುತ್ತದೆ.

No comments:

Popular Posts