ಹಾಲಿನ ಪೇಡ/ದೂದ್ ಪೇಡ:
ಸಾಮಗ್ರಿಗಳು:
ಹಾಲಿನಪುಡಿ - ಎರಡು ಬಟ್ಟಲು
ಕಂಡೆನ್ಸ್ದ್ ಹಾಲಿನ ಟಿನ್ - ಒಂದು
ಬೆಣ್ಣೆ - ಅರ್ಧ ಬಟ್ಟಲು
ಏಲಕ್ಕಿ ಪುಡಿ
ವಿಧಾನ:
ಮೊದಲು ಬೆಣ್ಣೆಯನ್ನು ಕರಗಿಸಿ, ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ , ಹಾಲಿನ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ. ಗಂಟು ಆಗದಂತೆ ಕೈಯಾಡಿಸಿ, ಮಧ್ಯೆ ಮಧ್ಯೆ ತಿರುಗಿಸುತ್ತಿರಿ, ಅದು ಸ್ವಲ್ಪ ಗಟ್ಟಿಯಾದ ತಕ್ಷಣ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ . ತಳ ಬಿಟ್ಟು ಬರುತ್ತಿದೆ ಎನಿಸಿದಾಗ ಕೆಳಗಿಳಿಸಿ.
ನಿಮಗೆ ಬೇಕಾದ ಆಕಾರದಲ್ಲಿ ಪೇಡಗಳನ್ನು ತಯಾರಿಸಿ. ಇದು ತಯಾರಿಸಲು ತುಂಬಾ ಸುಲಭ,ಬೇಗ ಆಗುತ್ತದೆ ಮತ್ತು ರುಚಿಯಾಗಿಯೂ ಇರುತ್ತದೆ. ಮಕ್ಕಳಿಗಂತು ಬಲು ಇಷ್ಟವಾಗುತ್ತದೆ.
Thursday, July 15, 2010
Sunday, May 9, 2010
Aambode / ಕಡ್ಲೆಬೇಳೆ ಆಂಬೋಡೆ
ಕಡ್ಲೆಬೇಳೆ ಆಂಬೋಡೆ:
ಬೇಕಾಗುವ ಸಾಮಗ್ರಿಗಳು:
ಕಡ್ಲೆಬೇಳೆ - ಒಂದು ಬಟ್ಟಲು
ಹಸಿಮೆಣಸಿನಕಾಯಿ
ಒಂದು ಚೆಕ್ಕೆ, ಲವಂಗ
ಶುಂಠಿ - ಒಂದು ಇಂಚು
ಕೊತ್ತುಂಬರಿ ಸೊಪ್ಪು
ಸಣ್ಣಗೆ ಹೆಚ್ಚಿದ ಈರುಳ್ಳಿ
ಹೆಚ್ಚಿದ ಸಬ್ಬಸ್ಸಿಗೆ ಸೊಪ್ಪು
ಉಪ್ಪು ರುಚಿಗೆ
ತಯಾರಿಸುವ ವಿಧಾನ:
ಮೊದಲಿಗೆ ಕಡ್ಲೆಬೇಳೆಯನ್ನು ಮೂರು ಗಂಟೆ ನೆನೆಸಿ.
ನೆನೆದ ಕಡ್ಲೆಬೇಳೆಯನ್ನು, ನೀರು ಸೋಸಿಕೊಂಡು ಅದನ್ನು ಹಸಿಮೆಣಸಿನಕಾಯಿ,ಚೆಕ್ಕೆ,ಲವಂಗ,ಶುಂಠಿ,ಉಪ್ಪು ಮತ್ತು ಕೊತ್ತುಂಬರಿಸೊಪ್ಪು ಹಾಕಿ ಗಟ್ಟಿಯಾಗಿ ಮತ್ತು ತರಿತರಿಯಾಗಿ ರುಬ್ಬಿಕೊಳ್ಳಿ. ಈ ರುಬ್ಬಿದ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹೆಚ್ಚಿದ ಸಬ್ಬಸ್ಸಿಗೆ ಸೊಪ್ಪನ್ನು ಹಾಕಿ ಚೆನ್ನಾಗಿ ಬೆರೆಸಿ.ಕಲೆಸುವಾಗ ನೀರು ಹಾಕಬೇಡಿ,ಈರುಳ್ಳಿಯನ್ನು ಮತ್ತು ಸೊಪ್ಪಿನಲ್ಲಿ ನೀರಿನ ಅಂಶ ಇರುವುದರಿಂದ ಅದೇ ಸಾಕಾಗುತ್ತದೆ. ಕಲೆಸಲು, ಎಲ್ಲವನ್ನೂ ಚೆನ್ನಾಗಿ ಹೊಂದಿಕೊಳ್ಳುವಂತೆ ಕಲೆಸಿ. ಸಣ್ಣ ಸಣ್ಣ ಉಂಡೆ ಮಾಡಿಕೊಂಡು, ಅದನ್ನು ಅಂಗೈನಲ್ಲಿ ಸ್ವಲ್ಪ ದಪ್ಪವಾಗಿ ತಟ್ಟಿಕೊಂಡು ಕಾದಿರುವ ಎಣ್ಣೆಯಲ್ಲಿ ಒಂದೊಂದಾಗಿ ಹಾಕಿ, ಬೇಯಿಸಿ. ಎಣ್ಣೆಗೆ ಹಾಕಿದ ತಕ್ಷಣ ಅಲ್ಲಾಡಿಸಬೇಡಿ. ವಡೆಯ ಬಣ್ಣ ಸ್ವಲ್ಪ ಬದಲಾದ ನಂತರ ತಿರುವಿ ಹಾಕಿ, ಎರಡು ಬದಿ ಹೊಂಬಣ್ಣ ಬರುವವರೆಗೂ ಬೇಯಿಸಿ. ಎಣ್ಣೆಯಿಂದ ತೆಗೆದು ಪೇಪರ್ ಟವಲ್ ಮೇಲೆ ಹಾಕಿ. ಇದೇ ರೀತಿ ಮಿಕ್ಕ ಎಲ್ಲಾ ವಡೆಗಳನ್ನು ತಯಾರಿಸಿ. ರುಚಿಯಾದ ಸಬ್ಬಸ್ಸಿಗೆ ಕಡ್ಲೆಬೇಳೆ ಆಂಬೋಡೆ ತಿನ್ನಲು ಸಿದ್ಧವಾಗುತ್ತದೆ. ಇದನ್ನು ಬಿಸಿಬಿಸಿಯಾಗಿಯೂ / ತಣ್ಣಗೂ ತಿನ್ನಬಹುದು. ಜೊತೆಗೆ ಏನು ಇಲ್ಲದಿದ್ದರೂ ಚೆನ್ನಾಗಿರುತ್ತೆ, ಅದರ ಜೊತೆ ಚಟ್ನಿ/ಸಾಸ್/ಕೆಚಪ್ ಕೂಡ ಸರ್ವ್ ಮಾಡಬಹುದು.
Sunday, March 28, 2010
Firni - ಫಿರಣಿ /ಫಿರನಿ/ಫಿರ್ನಿ ( Rice Pudding )
ಫಿರಣಿ /ಫಿರನಿ:
ಬೇಕಾಗುವ ಸಾಮಗ್ರಿಗಳು:
ಅಕ್ಕಿಹಿಟ್ಟು - ಎರಡು ದೊಡ್ಡ ಚಮಚ
ಹಾಲು - ಒಂದು ಬಟ್ಟಲು
ಕಂಡೆನ್ಸ್ಡ್ ಮಿಲ್ಕ್ - ಒಂದು ಟಿನ್
ಕೋವಾ ಸ್ವಲ್ಪ
ಏಲಕ್ಕಿ ಪುಡಿ ಸ್ವಲ್ಪ
ಕೇಸರಿ ದಳಗಳು ಸ್ವಲ್ಪ (ಬೇಕಾದರೆ)
ಸಕ್ಕರೆ ರುಚಿಗೆ ತಕ್ಕಷ್ಟು
ಡ್ರೈ ಫ್ರೂಟ್ಸ್ (ಬಾದಾಮಿ,ಗೋಡಂಬಿ,ಪಿಸ್ತ)
ತಯಾರಿಸುವ ವಿಧಾನ:
ಮೊದಲು ಹಾಲು ಕಾಯಿಸಿ,ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ ಮತ್ತು ಸಕ್ಕರೆಯನ್ನು ಸೇರಿಸಿ,ತಿರುಗಿಸಿ. ಮೂರ್ನಾಲ್ಕು ಚಮಚ ಹಾಲಿನೊಂದಿಗೆ ಅಕ್ಕಿಹಿಟ್ಟನ್ನು ಗಂಟಿಲ್ಲದಂತೆ ಕಲೆಸಿಕೊಂಡು ಅದನ್ನು ಕುದಿಯುತ್ತಿರುವ ಹಾಲಿಗೆ ಹಾಕಿ,ಚೆನ್ನಾಗಿ ಬೆರೆಸಿ,ತಿರುಗಿಸಿ. ಬೇಗ ತಳಹತ್ತುತ್ತದೆ,ಕೈ ಬಿಡದೆ ತಿರುಗಿಸುತ್ತಿರಬೇಕು. ಸ್ವಲ್ಪ ಹೊತ್ತಿನ ನಂತರ ಅದಕ್ಕೆ ಕೋವಾವನ್ನು ಬೆರೆಸಿ,ಏಲಕ್ಕಿ ಪುಡಿ,ಡ್ರೈ ಫ್ರೂಟ್ಸ್ ಮತ್ತು ಕೇಸರಿ ದಳಗಳನ್ನು ಹಾಕಿ,ಚೆನ್ನಾಗಿ ಬೆರೆಸಿ,ತಿರುಗಿಸುತ್ತಿದ್ದು,ಅದು ಸ್ವಲ್ಪ ಹೊತ್ತಿನ ನಂತರ ಸ್ವಲ್ಪ ಗಟ್ಟಿಯಾದಂತೆ ಎನಿಸಿದಾಗ ಇಳಿಸಿ. ಇದನ್ನು ಒಂದೆರಡು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿ ಇರಿಸಿ ಅಥವಾ ತಣ್ಣಗಾದ ಮೇಲೆ ತಿನ್ನಲು ಕೊಡಿ. ಇದು ತುಂಬಾ ರುಚಿಯಾಗಿರುತ್ತದೆ.
* ಅಕ್ಕಿ ಹಿಟ್ಟಿನ ಬದಲು ಅಕ್ಕಿ ರವೆಯನ್ನು ಉಪಯೋಗಿಸಬಹುದು. ಇದನ್ನು ಪೂರ್ತಿ ಹಾಲಿನಲ್ಲಿಯೇ ಬೇಯಿಸಬೇಕು.
* ಕೇಸರಿ ದಳಗಳನ್ನು ಬಳಸುವಾಗ ಯಾವಾಗಲೂ ಒಂದೆರಡು ಚಮಚ ಹಾಲಿನಲ್ಲಿ ನೆನೆಸಿಡಿ.
ಬೇಕಾಗುವ ಸಾಮಗ್ರಿಗಳು:
ಅಕ್ಕಿಹಿಟ್ಟು - ಎರಡು ದೊಡ್ಡ ಚಮಚ
ಹಾಲು - ಒಂದು ಬಟ್ಟಲು
ಕಂಡೆನ್ಸ್ಡ್ ಮಿಲ್ಕ್ - ಒಂದು ಟಿನ್
ಕೋವಾ ಸ್ವಲ್ಪ
ಏಲಕ್ಕಿ ಪುಡಿ ಸ್ವಲ್ಪ
ಕೇಸರಿ ದಳಗಳು ಸ್ವಲ್ಪ (ಬೇಕಾದರೆ)
ಸಕ್ಕರೆ ರುಚಿಗೆ ತಕ್ಕಷ್ಟು
ಡ್ರೈ ಫ್ರೂಟ್ಸ್ (ಬಾದಾಮಿ,ಗೋಡಂಬಿ,ಪಿಸ್ತ)
ತಯಾರಿಸುವ ವಿಧಾನ:
ಮೊದಲು ಹಾಲು ಕಾಯಿಸಿ,ಅದಕ್ಕೆ ಕಂಡೆನ್ಸ್ಡ್ ಮಿಲ್ಕ್ ಮತ್ತು ಸಕ್ಕರೆಯನ್ನು ಸೇರಿಸಿ,ತಿರುಗಿಸಿ. ಮೂರ್ನಾಲ್ಕು ಚಮಚ ಹಾಲಿನೊಂದಿಗೆ ಅಕ್ಕಿಹಿಟ್ಟನ್ನು ಗಂಟಿಲ್ಲದಂತೆ ಕಲೆಸಿಕೊಂಡು ಅದನ್ನು ಕುದಿಯುತ್ತಿರುವ ಹಾಲಿಗೆ ಹಾಕಿ,ಚೆನ್ನಾಗಿ ಬೆರೆಸಿ,ತಿರುಗಿಸಿ. ಬೇಗ ತಳಹತ್ತುತ್ತದೆ,ಕೈ ಬಿಡದೆ ತಿರುಗಿಸುತ್ತಿರಬೇಕು. ಸ್ವಲ್ಪ ಹೊತ್ತಿನ ನಂತರ ಅದಕ್ಕೆ ಕೋವಾವನ್ನು ಬೆರೆಸಿ,ಏಲಕ್ಕಿ ಪುಡಿ,ಡ್ರೈ ಫ್ರೂಟ್ಸ್ ಮತ್ತು ಕೇಸರಿ ದಳಗಳನ್ನು ಹಾಕಿ,ಚೆನ್ನಾಗಿ ಬೆರೆಸಿ,ತಿರುಗಿಸುತ್ತಿದ್ದು,ಅದು ಸ್ವಲ್ಪ ಹೊತ್ತಿನ ನಂತರ ಸ್ವಲ್ಪ ಗಟ್ಟಿಯಾದಂತೆ ಎನಿಸಿದಾಗ ಇಳಿಸಿ. ಇದನ್ನು ಒಂದೆರಡು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿ ಇರಿಸಿ ಅಥವಾ ತಣ್ಣಗಾದ ಮೇಲೆ ತಿನ್ನಲು ಕೊಡಿ. ಇದು ತುಂಬಾ ರುಚಿಯಾಗಿರುತ್ತದೆ.
* ಅಕ್ಕಿ ಹಿಟ್ಟಿನ ಬದಲು ಅಕ್ಕಿ ರವೆಯನ್ನು ಉಪಯೋಗಿಸಬಹುದು. ಇದನ್ನು ಪೂರ್ತಿ ಹಾಲಿನಲ್ಲಿಯೇ ಬೇಯಿಸಬೇಕು.
* ಕೇಸರಿ ದಳಗಳನ್ನು ಬಳಸುವಾಗ ಯಾವಾಗಲೂ ಒಂದೆರಡು ಚಮಚ ಹಾಲಿನಲ್ಲಿ ನೆನೆಸಿಡಿ.
Friday, March 26, 2010
Panaka / Paniya / Juice- Shri RamaNavami paanaka
ಶ್ರೀ ರಾಮನವಮಿಯಲ್ಲಿ ತಯಾರಿಸುವ ಪಾನಕ:
ಶ್ರೀ ರಾಮನವಮಿ ಹಬ್ಬದಲ್ಲಿ ಬೇರೆ ತಿನಿಸುಗಳಿಗಿಂತ ಪಾನಕ ಮತ್ತು ಕೋಸುಂಬರಿ ತುಂಬಾ ಪ್ರಸಿದ್ಧವಾಗಿವೆ.
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪಾನಕವನ್ನು ತಯಾರಿಸುತ್ತಾರೆ. ಕೆಲವರು ಇದಕ್ಕೆ ಕರಬೂಜ ಹಣ್ಣನ್ನು ಸೇರಿಸುತ್ತಾರೆ. ಇದನ್ನು ಸೇರಿಸಿದಾಗ ಇನ್ನೂ ಹೆಚ್ಚಿನ ರುಚಿಯನ್ನು ಕೊಡುತ್ತದೆ.
ಬೇಕಾಗುವ ಸಾಮಗ್ರಿಗಳು:
ಬೆಲ್ಲದ ಪುಡಿ ರುಚಿಗೆ ತಕ್ಕಷ್ಟು
ಕರಬೂಜ ಹಣ್ಣು ಸ್ವಲ್ಪ
ಒಣಶುಂಠಿ ಸ್ವಲ್ಪ
ಮೆಣಸಿನಕಾಳು ಸ್ವಲ್ಪ
ಸೋಂಪುಕಾಳು ಸ್ವಲ್ಪ
ನೀರು
ಚಿಟಿಕೆ ಉಪ್ಪು
ತಯಾರಿಸುವ ವಿಧಾನ:
ಒಣಶುಂಠಿ,ಸೋಂಪು ಮತ್ತು ಮೆಣಸಿನ ಕಾಳುಗಳನ್ನು ಸ್ವಲ್ಪ ಜಜ್ಜಿಕೊಳ್ಳಿ. ಬೆಲ್ಲ ಮತ್ತು ನೀರನ್ನು ಚೆನ್ನಾಗಿ ಬೆರೆಸಿ, ಬೆಲ್ಲ ಕರಗುವಂತೆ. ಇದರ ಜೊತೆಯಲ್ಲಿಯೇ ಕರಬೂಜ ಹಣ್ಣಿನ ಚೂರುಗಳನ್ನು ಸೇರಿಸಿ, ಕೈನಿಂದ ಹಣ್ಣನ್ನು ಚೆನ್ನಾಗಿ ಅದುಮಿ, ಹಣ್ಣು ಸ್ವಲ್ಪ ಸ್ವಲ್ಪ ಚೂರು ಇರುವಂತೆ ಬಿಡಿ.
*ಕರಬೂಜ ಹಣ್ಣನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ ಸೇರಿಸಬೇಡಿ. ಹಣ್ಣನ್ನು ಕೈನಲ್ಲಿಯೇ ಹಿಸುಕಿದರೆ, ಆ ಬೆಲ್ಲದ ನೀರಿನಲ್ಲಿ ಅದರ ಸುವಾಸನೆಯು ಸೇರುವುದರಿಂದ ರುಚಿಯೊಂದಿಗೆ ಅದರದ್ದೆ ಆದ ಘಮ ಘಮ ಪಾನಕಕ್ಕೆ ಬರುತ್ತದೆ. ಪಾನಕ ಕುಡಿಯುವಾಗ ಹಣ್ಣಿನ ಸಣ್ಣ ಸಣ್ಣ ಚೂರುಗಳು ಬಾಯಿಗೆ ಸಿಕ್ಕಿದರೆ ಚೆನ್ನ. ನಂತರ ಅದಕ್ಕೆ ಕುಟ್ಟಿದ ಪುಡಿ ಮತ್ತು ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಇದೆಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈನಿಂದ ಹಿಸುಕಿ ಬೆರೆಸಿ. ಈಗ ಪಾನಕ ತಯಾರಾಯಿತು.
ಇದು ಸಾಮಾನ್ಯವಾಗಿ ಶ್ರೀ ರಾಮನವಮಿ ಹಬ್ಬದ ದಿನ ತಯಾರಿಸುತ್ತಾರೆ. ಈ ತರಹ ಭಾಕಿ ದಿನಗಳಲ್ಲಿ ಮಾಡಿಕೊಂಡು ಕುಡಿದರೂ ಅದೇನೋ ಹಬ್ಬದ ದಿನ ಅದೊಂದು ತರಹ ಹೊಸ ರುಚಿಯೇನೋ ಎನಿಸುತ್ತೆ.
ಶ್ರೀ ರಾಮನವಮಿ ಹಬ್ಬದಲ್ಲಿ ಬೇರೆ ತಿನಿಸುಗಳಿಗಿಂತ ಪಾನಕ ಮತ್ತು ಕೋಸುಂಬರಿ ತುಂಬಾ ಪ್ರಸಿದ್ಧವಾಗಿವೆ.
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪಾನಕವನ್ನು ತಯಾರಿಸುತ್ತಾರೆ. ಕೆಲವರು ಇದಕ್ಕೆ ಕರಬೂಜ ಹಣ್ಣನ್ನು ಸೇರಿಸುತ್ತಾರೆ. ಇದನ್ನು ಸೇರಿಸಿದಾಗ ಇನ್ನೂ ಹೆಚ್ಚಿನ ರುಚಿಯನ್ನು ಕೊಡುತ್ತದೆ.
ಬೇಕಾಗುವ ಸಾಮಗ್ರಿಗಳು:
ಬೆಲ್ಲದ ಪುಡಿ ರುಚಿಗೆ ತಕ್ಕಷ್ಟು
ಕರಬೂಜ ಹಣ್ಣು ಸ್ವಲ್ಪ
ಒಣಶುಂಠಿ ಸ್ವಲ್ಪ
ಮೆಣಸಿನಕಾಳು ಸ್ವಲ್ಪ
ಸೋಂಪುಕಾಳು ಸ್ವಲ್ಪ
ನೀರು
ಚಿಟಿಕೆ ಉಪ್ಪು
ತಯಾರಿಸುವ ವಿಧಾನ:
ಒಣಶುಂಠಿ,ಸೋಂಪು ಮತ್ತು ಮೆಣಸಿನ ಕಾಳುಗಳನ್ನು ಸ್ವಲ್ಪ ಜಜ್ಜಿಕೊಳ್ಳಿ. ಬೆಲ್ಲ ಮತ್ತು ನೀರನ್ನು ಚೆನ್ನಾಗಿ ಬೆರೆಸಿ, ಬೆಲ್ಲ ಕರಗುವಂತೆ. ಇದರ ಜೊತೆಯಲ್ಲಿಯೇ ಕರಬೂಜ ಹಣ್ಣಿನ ಚೂರುಗಳನ್ನು ಸೇರಿಸಿ, ಕೈನಿಂದ ಹಣ್ಣನ್ನು ಚೆನ್ನಾಗಿ ಅದುಮಿ, ಹಣ್ಣು ಸ್ವಲ್ಪ ಸ್ವಲ್ಪ ಚೂರು ಇರುವಂತೆ ಬಿಡಿ.
*ಕರಬೂಜ ಹಣ್ಣನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ ಸೇರಿಸಬೇಡಿ. ಹಣ್ಣನ್ನು ಕೈನಲ್ಲಿಯೇ ಹಿಸುಕಿದರೆ, ಆ ಬೆಲ್ಲದ ನೀರಿನಲ್ಲಿ ಅದರ ಸುವಾಸನೆಯು ಸೇರುವುದರಿಂದ ರುಚಿಯೊಂದಿಗೆ ಅದರದ್ದೆ ಆದ ಘಮ ಘಮ ಪಾನಕಕ್ಕೆ ಬರುತ್ತದೆ. ಪಾನಕ ಕುಡಿಯುವಾಗ ಹಣ್ಣಿನ ಸಣ್ಣ ಸಣ್ಣ ಚೂರುಗಳು ಬಾಯಿಗೆ ಸಿಕ್ಕಿದರೆ ಚೆನ್ನ. ನಂತರ ಅದಕ್ಕೆ ಕುಟ್ಟಿದ ಪುಡಿ ಮತ್ತು ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಇದೆಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈನಿಂದ ಹಿಸುಕಿ ಬೆರೆಸಿ. ಈಗ ಪಾನಕ ತಯಾರಾಯಿತು.
ಇದು ಸಾಮಾನ್ಯವಾಗಿ ಶ್ರೀ ರಾಮನವಮಿ ಹಬ್ಬದ ದಿನ ತಯಾರಿಸುತ್ತಾರೆ. ಈ ತರಹ ಭಾಕಿ ದಿನಗಳಲ್ಲಿ ಮಾಡಿಕೊಂಡು ಕುಡಿದರೂ ಅದೇನೋ ಹಬ್ಬದ ದಿನ ಅದೊಂದು ತರಹ ಹೊಸ ರುಚಿಯೇನೋ ಎನಿಸುತ್ತೆ.
Tuesday, March 23, 2010
Paanaka / ಪಾನಕ:
ಶ್ರೀ ರಾಮನವಮಿಯಲ್ಲಿ ತಯಾರಿಸುವ ಪಾನಕ:
ಬೇಕಾಗುವ ಸಾಮಗ್ರಿಗಳು:
ಬೆಲ್ಲದ ಪುಡಿ ರುಚಿಗೆ ತಕ್ಕಷ್ಟು
ಒಣಶುಂಠಿ ಸ್ವಲ್ಪ
ಸೋಂಪುಕಾಳು ಸ್ವಲ್ಪ
ನೀರು
ಚಿಟಿಕೆ ಉಪ್ಪು
ಮೆಣಸಿನಕಾಳು ಸ್ವಲ್ಪ
ತಯಾರಿಸುವ ವಿಧಾನ:
ಒಣಶುಂಠಿ,ಸೋಂಪು ಮತ್ತು ಮೆಣಸಿನ ಕಾಳುಗಳನ್ನು ಸ್ವಲ್ಪ ಜಜ್ಜಿಕೊಳ್ಳಿ. ಬೆಲ್ಲ ಮತ್ತು ನೀರನ್ನು ಚೆನ್ನಾಗಿ ಬೆರೆಸಿ, ಬೆಲ್ಲ ಕರಗುವಂತೆ. ನಂತರ ಅದಕ್ಕೆ ಒಣಶುಂಠಿ,ಸೋಂಪು ಮತ್ತು ಮೆಣಸಿನ ಕಾಳುಗಳ ಕುಟ್ಟಿದ ಪುಡಿ ಮತ್ತು ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಕೈನಲ್ಲಿಯೇ ಹಿಸುಕಿದರೆ,ಆ ಬೆಲ್ಲದ ನೀರಿನಲ್ಲಿ ಅದರ ಸುವಾಸನೆಯು ಸೇರುವುದರಿಂದ ರುಚಿಯೊಂದಿಗೆ ಅದರದ್ದೆ ಆದ ಘಮ ಘಮ ಪಾನಕಕ್ಕೆ ಬರುತ್ತದೆ.ನಂತರ ಪಾನಕ ತಯಾರಾಗುತ್ತದೆ. ಇದು ಸಾಮಾನ್ಯವಾಗಿ ಶ್ರೀ ರಾಮನವಮಿ ಹಬ್ಬದ ದಿನ ದೇವಸ್ಥಾನಗಳಲ್ಲೂ ತಯಾರಿಸುತ್ತಾರೆ.
ಬೇಕಾಗುವ ಸಾಮಗ್ರಿಗಳು:
ಬೆಲ್ಲದ ಪುಡಿ ರುಚಿಗೆ ತಕ್ಕಷ್ಟು
ಒಣಶುಂಠಿ ಸ್ವಲ್ಪ
ಸೋಂಪುಕಾಳು ಸ್ವಲ್ಪ
ನೀರು
ಚಿಟಿಕೆ ಉಪ್ಪು
ಮೆಣಸಿನಕಾಳು ಸ್ವಲ್ಪ
ತಯಾರಿಸುವ ವಿಧಾನ:
ಒಣಶುಂಠಿ,ಸೋಂಪು ಮತ್ತು ಮೆಣಸಿನ ಕಾಳುಗಳನ್ನು ಸ್ವಲ್ಪ ಜಜ್ಜಿಕೊಳ್ಳಿ. ಬೆಲ್ಲ ಮತ್ತು ನೀರನ್ನು ಚೆನ್ನಾಗಿ ಬೆರೆಸಿ, ಬೆಲ್ಲ ಕರಗುವಂತೆ. ನಂತರ ಅದಕ್ಕೆ ಒಣಶುಂಠಿ,ಸೋಂಪು ಮತ್ತು ಮೆಣಸಿನ ಕಾಳುಗಳ ಕುಟ್ಟಿದ ಪುಡಿ ಮತ್ತು ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಕೈನಲ್ಲಿಯೇ ಹಿಸುಕಿದರೆ,ಆ ಬೆಲ್ಲದ ನೀರಿನಲ್ಲಿ ಅದರ ಸುವಾಸನೆಯು ಸೇರುವುದರಿಂದ ರುಚಿಯೊಂದಿಗೆ ಅದರದ್ದೆ ಆದ ಘಮ ಘಮ ಪಾನಕಕ್ಕೆ ಬರುತ್ತದೆ.ನಂತರ ಪಾನಕ ತಯಾರಾಗುತ್ತದೆ. ಇದು ಸಾಮಾನ್ಯವಾಗಿ ಶ್ರೀ ರಾಮನವಮಿ ಹಬ್ಬದ ದಿನ ದೇವಸ್ಥಾನಗಳಲ್ಲೂ ತಯಾರಿಸುತ್ತಾರೆ.
Saturday, March 20, 2010
Holige/Obbattu- Kadalebele Holige/ಹೋಳಿಗೆ/ಒಬ್ಬಟ್ಟು
ಪ್ರತಿ ಹಬ್ಬದಲ್ಲಿಯೂ ತೊಗರಿಬೇಳೆಯ ಹೋಳಿಗೆ ತಯಾರಿಸುತ್ತೇವೆ. ಈ ಸಾರಿ ಯಾಕೆ ಕಡ್ಲೆಬೇಳೆ ಹೋಳಿಗೆಯನ್ನು ತಯಾರಿಸಬಾರದು?!!
"ಹೋಳಿಗೆ" ಎಂದರೆ ಅದಕ್ಕೆ ಒಂದು ವಿಧವಾದ ಮಹತ್ವವಿದೆ. ಕೆಲವರು "ಹೋಳಿಗೆ" ಎನ್ನುತ್ತಾರೆ, ಮತ್ತೆ ಕೆಲವರು "ಒಬ್ಬಟ್ಟು" ಎನ್ನುತ್ತಾರೆ. ಯಾವುದು ಕರೆದರು ಒಂದೇ, ರೂಢಿ ಹೇಗಿದೆಯೋ ಹಾಗೆ ಕರೆಯುತ್ತಾರೆ. ಹಬ್ಬ-ಹರಿದಿನಗಳಲ್ಲಿ, ನೆಂಟರು ಬಂದಾಗ, ವಿಶೇಷ ದಿನಗಳಲ್ಲಿ ಹೋಳಿಗೆಗೆ ಹೆಚ್ಚು ಮಹತ್ವ. ಹೋಳಿಗೆಗಳನ್ನು ತಯಾರಿಸುವುದು ಸ್ವಲ್ಪ ಕಷ್ಟ ಸಾಧ್ಯವೇ ಆದರೂ ರುಚಿಯಂತು ತುಂಬಾ ಚೆನ್ನಾಗಿರುತ್ತದೆ. ಹೋಳಿಗೆ ತಯಾರಿಸುವುದೇ ಒಂದು ಹಬ್ಬ ಎನಿಸುತ್ತೆ. ಹೋಳಿಗೆಗಳಲ್ಲಿ ಸುಮಾರು ತರಹ ತಯಾರಿಸುತ್ತೇವೆ. ಈಗ ಇಲ್ಲಿ ಕಡ್ಲೆಬೇಳೆ ಹೋಳಿಗೆಯನ್ನು ತಯಾರಿಸುವ ರೀತಿ ತಿಳಿಯೋಣ.
ಕಡ್ಲೆಬೇಳೆ ಹೋಳಿಗೆ:
ಬೇಕಾಗುವ ಸಾಮಗ್ರಿಗಳು:
ಕಡ್ಲೆಬೇಳೆ- ಅರ್ಧ ಕೆಜಿ
ತೆಂಗಿನಕಾಯಿ ತುರಿ - ಒಂದು ಬಟ್ಟಲು
ಬೆಲ್ಲ ರುಚಿಗೆ - ಕುಟ್ಟಿರುವುದು
ಏಲಕ್ಕಿ ಪುಡಿ ಸ್ವಲ್ಪ
ಮೈದಾಹಿಟ್ಟು - ಎರಡು ಬಟ್ಟಲು
ಚಿರೋಟಿ ರವೆ - ಕಾಲು ಕಪ್
ಹಾಲು - ಕಾಲು ಕಪ್
ತುಪ್ಪ - ಎರಡು ಚಮಚ
ಚಿಟಿಕೆ ಅರಿಸಿನ
ಉಪ್ಪು ಚಿಟಿಕೆ
ಎಣ್ಣೆ
ತಯಾರಿಸುವ ವಿಧಾನ:
ಮೊದಲು ಮೈದಾಹಿಟ್ಟು ಮತ್ತು ಚಿರೋಟಿರವೆಯನ್ನು ಚೆನ್ನಾಗಿ ಬೆರೆಸಿ, ಇದಕ್ಕೆ ಅರಿಶಿನ, ಉಪ್ಪು ಮತ್ತು ತುಪ್ಪ ಹಾಕಿಕೊಂಡು ಬೆರೆಸಿ, ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕಿಂತ ತುಂಬಾ ಮೃದುವಾಗಿ ಕಲೆಸಿ. ಗಟ್ಟಿಯಾಗಿರಬಾರದು. ಅದನ್ನು ಒಂದು ಅಥವಾ ಎರಡು ಗಂಟೆಗಳ ಕಾಲ ನೆನೆಯಲು ಬಿಡಿ. ಎಣ್ಣೆಯನ್ನು ಸ್ವಲ್ಪ ಜಾಸ್ತಿ ಸವರಿಡಿ. ಹೆಚ್ಚಾಗಿ ಎಣ್ಣೆ ಹಾಕಿದಷ್ಟು ಒಳ್ಳೆಯದು. ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ. ಉಪಯೋಗಿಸುವಾಗ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ, ಹೀಗೆ ಕಲೆಸಿರುವ ಹಿಟ್ಟನ್ನು "ಕಣಕ" ಎಂದು ಕರೆಯುತ್ತೀವಿ.
ನಂತರ ಕಡ್ಲೆಬೇಳೆಯನ್ನು, ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ, ಹೆಚ್ಚು ನೀರು ಹಾಕಿ ಬೇಯಿಸಿಕೊಳ್ಳಿ. ಆಗ ಅದಕ್ಕೆ ಒಂದು ಇಂಚು ಶುಂಠಿ ಹಾಕಿ. ಬೇಳೆಯನ್ನು ನುಣ್ಣಗೆ ಬೇಯಿಸದೆ ಸ್ವಲ್ಪ ಗಟ್ಟಿಯಾಗಿರುವಾಗಲೇ ತೆಗೆಯಬೇಕು. ಆಗಾಗಿ ಬೇಳೆ ಬೇಯುವಾಗ ನೋಡುತ್ತಿರಿ. ಅಂಚು ಒಡೆದು ಬೆಂದಿದೆ ಎನಿಸಿದ ಮೇಲೆ ಬೆಂದ ಕಡ್ಲೆಬೇಳೆಯ ನೀರನ್ನು ಬಸಿದುಕೊಳ್ಳಿ. ಶುಂಠಿಯನ್ನು ತೆಗೆದುಹಾಕಿ. ಆಮೇಲೆ ಬಸಿದ ಬೇಳೆಗೆ ಕುಟ್ಟಿದ ಬೆಲ್ಲ ಸೇರಿಸಿ, ಬೆಂದ ಬೇಳೆಯ ಅಳತೆಗೆ ಅರ್ಧದಷ್ಟು ಬೆಲ್ಲವನ್ನು ಸರಿಯಾಗಿ ಹಾಕಿ, ಇದಕ್ಕೆ ಕಾಯಿತುರಿ, ಏಲಕ್ಕಿ ಪುಡಿ ಎಲ್ಲವನ್ನು ಬೆರೆಸಿ, ಒಲೆಯ ಮೇಲಿಟ್ಟು ಸ್ವಲ್ಪ ಎಲ್ಲವೂ ಚೆನ್ನಾಗಿ ಬೆರೆಯುವಂತೆ ತಿರುಗಿಸಿ. ಬೆಲ್ಲ ಮತ್ತು ಬೇಳೆ ಹೊಂದಿದ ಮೇಲೆ ಸ್ಟೌವ್ ಆರಿಸಿ. ಸ್ವಲ್ಪ ತಣ್ಣಗಾದ ಮೇಲೆ ಈ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಸೇರಿಸದೆ ರುಬ್ಬಬೇಕು. ನುಣ್ಣಗೆ ರುಬ್ಬಿದ ಮಿಶ್ರಣಕ್ಕೆ "ಹೂರಣ"ವೆಂದು ಕರೆಯುತ್ತೇವೆ.
--ಇಲ್ಲಿಯವರೆಗೂ ಕಣಕ ಮತ್ತು ಹೂರಣವನ್ನು ತಯಾರಿಸಿಕೊಂಡಿದ್ದಾಯಿತು.
• ಮೈದಾ ಮಿಶ್ರಣವನ್ನು ದಪ್ಪ ಗೋಲಿಗಾತ್ರದ ಅಳತೆಯಲ್ಲಿ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ.
• ಬಾಳೆ ಎಲೆ/ಅಲ್ಯುಮಿನಿಯಂ ಫಾಯಿಲ್/ ಪ್ಲಾಸ್ಟಿಕ್ ಕವರ್/ ಹೋಳಿಗೆ ತಟ್ಟುವ ಕವರ್ -ನಿಮಗೆ ಯಾವುದು ಬೇಕೋ ಅದು ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿಕೊಂಡು ಮೊದಲು ಕಣಕವನ್ನು ಇಟ್ಟು ಸ್ವಲ್ಪ ಸಣ್ಣ ಪೂರಿ ಅಳತೆಗೆ ಒತ್ತಿಕೊಳ್ಳಿ. ಆಗೇ ಕೈನಲ್ಲಿಯೇ ತಟ್ಟಬಹುದು. ಅದರ ಮಧ್ಯ ಭಾಗಕ್ಕೆ ಬೇಳೆ ಹೂರಣವನ್ನು ಇಟ್ಟು ಒಂದು ಬದಿಯಿಂದ ಹಿಟ್ಟನ್ನು ತೆಗೆದು ಮೇಲೆ ಹಾಕುತ್ತಾ ಸ್ವಲ್ಪ ಸ್ವಲ್ಪವೇ ಹಾಕಿ, ಹೀಗೆ ಎಲ್ಲವನ್ನು ಅಂದರೆ ಹೂರಣವು ಕಾಣಿಸದಂತೆ ಒಳಭಾಗಕ್ಕೆ ಮುಚ್ಚಿದ ಮೇಲೆ ಅದನ್ನು ಕವರ್ ಮಾಡಿರುವ ತುದಿಯನ್ನು ಕೆಳಭಾಗಕ್ಕೆ ಹಾಕಿ, ಎಣ್ಣೆ ಸವರಿಕೊಂಡು ಮತ್ತೆ ಲಘುವಾಗಿ ಅದನ್ನು ಹಾಗೆಯೇ ತಟ್ಟಿ. ನಿಮಗೆ ಯಾವ ಅಳತೆ ಅಗಲ ಬೇಕೋ ಅಷ್ಟು ತಟ್ಟಿಕೊಂಡು, ಕಾಯಿಸುವ ತವಾ ಮೇಲೆ ಎಣ್ಣೆ ಹಚ್ಚಿ ಹೋಳಿಗೆಯನ್ನು ಹಾಕಿ. ಸರಿಯಾದ ಉರಿಯಲ್ಲಿ ಬೇಯಿಸಿ. ಎರಡು ಬದಿಯು ತಿರುವಿ ಹಾಕಿ ಎಣ್ಣೆ ಹಾಕಿ ಬೇಯಿಸಿ. ಅಗಲವಾದ ತಟ್ಟೆಯಲ್ಲಿ ಹಾಕಿ. ಇದೇ ರೀತಿ ಎಲ್ಲಾ ಹೋಳಿಗೆಗಳನ್ನು ತಯಾರಿಸಿ, ಒಂದರ ಮೇಲೆ ಒಂದು ಹಾಕಬೇಡಿ, ಪಕ್ಕಕ್ಕೆ ಜೋಡಿಸಿಕೊಳ್ಳಿ. ಹೋಳಿಗೆಯನ್ನು ತುಪ್ಪ ಹಾಕಿ, ತಿನ್ನಬಹುದು. ಜೊತೆಗೆ ಬೇಕಾದರೆ ಹಾಲನ್ನು ಕೂಡ ಹಾಕಿ ತಿನ್ನಬಹುದು. ಇದು ತುಂಬಾ ರುಚಿಕರವಾದ ಮತ್ತು ನಮ್ಮ ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರು ತಯಾರಿಸುವ ಅಡಿಗೆ.
• ಕೆಲವರಿಗೆ ಹೋಳಿಗೆ ದಪ್ಪ ಇಷ್ಟಪಡುತ್ತಾರೆ. ಆಗ ತಟ್ಟುವಾಗ ಹೂರಣ ಜಾಸ್ತಿ ತುಂಬಿ, ಸ್ವಲ್ಪ ಚಿಕ್ಕದಾಗಿ ತಟ್ಟಿ.
• ತೆಳುವಾಗಿ ಇಷ್ಟಪಡುವವರು ತೆಳ್ಳಗೆ ತಟ್ಟಿಕೊಂಡು ಬೇಯಿಸಿ.
• ಹೂರಣ ತುಂಬಿ ಕವರ್ ಮಾಡುವಾಗ ಸರಿಯಾಗಿ ಮುಚ್ಚಿ. (ಸ್ಟಫ್ ಮಾಡಿಕೊಳ್ಳಿ)
• ಎಣ್ಣೆಯನ್ನು ಸವರಿಕೊಳ್ಳುತ್ತಾ ಇರಬೇಕಾಗುತ್ತದೆ. ಆಗ ಹಿಟ್ಟು ಕೈಗೆ ಅಂಟಿಕೊಳ್ಳುವುದಿಲ್ಲ.
• ಬೇಯಿಸುವಾಗಲೂ ಅಷ್ಟೇ ಹುಷಾರಾಗಿ ಬೇಯಿಸಿ. ಹೋಳಿಗೆಗಳು ಎರಡು ದಿನ ಹಾಳಾಗದೆ ಚೆನ್ನಾಗಿ ಇರುತ್ತವೆ.
Monday, March 1, 2010
Raagi Mudde
ರಾಗಿ ಮುದ್ದೆ:
ಬೇಕಾಗಿರುವ ಸಾಮಗ್ರಿಗಳು:
೧ ಲೋಟ ರಾಗಿ ಹಿಟ್ಟು
೨ ಲೋಟ ನೀರು
ವಿಧಾನ:
ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಯಲು ಬಿಡಿ, ನೀರು ಚೆನ್ನಾಗಿ ಕುದಿಯುವಾಗ ರಾಗಿಹಿಟ್ಟನ್ನು ಹಾಕಿ, ೧೦ ನಿಮಿಷ ಹಾಗೆ ಕುದಿಯಲು ಇಡಬೇಕು, ಅದನ್ನು ತಿರುಗಿಸಬಾರದು, ಹಿಟ್ಟು ಹೇಗೆ ಹಾಕಿರುತ್ತಿರೋ ಹಾಗೆ ಕುದಿಯಬೇಕು. ೧೦ ಅಥವ ೧೫ ನಿಮಿಷದ ನಂತರ ಒಂದು ಕೋಲು ಅಥವಾ ಒಂದು ಸೌಟನ್ನು ತೆಗೆದುಕೊಂಡು ಮಧ್ಯಭಾಗದಿಂದ ಆ ಹಿಟ್ಟನ್ನು ಒಡೆದುಕೊಂಡು ಹಾಗೆ ಮೆಲ್ಲಗೆ ಗಂಟುಗಳು ಬರದಂತೆ ಚೆನ್ನಾಗಿ ಗೊಟಾಯಿಸಿಕೊಂಡು ತಿರುಗಿಸಬೇಕು. ಮಧ್ಯೆ ಸ್ವಲ್ಪ ನೀರು ಸೇರಿಸಿಕೊಳ್ಳಿ ಬೇಕೆನಿಸಿದರೆ, ಸ್ವಲ್ಪ ತೆಳು ಆದರೆ ಹಿಟ್ಟು ಸೇರಿಸಿ, ಗಟ್ಟಿಯಾದರೆ ನೀರು ಸೇರಿಸಿಕೊಂಡು ಗಂಟಿಲ್ಲದಂತೆ ತಿರುಗಿಸಿ, ನಂತರ ಒಲೆಯ ಮೇಲಿಂದ ಇಳಿಸಿಕೊಂಡು ಹಿಟ್ಟು ಬಿಸಿಯಿರುವಾಗಲೆ ಅದನ್ನು ಕಟ್ಟಬೇಕು.ಕೈಯನ್ನು ನೀರು ಅಥವ ತುಪ್ಪದಲ್ಲಿ ಅದ್ದಿಕೊಂಡು ಚೆನ್ನಾಗಿ ನಾದಿಕೊಂಡು ನಿಮಗೆ ಬೇಕಾದ ಅಳತೆಯಲ್ಲಿ ಉಂಡೆಯನ್ನು ಕಟ್ಟಿದರೆ ಶಕ್ತಿಯುತವಾದ ರಾಗಿಮುದ್ದೆ ತಯಾರಾಗುತ್ತದೆ,
ಇದು ನಮ್ಮ ಕರ್ನಾಟಕದಲ್ಲಿ ತುಂಬಾ ಪ್ರಸಿಧ್ದವಾದ ಆಹಾರವಾಗಿದೆ. ಇದು ಮೊದಲು ತಯಾರಿಸುವಾಗ ಸ್ವಲ್ಪ ಕಷ್ಟ ಎನಿಸಬಹುದು, ಒಮ್ಮೆ ಕೆಟ್ಟು ಹೋದರು ಪರವಾಗಿಲ್ಲ, ಪ್ರಯತ್ನಪಡಿ, ಆಮೇಲೆ ಸರಿಯಾಗಿ ಬರುತ್ತದೆ, ಸರಿಯಾದ ಪ್ರಮಾಣದಲ್ಲಿ ನೀರು ಮತ್ತು ಹಿಟ್ಟನ್ನು ಹಾಕಿ ಹದವಾಗಿ ಬೇಯಿಸಿಕೊಂಡು ನಂತರ ಉಂಡೆಮಾಡಿಕೊಳ್ಳಿ, ಇದನ್ನು ಸೊಪ್ಪಿನ ಬಸ್ಸಾರು, ಬೇಳೆಸಾರು, ಮಸಾಲೆ ಸಾರಿನೊಂದಿಗೆ ಪುಟ್ಟ ಪುಟ್ಟ ಉಂಡೆ ಮಾಡಿಕೊಂಡು ಸವಿಯಿರಿ.
ರಾಗಿಯಲ್ಲಿ ಕಬ್ಬಿಣದ ಅಂಶ ಜಾಸ್ತಿ ಇರುತ್ತದೆ, ಆಗಾಗಿ ಇದನ್ನು ಪ್ರತಿನಿತ್ಯವೂ ಸೇವಿಸುವುದರಿಂದ ಬಹಳ ಒಳ್ಳೆಯದು. ಶಕ್ತಿಯುತವಾದ ಆಹಾರ ಇದು. ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಮಾತು ಪ್ರತೀತಿಯಲ್ಲಿದೆ.
ರಾಗಿಮುದ್ದೆಯ ರೆಸಿಪಿಯನ್ನು ತಯಾರಿಸುವ ವಿಧಾನವನ್ನು ರಾಗಿಮುದ್ದೆ ಲೇಬಲ್ ನಲ್ಲಿ ನೋಡಿ. ಈ ರಾಗಿಮುದ್ದೆಯು ಮೊಳಕೆಕಾಳುಗಳ ಮಸಾಲೆ ಸಾರು, ಬಸ್ಸಾರುಗಳೊಂದಿಗೆ ತುಂಬಾ ರುಚಿಯಾಗಿರುತ್ತದೆ, ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ಆಹಾರ, ಇಂಥ ಸ್ವಾದಿಷ್ಟವಾದ ಆಹಾರವು ನಮ್ಮ ಕರ್ನಾಟಕದ್ದು ಎಂದು ಹೇಳಲು ಹೆಮ್ಮೆಯಾಗುತ್ತದೆ, ಇದರಿಂದ ಅನೇಕ ಖಾಯಿಲೆಗಳು ಗುಣಮುಖವಾಗುತ್ತದೆ. ಆದ್ದರಿಂದ ಪ್ರತಿನಿತ್ಯವು ರಾಗಿಯನ್ನು ಬಳಸುವುದು ಒಳ್ಳೆಯದು.
ಬೇಕಾಗಿರುವ ಸಾಮಗ್ರಿಗಳು:
೧ ಲೋಟ ರಾಗಿ ಹಿಟ್ಟು
೨ ಲೋಟ ನೀರು
ವಿಧಾನ:
ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಯಲು ಬಿಡಿ, ನೀರು ಚೆನ್ನಾಗಿ ಕುದಿಯುವಾಗ ರಾಗಿಹಿಟ್ಟನ್ನು ಹಾಕಿ, ೧೦ ನಿಮಿಷ ಹಾಗೆ ಕುದಿಯಲು ಇಡಬೇಕು, ಅದನ್ನು ತಿರುಗಿಸಬಾರದು, ಹಿಟ್ಟು ಹೇಗೆ ಹಾಕಿರುತ್ತಿರೋ ಹಾಗೆ ಕುದಿಯಬೇಕು. ೧೦ ಅಥವ ೧೫ ನಿಮಿಷದ ನಂತರ ಒಂದು ಕೋಲು ಅಥವಾ ಒಂದು ಸೌಟನ್ನು ತೆಗೆದುಕೊಂಡು ಮಧ್ಯಭಾಗದಿಂದ ಆ ಹಿಟ್ಟನ್ನು ಒಡೆದುಕೊಂಡು ಹಾಗೆ ಮೆಲ್ಲಗೆ ಗಂಟುಗಳು ಬರದಂತೆ ಚೆನ್ನಾಗಿ ಗೊಟಾಯಿಸಿಕೊಂಡು ತಿರುಗಿಸಬೇಕು. ಮಧ್ಯೆ ಸ್ವಲ್ಪ ನೀರು ಸೇರಿಸಿಕೊಳ್ಳಿ ಬೇಕೆನಿಸಿದರೆ, ಸ್ವಲ್ಪ ತೆಳು ಆದರೆ ಹಿಟ್ಟು ಸೇರಿಸಿ, ಗಟ್ಟಿಯಾದರೆ ನೀರು ಸೇರಿಸಿಕೊಂಡು ಗಂಟಿಲ್ಲದಂತೆ ತಿರುಗಿಸಿ, ನಂತರ ಒಲೆಯ ಮೇಲಿಂದ ಇಳಿಸಿಕೊಂಡು ಹಿಟ್ಟು ಬಿಸಿಯಿರುವಾಗಲೆ ಅದನ್ನು ಕಟ್ಟಬೇಕು.ಕೈಯನ್ನು ನೀರು ಅಥವ ತುಪ್ಪದಲ್ಲಿ ಅದ್ದಿಕೊಂಡು ಚೆನ್ನಾಗಿ ನಾದಿಕೊಂಡು ನಿಮಗೆ ಬೇಕಾದ ಅಳತೆಯಲ್ಲಿ ಉಂಡೆಯನ್ನು ಕಟ್ಟಿದರೆ ಶಕ್ತಿಯುತವಾದ ರಾಗಿಮುದ್ದೆ ತಯಾರಾಗುತ್ತದೆ,
ಇದು ನಮ್ಮ ಕರ್ನಾಟಕದಲ್ಲಿ ತುಂಬಾ ಪ್ರಸಿಧ್ದವಾದ ಆಹಾರವಾಗಿದೆ. ಇದು ಮೊದಲು ತಯಾರಿಸುವಾಗ ಸ್ವಲ್ಪ ಕಷ್ಟ ಎನಿಸಬಹುದು, ಒಮ್ಮೆ ಕೆಟ್ಟು ಹೋದರು ಪರವಾಗಿಲ್ಲ, ಪ್ರಯತ್ನಪಡಿ, ಆಮೇಲೆ ಸರಿಯಾಗಿ ಬರುತ್ತದೆ, ಸರಿಯಾದ ಪ್ರಮಾಣದಲ್ಲಿ ನೀರು ಮತ್ತು ಹಿಟ್ಟನ್ನು ಹಾಕಿ ಹದವಾಗಿ ಬೇಯಿಸಿಕೊಂಡು ನಂತರ ಉಂಡೆಮಾಡಿಕೊಳ್ಳಿ, ಇದನ್ನು ಸೊಪ್ಪಿನ ಬಸ್ಸಾರು, ಬೇಳೆಸಾರು, ಮಸಾಲೆ ಸಾರಿನೊಂದಿಗೆ ಪುಟ್ಟ ಪುಟ್ಟ ಉಂಡೆ ಮಾಡಿಕೊಂಡು ಸವಿಯಿರಿ.
ರಾಗಿಯಲ್ಲಿ ಕಬ್ಬಿಣದ ಅಂಶ ಜಾಸ್ತಿ ಇರುತ್ತದೆ, ಆಗಾಗಿ ಇದನ್ನು ಪ್ರತಿನಿತ್ಯವೂ ಸೇವಿಸುವುದರಿಂದ ಬಹಳ ಒಳ್ಳೆಯದು. ಶಕ್ತಿಯುತವಾದ ಆಹಾರ ಇದು. ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಮಾತು ಪ್ರತೀತಿಯಲ್ಲಿದೆ.
ರಾಗಿಮುದ್ದೆಯ ರೆಸಿಪಿಯನ್ನು ತಯಾರಿಸುವ ವಿಧಾನವನ್ನು ರಾಗಿಮುದ್ದೆ ಲೇಬಲ್ ನಲ್ಲಿ ನೋಡಿ. ಈ ರಾಗಿಮುದ್ದೆಯು ಮೊಳಕೆಕಾಳುಗಳ ಮಸಾಲೆ ಸಾರು, ಬಸ್ಸಾರುಗಳೊಂದಿಗೆ ತುಂಬಾ ರುಚಿಯಾಗಿರುತ್ತದೆ, ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ಆಹಾರ, ಇಂಥ ಸ್ವಾದಿಷ್ಟವಾದ ಆಹಾರವು ನಮ್ಮ ಕರ್ನಾಟಕದ್ದು ಎಂದು ಹೇಳಲು ಹೆಮ್ಮೆಯಾಗುತ್ತದೆ, ಇದರಿಂದ ಅನೇಕ ಖಾಯಿಲೆಗಳು ಗುಣಮುಖವಾಗುತ್ತದೆ. ಆದ್ದರಿಂದ ಪ್ರತಿನಿತ್ಯವು ರಾಗಿಯನ್ನು ಬಳಸುವುದು ಒಳ್ಳೆಯದು.
Tuesday, February 16, 2010
Rave Unde - ರವೆ ಮತ್ತು ಹಾಲಿನಪುಡಿಯ ಉಂಡೆ
ರವೆಉಂಡೆ:-
ರವೆಉಂಡೆಗೆ ಅದರದ್ದೇ ಆದ ಸ್ಥಾನವಿದೆ. ಹಬ್ಬಗಳಲ್ಲಿ,ಅದರಲ್ಲೂ ಮಹಾಶಿವರಾತ್ರಿ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿಗಳಲ್ಲಿ ಇದು ಇರಲೇಬೇಕು. ಇತ್ತೀಚೆಗೆ ರವೆಯಿಂದ ಸುಮಾರು ಸಿಹಿತಿಂಡಿ ತಯಾರಿಸುತ್ತೇವೆ. ಆದರೂ ಅದೆಲ್ಲವು ರವೆಉಂಡೆಯಷ್ಟು ರುಚಿ ಬರುವುದಿಲ್ಲ.ಇದೇ ರವೆಉಂಡೆಗೆ ಸ್ವಲ್ಪ ಚೇಂಚ್ ಇರಲಿ ಅಂತ ಹಾಲಿನ ಪುಡಿ ಬೆರೆಸಿ ತಯಾರಿಸಿ ನೋಡೋಣ ಹೇಗೆ ಬರುತ್ತೆ ಅಂತ ಪ್ರಯತ್ನಿಸಿದೆ.ಮತ್ತು ಅದರ ಜೊತೆ ಕೇಸರಿ ಮತ್ತು ರೋಸ್ ವಾಟರ್ ಬೆರೆಸಿ,ಸ್ವಂತಃ ಕ್ರಿಯೇಟಿವ್ ಆದ ರವೆಉಂಡೆ ತಯಾರಿಸೋಣ ಎನಿಸಿತು. ತುಂಬಾ ಚೆನ್ನಾಗಿಯೇ ಬಂತು,ಆಗಾಗಿ ಆ ರೆಸಿಪಿ ಬರೆಯೋಣ ಎನಿಸಿತು. ಅದನ್ನು ತಯಾರಿಸುವ ಬಗೆ ತಿಳಿಯೋಣ ಬನ್ನಿ.
ರವೆ ಮತ್ತು ಹಾಲಿನಪುಡಿಯ ಉಂಡೆ:
ಬೇಕಾಗುವ ಸಾಮಗ್ರಿಗಳು:
ರವೆ - ಎರಡು ಕಪ್
ಸಕ್ಕರೆ - ಎರಡು ಕಪ್
ಕೊಬ್ಬರಿ ತುರಿ- ಒಂದು ಕಪ್
ಹಾಲಿನ ಪುಡಿ - ನಾಲ್ಕು ದೊಡ್ಡ ಚಮಚ
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ
ಬಾದಾಮಿ
ರೋಸ್ ವಾಟರ್/ಗುಲಾಬಿ ನೀರು - ಒಂದು ಚಮಚ
ಕೇಸರಿ ದಳಗಳು - ಅರ್ಧ ಚಮಚ
ಏಲಕ್ಕಿ ಪುಡಿ ಸ್ವಲ್ಪ
ಹಾಲು - ಅರ್ಧ ಕಪ್
ತುಪ್ಪ - ನಾಲ್ಕು ಚಮಚ
ತಯಾರಿಸುವ ರೀತಿ:
ದಪ್ಪ ತಳದ ಅಥವಾ ನಾನ್ ಸ್ಟಿಕ್ ಪಾತ್ರೆಯಲ್ಲಿ ರವೆಯನ್ನು ಸ್ವಲ್ಪ ತುಪ್ಪ ಹಾಕಿ ಘಂ ಎನ್ನುವಂತೆ ಚೆನ್ನಾಗಿ ಹುರಿದುಕೊಳ್ಳಿ. ಹದವಾದ ಉರಿಯಲ್ಲಿ ಹುರಿದರೆ ಒಳ್ಳೆಯದು. ಇಲ್ಲವೆಂದರೆ ರವೆ ಸೀದು ಹೋಗುತ್ತದೆ.
ಅದಕ್ಕೆ ಸಕ್ಕರೆ ಸೇರಿಸಿ,ಬೆರೆಸಿ,ಕೊಬ್ರಿತುರಿ ಮತ್ತು ಹಾಲಿನ ಪುಡಿ ಕೂಡ ಹಾಕಿ. ದ್ರಾಕ್ಷಿ,ಗೋಡಂಬಿ,ಬಾದಾಮಿ,ರೋಸ್ ವಾಟರ್/ಗುಲಾಬಿ ನೀರು,ಕೇಸರಿ ದಳಗಳು ಮತ್ತು ಏಲಕ್ಕಿ ಪುಡಿ ಸೇರಿಸಿ,ಚೆನ್ನಾಗಿ ಬೆರೆಸಿ. ಅದಕ್ಕೆ ತುಪ್ಪ ಮತ್ತು ಕಾಲು/ಅರ್ಧ ಕಪ್ ಹಾಲು ಹಾಕಿ ಚೆನ್ನಾಗಿ ಕೈ ಆಡಿಸಿ,ಒಂದೆರಡು ನಿಮಿಷ ಬೆರೆಸಿ,ಚೆನ್ನಾಗಿ ತಿರುವಿ,ಒಲೆಯಿಂದ ಕೆಳಗಿಳಿಸಿ. ಸ್ವಲ್ಪ ತಣ್ಣಗಾದ ಮೇಲೆ ಹಾಲಿನ / ತುಪ್ಪದ ಕೈ ನಿಂದ ರವೆಯ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು, ನಿಮಗೆ ಯಾವ ಗಾತ್ರದ ಉಂಡೆ ಬೇಕೋ ಆ ರೀತಿ ಉಂಡೆ ತಯಾರಿಸಿ. ರುಚಿಕರವಾದ ರವೆಉಂಡೆ ಸವಿಯಲು ತಯಾರಾಗುತ್ತದೆ. ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿಯಾಗುತ್ತವೆ. ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟು ಕೆಲವು ದಿನ ಸ್ಟೋರ್ ಮಾಡಿಟ್ಟುಕೊಂಡು ತಿನ್ನಬಹುದು. ಫ್ರಿಡ್ಜ್ ನಲ್ಲಿ ಇಟ್ಟರೆ ಸುಮಾರು ದಿನ ಇರುತ್ತದೆ.
* ಉಂಡೆಗಳು ಸ್ವಲ್ಪ ಸಾಪ್ಟ್/ಮೆದುವಾಗಿ ಇರಬೇಕೆಂದರೆ ಇನ್ನೂ ಸ್ವಲ್ಪ ಹಾಲನ್ನು ಹೆಚ್ಚಿಗೆ ಬೆರೆಸಬಹುದು.
* ಸಕ್ಕರೆಯನ್ನು ಪುಡಿ ಮಾಡಿ ಸಹ ಹಾಕಬಹುದು.
* ರವೆಯನ್ನು ಸೀದಿಸಿಕೊಂಡು ಹುರಿಯಬೇಡಿ.
* ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದುಕೊಂಡು ಬೇಕಾದರು ಸೇರಿಸಬಹುದು.
* ರವೆಯ ಮಿಶ್ರಣವನ್ನು ತುಂಬಾ ತೆಳುವಾಗಿ /ಪುಡಿ ಪುಡಿಯಾಗಿ ತಯಾರಿಸದೆ, ಸರಿಯಾದ ಹದದಲ್ಲಿ ತಯಾರಿಸಿದರೆ ಉಂಡೆಗಳನ್ನು ಕಟ್ಟಲು ಸುಲಭವಾಗುತ್ತದೆ.
ರವೆಉಂಡೆಗೆ ಅದರದ್ದೇ ಆದ ಸ್ಥಾನವಿದೆ. ಹಬ್ಬಗಳಲ್ಲಿ,ಅದರಲ್ಲೂ ಮಹಾಶಿವರಾತ್ರಿ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿಗಳಲ್ಲಿ ಇದು ಇರಲೇಬೇಕು. ಇತ್ತೀಚೆಗೆ ರವೆಯಿಂದ ಸುಮಾರು ಸಿಹಿತಿಂಡಿ ತಯಾರಿಸುತ್ತೇವೆ. ಆದರೂ ಅದೆಲ್ಲವು ರವೆಉಂಡೆಯಷ್ಟು ರುಚಿ ಬರುವುದಿಲ್ಲ.ಇದೇ ರವೆಉಂಡೆಗೆ ಸ್ವಲ್ಪ ಚೇಂಚ್ ಇರಲಿ ಅಂತ ಹಾಲಿನ ಪುಡಿ ಬೆರೆಸಿ ತಯಾರಿಸಿ ನೋಡೋಣ ಹೇಗೆ ಬರುತ್ತೆ ಅಂತ ಪ್ರಯತ್ನಿಸಿದೆ.ಮತ್ತು ಅದರ ಜೊತೆ ಕೇಸರಿ ಮತ್ತು ರೋಸ್ ವಾಟರ್ ಬೆರೆಸಿ,ಸ್ವಂತಃ ಕ್ರಿಯೇಟಿವ್ ಆದ ರವೆಉಂಡೆ ತಯಾರಿಸೋಣ ಎನಿಸಿತು. ತುಂಬಾ ಚೆನ್ನಾಗಿಯೇ ಬಂತು,ಆಗಾಗಿ ಆ ರೆಸಿಪಿ ಬರೆಯೋಣ ಎನಿಸಿತು. ಅದನ್ನು ತಯಾರಿಸುವ ಬಗೆ ತಿಳಿಯೋಣ ಬನ್ನಿ.
ರವೆ ಮತ್ತು ಹಾಲಿನಪುಡಿಯ ಉಂಡೆ:
ಬೇಕಾಗುವ ಸಾಮಗ್ರಿಗಳು:
ರವೆ - ಎರಡು ಕಪ್
ಸಕ್ಕರೆ - ಎರಡು ಕಪ್
ಕೊಬ್ಬರಿ ತುರಿ- ಒಂದು ಕಪ್
ಹಾಲಿನ ಪುಡಿ - ನಾಲ್ಕು ದೊಡ್ಡ ಚಮಚ
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ
ಬಾದಾಮಿ
ರೋಸ್ ವಾಟರ್/ಗುಲಾಬಿ ನೀರು - ಒಂದು ಚಮಚ
ಕೇಸರಿ ದಳಗಳು - ಅರ್ಧ ಚಮಚ
ಏಲಕ್ಕಿ ಪುಡಿ ಸ್ವಲ್ಪ
ಹಾಲು - ಅರ್ಧ ಕಪ್
ತುಪ್ಪ - ನಾಲ್ಕು ಚಮಚ
ತಯಾರಿಸುವ ರೀತಿ:
ದಪ್ಪ ತಳದ ಅಥವಾ ನಾನ್ ಸ್ಟಿಕ್ ಪಾತ್ರೆಯಲ್ಲಿ ರವೆಯನ್ನು ಸ್ವಲ್ಪ ತುಪ್ಪ ಹಾಕಿ ಘಂ ಎನ್ನುವಂತೆ ಚೆನ್ನಾಗಿ ಹುರಿದುಕೊಳ್ಳಿ. ಹದವಾದ ಉರಿಯಲ್ಲಿ ಹುರಿದರೆ ಒಳ್ಳೆಯದು. ಇಲ್ಲವೆಂದರೆ ರವೆ ಸೀದು ಹೋಗುತ್ತದೆ.
ಅದಕ್ಕೆ ಸಕ್ಕರೆ ಸೇರಿಸಿ,ಬೆರೆಸಿ,ಕೊಬ್ರಿತುರಿ ಮತ್ತು ಹಾಲಿನ ಪುಡಿ ಕೂಡ ಹಾಕಿ. ದ್ರಾಕ್ಷಿ,ಗೋಡಂಬಿ,ಬಾದಾಮಿ,ರೋಸ್ ವಾಟರ್/ಗುಲಾಬಿ ನೀರು,ಕೇಸರಿ ದಳಗಳು ಮತ್ತು ಏಲಕ್ಕಿ ಪುಡಿ ಸೇರಿಸಿ,ಚೆನ್ನಾಗಿ ಬೆರೆಸಿ. ಅದಕ್ಕೆ ತುಪ್ಪ ಮತ್ತು ಕಾಲು/ಅರ್ಧ ಕಪ್ ಹಾಲು ಹಾಕಿ ಚೆನ್ನಾಗಿ ಕೈ ಆಡಿಸಿ,ಒಂದೆರಡು ನಿಮಿಷ ಬೆರೆಸಿ,ಚೆನ್ನಾಗಿ ತಿರುವಿ,ಒಲೆಯಿಂದ ಕೆಳಗಿಳಿಸಿ. ಸ್ವಲ್ಪ ತಣ್ಣಗಾದ ಮೇಲೆ ಹಾಲಿನ / ತುಪ್ಪದ ಕೈ ನಿಂದ ರವೆಯ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು, ನಿಮಗೆ ಯಾವ ಗಾತ್ರದ ಉಂಡೆ ಬೇಕೋ ಆ ರೀತಿ ಉಂಡೆ ತಯಾರಿಸಿ. ರುಚಿಕರವಾದ ರವೆಉಂಡೆ ಸವಿಯಲು ತಯಾರಾಗುತ್ತದೆ. ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿಯಾಗುತ್ತವೆ. ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟು ಕೆಲವು ದಿನ ಸ್ಟೋರ್ ಮಾಡಿಟ್ಟುಕೊಂಡು ತಿನ್ನಬಹುದು. ಫ್ರಿಡ್ಜ್ ನಲ್ಲಿ ಇಟ್ಟರೆ ಸುಮಾರು ದಿನ ಇರುತ್ತದೆ.
* ಉಂಡೆಗಳು ಸ್ವಲ್ಪ ಸಾಪ್ಟ್/ಮೆದುವಾಗಿ ಇರಬೇಕೆಂದರೆ ಇನ್ನೂ ಸ್ವಲ್ಪ ಹಾಲನ್ನು ಹೆಚ್ಚಿಗೆ ಬೆರೆಸಬಹುದು.
* ಸಕ್ಕರೆಯನ್ನು ಪುಡಿ ಮಾಡಿ ಸಹ ಹಾಕಬಹುದು.
* ರವೆಯನ್ನು ಸೀದಿಸಿಕೊಂಡು ಹುರಿಯಬೇಡಿ.
* ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದುಕೊಂಡು ಬೇಕಾದರು ಸೇರಿಸಬಹುದು.
* ರವೆಯ ಮಿಶ್ರಣವನ್ನು ತುಂಬಾ ತೆಳುವಾಗಿ /ಪುಡಿ ಪುಡಿಯಾಗಿ ತಯಾರಿಸದೆ, ಸರಿಯಾದ ಹದದಲ್ಲಿ ತಯಾರಿಸಿದರೆ ಉಂಡೆಗಳನ್ನು ಕಟ್ಟಲು ಸುಲಭವಾಗುತ್ತದೆ.
Saturday, February 13, 2010
Wheat Pongal - ಗೋಧಿನುಚ್ಚಿನ ಸಿಹಿ ಪೊಂಗಲ್
ಗೋಧಿನುಚ್ಚಿನ ಸಿಹಿ ಪೊಂಗಲ್:
ಸಾಮಗ್ರಿಗಳು:
ಗೋಧಿ ನುಚ್ಚು - ಒಂದು ಕಪ್
ಹೆಸರುಬೇಳೆ - ಒಂದು ಕಪ್
ತುಪ್ಪ - ಎರಡು ದೊಡ್ಡ ಚಮಚ
ಹಾಲು - ಒಂದು ಕಪ್
ಸಕ್ಕರೆ - ರುಚಿಗೆ ತಕ್ಕಂತೆ
ಏಲಕ್ಕಿ ಪುಡಿ ಸ್ವಲ್ಪ
ದ್ರಾಕ್ಷಿ ಮತ್ತು ಗೋಡಂಬಿ
ಕೇಸರಿ ದಳಗಳು
ತಯಾರಿಸುವ ವಿಧಾನ:
ಮೊದಲು ಹೆಸರುಬೇಳೆಯನ್ನು ಸ್ವಲ್ಪ ಹಾಕಿ ಘಂ ಎನ್ನುವಂತೆ ಹುರಿದುಕೊಳ್ಳಿ. ಹದವಾಗಿ ಹುರಿದಿಡಿ.
ಕೇಸರಿದಳಗಳನ್ನು ಒಂದೆರಡು ಚಮಚ ಹಾಲಿನೊಂದಿಗೆ ನೆನೆಸಿಡಿ.
ಗೋಧಿನುಚ್ಚು ಮತ್ತು ಹೆಸರುಬೇಳೆಯನ್ನು ಕುಕ್ಕರ್ ಅಥವಾ ರೈಸ್ ಕುಕ್ಕರ್ ಗೆ ಹಾಕಿ, ಚಿಟಿಕೆ ಉಪ್ಪು ಮತ್ತು ಅಳತೆಗೆ ತಕ್ಕಂತೆ ನೀರು ಹಾಕಿ, ಬೇಯಿಸಿಕೊಳ್ಳಿ.
ಬೇರೆ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದುಕೊಂಡು , ಅದಕ್ಕೆ ಹಾಲು ಹಾಕಿ ಸಕ್ಕರೆ ಬೆರೆಸಿ ಕುದಿಯಲು ಬಿಡಿ. ನಂತರ ಬೆಂದ ನುಚ್ಚು ಮತ್ತು ಹೆಸರುಬೇಳೆ ಮಿಶ್ರಣವನ್ನು ಹಾಕಿ, ಚೆನ್ನಾಗಿ ಬೆರೆಸಿ. ನೆನೆಸಿದ ಕೇಸರಿ, ಏಲಕ್ಕಿ ಪುಡಿ ಮತ್ತು ಸ್ವಲ್ಪ ತುಪ್ಪ ಹಾಕಿ ಬೆರೆಸಿ. ಕೊಬ್ಬರಿ ತುರಿಯನ್ನು ಸಹ ಹಾಕಿ ಚೆನ್ನಾಗಿ ಬೆರೆಸಿ. ಇಳಿಸಿ. ಗೋಧಿನುಚ್ಚಿನ ಪೊಂಗಲ್ ತಿನ್ನಲು ತಯಾರಾಗುತ್ತದೆ.
* ಹೆಸರುಬೇಳೆಯನ್ನು ಸೀದಿಸಬೇಡಿ, ಹಸಿವಾಸನೆ ಹೋಗುವವರೆಗೂ/ ಸ್ವಲ್ಪ ಬಣ್ಣ ಬದಲಾಗುವವರೆಗೂ ಮಾತ್ರ ಹುರಿದುಕೊಳ್ಳಿ.
* ಗೋಧಿನುಚ್ಚಿನಿಂದ ತಯಾರಿಸಿದ ಇದು ಮಧುಮೇಹ ಇರುವವರಿಗೆ ಒಳ್ಳೆಯದು. ಅಕ್ಕಿ ಬದಲಿಗೆ ಅವರು ಗೋಧಿ ನುಚ್ಚು ಬಳಸಬಹುದು.
* ಇದು ಸಹ ತುಂಬಾ ರುಚಿಯಾಗಿರುತ್ತದೆ. ಗೋಧಿಯಿಂದ ಅನೇಕ ಸಿಹಿ ತಯಾರಿಸುತ್ತೇವೆ.
ಸಾಮಗ್ರಿಗಳು:
ಗೋಧಿ ನುಚ್ಚು - ಒಂದು ಕಪ್
ಹೆಸರುಬೇಳೆ - ಒಂದು ಕಪ್
ತುಪ್ಪ - ಎರಡು ದೊಡ್ಡ ಚಮಚ
ಹಾಲು - ಒಂದು ಕಪ್
ಸಕ್ಕರೆ - ರುಚಿಗೆ ತಕ್ಕಂತೆ
ಏಲಕ್ಕಿ ಪುಡಿ ಸ್ವಲ್ಪ
ದ್ರಾಕ್ಷಿ ಮತ್ತು ಗೋಡಂಬಿ
ಕೇಸರಿ ದಳಗಳು
ತಯಾರಿಸುವ ವಿಧಾನ:
ಮೊದಲು ಹೆಸರುಬೇಳೆಯನ್ನು ಸ್ವಲ್ಪ ಹಾಕಿ ಘಂ ಎನ್ನುವಂತೆ ಹುರಿದುಕೊಳ್ಳಿ. ಹದವಾಗಿ ಹುರಿದಿಡಿ.
ಕೇಸರಿದಳಗಳನ್ನು ಒಂದೆರಡು ಚಮಚ ಹಾಲಿನೊಂದಿಗೆ ನೆನೆಸಿಡಿ.
ಗೋಧಿನುಚ್ಚು ಮತ್ತು ಹೆಸರುಬೇಳೆಯನ್ನು ಕುಕ್ಕರ್ ಅಥವಾ ರೈಸ್ ಕುಕ್ಕರ್ ಗೆ ಹಾಕಿ, ಚಿಟಿಕೆ ಉಪ್ಪು ಮತ್ತು ಅಳತೆಗೆ ತಕ್ಕಂತೆ ನೀರು ಹಾಕಿ, ಬೇಯಿಸಿಕೊಳ್ಳಿ.
ಬೇರೆ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹುರಿದುಕೊಂಡು , ಅದಕ್ಕೆ ಹಾಲು ಹಾಕಿ ಸಕ್ಕರೆ ಬೆರೆಸಿ ಕುದಿಯಲು ಬಿಡಿ. ನಂತರ ಬೆಂದ ನುಚ್ಚು ಮತ್ತು ಹೆಸರುಬೇಳೆ ಮಿಶ್ರಣವನ್ನು ಹಾಕಿ, ಚೆನ್ನಾಗಿ ಬೆರೆಸಿ. ನೆನೆಸಿದ ಕೇಸರಿ, ಏಲಕ್ಕಿ ಪುಡಿ ಮತ್ತು ಸ್ವಲ್ಪ ತುಪ್ಪ ಹಾಕಿ ಬೆರೆಸಿ. ಕೊಬ್ಬರಿ ತುರಿಯನ್ನು ಸಹ ಹಾಕಿ ಚೆನ್ನಾಗಿ ಬೆರೆಸಿ. ಇಳಿಸಿ. ಗೋಧಿನುಚ್ಚಿನ ಪೊಂಗಲ್ ತಿನ್ನಲು ತಯಾರಾಗುತ್ತದೆ.
* ಹೆಸರುಬೇಳೆಯನ್ನು ಸೀದಿಸಬೇಡಿ, ಹಸಿವಾಸನೆ ಹೋಗುವವರೆಗೂ/ ಸ್ವಲ್ಪ ಬಣ್ಣ ಬದಲಾಗುವವರೆಗೂ ಮಾತ್ರ ಹುರಿದುಕೊಳ್ಳಿ.
* ಗೋಧಿನುಚ್ಚಿನಿಂದ ತಯಾರಿಸಿದ ಇದು ಮಧುಮೇಹ ಇರುವವರಿಗೆ ಒಳ್ಳೆಯದು. ಅಕ್ಕಿ ಬದಲಿಗೆ ಅವರು ಗೋಧಿ ನುಚ್ಚು ಬಳಸಬಹುದು.
* ಇದು ಸಹ ತುಂಬಾ ರುಚಿಯಾಗಿರುತ್ತದೆ. ಗೋಧಿಯಿಂದ ಅನೇಕ ಸಿಹಿ ತಯಾರಿಸುತ್ತೇವೆ.
Friday, February 12, 2010
Heerekaayi huli / Ridge gourd samber
ಹೀರೆಕಾಯಿ ಹುಳಿ:
ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ
ಹೀರೆಕಾಯಿ ಹೆಚ್ಚಿದ್ದು
ಟಮೋಟ ಹಣ್ಣು
ಈರುಳ್ಳಿ ಸ್ವಲ್ಪ
ಕಾಯಿತುರಿ ಸ್ವಲ್ಪ
ಸಾರಿನ ಪುಡಿ
ಹುಣಸೇರಸ - ೧ ಚಮಚ
ಅರಿಶಿಣದ ಪುಡಿ
ಎಣ್ಣೆ
ಉಪ್ಪು
ಜೊತೆಗೆ ಬೇಕಾದರೆ ಆಲೂಗೆಡ್ಡೆ/ಮೂಲಂಗಿ/ಹುರುಳಿಕಾಯಿ ಸೇರಿಸಿಕೊಳ್ಳಬಹುದು.
ತಯಾರಿಸುವ ವಿಧಾನ:
ತೊಗರಿಬೇಳೆಗೆ ಅರಿಶಿಣ ಮತ್ತು ಸ್ವಲ್ಪ ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು,ಅದಕ್ಕೆ ಹೀರೆಕಾಯಿ ಮತ್ತು ಟಮೋಟ ಹಾಕಿ,(ಇತರೆ ತರಕಾರಿ ಬಳಸುವುದಾದರೆ ಅದನ್ನು ಸೇರಿಸಿ)ತರಕಾರಿ ಬೇಯುವವರೆಗೂ ಬೇಯಿಸಿ,ನಂತರ ಸಾರಿನಪುಡಿ,ಹುಣಸೇರಸ,ಉಪ್ಪು ಮತ್ತು ರುಬ್ಬಿದ ಮಿಶ್ರಣ ಹಾಕಿ,ಚೆನ್ನಾಗಿ ಕುದಿಸಿ.ನಂತರ ಅದಕ್ಕೆ ಒಗ್ಗರಣೆ ಸೇರಿಸಿ.ಇಳಿಸಿ.
* ರುಬ್ಬಲು - ಕಾಯಿತುರಿ, ಈರುಳ್ಳಿ ಮತ್ತು ಸಾರಿನಪುಡಿಯನ್ನು ಸೇರಿಸಿ ರುಬ್ಬಿಕೊಳ್ಳಿ.
* ಒಗ್ಗರಣೆ - ಎಣ್ಣೆ ಹಾಕಿ, ಸಾಸಿವೆ, ಇಂಗು, ಕರಿಬೇವು ಮತ್ತು ಚುಟುಕ ಈರುಳ್ಳಿ ಹಾಕಿ ಬಾಡಿಸಿ.
* - ರುಬ್ಬಿಕೊಳ್ಳಲು ವೇಳೆ/ಬಿಡುವು ಇಲ್ಲದವರು ಕಾಯಿತುರಿ ರುಬ್ಬಿಕೊಳ್ಳದೆ ಆಗೆ ಕೂಡ ಸಾಂಬಾರ್ ತಯಾರಿಸಿಕೊಳ್ಳಬಹುದು. ಆಗ ಸಾರಿಗೆ ರುಬ್ಬಿದ ಮಿಶ್ರಣದ ಹಾಕುವ ಬದಲು ಬರೀ ಸಾರಿನ ಪುಡಿ ಹಾಕಿ ಕುದಿಸಿದರೆ ಆಯಿತು. ಈ ಸಾಂಬಾರ್ ಕೂಡ ರುಚಿಯಾಗಿಯೇ ಇರುತ್ತದೆ.
* ಈಗ ರುಬ್ಬಿ ತಯಾರಿಸುವ ಸಾಂಬಾರ್ ಗಿಂತ ಪುಡಿ ಉದುರಿಸಿ ತಯಾರಿಸುವ ಸಾರುಗಳೂ ಸಾಮಾನ್ಯವಾಗಿದೆ. ಇದು ಲೈಟ್ ಆಗಿರುತ್ತದೆ.
* ಹುರುಳಿಕಾಯಿ/ಆಲೂಗೆಡ್ಡೆ/ಕ್ಯಾರೆಟ್/ಬದನೆಕಾಯಿ ಸಹ ಸೇರಿಸಿ ತಯಾರಿಸಬಹುದು. ತರಕಾರಿಗಳು ಒಂದೇ ಹಾಕಿ ತಯಾರಿಸಿದಾಗ ಅದು ಅದರದ್ದೇ ಹೆಸರಿನ ಹುಳಿ ಆಗಿರುತ್ತದೆ. ಜೊತೆಗೆ ಬೇರೆ ಹಾಕಿದಾಗ ಅದು ಕಾಂಬಿನೇಷನ್ ಸಾರು ಆಗುತ್ತದೆ,ಅಷ್ಟೇ. ನಮಗೆ ಯಾವ ತರಕಾರಿ ಬಳಸಲು ಇಷ್ಟವೋ ಆ ತರಕಾರಿ ಬಳಸಿದರೆ ಆಯಿತು.
* ಕುಕ್ಕರ್ ನಲ್ಲಿ ತಯಾರಿಸುವುದು ಸುಲಭ. ಅದನ್ನು ತಯಾರಿಸುವ ಬಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ ಅಲ್ವಾ. ಆಗಾಗಿ ಅದರ ವಿವರ ಬೇಡ ಎನಿಸುತ್ತೆ.
* ಯಾವುದೇ ಸಾಂಬಾರ್ ಅಥವಾ ಹುಳಿ ತಯಾರಿಸಿದರೂ, ಪುಡಿ ಚೆನ್ನಾಗಿದ್ದು,ರುಚಿಯಾಗಿದ್ದರೆ ಮಾತ್ರ ಸಾರು ರುಚಿಯಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ
ಹೀರೆಕಾಯಿ ಹೆಚ್ಚಿದ್ದು
ಟಮೋಟ ಹಣ್ಣು
ಈರುಳ್ಳಿ ಸ್ವಲ್ಪ
ಕಾಯಿತುರಿ ಸ್ವಲ್ಪ
ಸಾರಿನ ಪುಡಿ
ಹುಣಸೇರಸ - ೧ ಚಮಚ
ಅರಿಶಿಣದ ಪುಡಿ
ಎಣ್ಣೆ
ಉಪ್ಪು
ಜೊತೆಗೆ ಬೇಕಾದರೆ ಆಲೂಗೆಡ್ಡೆ/ಮೂಲಂಗಿ/ಹುರುಳಿಕಾಯಿ ಸೇರಿಸಿಕೊಳ್ಳಬಹುದು.
ತಯಾರಿಸುವ ವಿಧಾನ:
ತೊಗರಿಬೇಳೆಗೆ ಅರಿಶಿಣ ಮತ್ತು ಸ್ವಲ್ಪ ಎಣ್ಣೆಯನ್ನು ಹಾಕಿ ಬೇಯಿಸಿಕೊಂಡು,ಅದಕ್ಕೆ ಹೀರೆಕಾಯಿ ಮತ್ತು ಟಮೋಟ ಹಾಕಿ,(ಇತರೆ ತರಕಾರಿ ಬಳಸುವುದಾದರೆ ಅದನ್ನು ಸೇರಿಸಿ)ತರಕಾರಿ ಬೇಯುವವರೆಗೂ ಬೇಯಿಸಿ,ನಂತರ ಸಾರಿನಪುಡಿ,ಹುಣಸೇರಸ,ಉಪ್ಪು ಮತ್ತು ರುಬ್ಬಿದ ಮಿಶ್ರಣ ಹಾಕಿ,ಚೆನ್ನಾಗಿ ಕುದಿಸಿ.ನಂತರ ಅದಕ್ಕೆ ಒಗ್ಗರಣೆ ಸೇರಿಸಿ.ಇಳಿಸಿ.
* ರುಬ್ಬಲು - ಕಾಯಿತುರಿ, ಈರುಳ್ಳಿ ಮತ್ತು ಸಾರಿನಪುಡಿಯನ್ನು ಸೇರಿಸಿ ರುಬ್ಬಿಕೊಳ್ಳಿ.
* ಒಗ್ಗರಣೆ - ಎಣ್ಣೆ ಹಾಕಿ, ಸಾಸಿವೆ, ಇಂಗು, ಕರಿಬೇವು ಮತ್ತು ಚುಟುಕ ಈರುಳ್ಳಿ ಹಾಕಿ ಬಾಡಿಸಿ.
* - ರುಬ್ಬಿಕೊಳ್ಳಲು ವೇಳೆ/ಬಿಡುವು ಇಲ್ಲದವರು ಕಾಯಿತುರಿ ರುಬ್ಬಿಕೊಳ್ಳದೆ ಆಗೆ ಕೂಡ ಸಾಂಬಾರ್ ತಯಾರಿಸಿಕೊಳ್ಳಬಹುದು. ಆಗ ಸಾರಿಗೆ ರುಬ್ಬಿದ ಮಿಶ್ರಣದ ಹಾಕುವ ಬದಲು ಬರೀ ಸಾರಿನ ಪುಡಿ ಹಾಕಿ ಕುದಿಸಿದರೆ ಆಯಿತು. ಈ ಸಾಂಬಾರ್ ಕೂಡ ರುಚಿಯಾಗಿಯೇ ಇರುತ್ತದೆ.
* ಈಗ ರುಬ್ಬಿ ತಯಾರಿಸುವ ಸಾಂಬಾರ್ ಗಿಂತ ಪುಡಿ ಉದುರಿಸಿ ತಯಾರಿಸುವ ಸಾರುಗಳೂ ಸಾಮಾನ್ಯವಾಗಿದೆ. ಇದು ಲೈಟ್ ಆಗಿರುತ್ತದೆ.
* ಹುರುಳಿಕಾಯಿ/ಆಲೂಗೆಡ್ಡೆ/ಕ್ಯಾರೆಟ್/ಬದನೆಕಾಯಿ ಸಹ ಸೇರಿಸಿ ತಯಾರಿಸಬಹುದು. ತರಕಾರಿಗಳು ಒಂದೇ ಹಾಕಿ ತಯಾರಿಸಿದಾಗ ಅದು ಅದರದ್ದೇ ಹೆಸರಿನ ಹುಳಿ ಆಗಿರುತ್ತದೆ. ಜೊತೆಗೆ ಬೇರೆ ಹಾಕಿದಾಗ ಅದು ಕಾಂಬಿನೇಷನ್ ಸಾರು ಆಗುತ್ತದೆ,ಅಷ್ಟೇ. ನಮಗೆ ಯಾವ ತರಕಾರಿ ಬಳಸಲು ಇಷ್ಟವೋ ಆ ತರಕಾರಿ ಬಳಸಿದರೆ ಆಯಿತು.
* ಕುಕ್ಕರ್ ನಲ್ಲಿ ತಯಾರಿಸುವುದು ಸುಲಭ. ಅದನ್ನು ತಯಾರಿಸುವ ಬಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ ಅಲ್ವಾ. ಆಗಾಗಿ ಅದರ ವಿವರ ಬೇಡ ಎನಿಸುತ್ತೆ.
* ಯಾವುದೇ ಸಾಂಬಾರ್ ಅಥವಾ ಹುಳಿ ತಯಾರಿಸಿದರೂ, ಪುಡಿ ಚೆನ್ನಾಗಿದ್ದು,ರುಚಿಯಾಗಿದ್ದರೆ ಮಾತ್ರ ಸಾರು ರುಚಿಯಾಗಿರುತ್ತದೆ.
Wednesday, February 10, 2010
ರಾಗಿ ಮುದ್ದೆ: Raagi Mudde
ರಾಗಿ ಮುದ್ದೆ:
ರಾಗಿ ಮುದ್ದೆ:
ಬೇಕಾಗಿರುವ ಸಾಮಗ್ರಿಗಳು:
೧ ಲೋಟ ರಾಗಿ ಹಿಟ್ಟು
೨ ಲೋಟ ನೀರು
ವಿಧಾನ:
ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಯಲು ಬಿಡಿ, ನೀರು ಚೆನ್ನಾಗಿ ಕುದಿಯುವಾಗ ರಾಗಿಹಿಟ್ಟನ್ನು ಹಾಕಿ, ೧೦ ನಿಮಿಷ ಹಾಗೆ ಕುದಿಯಲು ಇಡಬೇಕು, ಅದನ್ನು ತಿರುಗಿಸಬಾರದು, ಹಿಟ್ಟು ಹೇಗೆ ಹಾಕಿರುತ್ತಿರೋ ಹಾಗೆ ಕುದಿಯಬೇಕು. ೧೦ ಅಥವ ೧೫ ನಿಮಿಷದ ನಂತರ ಒಂದು ಕೋಲು ಅಥವಾ ಒಂದು ಸೌಟನ್ನು ತೆಗೆದುಕೊಂಡು ಮಧ್ಯಭಾಗದಿಂದ ಆ ಹಿಟ್ಟನ್ನು ಒಡೆದುಕೊಂಡು ಹಾಗೆ ಮೆಲ್ಲಗೆ ಗಂಟುಗಳು ಬರದಂತೆ ಚೆನ್ನಾಗಿ ಗೊಟಾಯಿಸಿಕೊಂಡು ತಿರುಗಿಸಬೇಕು. ಮಧ್ಯೆ ಸ್ವಲ್ಪ ನೀರು ಸೇರಿಸಿಕೊಳ್ಳಿ ಬೇಕೆನಿಸಿದರೆ, ಸ್ವಲ್ಪ ತೆಳು ಆದರೆ ಹಿಟ್ಟು ಸೇರಿಸಿ, ಗಟ್ಟಿಯಾದರೆ ನೀರು ಸೇರಿಸಿಕೊಂಡು ಗಂಟಿಲ್ಲದಂತೆ ತಿರುಗಿಸಿ, ನಂತರ ಒಲೆಯ ಮೇಲಿಂದ ಇಳಿಸಿಕೊಂಡು ಹಿಟ್ಟು ಬಿಸಿಯಿರುವಾಗಲೆ ಅದನ್ನು ಕಟ್ಟಬೇಕು.ಕೈಯನ್ನು ನೀರು ಅಥವ ತುಪ್ಪದಲ್ಲಿ ಅದ್ದಿಕೊಂಡು ಚೆನ್ನಾಗಿ ನಾದಿಕೊಂಡು ನಿಮಗೆ ಬೇಕಾದ ಅಳತೆಯಲ್ಲಿ ಉಂಡೆಯನ್ನು ಕಟ್ಟಿದರೆ ಶಕ್ತಿಯುತವಾದ ರಾಗಿಮುದ್ದೆ ತಯಾರಾಗುತ್ತದೆ,
ಇದು ನಮ್ಮ ಕರ್ನಾಟಕದಲ್ಲಿ ತುಂಬಾ ಪ್ರಸಿಧ್ದವಾದ ಆಹಾರವಾಗಿದೆ. ಇದು ಮೊದಲು ತಯಾರಿಸುವಾಗ ಸ್ವಲ್ಪ ಕಷ್ಟ ಎನಿಸಬಹುದು, ಒಮ್ಮೆ ಕೆಟ್ಟು ಹೋದರು ಪರವಾಗಿಲ್ಲ, ಪ್ರಯತ್ನಪಡಿ, ಆಮೇಲೆ ಸರಿಯಾಗಿ ಬರುತ್ತದೆ, ಸರಿಯಾದ ಪ್ರಮಾಣದಲ್ಲಿ ನೀರು ಮತ್ತು ಹಿಟ್ಟನ್ನು ಹಾಕಿ ಹದವಾಗಿ ಬೇಯಿಸಿಕೊಂಡು ನಂತರ ಉಂಡೆಮಾಡಿಕೊಳ್ಳಿ, ಇದನ್ನು ಸೊಪ್ಪಿನ ಬಸ್ಸಾರು, ಬೇಳೆಸಾರು, ಮಸಾಲೆ ಸಾರಿನೊಂದಿಗೆ ಪುಟ್ಟ ಪುಟ್ಟ ಉಂಡೆ ಮಾಡಿಕೊಂಡು ಸವಿಯಿರಿ.
ರಾಗಿಯಲ್ಲಿ ಕಬ್ಬಿಣದ ಅಂಶ ಜಾಸ್ತಿ ಇರುತ್ತದೆ, ಆಗಾಗಿ ಇದನ್ನು ಪ್ರತಿನಿತ್ಯವೂ ಸೇವಿಸುವುದರಿಂದ ಬಹಳ ಒಳ್ಳೆಯದು. ಶಕ್ತಿಯುತವಾದ ಆಹಾರ ಇದು. ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಮಾತು ಪ್ರತೀತಿಯಲ್ಲಿದೆ.
ಈ ರಾಗಿಮುದ್ದೆಯು ಮೊಳಕೆಕಾಳುಗಳ ಮಸಾಲೆ ಸಾರು, ಬಸ್ಸಾರುಗಳೊಂದಿಗೆ ತುಂಬಾ ರುಚಿಯಾಗಿರುತ್ತದೆ, ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ಆಹಾರ, ಇಂಥ ಸ್ವಾದಿಷ್ಟವಾದ ಆಹಾರವು ನಮ್ಮ ಕರ್ನಾಟಕದ್ದು ಎಂದು ಹೇಳಲು ಹೆಮ್ಮೆಯಾಗುತ್ತದೆ, ಇದರಿಂದ ಅನೇಕ ಖಾಯಿಲೆಗಳು ಗುಣಮುಖವಾಗುತ್ತದೆ. ಆದ್ದರಿಂದ ಪ್ರತಿನಿತ್ಯವು ರಾಗಿಯನ್ನು ಬಳಸುವುದು ಒಳ್ಳೆಯದು.
Thursday, January 28, 2010
Chutney / Coconut Chutney - ಕಾಯಿಚಟ್ನಿ:
ಚಟ್ನಿ / ಕಾಯಿಚಟ್ನಿ:
ಬೇಕಾಗುವ ಸಾಮಗ್ರಿಗಳು:
ತೆಂಗಿನಕಾಯಿ ತುರಿ -ಒಂದು ಬಟ್ಟಲು
ಕಡ್ಲೆ - ಸ್ವಲ್ಪ
ಹುಣಸೇಹಣ್ಣು ಚೂರು
ಹಸಿಮೆಣಸಿನಕಾಯಿ ರುಚಿಗೆ
ಉಪ್ಪು ರುಚಿಗೆ
ಶುಂಠಿ ತುಂಡು ಒಂದು ಚೂರು
ಬೆಳ್ಳುಳ್ಳಿ ೪-೫
ಜೀರಿಗೆ - ಅರ್ಧ ಚಮಚ
ಕೊತ್ತುಂಬರಿಸೊಪ್ಪು ಸ್ವಲ್ಪ
ಮೇಲೆ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಒಟ್ಟಿಗೆ ಸೇರಿಸಿ, ಅಗತ್ಯವಿದ್ದಷ್ಟು ನೀರು ಹಾಕಿ, ರುಬ್ಬಿ. ಕಾಯಿ ಚಟ್ನಿ ತಯಾರಾಗುತ್ತದೆ. ಒಗ್ಗರಣೆ ಇಷ್ಟಪಡುವವರು ಅದನ್ನು ಸೇರಿಸಬಹುದು್.
* ಒಗ್ಗರಣೆಗೆ - ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವು ಹಾಕಿ, ಚಟಪಟಾಯಿಸಿ, ತಣ್ಣಗಾದ ಮೇಲೆ ಚಟ್ನಿಗೆ ಬೆರೆಸಿ. ಈ ಚಟ್ನಿಯೂ ಇಡ್ಲಿ,ದೋಸೆ,ಚಪಾತಿ,ರೊಟ್ಟಿಗಳು,ಬಜ್ಜಿ ಮತ್ತು ಪೂರಿ ಹಾಗು ಕೆಲವೊಮ್ಮೆ ಅನ್ನಕ್ಕೂ ರುಚಿಯಾಗಿರುತ್ತದೆ. ಇಡ್ಲಿಗಾದರೆ ಚಟ್ನಿಯನ್ನು ಸ್ವಲ್ಪ ತೆಳ್ಳಗೆ ಮಾಡಿಕೊಳ್ಳಿ.
Subscribe to:
Posts (Atom)
Popular Posts
-
ತರಕಾರಿ ಸಾಗು ಅಥವ ಕೂಟು ಎಲ್ಲವುದಕ್ಕು ಹೊಂದಿಕೊಳ್ಳುವಂತಹದ್ದು. ಅಂದರೆ ಇದನ್ನು ದೋಸೆ, ಚಪಾತಿ,ಪರೋಟ,ರೊಟ್ಟಿ,ಪೂರಿ ಮತ್ತು ಅನ್ನದ ಜೊತೆಯಲ್ಲಿ ತಿನ್ನಬಹುದು. ಜೊತೆಯಲ್ಲ...
-
ಆಲೂ ಪರೋಟ: ಹೂರಣಕ್ಕೆ ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಆಲೂಗೆಡ್ಡೆ-ಒಂದು ಬಟ್ಟಲು ಅಚ್ಚ ಖಾರದ ಪುಡಿ-ಕಾಲು ಚಮಚ ಉಪ್ಪು ರುಚಿಗೆ ತಕ್ಕಷ್ಟು ಚಾಟ್ ಮಸಾಲಾ-ಕಾಲು ಚಮಚ ...
-
ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾ...
-
ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು. ಪ್ರತಿವಾರವೂ ಹಬ್ಬ-ಹರಿದಿನಗಳು. ಹಬ್ಬಗಳು ಎಂದರೆ ಸಿಹಿ ಅಡುಗೆಗಳು ಸಾಮಾನ್ಯ. ಒಂದೊಂದು ಹಬ್ಬಕ್ಕೂ ಒಂದೊಂದು ಬಗೆಯ ಸಿಹಿ ಅಡುಗೆ ಮಾ...
-
ಟಮೋಟ ಚಟ್ನಿ: ಬೇಕಾಗುವ ಸಾಮಗ್ರಿಗಳು: ಟಮೋಟ - ಅರ್ಧ ಕೆ.ಜಿ ಈರುಳ್ಳಿ - ಎರಡು ಬೆಳ್ಳುಳ್ಳಿ - ಹತ್ತು ಎಸಳು ಒಣಮೆಣಸಿನಕಾಯಿ - ರುಚಿಗೆ ತಕ್ಕಷ್ಟು ಹುಣಸೆಹಣ್ಣು -...
-
ಬಿಸಿಬೇಳೆ ಭಾತ್ ಪುಡಿ: ತಯಾರಿಸಲು ಬೇಕಾಗುವ ಸಾಮಗ್ರಿಗಳು: ಒಣಮೆಣಸಿನಕಾಯಿ -ಹತ್ತು / ಖಾರಕ್ಕೆ ತಕ್ಕಷ್ಟು ಧನಿಯ- ಎರಡು ಚಮಚ ಮೆಂತ್ಯ -ಅರ್ಧ ಚಮಚ ಜೀರಿಗೆ-ಒಂದು ಚ...
-
ಗೋಳಿಬಜೆಯಲ್ಲಿ ಅನೇಕ ವಿಧಗಳಿವೆ,ಇದು ಅವುಗಳಲ್ಲಿ ಒಂದು ಬಗೆ,ತುಂಬಾ ಸುಲಭವಾದ ಮತ್ತು ಕಮ್ಮಿ ಸಾಮಗ್ರಿಗಳು ಬೇಕಾಗುವಂತಹ ರೆಸಿಪಿ. ತಕ್ಷಣವೇ ತಯಾರಿಸಬಹುದಾದ ಬೋಂಡಾ. ಗೋಳ...
-
ರಸಂ ಪುಡಿ / ರಸಂ ಪೌಡರ್ ಬೇಕಾಗುವ ಪದಾರ್ಥಗಳು: ಒಣ ಮೆಣಸಿನ ಕಾಯಿ - ಒಂದು ಬಟ್ಟಲು ಧನಿಯಾ ಬೀಜ - ಅರ್ಧ ಬಟ್ಟಲು ಜೀರಿಗೆ - ಒಂದು ದೊಡ್ಡ ಚಮಚ ಮೆಣಸು - ಒಂದು ದೊಡ...
-
ಈರುಳ್ಳಿ ಟಮೋಟ ಚಟ್ನಿ: ಬೇಕಾಗುವ ಸಾಮಗ್ರಿಗಳು: 1. ಈರುಳ್ಳಿ- 2 2. ಟೊಮೆಟೊ- 4-5 3. ಹಸಿಮೆಣಸಿನ ಕಾಯಿ- 2 4. ಉಪ್ಪು- ರುಚಿಗೆ ತಕ್ಕಷ್ಟು 5. ಅಚ್ಚ ಖಾರದ ಪ...



